AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿಯರ ಕ್ಯಾರಾವ್ಯಾನ್​ಗಳಲ್ಲಿ ಸಿಸಿಟಿವಿ, ಆತಂಕಕಾರಿ ವಿಷಯ ಬಹಿರಂಗಪಡಿಸಿದ ನಟಿ

Hema committee report: ಹೇಮಾ ಸಮಿತಿ ವರದಿ ಬಗ್ಗೆ ಮಾತನಾಡಿರುವ ನಟಿ ಹೇಮಾ ಶರತ್​ಕುಮಾರ್, ನಟಿಯರು ಬಳಸುವ ಕ್ಯಾರಾವ್ಯಾನ್​ಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಇಟ್ಟು ನಟಿಯರ ನಗ್ನ ವಿಡಿಯೋಗಳನ್ನು ಚಿತ್ರೀಕರಿಸಲಾಗುತ್ತಿದೆ ಎಂದಿದ್ದಾರೆ.

ನಟಿಯರ ಕ್ಯಾರಾವ್ಯಾನ್​ಗಳಲ್ಲಿ ಸಿಸಿಟಿವಿ, ಆತಂಕಕಾರಿ ವಿಷಯ ಬಹಿರಂಗಪಡಿಸಿದ ನಟಿ
ಮಂಜುನಾಥ ಸಿ.
|

Updated on:Sep 01, 2024 | 8:31 AM

Share

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳ ವರದಿ ಒಳಗೊಂಡ ಹೇಮಾ ಸಮಿತಿ ವರದಿ ತಲ್ಲಣ ಸೃಷ್ಟಿಸಿದೆ. ಹೇಮಾ ವರದಿ ಬೆನ್ನಲ್ಲೆ ಹಲವು ನಟಿಯರು ತಮಗೆ ಆಗಿರುವ ಕಹಿ ಅನುಭವದ ಬಗ್ಗೆ ಬಹಿರಂಗವಾಗಿ ಮಾತನಾಡಲು ಆರಂಭಿಸಿದ್ದಾರೆ. ಮಲಯಾಳಂನ ಕೆಲ ಹಿರಿಯ ನಿರ್ದೇಶಕ, ನಿರ್ಮಾಪಕರ ವಿರುದ್ಧ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದರ ಬೆನ್ನಲ್ಲೆ, ಬಹುಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟಿಯೊಬ್ಬರು, ತಮಗಾದ ಅತ್ಯಂತ ಭೀಕರ ಅನುಭವವನ್ನು ತೆರೆದಿಟ್ಟಿದ್ದಾರೆ.

ಖ್ಯಾತ ನಟ ಶರತ್​ಕುಮಾರ್ ಪತ್ನಿ, ಮತ್ತು ಬಹುಜನಪ್ರಿಯ ನಟಿ ರಾಧಿಕಾ ಶರತ್​ಕುಮಾರ್ ಅವರು ಹೇಮಾ ಕಮಿಟಿ ವರದಿ ಬಗ್ಗೆ ಮಾತನಾಡುತ್ತಾ, ನಾನು ಅತ್ಯಂತ ಭೀಕರ ಸನ್ನಿವೇಶಗಳನ್ನು ಎದುರಿಸಿದ್ದೇನೆ. ನಟಿಯರ ಬೆತ್ತಲೆ ಚಿತ್ರಗಳನ್ನು ಪಡೆಯಲು ಅವರು ಬಳಸುವ ಕ್ಯಾರವ್ಯಾನ್​ಗಳಲ್ಲ ಸಿಸಿಟಿವಿ ಅಳವಡಿಸಲಾಗುತ್ತದೆ ಎಂದಿದ್ದಾರೆ. ‘ಒಮ್ಮೆ ನಾನು ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಹೋಗಿದ್ದೆ. ಅಲ್ಲಿ ನನಗೆ ಕ್ಯಾರವ್ಯಾನ್ ನೀಡಲಾಗಿತ್ತು. ಅದನ್ನೇ ನಾನು ಸ್ನಾನಕ್ಕೆ, ಶೌಚಕ್ಕೆ, ಬಟ್ಟೆ ಬದಲಿಸಿಸಲು ಬಳಸುತ್ತಿದ್ದೆ’ ಎಂದಿದ್ದಾರೆ.

‘ಒಂದು ದಿನ ಕ್ಯಾರವ್ಯಾನ್​ನಿಂದ ಹೊರಗೆ ಬಂದಾಗ ಕೆಲವು ಸೆಟ್​ನ ಯುವಕರು ಮೊಬೈಲ್​ನಲ್ಲಿ ಏನೋ ನೋಡುತ್ತಿರುವುದು ನನ್ನ ಗಮನಕ್ಕೆ ಬಂತು. ನಾನು ನನ್ನ ಅಸಿಸ್ಟೆಂಟ್​ಗೆ ಹೇಳಿ ಆ ಯುವಕರು ಮೊಬೈಲ್​ನಲ್ಲಿ ಏನು ನೋಡುತ್ತಿದ್ದಾರೆ ತಿಳಿದುಕೋ ಎಂದು ಹೇಳಿದೆ. ವಿಷಯ ಗೊತ್ತಾದಾಗ ನನಗೆ ಆತಂಕವಾಯ್ತು. ಆ ಯುವಕರು, ಕ್ಯಾರಾವ್ಯಾನ್​ನಲ್ಲಿ ಅಳವಡಿಸಿರುವ ಸಿಸಿಟಿವಿಯ ದೃಶ್ಯಗಳನ್ನು ನೋಡುತ್ತಿದ್ದರಂತೆ’ ಎಂದಿದ್ದಾರೆ ರಾಧಿಕಾ.

ಇದನ್ನೂ ಓದಿ:Mohanlal: ಹೇಮಾ ಸಮಿತಿ ವರದಿ ಸಲ್ಲಿಕೆ ಬಳಿಕ ‘AMMA’ ಅಧ್ಯಕ್ಷ ಸ್ಥಾನಕ್ಕೆ ಮೋಹನ್​ಲಾಲ್ ರಾಜಿನಾಮೆ

ಕ್ಯಾರಾವ್ಯಾನ್​ಗಳಲ್ಲಿ ಹಿಡನ್ ಕ್ಯಾಮೆರಾ ಅಳವಡಿಸುವ ವಿಷಯ ತಿಳಿದ ಮೇಲೆ ನಾನು ಕ್ಯಾರಾವ್ಯಾನ್ ಬಳಸುವುದೇ ಬಿಟ್ಟೆ. ಹೋಟೆಲ್ ರೂಂಗೆ ಹೋಗಿ ಬಟ್ಟೆ ಬದಲಿಸಲು ಆರಂಭಿಸಿದೆ. ಇದು ನನ್ನೊಬ್ಬಳ ಅನುಭವ ಅಲ್ಲ ಹಲವು ನಟಿಯರು ಈ ಸಮಸ್ಯೆ ಎದುರಿಸಿದ್ದಾರೆ. ನಟಿಯರು ಉಳಿದುಕೊಂಡಿದ್ದ ರೂಮಿನ ಬಾಗಿಲುಗಳನ್ನು ಪುರುಷರು ಹೇಗೆ ಬಡಿಯುತ್ತಾರೆ ಎಂದು ಕೆಲವು ನಟಿಯರು ನನ್ನ ಬಳಿ ಹೇಳಿಕೊಂಡಿದ್ದಾರೆ. ಸಹಾಯ ಮಾಡುವಂತೆ ಮನವಿ ಸಹ ಮಾಡಿದ್ದಾರೆ ಎಂದು ರಾಧಿಕಾ ಶರತ್ ಹೇಳಿಕೊಂಡಿದ್ದಾರೆ.

ಹೇಮಾ ವರದಿ ಪ್ರಕಟವಾದ ಬಳಿಕ ಮಲಯಾಳಂನ ಹಿರಿಯ ನಟರಾದ ಮುಖೇಶ್, ಸಿದ್ಧಿಕ್, ಜಯಸೂರ್ಯ ಇನ್ನಿತರರ ವಿರುದ್ಧ ದೂರು ದಾಖಲಾಗಿದೆ. ಹಿರಿಯ ನಿರ್ದೇಶಕರಾದ ರಂಜಿತ್, ವಿಕೆ ಪ್ರಕಾಶ್ ಇನ್ನಿತರರ ವಿರುದ್ಧವೂ ದೂರು ದಾಖಲಾಗಿದೆ. ಹೇಮಾ ವರದಿ ಬಹಿರಂಗದ ಬಳಿಕ ಮಾ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಮೋಹನ್​ಲಾಲ್ ರಾಜೀನಾಮೆ ನೀಡಿ ಕೆಳಗೆ ಇಳಿದಿದ್ದಾರೆ. ಅವರ ಪದಾಧಿಕಾರಿಗಳು ಸಹ ರಾಜೀನಾಮೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:29 am, Sun, 1 September 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್