AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನ್ ವೆಜ್ ತಿನ್ನಲ್ಲ ಎಂದು ಸುಳ್ಳು ಹೇಳಿದ್ರಾ ರಣಬೀರ್? ಫೋಟೋ ವೈರಲ್

ನೆಟ್​ಫ್ಲಿಕ್ಸ್ ಈಗ ‘ಡೈನಿಂಗ್ ವಿತ್ ಕಪೂರ್ಸ್’ ಎಂಬ ಶೋ ಮಾಡಿದ್ದು ಕಪೂರ್ ಕುಟುಂಬ ಹಾಜರಿ ಹಾಕಿದೆ. ರಾಜ್ ಕಪೂರ್ ಅವರ ಲೆಗಸಿಯನ್ನು ನೆನಪಿಸಿಕೊಳ್ಳುವುದು ಶೋನ ಮುಖ್ಯ ಉದ್ದೇಶ. ರಣಬೀರ್ ಅವರು ಕಪೂರ್ ಕುಟುಂಬದ ಪ್ರಮುಖ ಕುಡಿ. ಈ ಶೋನಲ್ಲಿ ಅವರು ಕೂಡ ಭಾಗವಹಿಸಿದ್ದರು. ಅವರು ಶೋನಲ್ಲಿ ನಾನ್ ವೆಜ್ ಸೇವನೆ ಮಾಡಿದರೇ ಎಂಬ ಪ್ರಶ್ನೆ ಮೂಡಿದೆ

ನಾನ್ ವೆಜ್ ತಿನ್ನಲ್ಲ ಎಂದು ಸುಳ್ಳು ಹೇಳಿದ್ರಾ ರಣಬೀರ್? ಫೋಟೋ ವೈರಲ್
ರಣಬೀರ್
ರಾಜೇಶ್ ದುಗ್ಗುಮನೆ
|

Updated on:Nov 25, 2025 | 3:04 PM

Share

ನಟ ರಣಬೀರ್ ಕಪೂರ್ ಅವರು ಹೆಣ್ಣುಮಕ್ಕಳಿಗೆ ಮೋಸ ಮಾಡುತ್ತಾರೆ ಎಂಬ ಆರೋಪ ಇದೆ. ಅವರು ಮದ್ಯ ಸೇವನೆ ಮಾಡುತ್ತಾರೆ, ನಾನ್ ವೆಜ್ ತಿನ್ನುತ್ತಾರೆ. ಅವರು ರಾಮನ ಪಾತ್ರ ಮಾಡುತ್ತಿದ್ದಾರೆ ಎಂದಾಗ ಟೀಕೆ ಎದುರಾಗಿತ್ತು. ಅವರು ಮದ್ಯ ಸೇವನೆ ಹಾಗೂ ನಾನ್ ವೆಜ್ ತ್ಯಜಿಸಿದ್ದಾರೆ ಎಂದು ತಂಡದವರು ಮಾಹಿತಿ ನೀಡಿದ್ದರು. ಈಗ ಅವರು ಹೊಸ ಶೋ ಒಂದಕ್ಕೆ ಬಂದಿದ್ದಾರೆ. ಇದರಲ್ಲಿ ಅವರು ನಾನ್ ವೆಜ್ ಸೇವನೆ ಮಾಡಿದರೇ ಎಂಬ ಪ್ರಶ್ನೆ ಮೂಡಿದೆ.

ನೆಟ್​ಫ್ಲಿಕ್ಸ್ ಈಗ ‘ಡೈನಿಂಗ್ ವಿತ್ ಕಪೂರ್ಸ್’ ಎಂಬ ಶೋ ಮಾಡಿದ್ದು ಕಪೂರ್ ಕುಟುಂಬ ಹಾಜರಿ ಹಾಕಿದೆ. ರಾಜ್ ಕಪೂರ್ ಅವರ ಲೆಗಸಿಯನ್ನು ನೆನಪಿಸಿಕೊಳ್ಳುವುದು ಶೋನ ಮುಖ್ಯ ಉದ್ದೇಶ. ರಣಬೀರ್ ಅವರು ಕಪೂರ್ ಕುಟುಂಬದ ಪ್ರಮುಖ ಕುಡಿ. ಈ ಶೋನಲ್ಲಿ ಅವರು ಕೂಡ ಭಾಗವಹಿಸಿದ್ದರು. ಅವರು ಶೋನಲ್ಲಿ ನಾನ್ ವೆಜ್ ಸೇವನೆ ಮಾಡಿದರೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಟೀಕೆ ವ್ಯಕ್ತವಾಗಿದೆ.

ಊಟ ಮಾಡುತ್ತಾ ಮಾತನಾಡುವುದು ಶೋನ ಥೀಮ್. ಈ ಶೋನ ಮೆನ್ಯುದಲ್ಲಿ ಬಹುತೇಕವು ನಾನ್ ವೆಜ್ ಊಟಗಳೇ ಇದ್ದವು. ಸಸ್ಯಾಹಾರಿ ತಿನಿಸುಗಳು ಯಾವುದೂ ಟೇಬಲ್ ಮೇಲೆ ಕಾಣಿಸಿಲ್ಲ. ರಣಬೀರ್ ಕಪೂರ್ ನಾನ್ ವೆಜ್ ತಿನ್ನೋದು ನೇರವಾಗಿ ಎಲ್ಲಿಯೂ ತೋರಿಸಿಲ್ಲ. ಆದರೆ, ಅವರು ಮಾಂಸಾಹಾರದ ಮುಂದೆ ಕುಳಿತಿರುವುದನ್ನು ಅನೇಕರು ತಪ್ಪು ಎಂದು ಕರೆದಿದ್ದಾರೆ. ಇನ್ನೂ ಕೆಲವರು, ಅವರು ನಾನ್​ವೆಜ್ ಸೇವಿಸಿರಬಹುದು ಎಂದು ಗುಮಾನಿ ಹೊರಹಾಕಿದ್ದಾರೆ.

ರಣಬೀರ್ ಕಪೂರ್ ಅವರು ರಾಮನ ಪಾತ್ರ ಮಾಡೋದು ಒಂದು ವರ್ಗದ ಜನರಿಗೆ ಇಷ್ಟ ಇಲ್ಲ. ಹೀಗಾಗಿ, ಅವರು ಸಿನಿಮಾದಲ್ಲಿ ಇರೋದನ್ನು ಕೆಲವರು ಮೊದಲಿನಿಂದಲೂ ಟೀಕೆ ಮಾಡುತ್ತಲೇ ಬರುತ್ತಿದ್ದಾರೆ. ಈಗ ಅವರೆಲ್ಲರಿಗೂ ಒಳ್ಳೆಯ ಅಸ್ತ್ರ ಸಿಕ್ಕಂತೆ ಆಗಿದೆ. ಅವರೆಲ್ಲರೂ ಈಗ ರಣಬೀರ್ ಕಪೂರ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ಇದನ್ನೂ ಓದಿ: ಆಲಿಯಾ-ರಣಬೀರ್ ಹೊಸ ಮನೆಯಲ್ಲಿ ಕಂಗೊಳಿಸಲಿದೆ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

ಸಿನಿಮಾ ವಿಚಾರಕ್ಕೆ ಬರೋದಾದರೆ ರಣಬೀರ್ ಕಪೂರ್ ಅವರು ರಾಮಾಯಣ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಸಿನಿಮಾದ ಭಾಗ ಕೂಡ ಆಗಿದ್ದಾರೆ. 2026ರ ದೀಪಾವಳಿಗೆ ‘ರಾಮಾಯಣ’ ಒಂದನೇ ಭಾಗ ಹಾಗೂ 2027ರ ದೀಪಾವಳಿಗೆ ‘ರಾಮಾಯಣ 2’ ರಿಲೀಸ್ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:03 pm, Tue, 25 November 25

ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್