ಮುನಿಸು ಮರೆತು ಚಿಕ್ಕಪ್ಪನ ಮಗನಿಗೆ ಶುಭ ಹಾರೈಸಿದ ಜೂ ಎನ್​ಟಿಆರ್

ನಂದಮೂರಿ ಬಾಲಕೃಷ್ಣ ಮತ್ತು ಜೂ ಎನ್​ಟಿಆರ್ ನಡುವೆ ಶೀಥಲ ಸಮರ ಜಾರಿಯಲ್ಲಿದೆ. ಬಾಲಯ್ಯ ಹಲವು ಬಾರಿ ಬಹಿರಂಗವಾಗಿಯೇ ಜೂ ಎನ್​ಟಿಆರ್ ವಿರುದ್ಧ ಮಾತನಾಡಿದ್ದಾರೆ. ಆದರೆ ಅದನ್ನೆಲ್ಲ ಮರೆತು ಜೂ ಎನ್​ಟಿಆರ್, ಬಾಲಯ್ಯ ಮಗ ಮೋಕ್ಷಜ್ಞರ ಮೊದಲ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ.

ಮುನಿಸು ಮರೆತು ಚಿಕ್ಕಪ್ಪನ ಮಗನಿಗೆ ಶುಭ ಹಾರೈಸಿದ ಜೂ ಎನ್​ಟಿಆರ್
ಮೋಕ್ಷಜ್ಞ-ಜೂ ಎನ್​ಟಿಆರ್
Follow us
|

Updated on: Sep 06, 2024 | 6:38 PM

ತೆಲುಗು ಚಿತ್ರರಂಗ ಹಾಗೂ ರಾಜಕೀಯ ರಂಗದಲ್ಲಿ ಅರ್ಧ ಶತಮಾನದಿಂದಲೂ ಹಿಡಿತ ಸಾಧಿಸಿಕೊಂಡು ಬಂದಿರುವ ನಂದಮೂರಿ ಕುಟುಂಬದಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ಬಿರುಕು ಮೂಡಿರುವುದು ಗುಟ್ಟೇನೂ ಅಲ್ಲ. ನಂದಮೂರಿ ಕುಟುಂಬದ ಜೂ ಎನ್​ಟಿಆರ್ ಹಾಗೂ ಅವರ ಸಹೋದರ ಕಲ್ಯಾಣ್ ರಾಮ್ ಅನ್ನು ನಂದಮೂರಿ ಬಾಲಕೃಷ್ಣ, ಚಂದ್ರಬಾಬು ನಾಯ್ಡು ಇನ್ನಿತರರು ಕುಟುಂಬದಿಂದ ದೂರವೇ ಇಟ್ಟಿದ್ದಾರೆ. ನಂದಮೂರಿ ಬಾಲಕೃಷ್ಣ ಅಂತೂ ಕೆಲವು ಸಂದರ್ಭದಲ್ಲಿ ನೇರವಾಗಿಯೇ ಜೂ ಎನ್​ಟಿಆರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದೂ ಇದೆ. ಆದರೆ ಈ ಮುನಿಸುಗಳನ್ನು ಬದಿಗಿಟ್ಟು ಜೂ ಎನ್​ಟಿಆರ್ ಈಗ ನಂದಮೂರಿ ಬಾಲಕೃಷ್ಣ ಪುತ್ರನಿಗೆ ಶುಭಾಶಯ ತಿಳಿಸಿದ್ದಾರೆ.

ನಂದಮೂರಿ ಬಾಲಕೃಷ್ಣ ಪುತ್ರ ನಂದಮೂರಿ ಮೋಕ್ಷಾಜ್ಞ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇಂದು ಅವರ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಆ ಮೂಲಕ ನಂದಮೂರಿ ಕುಟುಂಬದಿಂದ ಮತ್ತೊಬ್ಬ ನಟ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ನಂದಮೂರಿ ಕುಟುಂಬದ ಅಭಿಮಾನಿಗಳು ಮೋಕ್ಷಾಜ್ಞ ಎಂಟ್ರಿಯನ್ನು ಸ್ವಾಗತಿಸಿದ್ದಾರೆ. ಕುಟುಂಬ ಸದಸ್ಯರು ಸಹ ಟ್ವೀಟ್ ಮಾಡಿ ಮೋಕ್ಷಾಜ್ಞಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ:ಆಂಧ್ರ-ತೆಲಂಗಾಣ ಪ್ರವಾಹ: ಸಹಾಯ ಹಸ್ತ ಚಾಚಿದ ಜೂ ಎನ್​ಟಿಆರ್

ಜೂ ಎನ್​ಟಿಆರ್ ವಿರುದ್ಧ ಬಾಲಯ್ಯ ದ್ವೇಷ ಸಾಧಿಸಿದ್ದರೂ ಸಹ ಜೂ ಎನ್​ಟಿಆರ್ ಅದನ್ನೆಲ್ಲ ಮನಸ್ಸಿಗೆ ತೆಗೆದುಕೊಳ್ಳದೆ ತಮ್ಮ ಚಿಕ್ಕಪ್ಪನ ಮಗನ ಸಿನಿಮಾ ರಂಗದ ಎಂಟ್ರಿಗೆ ಶುಭ ಹಾರೈಸಿದ್ದಾರೆ. ಮೋಕ್ಷಾಜ್ಞಗೆ ಟ್ವೀಟ್ ಮಾಡಿರುವ ಜೂ ಎನ್​ಟಿಆರ್, ‘ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ನಿನಗೆ ಶುಭವಾಗಲಿ. ಹೊಸ ಜೀವನವನ್ನು ಪ್ರಾರಂಭ ಮಾಡುತ್ತಿದ್ದೀಯ. ತಾತ ತಾರಕ ರಾಮಾರಾವ್ ಸೇರಿದಂತೆ ಎಲ್ಲ ಅಗೋಚರ ಶಕ್ತಿಗಳು ನಿನ್ನ ಈ ಹೊಸ ಜರ್ನಿಗೆ ಶುಭ ಹಾರೈಸಲಿ. ನಿನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳು’ ಎಂದಿದ್ದಾರೆ.

ಮೋಕ್ಷಾಜ್ಞರ ಹೊಸ ಸಿನಿಮಾವನ್ನು ‘ಹನುಮ್ಯಾನ್’ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಯೂಥ್ ಕತೆಯ ಜೊತೆಗೆ ಆಕ್ಷನ್ ಅಂಶವನ್ನು ಸಹ ಒಳಗೊಂಡಿದೆಯಂತೆ. ಸಿನಿಮಾವನ್ನು ಬಾಲಕೃಷ್ಣ ಪತ್ನಿ ತೇಜಸ್ವಿನಿ ಬಾಲಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿ, ಇತರೆ ತಂತ್ರಜ್ಞರ ಘೋಷಣೆ ಇನ್ನಷ್ಟೆ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ