AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಖತ್ ತರ್ಲೆ, ಸಲ್ಮಾನ್ ಖಾನ್ ಬುಕ್ ಪ್ರಿಂಟ್ ಹಾಕಿಸಿದ ಜೆನ್ ಜಿಗಳು

Salman Khan tweet: ಇತ್ತೀಚೆಗೆ ಜೆನ್ ಜಿಗಳ ಪ್ರತಿಭಟನೆಗೆ ಸಲ್ಮಾನ್ ಖಾನ್ ಬೆಂಬಲ ನೀಡಿದ್ದರು, ಅಲ್ಲದೆ, ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸುವಂತೆ, ಸೋನಂ ವಾಂಕ್ಚುಕ್ ಉಪವಾಸ ನಿಲ್ಲಿಸುವಂತೆ ಟ್ವೀಟ್ ಸಹ ಮಾಡಿದ್ದರು. ಇತರೆ ಸೆಲೆಬ್ರಿಟಿಗಳಂತೆ ‘ಪೊಲಿಟಿಕಲಿ ಕರೆಕ್ಟ್’ ಆದ ಟ್ವೀಟ್​​ಗಳನ್ನು ಸಲ್ಮಾನ್ ಖಾನ್ ಮಾಡುವುದಿಲ್ಲ, ಅವರಿಗೆ ತೋಚಿದ್ದನ್ನು ಬರೆಯುತ್ತಾರೆ. ಇದೀಗ ಈ ಜೆನ್​ ಜಿಗಳು ಸಲ್ಮಾನ್ ಖಾನ್ ಅವರ ಟ್ವೀಟ್​​ಗಳನ್ನೇ ಪ್ರಧಾನವಾಗಿರಿಸಿಕೊಂಡು ಸಖತ್ ತರ್ಲೆ ಮಾಡಿದ್ದಾರೆ.

ಸಖತ್ ತರ್ಲೆ, ಸಲ್ಮಾನ್ ಖಾನ್ ಬುಕ್ ಪ್ರಿಂಟ್ ಹಾಕಿಸಿದ ಜೆನ್ ಜಿಗಳು
Salman Kan
ಮಂಜುನಾಥ ಸಿ.
|

Updated on:Aug 05, 2026 | 3:34 PM

Share

ಸಲ್ಮಾನ್ ಖಾನ್ (Salman Khan), ಬಾಲಿವುಡ್​​ನ ಸೂಪರ್ ಸ್ಟಾರ್ ನಟ. ಭಿನ್ನ ವ್ಯಕ್ತಿತ್ವದ, ಸಾಕಷ್ಟು ವಿವಾದಗಳನ್ನೂ ಹೊಂದಿರುವ ಆದರೆ ಅಷ್ಟೆ ದೊಡ್ಡ ಅಭಿಮಾನಿ ಬಳಗವನ್ನೂ ಹೊಂದಿರುವ ನಟ. ಟ್ರೋಲಿಗರಿಗಂತೂ ಬಲು ಪ್ರಿಯ ಸೆಲೆಬ್ರಿಟಿ ಸಲ್ಮಾನ್ ಖಾನ್. ಇತ್ತೀಚೆಗೆ ಜೆನ್ ಜಿಗಳ ಪ್ರತಿಭಟನೆಗೆ ಸಹ ಸಲ್ಮಾನ್ ಖಾನ್ ಬೆಂಬಲ ನೀಡಿದ್ದರು, ಅಲ್ಲದೆ, ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸುವಂತೆ, ಸೋನಂ ವಾಂಕ್ಚುಕ್ ಉಪವಾಸ ನಿಲ್ಲಿಸುವಂತೆ ಟ್ವೀಟ್ ಸಹ ಮಾಡಿದ್ದರು. ಇತರೆ ಸೆಲೆಬ್ರಿಟಿಗಳಂತೆ ‘ಪೊಲಿಟಿಕಲಿ ಕರೆಕ್ಟ್’ ಆದ ಟ್ವೀಟ್​​ಗಳನ್ನು ಸಲ್ಮಾನ್ ಖಾನ್ ಮಾಡುವುದಿಲ್ಲ, ಅವರಿಗೆ ತೋಚಿದ್ದನ್ನು ಬರೆಯುತ್ತಾರೆ. ಇದೀಗ ಈ ಜೆನ್​ ಜಿಗಳು ಸಲ್ಮಾನ್ ಖಾನ್ ಅವರ ಟ್ವೀಟ್​​ಗಳನ್ನೇ ಪ್ರಧಾನವಾಗಿರಿಸಿಕೊಂಡು ಸಖತ್ ತರ್ಲೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಅವರು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಅದರಲ್ಲೂ ಆಗಾಗ್ಗೆ ಟ್ವೀಟ್​​ಗಳನ್ನು ಸಹ ಮಾಡುತ್ತಿರುತ್ತಾರೆ. ಅವರ ಟ್ವೀಟ್​​ಗಳು ಇತರೆ ಸೆಲೆಬ್ರಿಟಿಗಳ ಟ್ವೀಟ್​​ಗಳಿಗಿಂತಲೂ ಭಿನ್ನವಾಗಿರುತ್ತವೆ. ತಮಗೆ ತೊಚಿದ್ದನ್ನು ಟ್ವೀಟ್ ಮಾಡುತ್ತಾರೆ. ಇತ್ತೀಚೆಗಷ್ಟೆ ಸೋನಂ ವಾಂಕ್ಚುಕ್ ಅವರಿಗೆ ‘ಇಟ್ಸ್ ಡನ್ ಬ್ರೋ’ ಎಂದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದರು. ಇದೇ ರೀತಿ ಹಲವಾರು ಬಾರಿ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಿದೆ. ಇದೀಗ ಈ ಜೆನ್ ಜೀ ಗಳು ಸಲ್ಮಾನ್ ಖಾನ್ ಅವರ ಎಲ್ಲ ಟ್ವೀಟ್​​ಗಳನ್ನು ಸಂಗ್ರಹಿಸಿ ಅವನ್ನು ಪುಸ್ತಕ ರೂಪದಲ್ಲಿ ಮುದ್ರಿಸಿದ್ದಾರೆ. ಪುಸ್ತಕಕಕ್ಕೆ ‘ಭಾಯಿ ಕೆ ದೋಹೆ’ ಎಂದು ಹೆಸರಿಟ್ಟಿದ್ದಾರೆ.

ಹಿಂದಿಯಲ್ಲಿ ‘ಕಬೀರ್​ ಕೆ ದೋಹೆ’ ಇನ್ನಿತರೆ ದೋಹೆಗಳು ಬಹಳ ಜನಪ್ರಿಯ ಮತ್ತು ಐತಿಹಾಸಿಕ. ಈಗ ಜೆನ್ ಜಿಗಳು ಸಲ್ಮಾನ್ ಖಾನ್ ಅವರ ಟ್ವೀಟ್​​ಗಳನ್ನೇ ಸಂಗ್ರಹಿಸಿ, ಸಂಪಾದಿಸಿ, ‘ಭಾಯಿ ಕಿ ದೋಹೆ’ ಎಂದು ಪುಸ್ತಕ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕ ಇದೀಗ ‘ದಿ ರಿಯಾಲ್ ಸ್ಟೋರ್ (theriyalstore) ವೆಬ್​ ಸೈಟ್​​ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಪುಸ್ತಕವನ್ನು 999 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:‘70 ಜನ ಒಂದೇ ಟಾಯ್ಲೆಟ್ ಬಳಸಬೇಕಿತ್ತು’: ಜೈಲು ದಿನಗಳ ಕಷ್ಟ ನೆನೆದ ಸಲ್ಮಾನ್ ಖಾನ್

ಪುಸ್ತಕದಲ್ಲಿ ಸಲ್ಮಾನ್ ಖಾನ್ ಅವರ ಪ್ರತಿ ಟ್ವೀಟ್​​ಗೆ ಅವರ ಅಪರೂಪದ ಕೆಲವು ಫೋಟೊಗಳನ್ನು ಸಹ ಮುದ್ರಿಸಲಾಗಿದೆ. ಕ್ರಿಯಾಶೀಲವಾಗಿ, ಬುದ್ಧಿವಂತಿಕೆಯಿಂದ ಫೋಟೊಗಳನ್ನು, ಟ್ವೀಟ್​​ಗಳನ್ನು ಪುಸ್ತಕದಲ್ಲಿ ಪ್ರೆಸೆಂಟ್ ಮಾಡಲಾಗಿದೆ. ಮತ್ತೊಂದು ವಿಶೇಷವೆಂದರೆ ಪುಸ್ತಕ ಖರೀದಿ ಮಾಡಲು ವೆಬ್ ಸೈಟ್ ತೆರೆದರೆ ಅಲ್ಲಿ, ಸಲ್ಮಾನ್ ಅವರ ‘ಮೇ ಕರು ತೋ ಸಾಲಾ ಕ್ಯಾರೆಕ್ಟರ್ ಡೀಲಾ ಹೇ’ ಹಾಡು ಕೇಳಿ ಬರುತ್ತದೆ. ಈ ಹಾಡು ಸಹ, ಸಲ್ಮಾನ್ ಖಾನ್ ಅವರ ವೈಯಕ್ತಿಕ ಬದುಕಿನೊಂದಿಗೆ ಸಂಬಂಧ ಹೊಂದಿದೆ. ಬೇರೆಯವರು ಮಾಡಿದರೆ ಸರಿ, ನಾನು ಮಾಡಿದರೆ ತಪ್ಪು ಎಂಬ ಪ್ರಶ್ನೆಯನ್ನು ಸಲ್ಮಾನ್ ಕೇಳುತ್ತಿರುವಂತೆ ಈ ಹಾಡಿದೆ.

ಸಲ್ಮಾನ್ ಖಾನ್ ಅವರ ಇತ್ತೀಚೆಗಿನ ‘ಇಟ್ಸ್ ಓವರ್ ಬ್ರೋ’ ಇಂದ ಹಿಡಿದು ಅವರ ಹಲವು ಐಕಾನಿಕ್ ಟ್ವೀಟ್​​ಗಳು ಈ ಪುಸ್ತಕದಲ್ಲಿವೆ. ಪುಸ್ತಕವನ್ನು ಹಲವಾರು ಮಂದಿ ಖರೀದಿ ಮಾಡುತ್ತಿದ್ದಾರೆ. ಹಲವರು ಪುಸ್ತಕದ ಜೊತೆಗೆ ತಮ್ಮ ಚಿತ್ರಗಳನ್ನು ಸಹ ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಒಟ್ಟಾರೆ ಯಾರೋ ಜೆನ್-ಜಿ ಅದ್ಭುತವಾದ ಐಡಿಯಾ ಮಾಡಿ ಸಲ್ಮಾನ್ ಟ್ವೀಟ್​​ಗಳನ್ನು ಪುಸ್ತಕ ರೂಪದಲ್ಲಿ ಪಬ್ಲಿಷ್ ಮಾಡಿದ್ದಾನೆ ಜೊತೆಗೆ ಒಳ್ಳೆಯ ಹಣ ಸಹ ಗಳಿಸುತ್ತಿದ್ದಾನೆ. ಆದರೆ ಸಲ್ಮಾನ್ ಖಾನ್ ತಂಡದವರು ಇದರ ಮೇಲೆ ಯಾವುದೇ ಕೇಸು ಈ ವರೆಗೆ ಹಾಕದೇ ಇರುವುದು ಆಶ್ಚರ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:09 pm, Wed, 5 August 26

Follow Us
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ
ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಗುವಿಗೆ 1 ಗ್ರಾಂ ಚಿನ್ನದ ಉಂಗುರ!
ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಗುವಿಗೆ 1 ಗ್ರಾಂ ಚಿನ್ನದ ಉಂಗುರ!
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮಳೆ ಅಬ್ಬರಕ್ಕೆ ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಮಳೆ ಅಬ್ಬರಕ್ಕೆ ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಯಾದಗಿರಿ: ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಯಾದಗಿರಿ: ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ!
ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ!
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!