‘ಕುಣಿ’ ಕಿರುಚಿತ್ರಕ್ಕೆ ಫಿದಾ ಆದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು

ಹರೀಶ್ ಲೇಖಿ ನಿರ್ದೇಶನ ಮಾಡಿರುವ ‘ಕುಣಿ’ ಕಿರುಚಿತ್ರದ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸ ಪ್ರತಿಭೆಗಳ ಪ್ರಯತ್ನ ಬಹಳ ಚೆನ್ನಾಗಿದೆ ಎಂದು ರಾಜೇಶ್ ನಟರಂಗ ಅವರು ಹೇಳಿದ್ದಾರೆ. ಈ ಕಿರುಚಿತ್ರ ನೋಡಿದಾಗ ನಮ್ಮ ಬದುಕಿನ ವಿಷಯಗಳು ನೆನಪಾದವು ಎಂದಿದ್ದಾರೆ ಕಾಕ್ರೋಚ್ ಸುಧಿ.

‘ಕುಣಿ’ ಕಿರುಚಿತ್ರಕ್ಕೆ ಫಿದಾ ಆದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು
Kuni Short Film

Updated on: Apr 05, 2026 | 3:40 PM

ಸತ್ಯ ಹೆಗಡೆ ಅವರು ತಮ್ಮ ‘ಸತ್ಯ ಹೆಗಡೆ ಸ್ಟುಡಿಯೋಸ್’ (Satya Hegde Studios) ಯೂಟ್ಯೂಬ್ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಾ ಬರುತ್ತಿದ್ದಾರೆ. ಹಲವು ಕಿರುಚಿತ್ರಗಳು (Shorts Films) ಅವರ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಆಗಿವೆ. ಈಗ ರಿಲೀಸ್ ಆಗಿರುವ ಹೊಸ ಕಿರುಚಿತ್ರ ‘ಕುಣಿ’ (Kuni) ಕೂಡ ಗಮನ ಸೆಳೆಯುತ್ತಿದೆ. 29 ನಿಮಿಷಗಳ ಅವಧಿ ಇರುವ ಈ ಕಿರುಚಿತ್ರಕ್ಕೆ ಹರೀಶ್ ಲೇಖಿ ಅವರು ನಿರ್ದೇಶನ ಮಾಡಿದ್ದಾರೆ.

‘ಕುಣಿ’ ಶಾರ್ಟ್​ಫಿಲ್ಮ್ ಈಗಾಗಲೇ ವಿವಿಧ ಫಿಲ್ಮ್ ಫೆಸ್ಟಿವಲ್​ಗಳಲ್ಲಿ ಪ್ರದರ್ಶನ ಕಂಡಿದೆ. 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ಕಿರುಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ತಂದೆ ಮತ್ತು ಮಗನ ನಡುವಿನ ಬಾಂಧವ್ಯದ ಕಹಾನಿ ಈ ಕಿರುಚಿತ್ರದಲ್ಲಿ ಇದೆ. ನೋಡಿದ ಪ್ರೇಕ್ಷಕರು ಮೆಚ್ಚುಗೆಯ ಕಮೆಂಟ್ ಮಾಡುತ್ತಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್, ಕಾರ್ಕೋಚ್ ಸುಧಿ, ರಾಜೇಶ್ ನಟರಂಗ, ಸಾಗರ್ ಪುರಾಣಿಕ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ‘ಕುಣಿ’ ಕಿರುಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎಲ್ಲರಿಂದ ಸಿಗುತ್ತಿರುವ ಮೆಚ್ಚುಗೆ ಕಂಡು ಈ ತಂಡಕ್ಕೆ ಖುಷಿಯಾಗಿದೆ. ಒಳ್ಳೆಯ ಕಿರುಚಿತ್ರಗಳನ್ನು ನಿರ್ಮಾಣ ಮಾಡುವ ಇನ್ನಷ್ಟು ಪ್ರತಿಭೆಗಳಿಗೆ ಉತ್ಸಾಹ ತುಂಬಿದಂತಾಗಿದೆ.

‘ಕುಣಿ ಕಿರುಚಿತ್ರ:

ನಟ ರಾಜೇಶ್ ನಟರಂಗ ಅವರು ಮಾತನಾಡಿ, ‘ಕುಣಿ ಕಿರುಚಿತ್ರ ಒಂದು ಉತ್ಕೃಷ್ಟವಾದ ಕೃತಿ. ಒಳ್ಳೆಯ ಥೀಮ್ ಇದರಲ್ಲಿದೆ. ಇದರ ಬರವಣಿಗೆ ಬಹಳ ಸೂಕ್ಷ್ಮ ಆಗಿದೆ. ನಮ್ಮ ಸುತ್ತಮುತ್ತ ನಡೆಯುವ ಕಥೆ ಇದೆ. ಜನರೇಷನ್ ಗ್ಯಾಪ್ ಬಗ್ಗೆ ಈ ಕಿರುಚಿತ್ರ ಮಾತನಾಡುತ್ತದೆ. ಪ್ರತಿಯೊಬ್ಬ ನಟರು ಇದರಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಕ್ಲೈಮ್ಯಾಕ್ಸ್ ಅದ್ಭುತವಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ 2026: ಉಚಿತ ಪ್ರವೇಶಾವಕಾಶ

‘ಉತ್ತರ ಕರ್ನಾಟಕದ ಪ್ರತಿಭೆಗಳು ಸೇರಿ ಮಾಡಿದ ಕಿರುಚಿತ್ರ ಇದು. ಎಲ್ಲ ಫ್ಯಾಮಿಲಿಯಲ್ಲಿ ಇರುವ ಸಂಕೀರ್ಣತೆಯನ್ನು ಇದರಲ್ಲಿ ಚೆನ್ನಾಗಿ ತೋರಿಸಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಈ ರೀತಿ ಪ್ರತಿಭೆಗಳು ಇನ್ನಷ್ಟು ಹೊರಬರಲಿ ಅಂತ ನಾನು ಹಾರೈಸುತ್ತೇನೆ’ ಎಂದು ಸಾಗರ್ ಪುರಾಣಿಕ್ ಅವರು ಹೇಳಿದ್ದಾರೆ. ನಟ ಕಾಕ್ರೋಚ್ ಸುಧಿ ಅವರಿಗೂ ಈ ಕಿರುಚಿತ್ರ ತುಂಬಾ ಇಷ್ಟ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us