AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಲುಗೆ ಹೋಗಿದ್ದ ‘ಘಜಿನಿ’ ಆಫರ್ ಆಮಿರ್​​ಗೆ ಕೊಡಿಸಿದ್ದ ಪ್ರದೀಪ್ ರಾವತ್

ಭಾರತದ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಗಳಿಸಿದ ಮೊದಲ ಭಾರತೀಯ ಸಿನಿಮಾ 'ಘಜಿನಿ'. ಈ ಸಿನಿಮಾ ಹಿಂದಿಗೆ ರಿಮೇಕ್ ಆಗಲು ನಟ ಪ್ರದೀಪ್ ರಾವತ್ ಮುಖ್ಯ ಕಾರಣ. ಸಲ್ಮಾನ್ ಖಾನ್ ಬದಲಿಗೆ ಶಾಂತ ಸ್ವಭಾವದ ಆಮಿರ್ ಖಾನ್ ಅವರನ್ನು ಆಯ್ಕೆ ಮಾಡಿ, ಇತಿಹಾಸ ಸೃಷ್ಟಿಸಲು ರಾವತ್ ಕಾರಣರಾಗಿದ್ದರು.

ಸಲ್ಲುಗೆ ಹೋಗಿದ್ದ ‘ಘಜಿನಿ’ ಆಫರ್ ಆಮಿರ್​​ಗೆ ಕೊಡಿಸಿದ್ದ ಪ್ರದೀಪ್ ರಾವತ್
ಆಮಿರ್​-ಪ್ರದೀಪ್
ರಾಜೇಶ್ ದುಗ್ಗುಮನೆ
|

Updated on: Aug 05, 2026 | 2:42 PM

Share

ಮುಖ್ಯಾಂಶಗಳು

  • ಸಲ್ಮಾನ್ ಖಾನ್ ಬೇಡ ಎಂದಿದ್ದೇಕೆ ರಾವತ್
  • 'ಘಜನಿ' ರಿಮೇಕ್ ಹಿಂದಿನ ರೋಚಕ ಕಥೆ
  • ಆಮಿರ್ ಖಾನ್‌ಗೆ ಸಿಕ್ಕಿತು ಜಾಕ್‌ಪಾಟ್

‘ಘಜಿನಿ’ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಚಿತ್ರ. ಇದು 100 ಕೋಟಿ ರೂಪಾಯಿ ಗಳಿಸಿದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಸಿನಿಮಾದ ಯಶಸ್ಸಿನ ಹಿಂದೆ ಹಿರಿಯ ನಟ ದಿವಂಗತ ಪ್ರದೀಪ್ ರಾವತ್ ಅವರ ಬಹುಮುಖ್ಯ ಪಾತ್ರವಿತ್ತು. ಅವರ ನಿರ್ಧಾರವೇ ಈ ಸಿನಿಮಾ ಹಿಂದಿಗೆ ರಿಮೇಕ್ ಆಗಲು ಕಾರಣವಾಗಿತ್ತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಹಿರಿಯ ನಟ ಪ್ರದೀಪ್ ರಾವತ್ ಅವರು ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು. ಈ ಸಂದರ್ಭದಲ್ಲಿ ‘ಘಜಿನಿ ಸಿನಿಮಾ ದಿನಗಳನ್ನು ಪುನರ್ ವಿಮರ್ಶಿಸೋಣ.

ಪ್ರದೀಪ್ ರಾವತ್ ಅವರು ಆರಂಭದಲ್ಲಿ ತೆಲುಗಿನ ‘ಸೈ’ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿ ಸಖತ್ ಪ್ರಸಿದ್ಧಿ ಪಡೆದಿದ್ದರು. ನಂತರ ತಮಿಳಿನ ‘ಘಜಿನಿ’ ಸಿನಿಮಾದಲ್ಲಿ ಮಿಂಚಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು.

ತಮಿಳು ಘಜಿನಿ ಗೆಲುವಿನ ಬಳಿಕ ನಿರ್ದೇಶಕ ಮುರುಗದಾಸ್ ಅವರಿಗೆ ಈ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡುವ ಆಸೆ ಇತ್ತು. ಮುರುಗದಾಸ್ ಅವರಿಗೆ ಸಲ್ಲು ಎಂದರೆ ತುಂಬಾ ಇಷ್ಟವಿತ್ತು. ಅವರು ಸಲ್ಮಾನ್ ಖಾನ್ ಅವರನ್ನೇ ನಾಯಕನನ್ನಾಗಿ ಮಾಡಲು ಬಯಸಿದ್ದರು. ಆದರೆ ಪ್ರದೀಪ್ ರಾವತ್ ಅವರು ಆಮಿರ್ ಖಾನ್ ಹೆಸರು ಸೂಚಿಸಿದರು.

‘ಸಲ್ಮಾನ್ ಖಾನ್ ಕೋಪಿಷ್ಟ ಸ್ವಭಾವದವರು. ನಿರ್ದೇಶಕ ಮುರುಗದಾಸ್ ಅವರಿಗೆ ಹಿಂದಿ ಅಥವಾ ಇಂಗ್ಲಿಷ್ ಭಾಷೆ ಬರುತ್ತಿರಲಿಲ್ಲ. ಆದರೆ ಆಮಿರ್ ಖಾನ್ ಶಾಂತ ಸ್ವಭಾವದವರು. ಅವರು ಎಲ್ಲರೊಂದಿಗೂ ಗೌರವದಿಂದ ನಡೆದುಕೊಳ್ಳುತ್ತಾರೆ. ಹೀಗಾಗಿ ಆಮಿರ್ ಖಾನ್ ಈ ಪಾತ್ರಕ್ಕೆ ಸೂಕ್ತ’ ಎಂದು ರಾವತ್ ಸೂಚಿಸಿದ್ದರು.

ಇದನ್ನೂ ಓದಿ: ಹಿರಿಯ ನಟ ಪ್ರದೀಪ್ ರಾವತ್ ನಿಧನ: ‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ

ಪ್ರದೀಪ್ ರಾವತ್ ಅವರು ಆಮಿರ್ ಖಾನ್ ಅವರನ್ನು ಒಪ್ಪಿಸಲು ಸುಮಾರು ಆರು ತಿಂಗಳು ಶ್ರಮಿಸಿದರು. ಕೊನೆಗೆ ಸಿನಿಮಾ ವೀಕ್ಷಿಸಿದ ಆಮಿರ್ ತಕ್ಷಣವೇ ನಟಿಸಲು ಒಪ್ಪಿಕೊಂಡರು. ಈ ಸಿನಿಮಾಗಾಗಿ ಆಮಿರ್ ಖಾನ್ ಸಾಕಷ್ಟು ಜಿಮ್ ಮಾಡಿದ್ದರು. ಚಿತ್ರೀಕರಣದ ವೇಳೆ ಅವರು ತೀವ್ರ ಗಾಯಗೊಂಡಿದ್ದರು. ಎಲ್ಲಾ ಸವಾಲುಗಳನ್ನು ಮೀರಿ ಸಿನಿಮಾ ಬಿಡುಗಡೆಯಾಯಿತು. ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯಿತು.

ಪ್ರಶ್ನೆ: ಪ್ರದೀಪ್ ರಾವತ್ ಹೇಗೆ ನಿಧನ ಹೊಂದಿದರು? ಉತ್ತರ: ರಕ್ತದ ಕ್ಯಾನ್ಸರ್

ಪ್ರಶ್ನೆ: ಪ್ರದೀಪ್ ರಾವತ್​​ಗೆ ಎಷ್ಟು ವರ್ಷ ಆಗಿತ್ತು? ಉತ್ತರ: 74 ವರ್ಷ

ಪ್ರಶ್ನೆ: ಪ್ರದೀಪ್ ರಾವತ್ ನಟಿಸಿದ ಕನ್ನಡದ ಸಿನಿಮಾಗಳು ಯಾವವು? ಉತ್ತರ: ಗಜ, ಅಭಯ್, ಬಚ್ಚನ್ ಮೊದಲಾದವು

Follow Us