‘ಖುಷಿ’ ಪ್ರಚಾರಕ್ಕೆ ಚಕ್ಕರ್​ ಹಾಕಿ, ಹಾಲಿವುಡ್​ ಚಿತ್ರಕ್ಕೆ ಆಡಿಷನ್​ ನೀಡುತ್ತಿದ್ದಾರಾ ಸಮಂತಾ?

ಸಮಂತಾ ರುತ್​ ಪ್ರಭು ಅವರು ಚಿಕಿತ್ಸೆ ಪಡೆಯುವ ಸಲುವಾಗಿ ಅಮೆರಿಕಕ್ಕೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ಅಲ್ಲಿ ಬಹಳ ಸಂಭ್ರಮದಿಂದ ಅನೇಕ ಸ್ಥಳಗಳಿಗೆ ತೆರಳಿದ್ದಾರೆ. ಹಾಲಿವುಡ್​ನ ಕೆಲವು ಪ್ರಮುಖ ನಿರ್ಮಾಣ ಸಂಸ್ಥೆಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ. ಅಲ್ಲಿ ಆಡಿಷನ್​ ಬಗ್ಗೆ ಮಾತುಕಥೆ ನಡೆದಿದೆ ಎಂದು ಹೇಳಲಾಗುತ್ತಿದೆ.

‘ಖುಷಿ’ ಪ್ರಚಾರಕ್ಕೆ ಚಕ್ಕರ್​ ಹಾಕಿ, ಹಾಲಿವುಡ್​ ಚಿತ್ರಕ್ಕೆ ಆಡಿಷನ್​ ನೀಡುತ್ತಿದ್ದಾರಾ ಸಮಂತಾ?
ಸಮಂತಾ ರುತ್​ ಪ್ರಭು
Follow us
|

Updated on: Aug 30, 2023 | 11:09 AM

ಖ್ಯಾತ ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಪ್ರತಿ ದಿನವೂ ಒಂದಿಲ್ಲೊಂದ ಕಾರಣಕ್ಕೆ ಅಭಿಮಾನಿಗಳ ವಲಯದಲ್ಲಿ ಚರ್ಚೆಗೆ ಒಳಗಾಗುತ್ತಾರೆ. ಅವರು ನಟಿಸಿರುವ ‘ಖುಷಿ’ ಸಿನಿಮಾ (Kushi Movie) ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಸೆಪ್ಟೆಂಬರ್​ 1ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ. ವಿಜಯ್​ ದೇವರಕೊಂಡ (Vijay Deverakonda) ಮತ್ತು ಸಮಂತಾ ರುತ್ ಪ್ರಭು ಅವರು ಜೋಡಿಯಾಗಿ ನಟಿಸಿರುವ ಈ ಚಿತ್ರಕ್ಕೆ ಪ್ರಚಾರದ ಅಗತ್ಯ ತುಂಬ ಇದೆ. ಆದರೂ ಕೂಡ ಸಮಂತಾ ಅವರು ಸರಿಯಾಗಿ ಪ್ರಚಾರದಲ್ಲಿ ಭಾಗಿ ಆಗುತ್ತಿಲ್ಲ. ಅವರು ಈಗ ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಹಾಲಿವುಡ್​ ಸಿನಿಮಾಗಳಿಗೆ ಆಡಿಷನ್​ ನೀಡುತ್ತಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಸಮಂತಾ ರುತ್​ ಪ್ರಭು ಅವರು ಚಿಕಿತ್ಸೆ ಪಡೆಯುವ ಸಲುವಾಗಿ ಅಮೆರಿಕಕ್ಕೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ಅಲ್ಲಿ ಬಹಳ ಸಂಭ್ರಮದಿಂದ ಅನೇಕ ಸ್ಥಳಗಳಿಗೆ ತೆರಳಿದ್ದಾರೆ. ಹಾಲಿವುಡ್​ನ ಕೆಲವು ಪ್ರಮುಖ ನಿರ್ಮಾಣ ಸಂಸ್ಥೆಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ. ಅಲ್ಲಿ ಆಡಿಷನ್​ ಬಗ್ಗೆ ಮಾತುಕಥೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸಮಂತಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ಸಮಂತಾಗೆ ವಿಡಿಯೋ ಕಾಲ್ ಮಾಡಿದ ವಿಜಯ್ ದೇವರಕೊಂಡ, ಹೇಳಿದ ಜೋಕ್ ಯಾವುದು?

ವಿಜಯ್​ ದೇವರಕೊಂಡ ನಟನೆಯ ‘ಲೈಗರ್​’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲಿಲ್ಲ. ಆ ಚಿತ್ರದ ಸೋಲಿನಿಂದ ಅವರಿಗೆ ಹಿನ್ನಡೆ ಆಯಿತು. ಈಗ ಅವರು ‘ಖುಷಿ’ ಸಿನಿಮಾದ ಮೂಲಕ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಆದರೆ ಪ್ರಚಾರ ಕಾರ್ಯದಲ್ಲಿ ಅವರಿಗೆ ಸಮಂತಾ ಕಡೆಯಿಂದ ಪೂರ್ತಿ ಸಹಕಾರ ಸಿಕ್ಕಿಲ್ಲ. ‘ಖುಷಿ’ ಚಿತ್ರದ ಮ್ಯೂಸಿಕಲ್​ ನೈಟ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಚಾರ ಕಾರ್ಯಕ್ಕೂ ಸಮಂತಾ ಬಂದಿಲ್ಲ. ಹಾಗಾಗಿ ಈ ಸಿನಿಮಾದ ಪ್ರಚಾರದ ಪೂರ್ತಿ ಹೊಣೆಯನ್ನು ವಿಜಯ್​ ದೇವರಕೊಂಡ ಅವರು ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದಾರೆ.

ಸಮಂತಾ ರುತ್​ ಪ್ರಭು ಸೋಶಿಯಲ್​ ಮೀಡಿಯಾ ಪೋಸ್ಟ್​:

ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ‘ಖುಷಿ’ ಸಿನಿಮಾ ಮೂಡಿಬಂದಿದೆ. ಸೆಪ್ಟೆಂಬರ್​ 1ರಂದು ಈ ಎಲ್ಲ ಭಾಷೆಯಲ್ಲೂ ಚಿತ್ರ ರಿಲೀಸ್​ ಆಗಲಿದೆ. ಅದೇ ದಿನ ಕನ್ನಡದಲ್ಲಿ ರಕ್ಷಿತ್​ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಿಡುಗಡೆ ಆಗುತ್ತಿದೆ. ಹಾಗಾಗಿ ಕರುನಾಡಿನಲ್ಲಿ ಈ ಸಿನಿಮಾಗಳ ನಡುವೆ ಪೈಪೋಟಿ ಏರ್ಪಡಲಿದೆ. ‘ಖುಷಿ’ ಸಿನಿಮಾಗೆ ಶಿವ ನಿರ್ವಾಣ ಅವರು ನಿರ್ದೇಶನ ಮಾಡಿದ್ದಾರೆ. ‘ಹೃದಯಂ’ ಖ್ಯಾತಿಯ ಹೇಷಂ ಅಬ್ದುಲ್​ ವಹಾಬ್​ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಹಾಡುಗಳು ಗಮನ ಸೆಳೆಯುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.