ಬಿಗ್ ಬಾಸ್ ನಿಯಮ ಮೀರಿ ಹೊರ ಬರ್ತೀನಿ ಎಂದರೆ ದುಬಾರಿ ದಂಡ? ಇಲ್ಲಿದೆ ವಿವರ

ಹಿಂದಿಯಲ್ಲಿ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಸಲ್ಮಾನ್ ಪ್ರತಿ ಸೀಸನ್‌ಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ.ಅವರು ಸ್ಪರ್ಧಿಗಳ ಜೊತೆ ಕಠಿಣವಾಗಿ ನಡೆದುಕೊಳ್ಳುತ್ತಾರೆ. ಈ ವೇಳೆ ಕೆಲವರು ಶೋನಿಂದ ಅರ್ಧಕ್ಕೆ ಹೊರಹೋಗುವ ಪ್ರಯತ್ನ ಮಾಡುತ್ತಾರೆ.  

ಬಿಗ್ ಬಾಸ್ ನಿಯಮ ಮೀರಿ ಹೊರ ಬರ್ತೀನಿ ಎಂದರೆ ದುಬಾರಿ ದಂಡ? ಇಲ್ಲಿದೆ ವಿವರ
ಬಿಗ್ ಬಾಸ್
Follow us
| Updated By: ರಾಜೇಶ್ ದುಗ್ಗುಮನೆ

Updated on:Nov 12, 2023 | 12:27 PM

ಜಿಯೋ ಸಿನಿಮಾ (Jio Cinema) ಹಾಗೂ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ಕನ್ನಡದ 10ನೇ ಸೀಸನ್ ಐದನೇ ವಾರ ಪೂರ್ಣಗೊಳಿಸುತ್ತಿದೆ. ಸ್ಪರ್ಧಿಗಳ ಮಧ್ಯೆ ಭರ್ಜರಿ ಸ್ಪರ್ಧೆ ಏರ್ಪಡುತ್ತಿದೆ. ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ಬಿಗ್ ಬಾಸ್ (Bigg Boss) ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್ ಆಗಿದ್ದರು. ಈಗ ಮರಳಿ ದೊಡ್ಮನೆಗೆ ಬಂದಿದ್ದಾರೆ. ಅವರು ಈವಾರ ಬಿಗ್ ಬಾಸ್​ನಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸೇವ್ ಆದ ಹೊರತಾಗಿಯೂ ಅವರು ಎಲಿಮಿನೇಟ್ ಆಗುತ್ತೇನೆ ಎಂದರು. ಹಿಂದಿ ಬಿಗ್ ಬಾಸ್​ನಲ್ಲಿ ಈ ರೀತಿ ಮಾಡಿದರೆ ದೊಡ್ಡ ದಂಡ ಕಟ್ಟಬೇಕಾಗುತ್ತದೆ. ಆ ಬಗ್ಗೆ ಇಲ್ಲಿದೆ ವಿವರ.

ಪ್ರತಿ ವರ್ಷ ವೀಕ್ಷಕರು ಬಿಗ್ ಬಾಸ್​ಗಾಗಿ ಕಾಯುತ್ತಾರೆ. 3 ತಿಂಗಳ ಕಾಲ ನಡೆಯುವ ಈ ರಿಯಾಲಿಟಿ ಶೋನಲ್ಲಿ ಜಗಳ ಸಾಮಾನ್ಯ. ಬಿಗ್ ಬಾಸ್​ನ​ ವಿವಾದಾತ್ಮಕ ಶೋ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಇದು ಪ್ರಸಾರ ಆಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಹಿಂದಿಯಲ್ಲಿ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಸಲ್ಮಾನ್ ಪ್ರತಿ ಸೀಸನ್‌ಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ.ಅವರು ಸ್ಪರ್ಧಿಗಳ ಜೊತೆ ಕಠಿಣವಾಗಿ ನಡೆದುಕೊಳ್ಳುತ್ತಾರೆ. ಈ ವೇಳೆ ಕೆಲವರು ಶೋನಿಂದ ಅರ್ಧಕ್ಕೆ ಹೊರಹೋಗುವ ಪ್ರಯತ್ನ ಮಾಡುತ್ತಾರೆ.

ಬಿಗ್ ಬಾಸ್​ ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಸ್ಪರ್ಧಿಗಳನ್ನು ಕಟು ಟೀಕೆ ಮಾಡುತ್ತಾರೆ. ಇದನ್ನು ಸಹಿಸಲಾರದೇ ಅನೇಕ ಸ್ಪರ್ಧಿಗಳು ಕಾರ್ಯಕ್ರಮವನ್ನು ತೊರೆಯಲು ನಿರ್ಧರಿಸುತ್ತಾರೆ. ಬಿಗ್ ಬಾಸ್ ನಿರ್ಧಾರಗಳಿಂದ ಸ್ಪರ್ಧಿಗಳು ತುಂಬಾನೇ ಹತಾಶೆಗೊಳ್ಳುತ್ತಾರೆ. ಆ ಬಳಿಕ ಅರ್ಧಕ್ಕೆ ಹೊರ ನಡೆಯಲು ಅನೇಕ ಸ್ಪರ್ಧಿಗಳು ನಿರ್ಧರಿಸುತ್ತಾರೆ. ಸಲ್ಮಾನ್‌ ಅವರು ಹಾಕುವ ಕಠೋರ ಛೀಮಾರಿಯೇ ಇದಕ್ಕೆ ಕಾರಣ ಅನ್ನೋದು ಅನೇಕರ ಅಭಿಪ್ರಾಯ. ಈ ರೀತಿ ಹೊರ ಹೋದರೆ ಅವರು ದೊಡ್ಡ ಮೊತ್ತದ ದಂಡಪಾವತಿಸಬೇಕು.

ದುಬಾರಿ ಆಗುತ್ತದೆ..

ಸ್ಪರ್ಧಿಗಳು ಹಾಗೂ ಬಿಗ್ ಬಾಸ್ ನಡೆಸಿಕೊಡುವವರ ಮಧ್ಯೆ ಒಂದು ಒಪ್ಪಂದ ಆಗಿರುತ್ತದೆ. ಈ ಒಪ್ಪಂದವನ್ನು ಚಾಚೂತಪ್ಪದೇ ಪಾವತಿಸಬೇಕು. ಯಾರ ಮೇಲೂ ಕೈ ಮಾಡುವಂತಿಲ್ಲ, ಬಿಗ್ ಬಾಸ್​ನಿಂದ ಅರ್ಧಕ್ಕೆ ಹೊರಬರುವಂತಿಲ್ಲ ಸೇರಿ ಅನೇಕ ನಿಯಮಗಳು ಇದರಲ್ಲಿ ಇವೆ. ಈ ನಿಯಮ ಮೀರಿದರೆ ಎಷ್ಟು ನಷ್ಟ ಆಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮುನ್ನಾವರ್ ಫಾರೂಕಿ ಬಿಗ್ ಬಾಸ್ ಒಪ್ಪಂದದ ಬಗ್ಗೆ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: ಎಲಿಮಿನೇಷನ್ ವಿಚಾರದಲ್ಲಿ ಮತ್ತೆ ಮರುಕಳಿಸಿತು ‘ಬಿಗ್ ಬಾಸ್​ ಸೀಸನ್ 8’ರ ಘಟನೆ?

2 ಕೋಟಿ ರೂಪಾಯಿ!

‘ಪ್ರತಿ ವರ್ಷ ಅನೇಕ ಜನರು ಬಿಗ್ ಬಾಸ್ ಬಾಗಿಲಿಗೆ ಹೋಗಿ ನಾವು ಹೊರಹೋಗಬೇಕು ಎಂದು ಹೇಳುತ್ತಾರೆ. ಹೀಗೆ ಹೋಗಬೇಕಾದ 2 ಕೋಟಿ ರೂಪಾಯಿ ಕೊಡಬೇಕು ಅಂತ ಬಿಗ್ ಬಾಸ್ ಒಪ್ಪಂದದಲ್ಲಿ ಬರೆಯಲಾಗಿದೆ’ ಎಂದಿದ್ದಾರೆ ಮುನ್ನಾವರ್. ಇದು ಅನೇಕರಿಗೆ ಅಚ್ಚರಿ ತರಿಸಿದೆ.

ಶೋಗೆ ನಷ್ಟ

ಬಿಗ್ ಬಾಸ್​ ಮನೆ ಒಳಗೆ ಬಂದ ನಂತರ ಸ್ಪರ್ಧಿಗಳಿಗೆ ಹೊರ ಜಗತ್ತಿನ ಜೊತೆ ಸಂಪರ್ಕ ಇರುವುದಿಲ್ಲ. ಕೆಲವೊಮ್ಮೆ ಸ್ಪರ್ಧಿಗಳಿಗೆ ಒಂಟಿತನ, ಕುಟುಂಬದ ನೆನಪು ಕಾಡುತ್ತದೆ. ಹೀಗೆ ಕಾಡಿದಾಗ ಸ್ಪರ್ಧಿಗಳು ಹೊರ ನಡೆದರೆ ಶೋ ನಡೆಸಿಕೊಡುವವರಿಗೆ ನಷ್ಟ ಉಂಟಾಗುತ್ತದೆ. ಈ ಕಾರಣದಿಂದಲೇ ಇಂಥ ಕಠಿಣ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:19 pm, Sun, 12 November 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!