ಅನಂತ್ ಅಂಬಾನಿ ಮದುವೆಯಿಂದಾಗಿ ರಾಜಮೌಳಿಗೆ ಕೊಟ್ಟ ಮಾತನ್ನು ಮುರಿದ ಮಹೇಶ್ ಬಾಬು

ಮಹೇಶ್ ಬಾಬು ಹಾಗೂ ರಾಜಮೌಳಿ ಅವರು ಹೊಸ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಲುಕ್ ಹೇಗಿರಲಿದೆ ಎನ್ನುವ ವಿಚಾರ ಸಾಕಷ್ಟು ಗುಟ್ಟಾಗಿತ್ತು. ಈಗ ಈ ಲುಕ್ ರಿವೀಲ್ ಆಗಿದೆ. ಅಂಬಾನಿ ಮನೆ ಮದುವೆಯಲ್ಲಿ ಭಾಗಿಯಾದಾಗ ಮಹೇಶ್ ಬಾಬು ಅವರ ಉದ್ದ ಕೂದಲು ಗಮನ ಸೆಳೆದಿದೆ.

ಅನಂತ್ ಅಂಬಾನಿ ಮದುವೆಯಿಂದಾಗಿ ರಾಜಮೌಳಿಗೆ ಕೊಟ್ಟ ಮಾತನ್ನು ಮುರಿದ ಮಹೇಶ್ ಬಾಬು
Edited By:

Updated on: Jul 16, 2024 | 12:44 PM

ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ಧೂರಿ ಮದುವೆಯಲ್ಲಿ ಅನೇಕ ದೊಡ್ಡ ಸೂಪರ್‌ಸ್ಟಾರ್‌ಗಳು ಕಾಣಿಸಿಕೊಂಡರು. ಹಾಲಿವುಡ್, ಬಾಲಿವುಡ್ ಹಾಗೂ ದಕ್ಷಿಣದ ಅನೇಕ ನಟರು ತಮ್ಮ ಮೆಗಾ ಪ್ರಾಜೆಕ್ಟ್‌ಗಳ ಚಿತ್ರೀಕರಣವನ್ನು ತೊರೆದು ಈ ಮದುವೆಯಲ್ಲಿ ಭಾಗಿ ಆದರು. ರಾಮ್ ಚರಣ್, ಮಹೇಶ್ ಬಾಬು, ಶಾರುಖ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ಯಶ್ ಮತ್ತು ಮಾಧುರಿ ದೀಕ್ಷಿತ್ ಅವರ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಅದೇ ರೀತಿ ಮಹೇಶ್ ಬಾಬು ಅವರು ಕೂಡ ಈ ಮದುವೆಯಲ್ಲಿ ಗಮನ ಸೆಳೆದಿದ್ದಾರೆ.

ಎಸ್‌ಎಸ್ ರಾಜಮೌಳಿ ಅವರ ಜೊತೆ ಮಹೇಶ್ ಬಾಬು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್​ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಬಗ್ಗೆ ಹೊಸ ಹೊಸ ಅಪ್​ಡೇಟ್​ಗಳು ಕೇಳಿ ಬರುತ್ತಲೇ ಇರುತ್ತವೆ. ಈಗ ಈ ಚಿತ್ರಕ್ಕಾಗಿ ಮಹೇಶ್ ಬಾಬು ಉದ್ದ ಕೂದಲು ಬಿಟ್ಟಿದ್ದಾರೆ ಅನ್ನೋದು ರಿವೀಲ್ ಆಗಿದೆ.  ಮಹೇಶ್ ಬಾಬು ಈ ಚಿತ್ರಕ್ಕಾಗಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಿದ್ದಾರೆ. ಸದ್ಯ ಚಿತ್ರದ ಕಾಸ್ಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಕೆಲಸ ಶುರುವಾಗಲಿದೆ. ಚಿತ್ರದ ಕೆಲಸ ಶುರುವಾಗುವ ಮುನ್ನವೇ ರಾಜಮೌಳಿ ಮಹೇಶ್ ಬಾಬು ಮುಂದೆ ವಿಚಿತ್ರ ಕಂಡೀಷನ್ ಹಾಕಿದ್ದರು. ಈ ಷರತ್ತನ್ನು ಮಹೇಶ್ ಬಾಬು ಬ್ರೇಕ್ ಮಾಡಿದ್ದಾರೆ.

ರಾಜಮೌಳಿಗೆ ಕೊಟ್ಟ ಮಾತನ್ನು ಮುರಿದ ಮಹೇಶ್ ಬಾಬು?

‘ಆರ್​ಆರ್​ಆರ್​’ ಯಶಸ್ಸಿನ ನಂತರ, ರಾಜಮೌಳಿ SSMB29 ಕೆಲಸ ಮಾಡುತ್ತಿದ್ದಾರೆ. ಸಿನಿಮಾದ ಅದ್ಧೂರಿ ಬಜೆಟ್ ಬಗ್ಗೆ ಕೇಳಿದ ದಿನದಿಂದಲೂ ಜನರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇದು ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಮಹೇಶ್ ಬಾಬು ಅವರ ಲುಕ್ ಅನ್ನು ರಿವೀಲ್ ಮಾಡದೇ ಇರಲು ರಾಜಮೌಳಿ ನಿರ್ಧರಿಸಿದ್ದರು. ಹೀಗಾಗಿ, ಮಾಧ್ಯಮಗಳಿಂದ ದೂರ ಇರಲು ಮಹೇಶ್ ಬಾಬುಗೆ ಸೂಚಿಸಿದ್ದರು. ಆದರೆ, ಈಗ ಮದುವೆ ಕಾರಣದಿಂದ ಈ ಲುಕ್ ಮಹೇಶ್ ಬಾಬು ರಿವೀಲ್ ಮಾಡಿದಂತೆ ಆಗಿದೆ.

ಇದನ್ನೂ ಓದಿ: ಅನಂತ್ ಅಂಬಾನಿ ಮದುವೆಗೆ ಬರಲಿಲ್ಲ ಈ ಸೆಲೆಬ್ರಿಟಿಗಳು; ಕಾರಣ ಏನು?

ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ಮದುವೆಗೆ ಮಹೇಶ್ ಬಾಬು ತಮ್ಮ ಕುಟುಂಬದೊಂದಿಗೆ ಆಗಮಿಸಿದ್ದರು. ಪತ್ನಿ ಹಾಗೂ ಮಗಳ ಜೊತೆ ಮಹೇಶ್ ಬಾಬು ಕಾಣಿಸಿಕೊಂಡರು.. ಕ್ರಿಕೆಟಿಗ ಎಂಎಸ್ ಧೋನಿ ಜೊತೆಗಿನ ಚಿತ್ರವನ್ನು ಮಹೇಶ್ ಬಾಬು ಅವರೇ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:27 pm, Tue, 16 July 24

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us