Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹಿಂದಿನ ಬಾಯ್​ಫ್ರೆಂಡ್​ಗಳು ಕೆಟ್ಟದಾಗಿ ನಡೆಸಿಕೊಂಡಿದ್ದರು: ಪ್ರಿಯಾಂಕಾ ಚೋಪ್ರಾ

Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮಾಜಿ ಬಾಯ್​ಫ್ರೆಂಡ್​ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮನ್ನು ಕಾಲೊರೆಸುವ ಬಟ್ಟೆಯಂತೆ ಬಳಸಿಕೊಳ್ಳಲಾಗಿತ್ತು ಎಂದಿದ್ದಾರೆ ಪ್ರಿಯಾಂಕಾ.

ಈ ಹಿಂದಿನ ಬಾಯ್​ಫ್ರೆಂಡ್​ಗಳು ಕೆಟ್ಟದಾಗಿ ನಡೆಸಿಕೊಂಡಿದ್ದರು: ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
Follow us
ಮಂಜುನಾಥ ಸಿ.
|

Updated on: May 11, 2023 | 4:22 PM

ಪ್ರಿಯಾಂಕಾ ಚೋಪ್ರಾ (Priyanka Chopra) ಸಖತ್ ಬಿಂದಾಸ್ ನಟಿ. ತುಳಿಯಲು ಯತ್ನಿಸಿದವರನ್ನೇ ಹಿಂದಿಕ್ಕಿ ಜೀವನವನ್ನು ತಮ್ಮಿಷ್ಟದಂತೆ ಬದುಕುತ್ತಿರುವವರಲ್ಲಿ ಒಬ್ಬರು ಪ್ರಿಯಾಂಕಾ. ಬಾಲಿವುಡ್​ನಿಂದ (Bollywood) ಬಹುತೇಕ ದೂರಾಗಿ ಹಾಲಿವುಡ್​ ನಲ್ಲಿ (Hollywood) ಅದ್ಭುತವಾಗಿ ಬದುಕು ಕಟ್ಟಿಕೊಂಡಿರುವ ನಟಿ ಪ್ರಿಯಾಂಕಾ, ತಮ್ಮ ಸಿನಿಮಾ ಪಯಣ, ಜೀವನ ಇನ್ನಿತರೆಗಳ ಬಗ್ಗೆ ಬಿಂದಾಸ್ ಆಗಿ ಮಾತನಾಡುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೆ ಪ್ರಿಯಾಂಕಾ ಚೋಪ್ರಾ ನಟಿಸಿರುವ ಸಿಟಾಡೆಲ್ ಹೆಸರಿನ ಹಾಲಿವುಡ್ ವೆಬ್ ಸರಣಿ ಬಿಡುಗಡೆ ಆಗಿದ್ದು, ಇದರ ಪ್ರಯುಕ್ತ ಸರಣಿ ಸಂದರ್ಶನಗಳನ್ನು ನಟಿ ನೀಡುತ್ತಿದ್ದಾರೆ. ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, ತಮ್ಮ ಈ ಹಿಂದಿನ ಬಾಯ್​ಫ್ರೆಂಡ್​ಗಳ ಬಗ್ಗೆಯೂ ಮಾತನಾಡಿದ್ದಾರೆ.

ಈ ಹಿಂದಿನ ತಮ್ಮ ಸಂಬಂಧಗಳ ಬಗ್ಗೆ ಮಾತನಾಡಿರುವ ನಟಿ ಪ್ರಿಯಾಂಕಾ ಚೋಪ್ರಾ, ಈ ಹಿಂದಿನ ನನ್ನ ರಿಲೇಶನ್​ಶಿಪ್​ನಲ್ಲಿ ನನ್ನನ್ನು ಕಾಲು ಒರೆಸುವ ಬಟ್ಟೆಯಂತೆ ಬಳಸಿಕೊಳ್ಳಲಾಗಿತ್ತು” ಎಂದಿದ್ದಾರೆ. ”ಈ ಹಿಂದಿನ ರಿಲೇಶನ್​ಷಿಪ್​ಗಳಲ್ಲಿ ನಾನು ಕೇರ್​ಟೇಕರ್ ರೀತಿ ವರ್ತಿಸುತ್ತಿದ್ದೆ. ನನ್ನ ಬಾಯ್​ಫ್ರೆಂಡ್​ ಬಗ್ಗೆ ಅತಿಯಾಗಿ ಕಾಳಜಿ ಮಾಡುವುದು, ಅವನು ಸದಾ ಕಂಪರ್ಟ್​ನಲ್ಲಿರುವಂತೆ ನೋಡಿಕೊಳ್ಳುವುದು. ಅವನ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳುವುದು ಮಾಡುತ್ತಿದ್ದೆ. ಇದರಿಂದಾಗಿ ನಾನು ನನ್ನತನವನ್ನೇ ಕಳೆದುಕೊಂಡಿದ್ದೆ. ಹಲವು ಅವಕಾಶಗಳನ್ನು ಕೈಬಿಟ್ಟೆ, ನನ್ನ ಮೇಲಿನ ಅಧಿಕಾರವನ್ನು ನಾನು ಅವನಿಗೆ ಕೊಟ್ಟುಬಿಟ್ಟಿದ್ದೆ” ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ.

”ಹೀಗೆ ಅವನಿಗಾಗಿ ನಾನು ಸಂತೋಶಗಳನ್ನು ತ್ಯಾಗ ಮಾಡುವುದು ಕರಿಯರ್ ತ್ಯಾಗ ಮಾಡುವುದು, ಸ್ವಂತ ಇಚ್ಛೆಯನ್ನು ಕೊಂದು ಅವನ ಇಚ್ಛೆಯಂತೆ ಬದುಕುವುದು ತೀರ ಸಾಮಾನ್ಯ, ನನ್ನ ಕರ್ತವ್ಯ ಎಂದೆಲ್ಲ ನನಗೆ ನಾನೇ ನಿರ್ಧರಿಸಿಬಿಟ್ಟಿದ್ದೆ. ಅದು ತಪ್ಪು ಎಂದು ನನಗೆ ಅನಿಸುತ್ತಲೇ ಇರಲಿಲ್ಲ. ನನ್ನ ಮೇಲಿನ ನಿಯಂತ್ರಣವನ್ನು ಬೇರೆ ವ್ಯಕ್ತಿಗೆ ನೀಡಿದಾಗ ಆತ ನನ್ನನ್ನು ಅವನಿಷ್ಟದಂತೆ ಬಳಸಿಕೊಳ್ಳಲು ಪ್ರಾರಂಭಿಸಿದ. ನನ್ನನ್ನು ಡೋರ್​ಮ್ಯಾಟ್ (ಬಾಗಿಲ ಮುಂದೆ ಹಾಸಲಾಗಿರುವ ಕಾಲೊರೆಸುವ ಬಟ್ಟೆ)ಯಂತೆ ಬಳಸಿಕೊಳ್ಳಲಾಯಿತು. ಮಹಿಳೆಯರಿಗೆ ಇದನ್ನೇ ಹೇಳಿಕೊಟ್ಟಿರುವುದಲ್ಲವೆ, ಕುಟುಂಬಕ್ಕಾಗಿ ತ್ಯಾಗ ಮಾಡಬೇಕು, ಪತಿ ಹೊರಗಿನಿಂದ ಬಂದಾಗ ಅವನನ್ನು ಸಂತೈಸಬೇಕು, ಅವನು ಕಂಫರ್ಟ್​ ಆಗಿರುವಂತೆ ನೋಡಿಕೊಳ್ಳಬೇಕು ಎಂದೆಲ್ಲ” ಎಂದಿದ್ದಾರೆ.

ಮುಂದುವರೆದು, ”ಒಂದು ಸಮಯದಲ್ಲಿ ನಾನು ಒಂದು ರಿಲೇಶನ್​ಷಿಪ್​ನಿಂದ ಮತ್ತೊಂದು ರಿಲೇಶನ್​ಷಿಪ್​ ಅದರ ಬಳಿಕ ಮತ್ತೊಂದು ಹೀಗೆ ಹಾರುತ್ತಲೇ ಇದ್ದೆ. ನನಗಾಗಿ ನಾನು ಸಮಯವನ್ನೂ ಕೊಟ್ಟುಕೊಳ್ಳುತ್ತಿರಲಿಲ್ಲ. ನಾನು ಜೊತೆಯಾಗಿ ನಟಿಸಿದ ನಟರನ್ನು ಪ್ರೀತಿಸಲು ಶುರು ಮಾಡಿದ್ದೆ. ಒಂದು ಒಳ್ಳೆಯ ಪ್ರೇಮ ಸಂಬಂಧ ಹೇಗಿರಬೇಕೆಂದು ಅರ್ಥ ಮಾಡಿಸುವ ಪ್ರಯತ್ನದಲ್ಲಿಯೇ ಸಂಬಂಧದಲ್ಲಿ ಬಿರುಕು ಉಂಟಾಗಿಬಿಡುತ್ತಿತ್ತು. ಸಂಬಂಧದಲ್ಲಿದ್ದಾಗ ನೀವು ಯಾರು ಎಂಬುದನ್ನು ನೀವು ಮರೆತುಬಿಡುತ್ತೀರ, ನಿಮ್ಮ ಜೀವನ ಏನು? ನಿಮ್ಮ ಗುರಿ ಏನು ಎಂಬುದನ್ನು ಮರೆತುಬಿಡುತ್ತೀರ. ನನಗೂ ಸಹ ಕಳೆದು ಹೋದ ಅನುಭವ ಆಗಲು ಪ್ರಾರಂಭವಾಗಿತ್ತು. ನಿಮ್ಮನ್ನು ನೀವು ಮರೆತಿರೆಂದರೆ ಅಲ್ಲಿಗೆ ನೀವು ಕಳೆದು ಹೋದಿರಿ ಎಂದರ್ಥ ಅಂಥಹಾ ಸಂಬಂಧದಲ್ಲಿ ಮುಂದುವರೆಯುವುದು ಅಪರಾಧ” ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ