Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಯ್ಯೋ ಶ್ರದ್ಧಾ’ಗೆ ನರೇಂದ್ರ ಮೋದಿಯವರಿಂದ ಪುರಸ್ಕಾರ

Ayyo Shradha:‘ಅಯ್ಯೋ ಶ್ರದ್ಧಾ’ಗೆ ವರ್ಷದ ಅತ್ಯುತ್ತಮ ಕ್ರಿಯಾಶೀಲ ಕಂಟೆಂಟ್ ಕ್ರಿಯೇಟರ್ ಪ್ರಶಸ್ತಿ ನೀಡಿದ ನರೇಂದ್ರ ಮೋದಿ.

‘ಅಯ್ಯೋ ಶ್ರದ್ಧಾ’ಗೆ ನರೇಂದ್ರ ಮೋದಿಯವರಿಂದ ಪುರಸ್ಕಾರ
Follow us
ಮಂಜುನಾಥ ಸಿ.
|

Updated on: Mar 08, 2024 | 6:41 PM

ಯೂಟ್ಯೂಬ್ (Youtube), ಇನ್​ಸ್ಟಾಗ್ರಾಂ ರೀಲ್ಸ್​ಗಳನ್ನು (Instagram) ಬೈದುಕೊಳ್ಳುವವರೇ ಹೆಚ್ಚು ಆದರೆ ಅದು ಒಂದು ಅತ್ಯಂತ ಲಾಭದಾಯಕ ವೃತ್ತಿ ಎಂಬುದನ್ನು ಅರಿತಿರುವವರು ಕೆಲವು ಮಂದಿಯಷ್ಟೆ. ಕಂಟೆಂಟ್ ಕ್ರಿಯೇಷನ್ ಎನ್ನುವುದು ಕೋವಿಡ್ ಬಳಿಕ ಪ್ರಾರಂಭವಾಗಿ, ಬೂಮ್ ಆಗುತ್ತಿರುವ ವಿಭಾಗ. ಇದೀಗ ಈ ವಿಭಾಗದಲ್ಲಿ ಅತ್ಯುತ್ತಮವರನ್ನು ಆರಿಸಿ ಅವರಿಗೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಪ್ರಶಸ್ತಿ ವಿತರಣೆ ಮಾಡಿದ್ದಾರೆ. ಅತ್ಯುತ್ತಮ ಕ್ರಿಯಾಶೀಲ ಕಂಟೆಂಟ್ ಕ್ರಿಯೇಟರ್ ಪ್ರಶಸ್ತಿಯನ್ನು ಕನ್ನಡತಿ ‘ಅಯ್ಯೋ ಶ್ರದ್ಧಾ’ ಖ್ಯಾತಿಯ ಶ್ರದ್ಧಾ ಪಡೆದುಕೊಂಡಿದ್ದಾರೆ.

ಕನ್ನಡತಿ ಶ್ರದ್ಧಾ ಜೈನ್, ‘ಅಯ್ಯೋ ಶ್ರದ್ಧಾ’ ಚಾನೆಲ್ ಮೂಲಕ ಹಲವಾರು ಕಾಮಿಡಿ ಕಿರು ವಿಡಿಯೋಗಳನ್ನು ಮಾಡಿದ್ದಾರೆ. ಅವರ ವಿಡಿಯೋಗಳಿಗೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಯೂಟ್ಯೂಬ್ ಕಾಮಿಡಿ ವಿಡಿಯೋಗಳಲ್ಲಿ ಅಸಭ್ಯವಾಗಿ ಹಾಸ್ಯ ಮಾಡುವವರ ಸಂಖ್ಯೆ ಹೆಚ್ಚಿರುವಾಗ ಅತ್ಯಂತ ಸೆನ್ಸಿಬಲ್ ಕಾಮಿಡಿ ಮಾಡುವ ಅಯ್ಯೋ ಶ್ರದ್ಧಾಗೆ ವೀಕ್ಷಕ ಬಳಗ ಬಹಳ ದೊಡ್ಡದಿದೆ.

ಇಂಗ್ಲೀಷ್, ಕನ್ನಡ ಎರಡೂ ಭಾಷೆಯಲ್ಲಿಯೂ ವಿಡಿಯೋ ಮಾಡುವ, ಸಾಮಾಜಿಕ ವಿಷಯಗಳು, ಮಧ್ಯಮ ವರ್ಗದ ಸಮಸ್ಯೆಗಳನ್ನು ಇಟ್ಟುಕೊಂಡು ವಿಡಿಯೋ ಮಾಡುವ ಶ್ರದ್ಧಾ ಜೈನ್​ಗೆ ನರೇಂದ್ರ ಮೋದಿ ಅವರು ಈ ವರ್ಷದ ‘ಅತ್ಯಂತ ಕ್ರಿಯಾಶೀಲ ಕಂಟೆಂಟ್ ಕ್ರಿಯೇಟರ್’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರಶಸ್ತಿ ನೀಡುವಾಗ ಮಾತನಾಡಿದ ನರೇಂದ್ರ ಮೋದಿ, ಶ್ರದ್ಧಾ ಜೊತೆಗೆ ಇದು ನನ್ನ ಎರಡನೇ ಭೇಟಿ, ಈ ಪ್ರಶಸ್ತಿ ಅವರಿಗೆ ಕೊಡಲು ಖುಷಿಯಾಗುತ್ತಿದೆ’ ಎಂದಿದ್ದಾರೆ.

ಇದನ್ನೂ ಓದಿ:ಮೋದಿ ಜತೆ ಬಹುಮುಖ ಪತ್ರಿಭೆ ಅಯ್ಯೋ ಶ್ರದ್ಧಾ

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರದ್ಧಾ, ‘ಮನೆಯಲ್ಲಿ ಸ್ಮಾರ್ಟ್​ಫೋನ್ ಇಟ್ಟುಕೊಂಡು ಕಂಟೆಂಟ್ ಮಾಡುವುದು ಸಹ ಒಂದು ಕೌಶಲ ಎಂಬುದನ್ನು ಈ ಪ್ರಶಸ್ತಿ ಸಾಬೀತು ಮಾಡುತ್ತಿದೆ. ದೇಶದಲ್ಲಿ ಸಾಮಾನ್ಯವಾಗಿ ರಾಜಕೀಯ, ಉದ್ಯಮ, ಸಾಮಾಜಿಕ ಪರಿಸ್ಥಿತಿಗಳು ಸಾಮಾನ್ಯವಾಗಿ ಗಂಭೀರವಾಗಿರುತ್ತವೆ. ಅಂಥಹಾ ವಿಷಯಗಳಿಗೆ ಹಾಸ್ಯವನ್ನು ಬೆರೆಸಿದರೆ ಹೇಗಿರುತ್ತದೆ ಎನಿಸಿ ನಾನು ಹಾಸ್ಯದ ವಿಡಿಯೋ ಮಾಡಲು ಪ್ರಾರಂಭಿಸಿದೆ. ನಮ್ಮ ದೇಶದ ಜನರು, ಸಂದರ್ಭ ಯಾವುದೇ ಇರಲಿ ನಗಲು ಕಾರಣ ಹುಡುಕಿಕೊಳ್ಳುತ್ತಾರೆ. ಆ ಕಾರಣವನ್ನು ನಾನು ನೀಡಲು ಯತ್ನಿಸುತ್ತಿದ್ದೇನೆ, ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ ಶ್ರದ್ಧಾ.

ಶ್ರದ್ಧಾಗೆ ಪ್ರಶಸ್ತಿ ನೀಡಿ ಮಾತನಾಡಿದ ನರೇಂದ್ರ ಮೋದಿ, ‘ಮಾರುಕಟ್ಟೆಯಿಂದ ಎಷ್ಟೇ ಒಳ್ಳೆಯ ತರಕಾರಿ ತಂದು ಅಡುಗೆ ಮಾಡಿದರೂ ಸಹ ಅದಕ್ಕೆ ಒಗ್ಗರಣೆ ಬಿದ್ದರಷ್ಟೆ ರುಚಿ. ಹಾಸ್ಯ ಸಹ ಒಗ್ಗರಣೆಯ ಕಾರ್ಯವನ್ನು ಮಾಡುತ್ತದೆ’ ಎಂದು ಶ್ರದ್ಧಾರ ಕಂಟೆಂಟ್ ಅನ್ನು ಕೊಂಡಾಡಿದರು.

ಈ ಹಿಂದೆಯೂ ಒಮ್ಮೆ ಶ್ರದ್ಧಾ ಅವರು ಪ್ರಧಾನಿಗಳನ್ನು ಭೇಟಿಯಾಗಿದ್ದರು. ಕನ್ನಡದ ಸ್ಟಾರ್​ಗಳಾದ ಯಶ್, ರಿಷಬ್ ಶೆಟ್ಟಿ, ಶ್ರದ್ಧಾ ಅವರುಗಳಿಗೆ ಮೋದಿ ಅವರಿಂದ ಆಹ್ವಾನ ಬಂದಿತ್ತು. ಆಗ ಶ್ರದ್ಧಾ, ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದರು. ಶ್ರದ್ಧಾ, ಹಾಸ್ಯ ವಿಡಿಯೋ ಮಾಡುವ ಜೊತೆಗೆ ಸ್ಟಾಂಡಪ್ ಕಾಮೆಡಿ ಮಾಡುತ್ತಾರೆ. ಇತ್ತೀಚೆಗೆ ಹಿಂದಿ ಸಿನಿಮಾ ಒಂದರಲ್ಲಿಯೂ ಸಹ ನಟಿಸಿದ್ದಾರೆ.

ಅಯ್ಯೋ ಶ್ರದ್ಧಾ ಮಾತ್ರವೇ ಅಲ್ಲದೆ, ಕಂಟೆಂಟ್ ಕ್ರಿಯೇಷನ್ ವಿಭಾಗದಲ್ಲಿ ಸುಮಾರು ಉತ್ತಮ ಕಂಟೆಂಟ್ ಕ್ರಿಯೇಟರ್ಸ್​ ಅನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಗೇಮಿಂಗ್, ವ್ಲಾಗಿಂಗ್ ಇನ್ನೂ ಹಲವು ವಿಭಾಗಗಳ ಕ್ರಿಯೇಟರ್ಸ್​ಗೆ ಪ್ರಶಸ್ತಿ ದೊರೆತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ