AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗದಲ್ಲಿ ಸಿಕ್ಕ ಸ್ಟಾರ್​​ಡಂ ಬಿಟ್ಟು ಟ್ಯಾಕ್ಸಿ ಓಡಿಸಿದ್ದೇಕೆ? ಎಲ್ಲವನ್ನೂ ವಿವರಿಸಿದ ನಟ

ಸಿನಿಮಾ ರಂಗದಿಂದ ಬರುವ ಹಣದಲ್ಲಿ ಜೀವನ ಸಾಗಿಸುವುದು ಕಷ್ಟ ಎನಿಸಿತು. ಈ ಕಾರಣಕ್ಕೆ ಅವರು ಚಿತ್ರರಂಗ ತೊರೆದು ಕುಟುಂಬದ ಜೊತೆ ನ್ಯೂಜಿಲೆಂಡ್ ತೆರಳಿದ್ದಾರೆ.

ಚಿತ್ರರಂಗದಲ್ಲಿ ಸಿಕ್ಕ ಸ್ಟಾರ್​​ಡಂ ಬಿಟ್ಟು ಟ್ಯಾಕ್ಸಿ ಓಡಿಸಿದ್ದೇಕೆ? ಎಲ್ಲವನ್ನೂ ವಿವರಿಸಿದ ನಟ
ಅಬ್ಬಾಸ್
ರಾಜೇಶ್ ದುಗ್ಗುಮನೆ
| Edited By: |

Updated on: Jul 19, 2023 | 6:30 AM

Share

ನಟ ಅಬ್ಬಾಸ್ (Abbas) ಅವರು ತಮಿಳು ಚಿತ್ರರಂಗದಲ್ಲಿ ಹೀರೋ ಆಗಿ ಮಿಂಚಿದವರು. ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದರೆ, ಕಳೆದ 8 ವರ್ಷಗಳ ಹಿಂದೆ ಅವರು ಸಿನಿಮಾ ರಂಗ ತೊರೆದಿದ್ದಾರೆ. ಅಬ್ಬಾಸ್ ಸದ್ಯ ನ್ಯೂಜಿಲೆಂಡ್​ನಲ್ಲಿ ಸೆಟಲ್ ಆಗಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ ಹೊರತಾಗಿಯೂ ಅವರಿಗೆ ದೊಡ್ಡ ಯಶಸ್ಸು ಸಿಗಲೇ ಇಲ್ಲ. ಸಿನಿಮಾ ರಂಗದಿಂದ ಬರುವ ಹಣದಲ್ಲಿ ಜೀವನ ಸಾಗಿಸುವುದು ಕಷ್ಟ ಎನಿಸಿತು. ಈ ಕಾರಣಕ್ಕೆ ಅವರು ಚಿತ್ರರಂಗ ತೊರೆದು ಕುಟುಂಬದ ಜೊತೆ ನ್ಯೂಜಿಲೆಂಡ್​ಗೆ ತೆರಳಿದ್ದಾರೆ.

ಇತ್ತೀಚೆಗೆ ಹಲವು ವಿಚಾರಗಳ ಬಗ್ಗೆ ಅಬ್ಬಾಸ್ ಮಾತನಾಡಿದ್ದಾರೆ. ‘ಕೊವಿಡ್ ಅವಧಿಯಲ್ಲಿ ನಾನು ಕೆಲವರಿಗೆ ಸಹಾಯ ಮಾಡಿದ್ದೇನೆ. ನ್ಯೂಜಿಲೆಂಡ್‌ನಲ್ಲಿ ನೆಲೆಸಿರುವಾಗ ಅಭಿಮಾನಿಗಳೊಂದಿಗೆ ಜೂಮ್ ಕರೆಗಳ ಮೂಲಕ ಮಾತನಾಡಿದ್ದೆ. ಆತ್ಮಹತ್ಯೆಯ ಆಲೋಚನೆ ಮಾಡಿದವರ ಮನಸ್ಥಿತಿ ಬದಲಿಸುವುದು ನನ್ನ ಉದ್ದೇಶವಾಗಿತ್ತು’ ಎಂದಿದ್ದಾರೆ ಅಬ್ಬಾಸ್.

‘ನನಗೂ ಆತ್ಮಹತ್ಯೆ ಆಲೋಚನೆಗಳು ಬಂದಿದ್ದವು. ನಾನು 10 ನೇ ತರಗತಿಯಲ್ಲಿ ಅನುತ್ತೀರ್ಣನಾದೆ. ಆ ಸಮಯದಲ್ಲಿ ನನ್ನ ಗರ್ಲ್​ಫ್ರೆಂಡ್​ ಬಿಟ್ಟು ಹೋದಳು. ರಸ್ತೆಯ ಪಕ್ಕದಲ್ಲಿ ನಿಂತು, ವೇಗವಾಗಿ ಚಲಿಸುವ ವಾಹನದ ಮುಂದೆ ಹೆಜ್ಜೆ ಹಾಕಲು ಯೋಚಿಸುತ್ತಿರುವಾಗ ನನಗೆ ಒಂದು ವಿಚಾರ ಹೊಳೆಯಿತು. ನಾನು ತೆಗೆದುಕೊಳ್ಳುವ ನಿರ್ಧಾರದಿಂದ ಕಾರು ಚಾಲಕನ ಅನುಗುಣವಾಗಿ ವರ್ತಿಸಿದರೆ, ಆ ವ್ಯಕ್ತಿಯ ಜೀವನವೂ ಗಾಢವಾಗಿ ಪರಿಣಾಮ ಬೀರುತ್ತದೆ. ನನ್ನ ಕರಾಳ ಕ್ಷಣದಲ್ಲಿಯೂ ಸಹ, ನಾನು ಇನ್ನೊಬ್ಬ ವ್ಯಕ್ತಿಯ ಯೋಗಕ್ಷೇಮವನ್ನು ಪರಿಗಣಿಸುತ್ತಿದ್ದೇನೆ’ ಎಂದಿದ್ದಾರೆ ಅಬ್ಬಾಸ್.

ಇದನ್ನೂ ಓದಿ: Rachita Ram: ‘ಸಂಜು ವೆಡ್ಸ್​ ಗೀತಾ 2’ ಸಿನಿಮಾಗೆ ರಚಿತಾ ರಾಮ್​ ನಾಯಕಿ? ನಾಗಶೇಖರ್​ ಜೊತೆ ನಡೆದಿದೆ ಮಾತುಕತೆ

‘ಆರಂಭದಲ್ಲಿ ಕೆಲ ಸಿನಿಮಾ ಯಶಸ್ಸು ಕಂಡಿತು. ಆದರೆ, ಬಳಿಕ ನನ್ನ ಕೆಲವು ಚಿತ್ರಗಳು ಸೋತವು. ನಾನು ಆರ್ಥಿಕವಾಗಿ ನಿರ್ಗತಿಕನಾಗಿದ್ದೆ. ಬಾಡಿಗೆ ಕಟ್ಟಲು ಹಣ ಇರಲಿಲ್ಲ. ನನಗೆ ಇರುವ ಜನಪ್ರಿಯತೆಯಿಂದ ಆರಂಭದಲ್ಲಿ ನಾನು ಕೆಲಸ ಹುಡುಕಲು ಹೋಗಿಲ್ಲ. ಬಳಿಕ ನಾನು ನಿರ್ಮಾಪಕ ಆರ್‌ಬಿ ಚೌಧರಿ ಅವರನ್ನು ಸಂಪರ್ಕಿಸಿ ಕೆಲಸಕ್ಕಾಗಿ ವಿನಂತಿಸಿದೆ. ಅವರು ಸಿನಿಮಾ ಒಂದರಲ್ಲಿ ನಟಿಸಲು ಅವಕಾಶ ನೀಡಿದರು. ಆದರೆ, ಕೊನೆಗೂ ನನಗೆ ಬೇಸರವಾಗಿ ಚಿತ್ರರಂಗ ಬಿಟ್ಟೆ. ನಾನು ನನ್ನ ಕೆಲಸವನ್ನು ಆನಂದಿಸುತ್ತಿರಲಿಲ್ಲ. ನನ್ನ ಬಾಲಿವುಡ್ ಚೊಚ್ಚಲ ಚಿತ್ರ ‘ಆಂಶ್​’ ವೀಕ್ಷಿಸಲು ಬಂದ ನನ್ನ ಸ್ನೇಹಿತರಿಗೆ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಸಲಹೆ ನೀಡಿದ್ದೆ’ ಎಂದಿದ್ದಾರೆ.

‘ನನ್ನ ಕುಟುಂಬವನ್ನು ನಾನು ಸಾಕಲೇಬೇಕಿತ್ತು. ಹೀಗಾಗಿ ನ್ಯೂಜಿಲೆಂಡ್​ಗೆ ತೆರಳಿದೆ. ಅಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿದೆ. ಟ್ಯಾಕ್ಸಿ ಕೂಡ ಓಡಿಸಿದೆ’ ಎಂದಿದ್ದಾರೆ ಅಬ್ಬಾಸ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು