AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾವು ನಟಿಸಿದ ಸಿನಿಮಾಗಳಲ್ಲಿ ಈ ಮೂರು ಸಿನಿಮಾಗಳು ಬಹಳ ವಿಶೇಷವಂತೆ ಮಹೇಶ್ ಬಾಬುಗೆ

Mahesh Babu: ಮಹೇಶ್ ಬಾಬು ತಮ್ಮ 25 ವರ್ಷಗಳ ವೃತ್ತಿ ಜೀವನದಲ್ಲಿ ತಮಗೆ ಬಹಳ ಪ್ರಿಯವಾದ, ವಿಶೇಷವಾದ ಮೂರು ಸಿನಿಮಾಗಳು ಯಾವುವೆಂದು ಹೇಳಿದ್ದಾರೆ.

ತಾವು ನಟಿಸಿದ ಸಿನಿಮಾಗಳಲ್ಲಿ ಈ ಮೂರು ಸಿನಿಮಾಗಳು ಬಹಳ ವಿಶೇಷವಂತೆ ಮಹೇಶ್ ಬಾಬುಗೆ
ಮಂಜುನಾಥ ಸಿ.
|

Updated on: Mar 06, 2024 | 10:01 AM

Share

ಟಾಲಿವುಡ್ ಸ್ಟಾರ್ ಮಹೇಶ್ ಬಾಬು (Mahesh Babu) ಕಳೆದ 25 ವರ್ಷಗಳಿಂದಲೂ ಚಿತ್ರರಂಗದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಅದಕ್ಕೆ ಮುನ್ನ ಬಾಲನಟನಾಗಿಯೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. 2000 ರಲ್ಲಿ ಬಿಡುಗಡೆ ಆದ ‘ರಾಜಕುಮಾರುಡು’ ಸಿನಿಮಾ ಮೂಲಕ ಮಹೇಶ್ ಬಾಬು ಹೀರೋ ಆದರು. ಮಹೇಶ್ ಬಾಬು ನಾಯಕ ನಟನಾಗಿ 28 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ 28 ರಲ್ಲಿ ಸುಮಾರು 20 ಸಿನಿಮಾಗಳು ಸೂಪರ್ ಹಿಟ್. ಕೆಲವಂತೂ ಬ್ಲಾಕ್ ಬಸ್ಟರ್ ಸಿನಿಮಾಗಳು. ತಮ್ಮ 25 ವರ್ಷಗಳ ಸಿನಿ ಜರ್ನಿಯಲ್ಲಿ ತಾವು ನಟಿಸಿದ ಮೂರು ಸಿನಿಮಾಗಳು ಮಹೇಶ್ ಬಾಬುಗೆ ಬಹಳ ವಿಶೇಷವಂತೆ. ತಮ್ಮದೇ ಕೆಲವು ದೊಡ್ಡ ಬ್ಲಾಕ್ ಬಸ್ಟರ್​ ಸಿನಿಮಾಗಳನ್ನು ಸಹ ಮಹೇಶ್ ಬಾಬು ಗಣನೆಗೆ ತೆಗೆದುಕೊಂಡಿಲ್ಲ.

ಮಹೇಶ್ ಬಾಬು ನಾಯಕನಾಗಿ ನಟಿಸಿದ ಮೊದಲ ಐದು ಸಿನಿಮಾಗಳು ಸೂಪರ್ ಹಿಟ್ ಆದರೆ. ತಮ್ಮ ಸಿನಿಮಾ ಜರ್ನಿಯ ಆರಂಭದಲ್ಲಿ ನಟಿಸಿದ ‘ಮುರಾರಿ’ ಸಿನಿಮಾ ಮಹೇಶ್ ಬಾಬುಗೆ ಬಹಳ ವಿಶೇಷವಂತೆ. ‘ಮುರಾರಿ’ ಸಿನಿಮಾ ಆ ಕಾಲಕ್ಕೆ ಬ್ಲಾಕ್ ಬಸ್ಟರ್ ಸಿನಿಮಾ ಆಗಿತ್ತು. ‘ಮುರಾರಿ’ಗೆ ಮುನ್ನ ಮಹೇಶ್ ಬಾಬು ‘ರಾಜಕುಮಾರುಡು’, ‘ಯುವರಾಜ’, ‘ವಂಶಿ’ ಸಿನಿಮಾಗಳಲ್ಲಿ ನಟಿಸಿದ್ದರು. ಈ ಮೂರು ಸಹ ಹಿಟ್ ಆಗಿದ್ದರು. ಆದರೆ ‘ಮುರಾರಿ’ ಬ್ಲಾಕ್ ಬಸ್ಟರ್ ಎನಿಸಿಕೊಂಡಿತು.

ಇದನ್ನೂ ಓದಿ:ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಸರಳವಾದ ಹೆಸರು: ಆ ಎರಡರಲ್ಲಿ ಯಾವುದು ಅಂತಿಮ?

‘ಮುರಾರಿ’ ಬಳಿಕ ಮಹೇಶ್ ಬಾಬುಗೆ ಬಹಳ ಪ್ರಿಯವಾದ ಸಿನಿಮಾ ಎಂದರೆ ಅದು ‘ಪೋಕಿರಿ’. ಮಹೇಶ್ ಬಾಬು ಪ್ರಕಾರ ‘ಪೋಕಿರಿ’ ಸಿನಿಮಾ ಅವರನ್ನು ಸೂಪರ್ ಸ್ಟಾರ್ ಅನ್ನಾಗಿ ಮಾಡಿದ ಸಿನಿಮಾ ಅಂತೆ. ‘ಪೋಕಿರಿ’ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದ ಸಿನಿಮಾ. ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಿಗೆ ರೀಮೇಕ್ ಆದ ಸಿನಿಮಾ ‘ಪೋಕಿರಿ’. ಈ ಸಿನಿಮಾ ಮಹೇಶ್ ಬಾಬುಗೆ ಬಹಳ ವಿಶೇಷವಾದುದ್ದಂತೆ. ‘ಪೋಕಿರಿ’ ಬಳಿಕ ‘ಶ್ರೀಮಂತುಡು’ ಸಿನಿಮಾ ಸಹ ಮಹೇಶ್ ಬಾಬು ಪಾಲಿಗೆ ಬಹಳ ವಿಶೇಷವಾದುದಂತೆ. ಕೇವಲ ಮಾಸ್ ಕಮರ್ಶಿಯಲ್ ಸಿನಿಮಾಗಳನ್ನು ಮಾಡುತ್ತಿದ್ದ ಅವರು ಸಾಮಾಜಿಕ ಸಂದೇಶದ ಕಡೆಗೆ ಹೊರಳುವಂತೆ ಮಾಡಿದ ಸಿನಿಮಾ ‘ಶ್ರೀಮಂತುಡು’ ಹಾಗಾಗಿ ಅದು ಅವರಿಗೆ ಬಹಳ ಇಷ್ಟವಂತೆ.

ಮಹೇಶ್ ಬಾಬು ನಟಿಸಿರುವ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿರುವ ‘ಒಕ್ಕಡು’, ‘ಅತಡು’ ಸಿನಿಮಾಗಳನ್ನು ಮಹೇಶ್ ಬಾಬು ಗಣನೆಗೆ ತೆಗೆದುಕೊಂಡಿಲ್ಲ. ಇವುಗಳ ಹೊರತಾಗಿ ಭಿನ್ನ ರೀತಿಯ ಸಿನಿಮಾಗಳಾದ ‘ಅರ್ಜುನ್’, ‘ನಿಜಂ’, ‘ನಾನಿ’ ಸಿನಿಮಾಗಳನ್ನೂ ಸಹ ಮಹೇಶ್ ಬಾಬು ಹೆಸರಿಸಿಲ್ಲ. ‘ದೂಕುಡು’, ‘ಖಲೇಜ’ ಅಂತಹಾ ಸೂಪರ್ ಹಿಟ್ ಸಿನಿಮಾಗಳ ಹೆಸರನ್ನೂ ಸಹ ಮಹೇಶ್ ಬಾಬು ಹೇಳಿಲ್ಲ. ಮಹೇಶ್ ಬಾಬು ಪ್ರಸ್ತುತ ಎಸ್​ಎಸ್ ರಾಜಮೌಳಿ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಇಬ್ಬರ ವೃತ್ತಿ ಜೀವನದಲ್ಲಿಯೂ ಅತ್ಯಂತ ದೊಡ್ಡ ಬಜೆಟ್​ನ ಸಿನಿಮಾ ಇದಾಗಿರಲಿದೆ. ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಯಲ್ಲಿದ್ದು, ಶೀಘ್ರವೇ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್​ನಲ್ಲಿ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ