ತಪ್ಪು ಮಾಡಿದರೂ ಪ್ರಶಾಂತ್​ ಸಂಬರಗಿ ಬೆನ್ನು ತಟ್ಟಿದ ಸುದೀಪ್​! ಕಿಚ್ಚ ಮಾಡಿದ್ದು ಸರೀನಾ?

|

Updated on: Mar 28, 2021 | 5:20 PM

ಮಂಜು ಮೂರು ದಿನ ಮೊದಲೇ ನನಗೆ ಕಳಪೆ ಎನ್ನುವ ಪಟ್ಟ ನೀಡುವುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಅವರು ಮನೆಯಲ್ಲಿ ಎಲ್ಲರನ್ನೂ ಎತ್ತಿಕಟ್ಟಿದ್ದರು ಎನ್ನುವ ಆರೊಪವನ್ನು ಪ್ರಶಾಂತ್​ ಮಾಡಿದರು.

ತಪ್ಪು ಮಾಡಿದರೂ ಪ್ರಶಾಂತ್​ ಸಂಬರಗಿ ಬೆನ್ನು ತಟ್ಟಿದ ಸುದೀಪ್​! ಕಿಚ್ಚ ಮಾಡಿದ್ದು ಸರೀನಾ?
ಪ್ರಶಾಂತ್​-ಕಿಚ್ಚ ಸುದೀಪ್​
Follow us on

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಸ್ಪರ್ಧಿ. ಇಲ್ಲಿಗೆ ಬರುವ ಮೊದಲು ಸಾಕಷ್ಟು ವಿವಾದಗಳನ್ನು ಮಾಡಿಕೊಂಡಿದ್ದ ಅವರು, ಬಿಗ್​ ಬಾಸ್​ ಮನೆಯಲ್ಲೂ ತಮ್ಮ ನೇರ ಮಾತಿನಿಂದ ಚರ್ಚೆಯಲ್ಲಿದ್ದಾರೆ. ಈ ಮಧ್ಯೆ, ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ವಿವಾದಗಳನ್ನು ಅವರು ಮೈಮೇಲೆ ಎಳೆದುಕೊಂಡಿದ್ದಾರೆ. ನಾಲ್ಕನೇ ವಾರ ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಾಲು ಸಾಲು ತಪ್ಪು ಮಾಡಿದ್ದರೂ ಅವರನ್ನು ಕಿಚ್ಚ ಸುದೀಪ್​ ಹೊಗಳಿದ್ದಾರೆ. ಅಷ್ಟಕ್ಕೂ ಪ್ರಶಾಂತ್ ಅವರನ್ನು ಕಿಚ್ಚ ಹೊಗಳಲು ಕಾರಣ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಾಲ್ಕನೇ ವಾರ ಬಿಗ್​ ಬಾಸ್ ಮನೆಯಲ್ಲಿ ಪ್ರಶಾಂತ್​ ಸಾಕಷ್ಟು ಜನರ ಬಳಿ ಜಗಳ ಮಾಡಿಕೊಂಡಿದ್ದಾರೆ. ಅದರಲ್ಲೂ ಮಂಜು ಜತೆ ಪ್ರಶಾಂತ್​ ತುಂಬಾನೇ ಮುನಿಸಿಕೊಂಡಿದ್ದರು. ಈ ವಾರ ಅತಿ ಕಳಪೆ ಎನ್ನುವ ಪಟ್ಟವನ್ನು ಪ್ರಶಾಂತ್​ಗೆ ನೀಡಲಾಯಿತು. ನನಗೆ ಕಳಪೆ ಎನ್ನುವ ಪಟ್ಟ ಬರುವುದಕ್ಕೆ ಮಂಜು ಪಾವಗಡ ಪಾತ್ರ ದೊಡ್ಡದಿದೆ ಎಂದು ಪ್ರಶಾಂತ್​ ಆರೋಪ ಮಾಡಿದ್ದರು.

ಮಂಜು ಮೂರು ದಿನ ಮೊದಲೇ ನನಗೆ ಕಳಪೆ ಎನ್ನುವ ಪಟ್ಟ ನೀಡುವುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಅವರು ಮನೆಯಲ್ಲಿ ಎಲ್ಲರನ್ನೂ ಎತ್ತಿಕಟ್ಟಿದ್ದರು ಎನ್ನುವ ಆರೊಪವನ್ನು ಪ್ರಶಾಂತ್​ ಮಾಡಿದರು. ಆದರೆ, ಮಂಜು ಈ ಆರೋಪವನ್ನು ಅಲ್ಲಗಳೆದಿದ್ದರು. ಪ್ರಶಾಂತ್​ ಮನೆಯಲ್ಲಿ ಕಸವನ್ನು ಸರಿಯಾಗಿ ಗುಡಿಸಿಲ್ಲ. ಈ ಕಾರಣಕ್ಕೆ ನಾನು ಕಳಪೆ ಎನ್ನುವ ಪಟ್ಟ ನೀಡಿದೆ ಎಂದು ಸ್ಪಷ್ಟನೆಯನ್ನೂ ನಿಡಿದರು. ಇದು ಪ್ರಶಾಂತ್​ಗೆ ಖುಷಿ ನೀಡಿಲ್ಲ. ಹೀಗಾಗಿ ಇಬ್ಬರ ನಡುವೆ ವೈಮನಸ್ಸು ಕೂಡ ಬೆಳೆಯಿತು.

ವಾರದ ಪಂಚಾಯ್ತಿಯಲ್ಲೂ ಸುದೀಪ್​ ಈ ವಿಚಾರ ಪ್ರಸ್ತಾಪ ಮಾಡಿದರು. ಅಂದು ಮನೆಯ ಕ್ಯಾಪ್ಟನ್​ ಆಗಿದ್ದ ಅರವಿಂದ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. ಪ್ರಶಾಂತ್​ ಅವರು ತಮಗೆ ವಹಿಸಿದ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎಂದರು. ಆಗ, ಪ್ರಶಾಂತ್​ ಸಂಬರಗಿ ತಪ್ಪನ್ನು ಒಪ್ಪಿಕೊಂಡರು. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಇದನ್ನು ತಿದ್ದುಕೊಳ್ಳುತ್ತೇನೆ ಎಂದು ಭರವಸೆ ಕೂಡ ನೀಡಿದರು.

ಪ್ರಶಾಂತ್​ ತಪ್ಪು ಮಾಡಿದ್ದರೂ ಅದನ್ನು ಒಪ್ಪಿಕೊಂಡು ತಿದ್ದುಕೊಳ್ಳುತ್ತೇನೆ ಎಂದು ಹೇಳಿರುವುದು ಸುದೀಪ್​ಗೆ ಖುಷಿ ತಂದಿದೆ. ಹೀಗಾಗಿ, ತಪ್ಪು ಮಾಡಿದರೂ ನೀವು ಅದನ್ನು ಒಪ್ಪಿಕೊಂಡಿದ್ದೀರ. ಹೀಗಾಗಿ, ನಾನು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದರು.

ಇದನ್ನೂ ಓದಿ: ಸ್ಪರ್ಧಿಗಳ ವಿರುದ್ಧ ಸಿಟ್ಟಿಗೆದ್ದ ಪ್ರಶಾಂತ್​; ಬಿಗ್​ ಬಾಸ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ!