AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಳಿಕೆ ಇಲ್ಲದೆ ಸಿನಿಮಾ ಅವಧಿಗೆ ಕತ್ತರಿ ಹಾಕಿದ ‘ಇಂಡಿಯನ್ 2’ ತಂಡ; ಎಷ್ಟು ನಿಮಿಷ ಕಟ್?

ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾ ಬಗ್ಗೆ ಕೆಟ್ಟ ವಿಮರ್ಶೆ ಕೇಳಿ ಬಂದಿದೆ. ಈ ಕಾರಣದಿಂದಲೇ ಸಿನಿಮಾ 68 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಳೆಯ ಕಥೆ, ನಿರೂಪಣೆ ಹೇಳಿದ್ದು ಪ್ರೇಕ್ಷಕರಿಗೆ ಇಷ್ಟ ಆಗಿಲ್ಲ. ಈ ಚಿತ್ರದ 15 ನಿಮಿಷಕ್ಕೆ ಕತ್ತರಿ ಹಾಕಲಾಗಿದೆ.

ಗಳಿಕೆ ಇಲ್ಲದೆ ಸಿನಿಮಾ ಅವಧಿಗೆ ಕತ್ತರಿ ಹಾಕಿದ ‘ಇಂಡಿಯನ್ 2’ ತಂಡ; ಎಷ್ಟು ನಿಮಿಷ ಕಟ್?
ಕಮಲ್ ಹಾಸನ್
ರಾಜೇಶ್ ದುಗ್ಗುಮನೆ
|

Updated on: Jul 18, 2024 | 7:31 AM

Share

ಕಮಲ್ ಹಾಸನ್ ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಹಿಟ್ ಕಂಡಿದ್ದರು. ಅವರ ನಟನೆಯ ‘ವಿಕ್ರಮ್’, ‘ಕಲ್ಕಿ 2898 ಎಡಿ’ ಚಿತ್ರಗಳು ಮೆಚ್ಚುಗೆ ಪಡೆದಿದ್ದವು. ಆದರೆ, ಈಗ ‘ಇಂಡಿಯನ್ 2’ ಚಿತ್ರ ರಿಲೀಸ್ ಆಗಿ ಸೋತಿದೆ. ರಿಲೀಸ್ ಆಗಿ ವಾರ ಕಳೆಯುತ್ತಾ ಬಂದರೂ ಸಿನಿಮಾ 70 ಕೋಟಿ ರೂಪಾಯಿ ಗಳಿಕೆ ಮಾಡಿಲ್ಲ. ಹೀಗಾಗಿ, ಸಿನಿಮಾಗೆ 15 ನಿಮಿಷ ಕತ್ತರಿ ಹಾಕುವ ನಿರ್ಧಾರವನ್ನು ತಂಡ ತೆಗೆದುಕೊಂಡಿದೆ. ಈ ಮೂಲಕ ಚಿತ್ರವನ್ನು ಮತ್ತಷ್ಟು ಕ್ರಿಸ್ಪಿ ಮಾಡಿದೆ.

ಇಂದಿನ ಸಿನಿಮಾಗಳ ಅವಧಿ ಎರಡರಿಂದ ಎರಡೂವರೆ ಗಂಟೆ ಇರುತ್ತದೆ. ಆದರೆ, ‘ಇಂಡಿಯನ್ 2’ ಸಿನಿಮಾ ಬರೋಬ್ಬರಿ 3 ಗಂಟೆ ಇತ್ತು. ಏನೂ ವಿಷಯವೇ ಇಲ್ಲದೆ ಸುಮ್ಮನೆ ರಬ್ಬರ್ ರೀತಿಯಲ್ಲಿ ಸಿನಿಮಾನ ಎಳೆಯಲಾಗಿದೆ ಎಂಬ ಆರೋಪ ಈ ಸಿನಿಮಾ ಮೇಲೆ ಬಂದಿತ್ತು. ಹೀಗಾಗಿ, ಚಿತ್ರಕ್ಕೆ 15 ನಿಮಿಷ ಕತ್ತರಿ ಹಾಕುವ ನಿರ್ಧಾರವನ್ನು ತಂಡ ತೆಗೆದುಕೊಂಡಿದೆ. ಕಲೆಕ್ಷನ್ ಇಲ್ಲದ ಕಾರಣದಿಂದಲೇ ಈ ರೀತಿ ಮಾಡಲಾಗಿದೆ.

ಈಗಾಗಲೇ ಕತ್ತರಿ ಹಾಕಲ್ಪಟ್ಟ ವರ್ಷನ್ ಥಿಯೇಟರ್​ಗಳಲ್ಲಿ ಸಿನಿಮಾ ಪ್ರಸಾರ ಕಾಣುತ್ತಿದೆ. ಆರಂಭದಿಂದಲೇ ‘ಇಂಡಿಯನ್ 2’ ಸಿನಿಮಾ ಬಗ್ಗೆ ಬ್ಯಾಡ್ ಟಾಕ್ ಶುರುವಾಗಿದೆ. ಹೀಗಿರುವಾಗ ಮತ್ತೆ ಸಿನಿಮಾ ನೋಡಲು ಹೋಗಿ ಎಂದರೆ ಯಾರೂ ಹೋಗುವುದಿಲ್ಲ. ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ ಬಹುಶಃ ಸಿನಿಮಾಗೆ ಪಾಸಿಟಿವ್ ಟಾಕ್ ಶುರುವಾಗುತ್ತಿತ್ತೇನೋ.

ಇದನ್ನೂ ಓದಿ: ‘ಇಂಡಿಯನ್ 2’ ಚಿತ್ರಕ್ಕೆ ಹಣ ಹಾಕಿ ಹಿಂತೆಗೆದಿದ್ದ ಖ್ಯಾತ ನಿರ್ಮಾಪಕ; ಹೊರ ಬಂದಿದ್ದೇಕೆ?

‘ಇಂಡಿಯನ್ 2’ ಚಿತ್ರಕ್ಕೆ ಸಿಕ್ಕ ಮಿಶ್ರಪ್ರತಿಕ್ರಿಯೆ ಇಂದ ‘ಕಲ್ಕಿ 2898 ಎಡಿ’ ಸಿನಿಮಾಗೆ ಸಹಕಾರಿ ಆಗಿದೆ. ಅನೇಕ ಕಡೆಗಳಲ್ಲಿ ‘ಇಂಡಿಯನ್ 2’ ಸಿನಿಮಾ ರಿಲೀಸ್ ಆಗುವಾಗ ‘ಕಲ್ಕಿ 2898 ಎಡಿ’ ಚಿತ್ರವನ್ನು ತೆಗೆಯಲಾಗಿತ್ತು. ಅವರೆಲ್ಲರೂ ಈಗ ಮತ್ತೆ ‘ಕಲ್ಕಿ 2898 ಎಡಿ’ ಚಿತ್ರವನ್ನೇ ಪ್ರಸಾರ ಮಾಡಲು ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ