ನೋಡುವಷ್ಟು ನೋಡಿ ಹನುಮಂತನ ಮುಖವಾಡ ಕಳಚಿದ ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡದಲ್ಲಿ ಹನುಮಂತ ಅವರು ಆರಂಭದಲ್ಲಿ ಗೆಲುವಿನ ಭರವಸೆಯಲ್ಲಿ ಇದ್ದರು. ಆದರೆ, ಇತ್ತೀಚೆಗೆ ಅವರ ವರ್ತನೆ ಮತ್ತು ಇತರ ಸ್ಪರ್ಧಿಗಳೊಂದಿಗಿನ ಸಂಬಂಧಗಳು ಹದಗೆಟ್ಟಿವೆ. ಕಿಚ್ಚ ಸುದೀಪ್ ಅವರು ಹನುಮಂತ ಅವರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದಾರೆ. ಈಗ ಹನುಮಂತ ಅವರು ಮನೆಯಿಂದ ಹೊರ ನಡೆಯಲು ನಿರ್ಧರಿಸಿರುವ ಬಗ್ಗೆಯೂ ಹೇಳಿದ್ದರು.

ನೋಡುವಷ್ಟು ನೋಡಿ ಹನುಮಂತನ ಮುಖವಾಡ ಕಳಚಿದ ಕಿಚ್ಚ ಸುದೀಪ್
ಹನುಮಂತ-ಸುದೀಪ್

Updated on: Jan 06, 2025 | 7:03 AM

ಹನುಮಂತ ಅವರು ಬಿಗ್ ಬಾಸ್​ನಲ್ಲಿ ಗೆಲ್ಲುವ ಕುದುರೆ ಆಗಿದ್ದರು. ಆದರೆ, ಈಗ ಆ ಕುದುರೆಯ ಚಾರ್ಮ್ ಹೋಗಿದೆ. ಓಟದಲ್ಲಿ ಕೊನೆಯಲ್ಲಿ ನಿಲ್ಲುತ್ತಿದೆ. ಕಿಚ್ಚ ಸುದೀಪ್ ಅವರ ನೆಚ್ಚಿನ ಸ್ಪರ್ಧಿಗಳಲ್ಲಿ ಹನುಮಂತ ಕೂಡ ಒಬ್ಬರಾಗಿದ್ದರು. ಏನೇ ಇದ್ದರೂ ನೇರವಾಗಿ ಹೇಳುತ್ತಿದ್ದರು. ಬುದ್ಧಿವಂತ ಎನಿಸಿಕೊಂಡಿದ್ದರು. ಈಗ ಸುದೀಪ್ ಅವರಿಗೆ ಹನುಮಂತನ ಬಗ್ಗೆ ಬೇಸರ ಮೂಡಿದೆ. ಹನುಮಂತ ಅವರ ಮುಖವಾಡವನ್ನು ಸುದೀಪ್ ಕಳಚಿದ್ದಾರೆ. ಖಡಕ್ ಮಾತಿನಲ್ಲಿ ಹನುಮಂತಗೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಕ್ಲಾಸ್ ತೆಗೆದುಕೊಂಡರೆ ಭಾನುವಾರ ಫನ್ ಆ್ಯಕ್ಟಿವಿಟಿ ಇರುತ್ತದೆ. ಎರಡೂ ಎಪಿಸೋಡ್​ನಲ್ಲಿ ಹನುಮಂತಗೆ ಎಚ್ಚರಿಕೆ ನೀಡುವ ಕೆಲಸ ಆಗಿದೆ. ಯಾವುದೇ ನೆಗೆಟಿವ್ ವಿಚಾರ ಬಂದರೂ ಎಲ್ಲರೂ ಚೈತ್ರಾ ಅವರ ಹೆಸರನ್ನು ತೆಗೆದುಕೊಳ್ಳುತ್ತಿದ್ದರು. ಇದಕ್ಕೆ ಹನುಮಂತ ಕೂಡ ಹೊರತಾಗಿರಲಿಲ್ಲ. ಈ ಕಾರಣಕ್ಕೆ ಸುದೀಪ್ ಅವರು ಹನುಮಂತಗೆ ಕ್ಲಾಸ್ ತೆಗೆದುಕೊಂಡರು. ಆ ಬಳಿಕ ಚೈತ್ರಾ ಬಿಟ್ಟು ಮತ್ಯಾರ ಹೆಸರು ತೆಗೆದುಕೊಳ್ಳುತ್ತೀರಿ ಎಂದಾಗ ಅವರು ಧನರಾಜ್ ಅವರ ಹೆಸರನ್ನು ಹೇಳಿದರು.

ಏನಾದರೂ ಆರೋಪ ಮಾಡುವ ವಿಚಾರ ಬಂದಾಗ ಹನುಮಂತ ಅವರು ಧನರಾಜ್ ಮೇಲೆ, ಧನರಾಜ್ ಅವರು ಹನುಮಂತ ಮೇಲೆ ಆರೋಪಿಸುತ್ತಾರೆ. ಈ ಮೂಲಕ ಬೇರೆಯವರ ಬಾಯಿಗೆ ಆಹಾರ ಆಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಸುದೀಪ್ ಅವರು ಪಾಠ ಮಾಡಿದರು. ಆ ಬಳಿಕ ಹನುಮಂತ ಮಂಕಾದರು. ನಂತರ ಅಪ್ಸೆಟ್ ಆದಂತೆ ಕಂಡು ಬಂತು.

ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಅವರು ಏನನ್ನೋ ಹೇಳ ಹೊರಟರು. ಆಗ ಹನುಮಂತ ಅವರ ಮುಖದಲ್ಲಿ ಯಾವುದೇ ನಗು ಬಂದಿಲ್ಲ. ‘ನಗುತ್ತಾ ಹೇಳಬಹುದಲ್ಲ ಹನುಮಂತ’ ಎಂದರು ಸುದೀಪ್. ಮುಂದುವರಿದು, ‘ನೀವು ಹಾಗೂ ಧನರಾಜ್​ ಅವರು ಏನೇನು ಮಾತಾಡುತ್ತೀರಾ ಎಂಬುದನ್ನು ಜೂಮ್​ ಹಾಕಿ ಕೇಳಿಸಿಕೊಳ್ಳುತ್ತಾ ಇರುತ್ತೇನೆ. ಈ ಜಾಗದಲ್ಲಿ ಮಾತ್ರ ಮಾತು ಕಡಿಮೆ ಆಯಿತು ಎಂದರೆ ನಾನು ನಂಬುವವನಲ್ಲ’ ಎಂದರು ಸುದೀಪ್. ಈ ಮೂಲಕ ಹನುಮಂತ ಅವರು ನಾಟಕ ಮಾಡುತ್ತಿದ್ದಾರೆ ಎಂಬುದನ್ನು ನೇರವಾಗಿ ಹೇಳಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಬರಲು ಹನುಮಂತ ನಿರ್ಧಾರ; ಧನರಾಜ್ ಪ್ರತಿಕ್ರಿಯೆ ಏನು?

ಹನುಮಂತ ಅವರು ಈಗ ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ‘ನನಗೆ ಈ ಆಟ ಸಾಕಾಗಿದೆ’ ಎಂದು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us