ಲೋಕೇಶ್ ಕನಗರಾಜ್ ಸಿನಿಮಾಗೆ ಕನ್ನಡಿಗನ ಬಂಡವಾಳ; ಯಾವುದು ಈ ಚಿತ್ರ?

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ನರ್ತನ್ ಒಟ್ಟಾಗಿ ಸಿನಿಮಾ ಮಾಡಬೇಕಿತ್ತು. ಆದರೆ, ಯಶ್​ಗೆ ಕಥೆ ಇಷ್ಟವಾಗಿಲ್ಲ. ಹೀಗಾಗಿ ನರ್ತನ್ ಸ್ಥಾನಕ್ಕೆ ಗೀತು ಮೋಹನ್​ದಾಸ್ ಅವರ ಆಗಮನ ಆಯಿತು. ಆ ಬಳಿಕ ಕೆವಿಎನ್ ಅವರು ರಾಮ್ ಚರಣ್​ಗೆ ಕಥೆ ಹೇಳುವಂತೆ ನರ್ತನ್​ಗೆ ಸೂಚಿಸಿದರು. ಇದು ಕೂಡ ಫೈನಲ್ ಆಗಿಲ್ಲ ಎನ್ನಲಾಗಿದೆ. ಈಗ ಲೋಕೇಶ್ ಕನಗರಾಜ್ ಅವರ ಹೆಸರು ನಿರ್ಮಾಣ ಸಂಸ್ಥೆ ಜೊತೆ ತಳುಕು ಹಾಕಿಕೊಂಡಿದೆ.

ಲೋಕೇಶ್ ಕನಗರಾಜ್ ಸಿನಿಮಾಗೆ ಕನ್ನಡಿಗನ ಬಂಡವಾಳ; ಯಾವುದು ಈ ಚಿತ್ರ?
ಲೋಕೇಶ್
Edited By:

Updated on: Mar 15, 2024 | 11:58 AM

ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಸಾಕಷ್ಟು ಸಿನಿಮಾಗಳನ್ನು ಹಂಚಿಕೆ ಮಾಡಿದೆ. ಸದ್ಯ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ (Toxic Movie) ಈ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಮೂಡಿಬರುತ್ತಿದೆ. ನಿರ್ಮಾಪಕ ವೆಂಕಟ್ ನಾರಾಯಣ್ ಅವರು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮಧ್ಯೆ ಲೋಕೇಶ್ ಕನಗರಾಜ್ ಬರ್ತ್​​ಡೇಗೆ ಕೆವಿಎನ್​ ಕಡೆಯಿಂದ ವಿಶೇಷ ವಿಶ್ ಬಂದಿದೆ. ಇದರಿಂದ ಇಬ್ಬರೂ ಸಿನಿಮಾ ಮಾಡೋದು ಪಕ್ಕಾ ಆಗಿದೆ. ಇದರ ಜೊತೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ.

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ನರ್ತನ್ ಒಟ್ಟಾಗಿ ಸಿನಿಮಾ ಮಾಡಬೇಕಿತ್ತು. ಇದಕ್ಕೆ ಯಶ್ ಹೀರೋ ಎಂದು ಹೇಳಲಾಗಿತ್ತು. ಆದರೆ, ಯಶ್​ಗೆ ಕಥೆ ಇಷ್ಟವಾಗಿಲ್ಲ. ಹೀಗಾಗಿ ನರ್ತನ್ ಸ್ಥಾನಕ್ಕೆ ಗೀತು ಮೋಹನ್​ದಾಸ್ ಅವರ ಆಗಮನ ಆಯಿತು. ಆ ಬಳಿಕ ಕೆವಿಎನ್ ಅವರು ರಾಮ್ ಚರಣ್​ಗೆ ಕಥೆ ಹೇಳುವಂತೆ ನರ್ತನ್​ಗೆ ಸೂಚಿಸಿದರು. ಇದು ಕೂಡ ಫೈನಲ್ ಆಗಿಲ್ಲ ಎನ್ನಲಾಗಿದೆ. ಈಗ ಲೋಕೇಶ್ ಕನಗರಾಜ್ ಅವರ ಹೆಸರು ನಿರ್ಮಾಣ ಸಂಸ್ಥೆ ಜೊತೆ ತಳುಕು ಹಾಕಿಕೊಂಡಿದೆ.

ಲೋಕೇಶ್ ಅವರು ಪ್ರಭಾಸ್ ಅಥವಾ ಜೂನಿಯರ್​ ಎನ್​ಟಿಆರ್ ಜೊತೆ ಕೆಲಸ ಮಾಡಲಿದ್ದಾರೆ ಎಂದು ಸುದ್ದಿ ಹರಡಿದೆ. ಆದರೆ, ಇದರಲ್ಲಿ ಯಾವುದೇ ನಿಜ ಇಲ್ಲ ಎಂದು ಹೇಳಲಾಗುತ್ತಿದೆ. ಕೆವಿಎನ್ ನಿರ್ಮಾಣ ಸಂಸ್ಥೆ ‘ಖೈದಿ 2’ ಚಿತ್ರವನ್ನು ನಿರ್ಮಾಣ ಮಾಡಲಿದೆಯಂತೆ. ಈ ಸಿನಿಮಾ ‘ಲೋಕೇಶ್ ಕನಗರಾಜ್ ಯೂನಿವರ್ಸ್’ ಅಡಿಯಲ್ಲಿ ಮೂಡಿ ಬರುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಬೇಕಿದೆ.

ಲೋಕೇಶ್ ಕನಗರಾಜ್ ಅವರು ಸದ್ಯ ರಜನಿಕಾಂತ್ ಅವರ ‘ತಲೈವರ್ 171’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದು ಕೂಡ ಸಿನಿಮ್ಯಾಟಿಕ್ ಯೂನಿವರ್ಸ್​ ಅಡಿಯಲ್ಲಿ ಸಿದ್ಧವಾಗುತ್ತಿದೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಕುತೂಹಲ ಹೆಚ್ಚಿದೆ. ಈಗಾಗಲೇ ಅವರು ನಿರ್ದೇಶನ ಮಾಡಿದ ‘ಖೈದಿ’, ‘ವಿಕ್ರಮ್’ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ‘ಲಿಯೋ’ ಸಾಧಾರಣ ಗೆಲುವು ಕಂಡಿದೆ. ಎಲ್ಲಾ ಸಿನಿಮಾಗಳಿಗೆ ಒಂದು ಕನೆಕ್ಷನ್ ಇದೆ.

ಇದನ್ನೂ ಓದಿ: ‘ಖೈದಿ 2’ ಚಿತ್ರಕ್ಕೆ ಶೂಟಿಂಗ್ ಆರಂಭ ಆಗೋದು ಯಾವಾಗ? ಉತ್ತರ ಕೊಟ್ಟ ಕಾರ್ತಿ

‘ಖೈದಿ’ ಸಿನಿಮಾದಲ್ಲಿ ಕಾರ್ತಿ ನಟಿಸಿದ್ದಾರೆ. ಜೈಲಿನಿಂದ ಪೆರೋಲ್​ ಮೇಲೆ ಹೊರ ಬರುವ ಖೈದಿಯ ಕಥೆಯನ್ನು ಈ ಸಿನಿಮಾ ಹೊಂದಿತ್ತು. ಕಥಾ ನಾಯಕ ಜೈಲಿಗೆ ಹೋಗಿದ್ದು ಏಕೆ? ಹಿಂದೆ ಏನಾಗಿತ್ತು ಎಂಬುದರ ಕಥೆನ್ನು ‘ಖೈದಿ 2’ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಇದು ‘ಖೈದಿ’ ಚಿತ್ರದ ಪ್ರೀಕ್ವೆಲ್ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us