AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಸೂರ್ಯ ಮೇಲೆ ಸಿಟ್ಟು ಹೊರಹಾಕಿದ ಖ್ಯಾತ ನಿರ್ದೇಶಕ

Suriya: ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ ಮೇಲೆ ಅದೇ ಚಿತ್ರರಂಗದ ಜನಪ್ರಿಯ ನಿರ್ದೇಶಕ ಮತ್ತು ಮಾಜಿ ಗೆಳೆಯ ಗೌತಮ್ ವಾಸುದೇವ್ ಮೆನನ್ ಕಿಡಿ ಕಾರಿದ್ದಾರೆ. ಎರಡು ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ನಿರ್ದೇಶಕನಿಗೆ ಸೂರ್ಯ ಅಪಮಾನ ಮಾಡಿದ್ದಾರೆ ಎಂಬರ್ಥದ ಮಾತುಗಳನ್ನಾಡಿದ್ದಾರೆ. ಏನಿದು ವಿವಾದ?

ನಟ ಸೂರ್ಯ ಮೇಲೆ ಸಿಟ್ಟು ಹೊರಹಾಕಿದ ಖ್ಯಾತ ನಿರ್ದೇಶಕ
Suriya Gautham Vasudev Menon
ಮಂಜುನಾಥ ಸಿ.
|

Updated on: Jan 20, 2025 | 1:22 PM

Share

ತಮಿಳಿನ ಸ್ಟಾರ್ ನಟ ಸೂರ್ಯ ಮೇಲೆ ಮಾಜಿ ಗೆಳೆಯ, ಖ್ಯಾತ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಸಿಟ್ಟು ಹೊರಹಾಕಿದ್ದಾರೆ. ಸೂರ್ಯ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ಆಗಿರುವ ‘ವಾರನಮ್ ಅಯುರುಮ್’ (ಸೂರ್ಯ ಸನ್ ಆಫ್ ಕೃಷ್ಣಮೂರ್ತಿ), ‘ಕಾಕ ಕಾಕ’ ಸೇರಿದಂತೆ ಹಲವು ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಗೌತಮ್ ವಾಸುದೇವ್ ಮೆನನ್, ಸೂರ್ಯ ಮಾತ್ರವಲ್ಲದೆ ತಮಿಳು ಚಿತ್ರರಂಗದ ಹಲವರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯ ಇದ್ದಾಗ ಯಾರೂ ನೆರವಾಗುತ್ತಿಲ್ಲ ಎಂದಿದ್ದಾರೆ.

ಗೌತಮ್ ವಾಸುದೇವ್ ಮೆನನ್ ‘ಧ್ರುವ ನಚ್ಚಿತರಮ್’ ಹೆಸರಿನ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ನಾಯಕ. ಆದರೆ ಈ ಸಿನಿಮಾದ ಬಿಡುಗಡೆ ತಡವಾಗತ್ತಲೇ ಬರುತ್ತಿದೆ. ಹಣಕಾಸಿನ ಮುಗ್ಗಟ್ಟು, ಚಿತ್ರರಂಗದವರ ಅಸಹಕಾರ ಇನ್ನಿತರೆ ಕಾರಣಗಳಿಗೆ ಸಿನಿಮಾ ತಡವಾಗುತ್ತಿದೆ. ಒಂದು ಸಮಯದಲ್ಲಿ ಒಂದರ ಮೇಲೊಂದು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ಗೌತಮ್ ವಾಸುದೇವ್ ಮೆನನ್ ಈಗ ಒಬ್ಬಂಟಿಯಾಗಿದ್ದಾರೆ. ಹಾಗಾಗಿ ಅವರು ತಮಿಳು ಚಿತ್ರರಂಗದ ದಿಗ್ಗಜರು ಹಾಗೂ ತಮ್ಮ ಮಾಜಿ ಗೆಳೆಯರ ಮೇಲೆ ಅಸಮಾಧಾನ ಹೊರಹಾಕುತ್ತಿದ್ದಾರೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ವಾಸುದೇವ್ ಮೆನನ್, ‘ಸೂರ್ಯ ‘ಧ್ರುವ ನಚ್ಚಿತ್ತರಮ್’ ಸಿನಿಮಾ ಮಾಡುವುದೋ ಬೇಡವೋ ಎಂದು ಯೋಚನೆ ಸಹ ಮಾಡಬಾರದಿತ್ತು, ಒಮ್ಮೆಲೆ ಒಪ್ಪಿಗೆ ನೀಡಬೇಕಿತ್ತು. ಸಿನಿಮಾದಲ್ಲಿ ನಟಿಸಬೇಕೋ ಬೇಡವೋ ಎಂಬ ಪ್ರಶ್ನೆಯೂ ಆತನಲ್ಲಿ ಮೂಡಬಾರದಿತ್ತು’ ಎಂದಿದ್ದಾರೆ. ಗೌತಮ್ ವಾಸುದೇವ್ ಮೆನನ್, ಸೂರ್ಯ ವೃತ್ತಿ ಜೀವನದ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳಾದ ವಾರನಮ್ ಅಯುರುಮ್’ (ಸೂರ್ಯ ಸನ್ ಆಫ್ ಕೃಷ್ಣಮೂರ್ತಿ), ‘ಕಾಕ ಕಾಕ’ ಸಿನಿಮಾಗಳನ್ನು ನಿರ್ದೇಶನ ಮಾಡಿದವರು. ಎರಡು ಹಿಟ್ ಕೊಟ್ಟ ನಿರ್ದೇಶಕ ಕೇಳಿದಾಗ ಇಲ್ಲ ಎನ್ನಬಾರದಿತ್ತು ಎಂಬುದು ಅವರ ವಾದ.

ಇದನ್ನೂ ಓದಿ:ನಟ ಸೂರ್ಯಗಿಂತ ಮೂರು ಪಟ್ಟು ಜಾಸ್ತಿ ಸಂಬಳ ಪಡೆಯುತ್ತಿದ್ದ ಪತ್ನಿ ಜ್ಯೋತಿಕಾ

‘ಧೃವ ನಚ್ಚಿತರಮ್’ ಸಿನಿಮಾದಲ್ಲಿ ಸೂರ್ಯ ನಟಿಸಿದ್ದರೆ ಸಿನಿಮಾ ಬೇರೆಯದ್ದೇ ರೀತಿ ಇರುತ್ತಿತ್ತು. ತನಗಾಗಿ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕನ ಬಗ್ಗೆ ಸೂರ್ಯ ಅನುಮಾನ ಪಡಬಾರದಿತ್ತು. ಸಿನಿಮಾದಲ್ಲಿ ನಟಿಸುವ ಮೂಲಕ ನನ್ನ ಮೇಲೆ ಕರುಣೆ ತೋರಿಸು ಎಂದು ನಾನು ಕೇಳಿರಲಿಲ್ಲ ಬದಲಿಗೆ ಸಿನಿಮಾದಲ್ಲಿ ನಟಿಸು ಎಂದಷ್ಟೆ ನಾನು ಕೇಳಿದ್ದೆ. ನಟಿಸಿದ್ದರೆ ಆತ ಕಳೆದುಕೊಳ್ಳುವುದು ಏನೂ ಇರಲಿಲ್ಲ, ಏಕೆಂದರೆ ಸಿನಿಮಾದ ನಿರ್ಮಾಪಕ ನಾನು ಅವನಲ್ಲ’ ಎಂದಿದ್ದಾರೆ ಗೌತಮ್ ವಾಸುದೇವ್ ಮೆನನ್.

‘ಧ್ರುವ ನಚ್ಚಿತರಮ್’ ಸಿನಿಮಾದ ಬಿಡುಗಡೆಗೆ ನಾನು ಕಷ್ಟಪಡುತ್ತಿದ್ದೇನೆ. ಸಿನಿಮಾ ಬಿಡುಗಡೆ ಮಾಡುವುದು ಬಹಳ ಕಠಿಣವಾಗುತ್ತಿದೆ. ನನಗೆ ಈಗ ಚಿತ್ರರಂಗದವರ ಸಹಾಯ, ನೆರವು, ಮಾರ್ಗದರ್ಶನ ಬೇಕಿದೆ ಆದರೆ ಯಾರೂ ಸಹ ಮುಂದೆ ಬರುತ್ತಿಲ್ಲ. ಆದರೆ ಸಿನಿಮಾದ ಬಗ್ಗೆ ಪ್ರೇಕ್ಷಕರು ಕಾತರರಾಗಿದ್ದಾರೆ. ಹಾಗಾಗಿ ಕಷ್ಟವಾದರೂ ನಾನೇ ಎಲ್ಲವನ್ನೂ ನೋಡಿಕೊಂಡು ಸಿನಿಮಾ ಬಿಡುಗಡೆ ಮಾಡುವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್