AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶ್ರುತಿ ತಪ್ತಾ ಇದೀರಿ, ಇದು ಕೋಲ್ಡ್​ ಬ್ಲಡ್ಡೆಡ್​’; ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ

ಪ್ರಶಾಂತ್​ ಟೀ ಶರ್ಟ್​ ಧರಿಸಿದ್ದರು. ಇದನ್ನು ನೋಡಿದ ಚಕ್ರವರ್ತಿ ಚಂದ್ರಚೂಡ್​ ‘ನೀನು ಕಾಲೇಜು ಹುಡುಗನಂತೆ ಕಾಣ್ತೀಯಾ’ ಎಂದಿದ್ದರು. ಏನು ಡಿಗ್ರೀ ಕಾಲೇಜು ಹುಡುಗನ ತರಹವಾ ಎಂದು ಪ್ರಶಾಂತ್​ ಪ್ರಶ್ನೆ ಮಾಡಿದ್ದರು.

‘ಶ್ರುತಿ ತಪ್ತಾ ಇದೀರಿ, ಇದು ಕೋಲ್ಡ್​ ಬ್ಲಡ್ಡೆಡ್​’; ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ
ಪ್ರಶಾಂತ್​-ಕಿಚ್ಚ ಸುದೀಪ್​
TV9 Web
| Edited By: |

Updated on: Jul 04, 2021 | 7:51 AM

Share

ನಟಿ ದಿವ್ಯಾ ಸುರೇಶ್​ ‘ಡಿಗ್ರೀ ಕಾಲೇಜ್’​ ಹೆಸರಿನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಕೆಲವು ಇಂಟಿಮೇಟ್​ ದೃಶ್ಯಗಳಿದ್ದವು. ಈ ವಿಚಾರ ಇಟ್ಟುಕೊಂಡು ಬಿಗ್ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ನಿರಂತರವಾಗಿ ದಿವ್ಯಾಗೆ ಟಾಂಗ್​ ನೀಡಿದ್ದರು. ಈ ಬಗ್ಗೆ ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ ನೀಡಿದ್ದಾರೆ.

‘ಪ್ರಶಾಂತ್​-ಚಕ್ರವರ್ತಿ ಚಂದ್ರಚೂಡ್​ ಯಾವಾಗಲೂ ನನ್ನ ಹಿಂದೆ ಇರುತ್ತಿದ್ದರು. ಹೀಗಾಗಿ, ಅವರೇನು ನಿನ್ನ ಸೆಕ್ಯುರಿಟಿ ಗಾರ್ಡ್​ಗಳಾ ಎಂದು ನನ್ನ ಅಮ್ಮ ಪ್ರಶ್ನೆ ಮಾಡಿದ್ದರು’ ಎಂಬುದಾಗಿ ದಿವ್ಯಾ ಸುರೇಶ್​ ಕಳೆದ ವಾರದ ಎಪಿಸೋಡ್​ನಲ್ಲಿ ಹೇಳಿಕೊಂಡಿದ್ದರು. ಈ ವಿಚಾರದಲ್ಲಿ ಸೇಡು ತೀರಿಸಿಕೊಳ್ಳೋಕೆ ಪ್ರಶಾಂತ್​ ಮುಂದಾಗಿದ್ದರು.

ಎಪಿಸೋಡ್​ ಒಂದರಲ್ಲಿ ಪ್ರಶಾಂತ್​ ಟೀ ಶರ್ಟ್​ ಧರಿಸಿದ್ದರು. ಇದನ್ನು ನೋಡಿದ ಚಕ್ರವರ್ತಿ ಚಂದ್ರಚೂಡ್​ ‘ನೀನು ಕಾಲೇಜು ಹುಡುಗನಂತೆ ಕಾಣ್ತೀಯಾ’ ಎಂದರು. ಏನು ಡಿಗ್ರೀ ಕಾಲೇಜು ಹುಡುಗನ ತರಹವಾ ಎಂದು ಪ್ರಶಾಂತ್​ ಪ್ರಶ್ನೆ ಮಾಡಿದರು. ಈ ಮೂಲಕ ದಿವ್ಯಾಗೆ ಟಾಂಗ್​ ಕೊಟ್ಟಿದ್ದರು. ಇದಾದ ನಂತರದಲ್ಲಿ, ದಿವ್ಯಾ ಉರುಡುಗ ಬಳಿ ತೆರಳಿದ್ದ ಪ್ರಶಾಂತ್​, ‘ನೀ ನಟಿಸಿದ ‘ಹುಲಿರಾಯ’ ಸಿನಿಮಾ ಯಾವಾಗ ರಿಲೀಸ್​ ಆಗಿತ್ತು? ಆ ಸಿನಿಮಾ ಬಗ್ಗೆ ಮಾತನಾಡಿದರೆ ನಿನಗೇನಾದರೂ ಹರ್ಟ್​ ಆಗುತ್ತದೆಯೇ’ ಎಂದು ಪ್ರಶ್ನೆ ಮಾಡುವ ಮೂಲಕ ದಿವ್ಯಾಗೆ ಟಾಂಗ್​ ಕೊಟ್ಟರು. ಇದು ಇಡೀ ವಾರ ಮನೆಯಲ್ಲಿ ನಡೆದೇ ಇತ್ತು.

ವಾರದ ಪಂಚಾಯ್ತಿಯಲ್ಲಿ ಸುದೀಪ್​ ಈ ವಿಚಾರವನ್ನು ಚರ್ಚೆಗೆ ತಂದರು. ‘45 ವರ್ಷಗಳಲ್ಲಿ ನಾನಾ ಜವಾಬ್ದಾರಿ ನಿಭಾಯಿಸಿದ್ದೀರಿ. ನೀವು ಮಾಡಿದ ಕೆಲಸದ ಬಗ್ಗೆ ಮುಜುಗರ ಆಗಿದ್ಯಾ?’ ಎಂದು ಪ್ರಶಾಂತ್​ರನ್ನು ಸುದೀಪ್​ ಕೇಳಿದರು. ಇದಕ್ಕೆ ಪ್ರಶಾಂತ್​ ಕಡೆಯಿಂದ ‘ಆಗಿದೆ’ ಎನ್ನುವ ಉತ್ತರ ಬಂತು.

‘ನಾನು ಸಾಕಷ್ಟು ಸಿನಿಮಾ ಮಾಡಿದೀನಿ. ಎಲ್ಲಾ ಸಿನಿಮಾ ಹಿಟ್​ ಆಗಲ್ಲ. ಆದ್ರೆ, ಎಲ್ಲದರಲ್ಲೂ ಒಂದಷ್ಟು ವಿಚಾರ ಸಿಕ್ಕಿರತ್ತೆ. ಪಿನ್​ ಮಾಡಿ ಹೇಳೋದು ತಪ್ಪು. ನೋವು ಮಾಡುವ ಉದ್ದೇಶದಿಂದಲೇ ಮಾಡಿದ್ರೆ ಅದು ಮಹಾ ತಪ್ಪು. ಹೀಟ್​ ಆಫ್​ ದಿ ಮೂಮೆಂಟ್​ ಎನ್ನುವ ಮಾತಿದೆ. ಆದರೆ, ಇದು ಕೋಲ್ಡ್​ ಬ್ಲಡೆಡ್​. ಶ್ರುತಿ ತಪ್ತಾ ಇದೀರಿ. ನಾನು ಶ್ರುತಿ ಸರಿ ಮಾಡ್ತಾ ಇದೀನಿ’ ಎಂದು ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:

ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ

ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ; ಇಬ್ಬರ ನಡುವೆ ಮೂಡಿತು ವೈಮನಸ್ಸು

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?