AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಟಿವಿ, ರಾಮೋಜಿ ಫಿಲ್ಮ್​ ಸಿಟಿ, ಪ್ರಿಯಾ ಫುಡ್ಸ್..; ರಾಮೋಜಿ ರಾವ್ ಮಾಡಿದ ಸಾಧನೆಗಳು ಒಂದೆರಡಲ್ಲ

ರಾಮೋಜಿ ಗ್ರೂಪ್, ಈನಾಡು ಮೀಡಿಯಾ, ಮಾರ್ಗದರ್ಶಿ ಚಿಟ್‌ಫಂಡ್ಸ್, ಪ್ರಿಯಾ ಫುಡ್ಸ್, ಉಷಾಕಿರಣ್ ಮೂವೀಸ್, ರಾಮೋಜಿ ಫಿಲ್ಮ್‌ಸಿಟಿ, ಕಲಾಂಜಲಿ ಕಂಪನಿಗಳನ್ನು ಅವರು ಹೊಂದಿದ್ದರು. ರಾಮೋಜಿ ರಾವ್ ತೆಲುಗು ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು.

ಈ ಟಿವಿ, ರಾಮೋಜಿ ಫಿಲ್ಮ್​ ಸಿಟಿ, ಪ್ರಿಯಾ ಫುಡ್ಸ್..; ರಾಮೋಜಿ ರಾವ್ ಮಾಡಿದ ಸಾಧನೆಗಳು ಒಂದೆರಡಲ್ಲ
ಈ ಟಿವಿ, ರಾಮೋಜಿ ಫಿಲ್ಮ್​ ಸಿಟಿ, ಪ್ರಿಯಾ ಫುಡ್ಸ್..; ರಾಮೋಜಿ ರಾವ್ ಮಾಡಿದ ಸಾಧನೆಗಳು ಒಂದೆರಡಲ್ಲ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jun 08, 2024 | 12:34 PM

Share

ಹಲವು ಸಂಸ್ಥೆಗಳ ಹುಟ್ಟುಹಾಕಿದ್ದ, ರಾಮೋಜಿ ಫಿಲ್ಮ್​ ಸಿಟಿಯನ್ನು ನಿರ್ಮಿಸಿದ್ದ ರಾಮೋಜಿ ರಾವ್ (Ramoji Rao) ಅವರು ಇಂದು (ಜೂನ್ 8) ನಿಧನರಾಗಿದ್ದಾರೆ. ಮೂರು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಅವರ ಸ್ಥಿತಿ ಗಂಭೀರವಾಯಿತು. ಎರಡು ದಿನಗಳ ತೀವ್ರ ಅನಾರೋಗ್ಯದ ನಂತರ ವೆಂಟಿಲೇಟರ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದರು. ಇಂದು ಮುಂಜಾನೆ ಹೈದರಾಬಾದ್​ನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಪಾರ್ಥಿವ ಶರೀರವನ್ನು ಫಿಲ್ಮ್​ ಸಿಟಿಯಲ್ಲಿರುವ ರಾಮೋಜಿ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.

ರಾಮೋಜಿ ರಾವ್ ಅವರು 1936ರ ನವೆಂಬರ್ 16ರಂದು ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದರು. 2016ರಲ್ಲಿ ರಾಮೋಜಿ ರಾವ್ ಅವರಿಗೆ ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ನೀಡಲಾಯಿತು. ರಾಮೋಜಿ ರಾವ್ ಅವರ ನಿಜವಾದ ಹೆಸರು ಚೆರುಕುರಿ ರಾಮಯ್ಯ. ರಾಮೋಜಿ ರಾವ್ ಅವರು ಈಟಿವಿ ಮುಖ್ಯಸ್ಥರಾಗಿ, ಪತ್ರಿಕೆ ಸಂಪಾದಕರಾಗಿ, ಪ್ರಕಾಶಕರಾಗಿ, ಚಲನಚಿತ್ರ ನಿರ್ಮಾಪಕರಾಗಿ ಮತ್ತು ಉದ್ಯಮಿಯಾಗಿ ಖ್ಯಾತಿ ಗಳಿಸಿದ್ದಾರೆ.

ರಾಮೋಜಿ ಗ್ರೂಪ್, ಈನಾಡು ಮೀಡಿಯಾ, ಮಾರ್ಗದರ್ಶಿ ಚಿಟ್‌ಫಂಡ್ಸ್, ಪ್ರಿಯಾ ಫುಡ್ಸ್, ಉಷಾಕಿರಣ್ ಮೂವೀಸ್, ರಾಮೋಜಿ ಫಿಲ್ಮ್‌ಸಿಟಿ, ಕಲಾಂಜಲಿ ಕಂಪನಿಗಳನ್ನು ಅವರು ಹೊಂದಿದ್ದರು. ರಾಮೋಜಿ ರಾವ್ ತೆಲುಗು ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು.

1962 ರಲ್ಲಿ ಮಾರ್ಗದರ್ಶಿ ಚಿಟ್‌ಫಂಡ್‌ಗಳನ್ನು ಸ್ಥಾಪಿಸಿದ ರಾಮೋಜಿ ರಾವ್ ಅವರು ಉದ್ಯಮದಲ್ಲಿ ಮುಂದುವರೆದರು. 1974ರ ಆಗಸ್ಟ್ 10ರಂದು ವಿಶಾಖಪಟ್ಟಣದಲ್ಲಿ ಈನಾಡು ಪತ್ರಿಕೆಯನ್ನು ಪ್ರಾರಂಭಿಸಿದರು. ರಾಮೋಜಿ ರಾವ್ ಅವರು ಈಟಿವಿ ಹೆಸರಿನಲ್ಲಿ 8 ಭಾಷೆಗಳಲ್ಲಿ ಚಾನೆಲ್‌ಗಳನ್ನು ತಂದರು. ರಾಮೋಜಿ ರಾವ್ ಅವರು ಉಷಾಕಿರಣ್ ಮೂವೀಸ್ ಅಡಿಯಲ್ಲಿ 30 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇವರು ನಿರ್ಮಿಸಿದ ಚಿತ್ರಗಳಲ್ಲಿ ‘ಪ್ರೇಮಲೇಖ’ ಮೊದಲನೆಯದು. ಈ ಸಿನಿಮಾ 1984ರಲ್ಲಿ ರಿಲೀಸ್ ಆಯಿತು.

ಇದನ್ನೂ ಓದಿ: ರಾಮೋಜಿ ರಾವ್ ನಿಧನಕ್ಕೆ ಪ್ರಧಾನಿ ಮೋದಿ, ಅಲ್ಲು ಅರ್ಜುನ್, ರಾಮ್ ಚರಣ್, ರಾಜಮೌಳಿ ಸೇರಿ ಅನೇಕರ ಸಂತಾಪ

ರಾಮೋಜಿ ರಾವ್ ಅನೇಕ ನಾಯಕರನ್ನು ಪರಿಚಯಿಸಿದರು. ನಿರ್ದೇಶಕ ಶ್ರೀನು ವೈಟ್ಲ ನಿರ್ದೇಶನದ ಎರಡನೇ ಸಿನಿಮಾ ‘ಆನಂದ್ಯ’ ಸಿನಿಮಾವನ್ನೂ ರಾಮೋಜಿರವೇ ನಿರ್ಮಿಸಿದ್ದಾರೆ. ಜೂನಿಯರ್​ ಎನ್​ಟಿಆರ್ ಅವರ ಜೊತೆಗೂ ಕೆಲಸ ಮಾಡಿದ್ದಾರೆ. ತನಿಶ್ ಅವರನ್ನು ನಾಯಕನಾಗಿ ಪರಿಚಯಿಸಿ, ನಚ್ಚಾವುಲೆ ನಿರ್ಮಿಸಲಾಗಿದೆ. ಮತ್ತು ಅವರು ನಿರ್ಮಿಸಿದ ಕೊನೆಯ ಚಿತ್ರ ‘ದಗುಡುಮುಟ ದಂಡಕೋರ್’.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!