IPL ಅಭಿಮಾನಿಗಳನ್ನು ಕೆಣಕಿದ ಇಂಡಿಯನ್​ ಐಡಲ್​ ನಿರೂಪಕ ಆದಿತ್ಯ ನಾರಾಯಣ್​; ಆರೋಪ ಒಪ್ಪಿಕೊಳ್ತಾರಾ ಪ್ರೇಕ್ಷಕರು?

Indian Idol 12: ಎರಡು-ಮೂರು ವಾರದ ಹಿಂದೆ ಐಪಿಎಲ್​ ನಿಂತುಹೋಯಿತು. ಹಾಗಾಗಿ ಜನರು ಹತಾಶರಾಗಿದ್ದಾರೆ ಎನಿಸುತ್ತದೆ. ಅದರ ಎಲ್ಲ ಸಿಟ್ಟನ್ನು ನಮ್ಮ ಮೇಲೆ ತೋರಿಸುತ್ತಿದ್ದಾರೆ. ಯುವ ಜನತೆಗೆ ಎಲ್ಲಿ ಸಿಟ್ಟು ಪ್ರದರ್ಶನ ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಆದಿತ್ಯ ಇಂಡಿಯನ್​ ಐಡಲ್​ ಹೇಳಿದ್ದಾರೆ.

IPL ಅಭಿಮಾನಿಗಳನ್ನು ಕೆಣಕಿದ ಇಂಡಿಯನ್​ ಐಡಲ್​ ನಿರೂಪಕ ಆದಿತ್ಯ ನಾರಾಯಣ್​; ಆರೋಪ ಒಪ್ಪಿಕೊಳ್ತಾರಾ ಪ್ರೇಕ್ಷಕರು?
ಇಂಡಿಯನ್ ಐಡಲ್ ನಿರೂಪಕ ಆದಿತ್ಯ ನಾರಾಯಣ್

Updated on: May 20, 2021 | 2:37 PM

ಹಿಂದಿನ ಸೋನಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಇಂಡಿಯನ್​ ಐಡಲ್​ ಸಿಂಗಿಂಗ್​ ರಿಯಾಲಿಟಿ ಶೋಗೆ ದೊಡ್ಡ ಪ್ರಕ್ಷಕ ವರ್ಗ ಇದೆ. ಹಲವು ಕಾರಣಗಳಿಗಾಗಿ ಈ ಕಾರ್ಯಕ್ರಮ ಸುದ್ದಿ ಆಗುತ್ತಲೇ ಇರುತ್ತದೆ. ಆದರೆ ಇತ್ತೀಚೆಗೆ ಒಂದು ವಿವಾದದ ಕಾರಣದಿಂದ ಇಂಡಿಯಲ್​ ಐಡಲ್​ ಸೌಂಡು ಮಾಡಿದೆ. ಈ ಕಾರ್ಯಕ್ರಮದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿದೆ. ಕಾರ್ಯಕ್ರಮದ ಸ್ಪರ್ಧಿಗಳು, ನಿರೂಪಕರು ಮತ್ತು ನಿರ್ಣಾಯಕರನ್ನು ಹಿಗ್ಗಾಮುಗ್ಗ ಟ್ರೋಲ್​ ಮಾಡಲಾಗಿದೆ. ಈ ಪರಿ ಅಸಮಾಧಾನಕ್ಕೆ ಕಾರಣ ಆಗಿರುವುದು ಒಂದು ಸ್ಪೆಷಲ್​ ಎಪಿಸೋಡ್​!

ಹೌದು, ಭಾರತೀಯ ಚಿತ್ರರಂಗದ ಲೆಜೆಂಡರಿ ಗಾಯಕ ಕಿಶೋರ್​ ಕುಮಾರ್​ ಅವರಿಗೆ ನಮನ ಸಲ್ಲಿಸುವ ಸಲುವಾಗಿ ಇಂಡಿಯನ್​ ಐಡಲ್​ನಲ್ಲಿ ವಿಶೇಷ ಎಪಿಸೋಡ್​ಗಳನ್ನು ಮಾಡಲಾಯಿತು. ಕಿಶೋರ್​ ಕುಮಾರ್​ ಅವರ ಜನಪ್ರಿಯ ಗೀತೆಗಳನ್ನು ವೇದಿಕೆ ಮೇಲೆ ಹಾಡಲಾಯಿತು. ಆದರೆ ಅದರಿಂದ ಕಿಶೋರ್​ ಕುಮಾರ್​ ಅಭಿಮಾನಿಗಳು ಖುಷಿ ಆಗುವ ಬದಲು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಲೆಜೆಂಡರಿ ಗಾಯಕನ ಹಾಡುಗಳನ್ನು ಬೇಕಾಬಿಟ್ಟಿಯಾಗಿ ಮನಬಂದಂತೆ ಹಾಡಲಾಗಿದೆ ಎಂದು ಜನರು ಸೋಶಿಯಲ್​ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ. ಇದರ ಬಗ್ಗೆ ಶೋ ನಿರೂಪಕ ಆದಿತ್ಯ ನಾರಾಯಣ್​ ಪ್ರತಿಕ್ರಿಯೆ ನೀಡಿದ್ದಾರೆ.

‘ಎರಡು-ಮೂರು ವಾರದ ಹಿಂದೆ ಐಪಿಎಲ್​ ನಿಂತುಹೋಯಿತು. ಹಾಗಾಗಿ ಜನರು ಹತಾಶರಾಗಿದ್ದಾರೆ ಎನಿಸುತ್ತದೆ. ಅದರ ಎಲ್ಲ ಸಿಟ್ಟನ್ನು ನಮ್ಮ ಮೇಲೆ ತೋರಿಸುತ್ತಿದ್ದಾರೆ. ಅಪ್ಪ ಅಮ್ಮನ ಕೈಗೆ ಟಿವಿ ರಿಮೋಟ್​ ಬಂದಿದೆ. ಅವರು ಇಂಡಿಯನ್​ ಐಡಲ್​ ನೋಡುತ್ತಿದ್ದಾರೆ. ಯುವ ಜನತೆಗೆ ಬೇಸರ ಆಗಿದೆ. ಎಲ್ಲಿ ಸಿಟ್ಟು ತೋರಿಸಬೇಕು ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ’ ಎಂದು ಐಪಿಎಲ್​ ನೋಡುವವರನ್ನು ಆದಿತ್ಯ ನಾರಾಯಣ್​ ಕೆಣಕಿದ್ದಾರೆ. ಈ ವಿಚಾರದ ಸಲುವಾಗಿಯೂ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

ಇಂಡಿಯಲ್ ಐಡಲ್​ ಒಂದು ಸ್ಕ್ರಿಪ್ಟೆಡ್​ ಶೋ ಎಂಬ ಆರೋಪ ಕೂಡ ಇದೆ. ಇತ್ತೀಚೆಗಿನ ಸ್ಪೆಷಲ್​ ಎಪಿಸೋಡ್​ನಲ್ಲಿ ಕಿಶೋರ್​ ಕುಮಾರ್​ ಪುತ್ರ ಅಮಿತ್​ ಕುಮಾರ್​ ಅತಿಥಿಯಾಗಿ ಭಾಗವಹಿಸಿದ್ದರು. ಎಲ್ಲ ಸ್ಪರ್ಧಿಗಳನ್ನು ಹೊಗಳಬೇಕು ಎಂದು ಆಯೋಜಕರು ಹೇಳಿದ್ದರು ಎಂಬುದನ್ನು ಅಮಿತ್​ ಕುಮಾರ್​ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:

Meghana Raj: 2 ತಿಂಗಳ ಹಸುಗೂಸಿಗೆ ಕೊವಿಡ್​ ಬಂದಾಗ ಎದುರಾಗಿದ್ದ ಭಯದ ಪರಿಸ್ಥಿತಿ ಬಗ್ಗೆ ವಿವರಿಸಿದ ಮೇಘನಾ ರಾಜ್​

Jr NTR Birthday: ಜ್ಯೂ. ಎನ್​ಟಿಆರ್​ಗೆ ಜನ್ಮದಿನದ ಸಂಭ್ರಮ; ಟಾಲಿವುಡ್​ ಹೀರೋಗೆ ಸಿಕ್ತಿದೆ ಭರ್ಜರಿ ಗಿಫ್ಟ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us