AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannada Rappers: ಕನ್ನಡ ರ್‍ಯಾಪ್ ಲೋಕದಲ್ಲಿ ರ್‍ಯಾಪ್ ವಾರ್, ಆಲ್​ ಓಕೆ ವಿರುದ್ಧ ರಾಹುಲ್ ಡಿಟೊ ಪದ ಯುದ್ಧ

ಸಿಡಿ, ಡಿವಿಡಿ ಕಾಲದಲ್ಲಿಯೇ ಪ್ರಾರಂಭವಾದ ಕನ್ನಡ ರ್‍ಯಾಪ್ (Kannada Rap) ಈಗ ಯೂಟ್ಯೂಬ್ ಕಾಲದಲ್ಲಿ ಬೆಳೆದು ನಿಂತಿದೆ. ಚಂದನ್ ಶೆಟ್ಟಿ ಸೇರಿದಂತೆ ಹಲವು ರ್‍ಯಾಪರ್​ಗಳು ಇಂದು ದೊಡ್ಡ ಸೆಲೆಬ್ರಿಟಿಗಳಾಗಿದ್ದಾರೆ. ರಾಕೇಶ್ ಅಡಿಗ (Rakesh Adiga), ಆಲ್​ ಓಕೆ (All Ok), ರಾಹುಲ್ ಡಿಟೊ, ಎಂಸಿ ಬಿಜ್ಜು ಇನ್ನೂ ಕೆಲವರು ಜನಪ್ರಿಯ ರ್‍ಯಾಪರ್​ಗಳಾಗಿ ಗುರುತಿಸಿಕೊಂಡಿದ್ದಾರೆ. ಈ ರ್‍ಯಾಪರ್​ಗಳ ಮಧ್ಯೆ ವೈಮನಸ್ಯವೂ ಸಾಕಷ್ಟಿದ್ದು ಅದು ಆಗಾಗ್ಗೆ ಬಹಿರಂಗವಾಗುತ್ತಲೇ ಇರುತ್ತದೆ. ಈ ಬಾರಿ ಆಲ್​ ಓಕೆ ವಿರುದ್ಧ ರಾಹುಲ್ ಡಿ ಟೊ […]

Kannada Rappers: ಕನ್ನಡ ರ್‍ಯಾಪ್ ಲೋಕದಲ್ಲಿ ರ್‍ಯಾಪ್ ವಾರ್, ಆಲ್​ ಓಕೆ ವಿರುದ್ಧ ರಾಹುಲ್ ಡಿಟೊ ಪದ ಯುದ್ಧ
ರಾಹುಲ್ ಡಿಟೊ-ಆಲ್ ಓಕೆ
Follow us
ಮಂಜುನಾಥ ಸಿ.
|

Updated on: Mar 01, 2023 | 10:56 PM

ಸಿಡಿ, ಡಿವಿಡಿ ಕಾಲದಲ್ಲಿಯೇ ಪ್ರಾರಂಭವಾದ ಕನ್ನಡ ರ್‍ಯಾಪ್ (Kannada Rap) ಈಗ ಯೂಟ್ಯೂಬ್ ಕಾಲದಲ್ಲಿ ಬೆಳೆದು ನಿಂತಿದೆ. ಚಂದನ್ ಶೆಟ್ಟಿ ಸೇರಿದಂತೆ ಹಲವು ರ್‍ಯಾಪರ್​ಗಳು ಇಂದು ದೊಡ್ಡ ಸೆಲೆಬ್ರಿಟಿಗಳಾಗಿದ್ದಾರೆ. ರಾಕೇಶ್ ಅಡಿಗ (Rakesh Adiga), ಆಲ್​ ಓಕೆ (All Ok), ರಾಹುಲ್ ಡಿಟೊ, ಎಂಸಿ ಬಿಜ್ಜು ಇನ್ನೂ ಕೆಲವರು ಜನಪ್ರಿಯ ರ್‍ಯಾಪರ್​ಗಳಾಗಿ ಗುರುತಿಸಿಕೊಂಡಿದ್ದಾರೆ. ಈ ರ್‍ಯಾಪರ್​ಗಳ ಮಧ್ಯೆ ವೈಮನಸ್ಯವೂ ಸಾಕಷ್ಟಿದ್ದು ಅದು ಆಗಾಗ್ಗೆ ಬಹಿರಂಗವಾಗುತ್ತಲೇ ಇರುತ್ತದೆ. ಈ ಬಾರಿ ಆಲ್​ ಓಕೆ ವಿರುದ್ಧ ರಾಹುಲ್ ಡಿ ಟೊ ಹಾಡಿನ ಮೂಲಕವೇ ಸರಣಿ ಆರೋಪಗಳನ್ನು ಮಾಡಿದ್ದಾರೆ.

ಈ ಮೊದಲು ಚಂದನ್ ಶೆಟ್ಟಿ ಹಾಗೂ ಆಲ್ ಓಕೆ ನಡುವೆ ವೈಮನಸ್ಯವಿತ್ತು. ಆದರೆ ಕಾಲ ಸರಿದಂತೆ ಇಬ್ಬರು ಹಳೆ ವೈಮನಸ್ಯ ಮರೆತಿದ್ದರು. ಆದರೆ ಈಗ ಆಲ್​ ಓಕೆ ಟೀಂನಲ್ಲಿಯೇ ಇದ್ದ ರಾಹುಲ್ ಡಿಟೊ, ಆಲ್​ ಓಕೆ ವಿರುದ್ಧ ಸಿಡಿದೆದ್ದಿದ್ದಾರೆ. ನಂಗನ್ಸಿದ್ದು ಪಾರ್ಟ್ 2 ರ್‍ಯಾಪ್ ಆಲ್ಬಂ ಬಿಡುಗಡೆ ಮಾಡಿದ್ದು, ಆಲ್​ ನಾಟ್ ಓಕೆ ಹೆಸರಿನ ಹಾಡಿನಲ್ಲಿ ಆಲ್​ ಓಕೆ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ.

ನಿನ್ನೆಯಷ್ಟೆ ರಾಹುಲ್​ರ ಹಾಡು ಬಿಡುಗಡೆ ಆಗಿದ್ದು, ಕೋರ್ಟ್​ ರೂಂನಲ್ಲಿ ಸೆಟ್​ಅಪ್​ನಲ್ಲಿ ಕಟಕಟೆಯಲ್ಲಿ ನಿಂತ ರಾಹುಲ್, ಎದುರು ಆಲ್​ ಓಕೆಯನ್ನು ಹೋಲುವ ವ್ಯಕ್ತಿಯನ್ನು ನಿಲ್ಲಿಸಿ ಆತನ ಮೇಲೆ ಆರೋಪ ಮಾಡುವಂತೆ ಹಾಡು ಕಟ್ಟಿದ್ದಾರೆ.

ಚಂದನ್ ಶೆಟ್ಟಿಯನ್ನು ತುಳಿಯಬೇಕಿತ್ತು, ಅದಕ್ಕೆ ನಿನಗೆ ನಾನು ಬೇಕಿತ್ತು. ಹಲವರನ್ನು ಬಳಸಿಕೊಂಡು ಬಿಸಾಡಿದ್ದೀಯ. ಶೋಗಳಲ್ಲಿ ಬಂದ ಹಣ 50-50 ಎಂದು ಹೇಳುತ್ತಿದ್ದೆ. ಹಣ ಎಲ್ಲಿ ಎಂದು ಕೇಳಿದಾಗ ಮ್ಯಾನೇಜ್​ಮೆಂಟ್​ ಅವರು ತಗೊಂಡರು ಎಂದು ಸುಳ್ಳು ಹೇಳುತ್ತಿದ್ದೆ. ನನಗೆ ಬರುವ ಸಾಕಷ್ಟು ಹಣವನ್ನು ನೀನು ಕೊಟ್ಟಿಲ್ಲ. ಅದು ನಿನಗೇ ನಾನು ಕೊಡುತ್ತಿರುವ ಭಿಕ್ಷೆ ನೀನೆ ಇಟ್ಟುಕೊ ಎಂದೆಲ್ಲ ಹಾಡಿನ ಸಾಲುಗಳನ್ನು ರಾಹುಲ್ ಡಿಟೊ ಬರೆದು ಹಾಡಿದ್ದಾರೆ.

ರಾಹುಲ್ ಡಿಟೋ ಹೊಸ ರ್‍ಯಾಪ್, ರ್‍ಯಾಪರ್​ಗಳ ಲೋಕದಲ್ಲಿ ಹಲ್​-ಚಲ್ ಎಬ್ಬಿಸಿದ್ದು, ಹಲವರು ಈ ಕುರಿತು ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸ್ವತಃ ಆಲ್​ ಓಕೆ ಸಹ ರಾಹುಲ್ ಡಿಟೋನ ರ್‍ಯಾಪ್​ಗೆ ಪ್ರತಿಕ್ರಿಯಿಸಲು ನಿರ್ಧರಿಸಿದ್ದು ನಾಳೆ (ಮಾರ್ಚ್ 3) ಬೆಳಿಗ್ಗೆ 10 ಗಂಟೆ ಎಂದು ಫೇಸ್​ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ರಾಹುಲ್ ಡಿಟೋ ರ್‍ಯಾಪ್ ಮೂಲಕ ಮಾಡಿರುವ ಆರೋಪ, ನಿಂದನೆಗೆ ರ್‍ಯಾಪ್ ಮೂಲಕವೇ ಉತ್ತರ ನೀಡುತ್ತಾರಾ ಆಲ್ ಓಕೆ ಕಾದು ನೋಡಬೇಕಿದೆ.

ಕನ್ನಡದಲ್ಲಿ ರ್‍ಯಾಪ್ ಗೆ ದಶಕಕ್ಕೂ ಮಿಗಲಾದ ಇತಿಹಾಸವಿದೆ. ನಟ, ಕಳೆದ ಬಾರಿಯ ಬಿಗ್​ಬಾಸ್ ರನ್ನರ್ ಅಪ್ ರಾಕೇಶ್ ಅಡಿಗ ಹಾಗೂ ತಂಡ ಮೊದಲಿಗೆ ಕನ್ನಡದಲ್ಲಿ ರ್‍ಯಾಪ್ ಮಾಡಿತ್ತು. ಅರ್ಬನ್ ಲ್ಯಾಡ್ಸ್ ಹೆಸರಿನ ಈ ರ್‍ಯಾಪ್ ಆಲ್ಬಂ ದೊಡ್ಡ ಹಿಟ್ ಆಗಿತ್ತು. ಆ ಬಳಿಕ ಚಂದನ್ ಶೆಟ್ಟಿ, ಆಲ್ ಓಕೆ, ಎಂಸಿ ಬಿಚ್ಚು, ರಾಹುಲ್ ಇನ್ನೂ ಹಲವರು ರ್‍ಯಾಪರ್​ಗಳಾಗಿ ಜನಪ್ರಿಯತೆಗಳಿಸಿದರು. ಈಗ ಕನ್ನಡದಲ್ಲಿ ಹಲವು ಮಂದಿ ರ್‍ಯಾಪರ್​ಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
‘ಸುಧಾರಾಣಿ ಕಣ್ಣಲ್ಲೇ ನಟಿಸ್ತಾರೆ’; ಬಾಯ್ತುಂಬ ಹೊಗಳಿದ ರವಿಚಂದ್ರನ್
‘ಸುಧಾರಾಣಿ ಕಣ್ಣಲ್ಲೇ ನಟಿಸ್ತಾರೆ’; ಬಾಯ್ತುಂಬ ಹೊಗಳಿದ ರವಿಚಂದ್ರನ್
ಮೂರುಬಾರಿ ಶಾಸಕನಾದರೆ ಮಂತ್ರಿ ಮಾಡುವ ಪರಿಪಾಠ ಇಲ್ಲವಾಗಿದೆ: ಗೋಪಾಲಕೃಷ್ಣ
ಮೂರುಬಾರಿ ಶಾಸಕನಾದರೆ ಮಂತ್ರಿ ಮಾಡುವ ಪರಿಪಾಠ ಇಲ್ಲವಾಗಿದೆ: ಗೋಪಾಲಕೃಷ್ಣ