AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Satya Hegde: ಹೊಸಬರಿಗೆ ಬೆನ್ನೆಲುಬಾಗಿ ನಿಂತ ‘ಸತ್ಯ ಹೆಗಡೆ ಸ್ಡುಡಿಯೋಸ್​’; ಕಿರುಚಿತ್ರಗಳಿಗೆ ಸಿಗುತ್ತಿದೆ ಬೆಸ್ಟ್​ ವೇದಿಕೆ

Satya Hegde Studios | Kannada Short Movie: ‘ಸತ್ಯ ಹೆಗಡೆ ಸ್ಟುಡಿಯೋಸ್​’ ಮೂಲಕ ಈಗಾಗಲೇ 11 ಕಿರು ಚಿತ್ರಗಳು ಬಿಡುಗಡೆ ಆಗಿವೆ.‌ ಈಗ ಇನ್ನೂ ಮೂರು ಶಾರ್ಟ್​ ಫಿಲ್ಮ್​ಗಳು ರಿಲೀಸ್​ಗೆ ಸಿದ್ಧವಾಗಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Satya Hegde: ಹೊಸಬರಿಗೆ ಬೆನ್ನೆಲುಬಾಗಿ ನಿಂತ ‘ಸತ್ಯ ಹೆಗಡೆ ಸ್ಡುಡಿಯೋಸ್​’; ಕಿರುಚಿತ್ರಗಳಿಗೆ ಸಿಗುತ್ತಿದೆ ಬೆಸ್ಟ್​ ವೇದಿಕೆ
ಯುವ ಪ್ರತಿಭೆಗಳ ಜೊತೆ ಸತ್ಯ ಹೆಗಡೆ
ಮದನ್​ ಕುಮಾರ್​
|

Updated on:Mar 13, 2023 | 7:04 PM

Share

ಕನ್ನಡ ಚಿತ್ರರಂಗದಲ್ಲಿ ಸತ್ಯ ಹೆಗಡೆ (Satya Hegde) ಅವರು ಛಾಯಾಗ್ರಾಹಕರಾಗಿ ದೊಡ್ಡ ಹೆಸರು ಗಳಿಸಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಬಹುಬೇಡಿಕೆಯ ಕ್ಯಾಮೆರಾಮ್ಯಾನ್​ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಇಷ್ಟು ಬ್ಯುಸಿ ಆಗಿರುವುದರ ಜೊತೆಗೆ ಅವರು ಹೊಸ ಪ್ರತಿಭೆಗಳಿಗೆ ಬೆಂಬಲ ನೀಡುವ ಕಾಯಕವನ್ನೂ ಮಾಡುತ್ತಿದ್ದಾರೆ. ‘ಸತ್ಯ ಹೆಗಡೆ ಸ್ಟುಡಿಯೋಸ್​’ (Satya Hegde Studios) ಹೆಸರಿನಲ್ಲಿ ಯೂಟ್ಯೂಬ್​ ಚಾನೆಲ್​ ಆರಂಭಿಸಿ, ಆ ಮೂಲಕ ಉತ್ತಮವಾಗಿ ಕಿರುಚಿತ್ರಗಳನ್ನು ವೀಕ್ಷಕರಿಗೆ ಅರ್ಪಿಸುತ್ತಿದ್ದಾರೆ. ಇದರಿಂದ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದ್ದಾರೆ. ಇತ್ತೀಚೆಗೆ ಕೆಲವು ಕಿರುಚಿತ್ರಗಳ (Kannada Short Movie) ಪ್ರದರ್ಶನ ಏರ್ಪಡಿಸಲಾಗಿತ್ತು. ಅದಕ್ಕೆ ಅತಿಥಿಗಳಾಗಿ ನಿರ್ದೇಶಕರಾದ ಆದರ್ಶ್​ ಈಶ್ವರಪ್ಪ, ಬಿ.ಎಂ. ಗಿರಿರಾಜ್​, ‘ಗುಳ್ಟು’ ಖ್ಯಾತಿಯ ನಟ ನವೀನ್ ಶಂಕರ್​ ಮುಂತಾದವರು ಹಾಜರಾಗಿದ್ದರು.

‘ಸತ್ಯ ಹೆಗಡೆ ಸ್ಟುಡಿಯೋಸ್​’ ಮೂಲಕ ಈಗಾಗಲೇ 11 ಕಿರುಚಿತ್ರಗಳು ಬಿಡುಗಡೆ ಆಗಿವೆ.‌ ಈಗ ಇನ್ನೂ ಮೂರು ಶಾರ್ಟ್​ ಫಿಲ್ಮ್​ಗಳು ರಿಲೀಸ್​ಗೆ ಸಿದ್ಧವಾಗಿವೆ. ಮಾರ್ಚ್​ 11ರಂದು ‘ಗ್ರಾಚಾರ’ ಶೀರ್ಷಿಕೆಯ ಕಿರುಚಿತ್ರ ರಿಲೀಸ್ ಆಗಿದೆ. ಮುಂದಿನ ದಿನಗಳಲ್ಲಿ ‘ಕಥೆಗಾರನ ಕತೆ’ ಮತ್ತು ‘ಅಹಂ ಪರಂ’ ಶಾರ್ಟ್ ಫಿಲ್ಮ್​ಗಳು ಬಿಡುಗಡೆ ಆಗಲಿವೆ. 9 ನಿಮಿಷಗಳ ಅವಧಿಯ ‘ಕತೆಗಾರನ ಕಥೆ’ ಕಿರುಚಿತ್ರವನ್ನು ಕೌಶಿಕ ಕೂಡುರಸ್ತೆ ನಿರ್ದೇಶನ ಮಾಡಿದ್ದಾರೆ. ಹಾಸನ ಮೂಲದವರಾದ ಅವರು ‘ಹೃದಯದ ಮಾತು’ ಸೇರಿದಂತೆ 8 ಕಾದಂಬರಿಗಳನ್ನು ಬರೆದಿದ್ದಾರೆ. ‘ಗ್ರಾಚಾರ’ ಕಿರುಚಿತ್ರವನ್ನು ಸಾಗರ ಮೂಲದ ಅಜಯ್ ಪಂಡಿತ್ ನಿರ್ದೇಶನ ಮಾಡಿದ್ದಾರೆ. ವಿನಯ್ ಚಂದ್ರಹಾಸ ಅವರ ನಿರ್ದೇಶನದಲ್ಲಿ ‘ಅಹಂ ಪರಂ’ ಕಿರುಚಿತ್ರ ಸಿದ್ಧವಾಗಿದೆ.

ಇದನ್ನೂ ಓದಿ: The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 

ಇದನ್ನೂ ಓದಿ
Image
The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 
Image
‘ಕ್ರಿಕೆಟರ್​ ಆಗಬೇಕು ಎಂದುಕೊಂಡಿದ್ದೆ, ನಟಿಯಾದೆ’; ಈ ಕಿರುಚಿತ್ರಕ್ಕೆ 12 ಪ್ರಶಸ್ತಿ
Image
‘ಒನ್​ ರೈಟ್​ ಕಿಕ್​’ ಕಿರುಚಿತ್ರಕ್ಕೆ 12 ಅಂತಾರಾಷ್ಟ್ರೀಯ ಪ್ರಶಸ್ತಿ; ನಟಿ ಸಿಂಹಿಕಾ ಬಿಚ್ಚಿಟ್ಟ ರಹಸ್ಯ
Image
ಮತ್ತೊಬ್ಬರ ಸಂಕಟವನ್ನು ತಮಾಷೆ ಮಾಡುವ ಮೊದಲು Public Toilet ಕಿರುಚಿತ್ರ ನೋಡಿ

ಈ ಕಿರುಚಿತ್ರಗಳನ್ನು ನೋಡಿ ನಿರ್ದೇಶಕ ಗಿರಿರಾಜ್​ ಅವರು ಬೆನ್ನು ತಟ್ಟಿದ್ದಾರೆ. ‘ಇಂದಿನ ಯುವಕರಿಗೆ ಶಾರ್ಟ್ ಫಿಲ್ಮ್​ಗಳು ಒಂದು ಒಳ್ಳೆಯ ವೇದಿಕೆ ಆಗುತ್ತಿದೆ. ಯುವಕರ ಪ್ರಯತ್ನಗಳಿಗೆ ಸತ್ಯ ಹೆಗಡೆ ಸ್ಟುಡಿಯೋಸ್ ಸಾಕಷ್ಟು ಸಹಾಯ ಮಾಡುತ್ತಿದೆ. ನಮ್ಮ ಕಾಲದಲ್ಲಿ ಇಂತಹ ಅವಕಾಶ ಇರಲಿಲ್ಲ. ಈ ಮೂರು ಕಿರುಚಿತ್ರಗಳು ಚೆನ್ನಾಗಿ ಮೂಡಿಬಂದಿವೆ. ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಯುವ ಪ್ರತಿಭೆಗಳಿಗೆ ಶುಭವಾಗಲಿ’ ಎಂದು ಗಿರಿರಾಜ್​ ವಿಶ್ ಮಾಡಿದ್ದಾರೆ.

ಇದನ್ನೂ ಓದಿ: ‘ಕ್ರಿಕೆಟರ್​ ಆಗಬೇಕು ಎಂದುಕೊಂಡಿದ್ದೆ, ನಟಿಯಾದೆ’; ಈ ಕಿರುಚಿತ್ರಕ್ಕೆ 12 ಪ್ರಶಸ್ತಿ

‘ನಾನು ಸಹ ಕಿರುಚಿತ್ರಗಳಲ್ಲಿ ನಟಿಸಿದವನು. ನಾವು ಶಾರ್ಟ್ ಫಿಲ್ಮ್​ ಮಾಡುವಾಗ ಸತ್ಯ ಹೆಗಡೆ ರೀತಿ ಯಾರ ಬೆಂಬಲವೂ ಸಿಕ್ಕಿರಲಿಲ್ಲ. ಆದರೆ ಈಗಿನವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಇಂತಹ ಅವಕಾಶ ಇನ್ನಷ್ಟು ಯುವ ಜನರಿಗೆ ಸಿಗಬೇಕು. ಅದರಿಂದ ಒಳ್ಳೆಯ ಚಿತ್ರಗಳು ತಯಾರಾಗಬೇಕು’ ಎಂದು ನಟ ನವೀನ್​ ಶಂಕರ್ ಆಶಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:26 pm, Mon, 13 March 23

Follow Us
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ