AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶ್ರುತಿ ತಪ್ತಾ ಇದೀರಿ, ಇದು ಕೋಲ್ಡ್​ ಬ್ಲಡ್ಡೆಡ್​’; ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ

ಪ್ರಶಾಂತ್​ ಟೀ ಶರ್ಟ್​ ಧರಿಸಿದ್ದರು. ಇದನ್ನು ನೋಡಿದ ಚಕ್ರವರ್ತಿ ಚಂದ್ರಚೂಡ್​ ‘ನೀನು ಕಾಲೇಜು ಹುಡುಗನಂತೆ ಕಾಣ್ತೀಯಾ’ ಎಂದಿದ್ದರು. ಏನು ಡಿಗ್ರೀ ಕಾಲೇಜು ಹುಡುಗನ ತರಹವಾ ಎಂದು ಪ್ರಶಾಂತ್​ ಪ್ರಶ್ನೆ ಮಾಡಿದ್ದರು.

‘ಶ್ರುತಿ ತಪ್ತಾ ಇದೀರಿ, ಇದು ಕೋಲ್ಡ್​ ಬ್ಲಡ್ಡೆಡ್​’; ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ
ಪ್ರಶಾಂತ್​-ಕಿಚ್ಚ ಸುದೀಪ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 04, 2021 | 7:51 AM

ನಟಿ ದಿವ್ಯಾ ಸುರೇಶ್​ ‘ಡಿಗ್ರೀ ಕಾಲೇಜ್’​ ಹೆಸರಿನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಕೆಲವು ಇಂಟಿಮೇಟ್​ ದೃಶ್ಯಗಳಿದ್ದವು. ಈ ವಿಚಾರ ಇಟ್ಟುಕೊಂಡು ಬಿಗ್ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ನಿರಂತರವಾಗಿ ದಿವ್ಯಾಗೆ ಟಾಂಗ್​ ನೀಡಿದ್ದರು. ಈ ಬಗ್ಗೆ ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ ನೀಡಿದ್ದಾರೆ.

‘ಪ್ರಶಾಂತ್​-ಚಕ್ರವರ್ತಿ ಚಂದ್ರಚೂಡ್​ ಯಾವಾಗಲೂ ನನ್ನ ಹಿಂದೆ ಇರುತ್ತಿದ್ದರು. ಹೀಗಾಗಿ, ಅವರೇನು ನಿನ್ನ ಸೆಕ್ಯುರಿಟಿ ಗಾರ್ಡ್​ಗಳಾ ಎಂದು ನನ್ನ ಅಮ್ಮ ಪ್ರಶ್ನೆ ಮಾಡಿದ್ದರು’ ಎಂಬುದಾಗಿ ದಿವ್ಯಾ ಸುರೇಶ್​ ಕಳೆದ ವಾರದ ಎಪಿಸೋಡ್​ನಲ್ಲಿ ಹೇಳಿಕೊಂಡಿದ್ದರು. ಈ ವಿಚಾರದಲ್ಲಿ ಸೇಡು ತೀರಿಸಿಕೊಳ್ಳೋಕೆ ಪ್ರಶಾಂತ್​ ಮುಂದಾಗಿದ್ದರು.

ಎಪಿಸೋಡ್​ ಒಂದರಲ್ಲಿ ಪ್ರಶಾಂತ್​ ಟೀ ಶರ್ಟ್​ ಧರಿಸಿದ್ದರು. ಇದನ್ನು ನೋಡಿದ ಚಕ್ರವರ್ತಿ ಚಂದ್ರಚೂಡ್​ ‘ನೀನು ಕಾಲೇಜು ಹುಡುಗನಂತೆ ಕಾಣ್ತೀಯಾ’ ಎಂದರು. ಏನು ಡಿಗ್ರೀ ಕಾಲೇಜು ಹುಡುಗನ ತರಹವಾ ಎಂದು ಪ್ರಶಾಂತ್​ ಪ್ರಶ್ನೆ ಮಾಡಿದರು. ಈ ಮೂಲಕ ದಿವ್ಯಾಗೆ ಟಾಂಗ್​ ಕೊಟ್ಟಿದ್ದರು. ಇದಾದ ನಂತರದಲ್ಲಿ, ದಿವ್ಯಾ ಉರುಡುಗ ಬಳಿ ತೆರಳಿದ್ದ ಪ್ರಶಾಂತ್​, ‘ನೀ ನಟಿಸಿದ ‘ಹುಲಿರಾಯ’ ಸಿನಿಮಾ ಯಾವಾಗ ರಿಲೀಸ್​ ಆಗಿತ್ತು? ಆ ಸಿನಿಮಾ ಬಗ್ಗೆ ಮಾತನಾಡಿದರೆ ನಿನಗೇನಾದರೂ ಹರ್ಟ್​ ಆಗುತ್ತದೆಯೇ’ ಎಂದು ಪ್ರಶ್ನೆ ಮಾಡುವ ಮೂಲಕ ದಿವ್ಯಾಗೆ ಟಾಂಗ್​ ಕೊಟ್ಟರು. ಇದು ಇಡೀ ವಾರ ಮನೆಯಲ್ಲಿ ನಡೆದೇ ಇತ್ತು.

ವಾರದ ಪಂಚಾಯ್ತಿಯಲ್ಲಿ ಸುದೀಪ್​ ಈ ವಿಚಾರವನ್ನು ಚರ್ಚೆಗೆ ತಂದರು. ‘45 ವರ್ಷಗಳಲ್ಲಿ ನಾನಾ ಜವಾಬ್ದಾರಿ ನಿಭಾಯಿಸಿದ್ದೀರಿ. ನೀವು ಮಾಡಿದ ಕೆಲಸದ ಬಗ್ಗೆ ಮುಜುಗರ ಆಗಿದ್ಯಾ?’ ಎಂದು ಪ್ರಶಾಂತ್​ರನ್ನು ಸುದೀಪ್​ ಕೇಳಿದರು. ಇದಕ್ಕೆ ಪ್ರಶಾಂತ್​ ಕಡೆಯಿಂದ ‘ಆಗಿದೆ’ ಎನ್ನುವ ಉತ್ತರ ಬಂತು.

‘ನಾನು ಸಾಕಷ್ಟು ಸಿನಿಮಾ ಮಾಡಿದೀನಿ. ಎಲ್ಲಾ ಸಿನಿಮಾ ಹಿಟ್​ ಆಗಲ್ಲ. ಆದ್ರೆ, ಎಲ್ಲದರಲ್ಲೂ ಒಂದಷ್ಟು ವಿಚಾರ ಸಿಕ್ಕಿರತ್ತೆ. ಪಿನ್​ ಮಾಡಿ ಹೇಳೋದು ತಪ್ಪು. ನೋವು ಮಾಡುವ ಉದ್ದೇಶದಿಂದಲೇ ಮಾಡಿದ್ರೆ ಅದು ಮಹಾ ತಪ್ಪು. ಹೀಟ್​ ಆಫ್​ ದಿ ಮೂಮೆಂಟ್​ ಎನ್ನುವ ಮಾತಿದೆ. ಆದರೆ, ಇದು ಕೋಲ್ಡ್​ ಬ್ಲಡೆಡ್​. ಶ್ರುತಿ ತಪ್ತಾ ಇದೀರಿ. ನಾನು ಶ್ರುತಿ ಸರಿ ಮಾಡ್ತಾ ಇದೀನಿ’ ಎಂದು ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:

ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ

ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ; ಇಬ್ಬರ ನಡುವೆ ಮೂಡಿತು ವೈಮನಸ್ಸು

ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು
ಆರೋಪಿಗಳು ಓಡಿ ಹೋಗಲು ಅವಕಾಶ ಮಾಡಿಕೊಟ್ಟ ಇಬ್ಬರು ಪೊಲೀಸರ ಅಮಾನತು
ಆರೋಪಿಗಳು ಓಡಿ ಹೋಗಲು ಅವಕಾಶ ಮಾಡಿಕೊಟ್ಟ ಇಬ್ಬರು ಪೊಲೀಸರ ಅಮಾನತು
ವಿಚಾರಣೆ ನಂತರ ಈಡಿ ಕರೆದಿದ್ದು ಯಾಕೆ ಅಂತ ಗೊತ್ತಾಗಲಿದೆ: ಸುರೇಶ್
ವಿಚಾರಣೆ ನಂತರ ಈಡಿ ಕರೆದಿದ್ದು ಯಾಕೆ ಅಂತ ಗೊತ್ತಾಗಲಿದೆ: ಸುರೇಶ್
ದೂದ್​ಗಂಗಾ, ವೇದಗಂಗಾ ಮತ್ತು ಹಿರಣ್ಯಕೇಶಿ ನದಿಗಳಲ್ಲೂ ಹೆಚ್ಚಿದ ನೀರು ಪ್ರಮಾಣ
ದೂದ್​ಗಂಗಾ, ವೇದಗಂಗಾ ಮತ್ತು ಹಿರಣ್ಯಕೇಶಿ ನದಿಗಳಲ್ಲೂ ಹೆಚ್ಚಿದ ನೀರು ಪ್ರಮಾಣ