AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Satya Hegde: ಹೊಸಬರಿಗೆ ಬೆನ್ನೆಲುಬಾಗಿ ನಿಂತ ‘ಸತ್ಯ ಹೆಗಡೆ ಸ್ಡುಡಿಯೋಸ್​’; ಕಿರುಚಿತ್ರಗಳಿಗೆ ಸಿಗುತ್ತಿದೆ ಬೆಸ್ಟ್​ ವೇದಿಕೆ

Satya Hegde Studios | Kannada Short Movie: ‘ಸತ್ಯ ಹೆಗಡೆ ಸ್ಟುಡಿಯೋಸ್​’ ಮೂಲಕ ಈಗಾಗಲೇ 11 ಕಿರು ಚಿತ್ರಗಳು ಬಿಡುಗಡೆ ಆಗಿವೆ.‌ ಈಗ ಇನ್ನೂ ಮೂರು ಶಾರ್ಟ್​ ಫಿಲ್ಮ್​ಗಳು ರಿಲೀಸ್​ಗೆ ಸಿದ್ಧವಾಗಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Satya Hegde: ಹೊಸಬರಿಗೆ ಬೆನ್ನೆಲುಬಾಗಿ ನಿಂತ ‘ಸತ್ಯ ಹೆಗಡೆ ಸ್ಡುಡಿಯೋಸ್​’; ಕಿರುಚಿತ್ರಗಳಿಗೆ ಸಿಗುತ್ತಿದೆ ಬೆಸ್ಟ್​ ವೇದಿಕೆ
ಯುವ ಪ್ರತಿಭೆಗಳ ಜೊತೆ ಸತ್ಯ ಹೆಗಡೆ
ಮದನ್​ ಕುಮಾರ್​
|

Updated on:Mar 13, 2023 | 7:04 PM

Share

ಕನ್ನಡ ಚಿತ್ರರಂಗದಲ್ಲಿ ಸತ್ಯ ಹೆಗಡೆ (Satya Hegde) ಅವರು ಛಾಯಾಗ್ರಾಹಕರಾಗಿ ದೊಡ್ಡ ಹೆಸರು ಗಳಿಸಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಬಹುಬೇಡಿಕೆಯ ಕ್ಯಾಮೆರಾಮ್ಯಾನ್​ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಇಷ್ಟು ಬ್ಯುಸಿ ಆಗಿರುವುದರ ಜೊತೆಗೆ ಅವರು ಹೊಸ ಪ್ರತಿಭೆಗಳಿಗೆ ಬೆಂಬಲ ನೀಡುವ ಕಾಯಕವನ್ನೂ ಮಾಡುತ್ತಿದ್ದಾರೆ. ‘ಸತ್ಯ ಹೆಗಡೆ ಸ್ಟುಡಿಯೋಸ್​’ (Satya Hegde Studios) ಹೆಸರಿನಲ್ಲಿ ಯೂಟ್ಯೂಬ್​ ಚಾನೆಲ್​ ಆರಂಭಿಸಿ, ಆ ಮೂಲಕ ಉತ್ತಮವಾಗಿ ಕಿರುಚಿತ್ರಗಳನ್ನು ವೀಕ್ಷಕರಿಗೆ ಅರ್ಪಿಸುತ್ತಿದ್ದಾರೆ. ಇದರಿಂದ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದ್ದಾರೆ. ಇತ್ತೀಚೆಗೆ ಕೆಲವು ಕಿರುಚಿತ್ರಗಳ (Kannada Short Movie) ಪ್ರದರ್ಶನ ಏರ್ಪಡಿಸಲಾಗಿತ್ತು. ಅದಕ್ಕೆ ಅತಿಥಿಗಳಾಗಿ ನಿರ್ದೇಶಕರಾದ ಆದರ್ಶ್​ ಈಶ್ವರಪ್ಪ, ಬಿ.ಎಂ. ಗಿರಿರಾಜ್​, ‘ಗುಳ್ಟು’ ಖ್ಯಾತಿಯ ನಟ ನವೀನ್ ಶಂಕರ್​ ಮುಂತಾದವರು ಹಾಜರಾಗಿದ್ದರು.

‘ಸತ್ಯ ಹೆಗಡೆ ಸ್ಟುಡಿಯೋಸ್​’ ಮೂಲಕ ಈಗಾಗಲೇ 11 ಕಿರುಚಿತ್ರಗಳು ಬಿಡುಗಡೆ ಆಗಿವೆ.‌ ಈಗ ಇನ್ನೂ ಮೂರು ಶಾರ್ಟ್​ ಫಿಲ್ಮ್​ಗಳು ರಿಲೀಸ್​ಗೆ ಸಿದ್ಧವಾಗಿವೆ. ಮಾರ್ಚ್​ 11ರಂದು ‘ಗ್ರಾಚಾರ’ ಶೀರ್ಷಿಕೆಯ ಕಿರುಚಿತ್ರ ರಿಲೀಸ್ ಆಗಿದೆ. ಮುಂದಿನ ದಿನಗಳಲ್ಲಿ ‘ಕಥೆಗಾರನ ಕತೆ’ ಮತ್ತು ‘ಅಹಂ ಪರಂ’ ಶಾರ್ಟ್ ಫಿಲ್ಮ್​ಗಳು ಬಿಡುಗಡೆ ಆಗಲಿವೆ. 9 ನಿಮಿಷಗಳ ಅವಧಿಯ ‘ಕತೆಗಾರನ ಕಥೆ’ ಕಿರುಚಿತ್ರವನ್ನು ಕೌಶಿಕ ಕೂಡುರಸ್ತೆ ನಿರ್ದೇಶನ ಮಾಡಿದ್ದಾರೆ. ಹಾಸನ ಮೂಲದವರಾದ ಅವರು ‘ಹೃದಯದ ಮಾತು’ ಸೇರಿದಂತೆ 8 ಕಾದಂಬರಿಗಳನ್ನು ಬರೆದಿದ್ದಾರೆ. ‘ಗ್ರಾಚಾರ’ ಕಿರುಚಿತ್ರವನ್ನು ಸಾಗರ ಮೂಲದ ಅಜಯ್ ಪಂಡಿತ್ ನಿರ್ದೇಶನ ಮಾಡಿದ್ದಾರೆ. ವಿನಯ್ ಚಂದ್ರಹಾಸ ಅವರ ನಿರ್ದೇಶನದಲ್ಲಿ ‘ಅಹಂ ಪರಂ’ ಕಿರುಚಿತ್ರ ಸಿದ್ಧವಾಗಿದೆ.

ಇದನ್ನೂ ಓದಿ: The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 

ಇದನ್ನೂ ಓದಿ
Image
The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 
Image
‘ಕ್ರಿಕೆಟರ್​ ಆಗಬೇಕು ಎಂದುಕೊಂಡಿದ್ದೆ, ನಟಿಯಾದೆ’; ಈ ಕಿರುಚಿತ್ರಕ್ಕೆ 12 ಪ್ರಶಸ್ತಿ
Image
‘ಒನ್​ ರೈಟ್​ ಕಿಕ್​’ ಕಿರುಚಿತ್ರಕ್ಕೆ 12 ಅಂತಾರಾಷ್ಟ್ರೀಯ ಪ್ರಶಸ್ತಿ; ನಟಿ ಸಿಂಹಿಕಾ ಬಿಚ್ಚಿಟ್ಟ ರಹಸ್ಯ
Image
ಮತ್ತೊಬ್ಬರ ಸಂಕಟವನ್ನು ತಮಾಷೆ ಮಾಡುವ ಮೊದಲು Public Toilet ಕಿರುಚಿತ್ರ ನೋಡಿ

ಈ ಕಿರುಚಿತ್ರಗಳನ್ನು ನೋಡಿ ನಿರ್ದೇಶಕ ಗಿರಿರಾಜ್​ ಅವರು ಬೆನ್ನು ತಟ್ಟಿದ್ದಾರೆ. ‘ಇಂದಿನ ಯುವಕರಿಗೆ ಶಾರ್ಟ್ ಫಿಲ್ಮ್​ಗಳು ಒಂದು ಒಳ್ಳೆಯ ವೇದಿಕೆ ಆಗುತ್ತಿದೆ. ಯುವಕರ ಪ್ರಯತ್ನಗಳಿಗೆ ಸತ್ಯ ಹೆಗಡೆ ಸ್ಟುಡಿಯೋಸ್ ಸಾಕಷ್ಟು ಸಹಾಯ ಮಾಡುತ್ತಿದೆ. ನಮ್ಮ ಕಾಲದಲ್ಲಿ ಇಂತಹ ಅವಕಾಶ ಇರಲಿಲ್ಲ. ಈ ಮೂರು ಕಿರುಚಿತ್ರಗಳು ಚೆನ್ನಾಗಿ ಮೂಡಿಬಂದಿವೆ. ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಯುವ ಪ್ರತಿಭೆಗಳಿಗೆ ಶುಭವಾಗಲಿ’ ಎಂದು ಗಿರಿರಾಜ್​ ವಿಶ್ ಮಾಡಿದ್ದಾರೆ.

ಇದನ್ನೂ ಓದಿ: ‘ಕ್ರಿಕೆಟರ್​ ಆಗಬೇಕು ಎಂದುಕೊಂಡಿದ್ದೆ, ನಟಿಯಾದೆ’; ಈ ಕಿರುಚಿತ್ರಕ್ಕೆ 12 ಪ್ರಶಸ್ತಿ

‘ನಾನು ಸಹ ಕಿರುಚಿತ್ರಗಳಲ್ಲಿ ನಟಿಸಿದವನು. ನಾವು ಶಾರ್ಟ್ ಫಿಲ್ಮ್​ ಮಾಡುವಾಗ ಸತ್ಯ ಹೆಗಡೆ ರೀತಿ ಯಾರ ಬೆಂಬಲವೂ ಸಿಕ್ಕಿರಲಿಲ್ಲ. ಆದರೆ ಈಗಿನವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಇಂತಹ ಅವಕಾಶ ಇನ್ನಷ್ಟು ಯುವ ಜನರಿಗೆ ಸಿಗಬೇಕು. ಅದರಿಂದ ಒಳ್ಳೆಯ ಚಿತ್ರಗಳು ತಯಾರಾಗಬೇಕು’ ಎಂದು ನಟ ನವೀನ್​ ಶಂಕರ್ ಆಶಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:26 pm, Mon, 13 March 23

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು