AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರದ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್​

ಗಾಂಧಿ ನಗರದಲ್ಲಿ ಶ್ರೀಮುರಳಿ ಅವರ ಕಟೌಟ್​ ನಿಲ್ಲಿಸಿ, ಹೂವಿನ ಹಾರ ಹಾಕಲಾಯಿತು. ಕೆಲವು ಕಡೆ ಸೇಬು ಹಣ್ಣಿನ ಹಾರ ಕೂಡ ಹಾಕಲಾಗಿದೆ. ಅದ್ದೂರಿಯಾಗೇ ಎಂಟ್ರಿ ಪಡೆದುಕೊಂಡ ‘ಮದಗಜ’ ಸಿನಿಮಾದ ಮೊದಲಾರ್ಧ ಹೇಗಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರದ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್​
ಮದಗಜ ಪೋಸ್ಟರ್​
TV9 Web
| Updated By: ಮದನ್​ ಕುಮಾರ್​|

Updated on: Dec 03, 2021 | 12:04 PM

Share

ಶ್ರೀಮುರಳಿ ನಟಿಸಿರುವ ‘ಮದಗಜ’ ಸಿನಿಮಾ ಬೆಟ್ಟದಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಇಂದು (ಡಿಸೆಂಬರ್​3) ಸಿನಿಮಾ ರಿಲೀಸ್​ ಆಗಿದೆ. ‘ಅಯೋಗ್ಯ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ನಿರ್ದೇಶಕ ಮಹೇಶ್​ ಕುಮಾರ್ ನಿರ್ದೇಶನ ಸಿನಿಮಾಗಿದೆ​. ಆಶಿಕಾ ರಂಗನಾಥ್​ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಮುರಳಿ ‘ಭರಾಟೆ’ ಬಳಿಕ ಒಪ್ಪಿಕೊಂಡ ಚಿತ್ರ ‘ಮದಗಜ’. ಈ ಕಾರಣಕ್ಕೆ ಚಿತ್ರ ಸೆಟ್ಟೇರಿದ ದಿನದಿಂದಲೂ ಭಾರಿ ಕ್ರೇಜ್​ ಹುಟ್ಟುಹಾಕಿತ್ತು. ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ.  ಸಿನಿಮಾದ ಹಾಡುಗಳು ಹಾಗೂ ಟ್ರೇಲರ್​ಗಳು ಭಾರೀ ಸೌಂಡ್​ ಮಾಡುತ್ತಿವೆ.

ಗಾಂಧಿ ನಗರದಲ್ಲಿ ಶ್ರೀಮುರಳಿ ಅವರ ಕಟೌಟ್​ ನಿಲ್ಲಿಸಿ, ಹೂವಿನ ಹಾರ ಹಾಕಲಾಯಿತು. ಕೆಲವು ಕಡೆ ಸೇಬು ಹಣ್ಣಿನ ಹಾರ ಕೂಡ ಹಾಕಲಾಗಿದೆ. ಅದ್ದೂರಿಯಾಗೇ ಎಂಟ್ರಿ ಪಡೆದುಕೊಂಡ ‘ಮದಗಜ’ ಸಿನಿಮಾದ ಮೊದಲಾರ್ಧ ಹೇಗಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

  1. ಮೊದಲಾರ್ಧ ಪೂರ್ತಿ ಸಖತ್​ ಮಾಸ್​ ಆಗಿ ಮೂಡಿಬಂದಿದೆ. ಶ್ರೀಮುರಳಿ ಅವರು ಸಾಹಸ ದೃಶ್ಯಗಳ ಮೂಲಕ ರಂಜಿಸಿದ್ದಾರೆ. ಫಸ್ಟ್​ ಹಾಫ್​ನಲ್ಲಿ ಎರಡು ಫೈಟಿಂಗ್​ ದೃಶ್ಯಗಳಿವೆ.
  2. ಫಸ್ಟ್​ ಹಾಫ್​ನಲ್ಲಿ ಬರುವ ಅನೇಕ ಸನ್ನಿವೇಶಗಳು ವಾರಾಣಸಿಯಲ್ಲಿ ನಡೆಯುತ್ತಿವೆ. ಇನ್ನುಳಿದ ದೃಶ್ಯಗಳು ಕರ್ನಾಟಕದ ಕನೆಕ್ಷನ್​ ಹೊಂದಿವೆ. ವಾರಾಣಸಿಯಿಂದ ಕರ್ನಾಟಕದತ್ತ ಕಥೆ ಸಾಗುತ್ತದೆ.
  3. ನಾಯಕ-ನಾಯಕಿಗೆ ಮೊದಲಾರ್ಧದಲ್ಲಿ ಯಾವುದೇ ಹಾಡುಗಳಿಲ್ಲ. ಇಂಟರ್​ವಲ್​ ಬಳಿಕವೇ ಅವರಿಬ್ಬರ ಲವ್​ ಸ್ಟೋರಿ ತೆರೆದುಕೊಳ್ಳಬೇಕಿದೆ.
  4. ಆ್ಯಕ್ಷನ್​ ಜೊತೆಗೆ ತಾಯಿ ಸೆಂಟಿಮೆಂಟ್​ ದೃಶ್ಯಗಳಿಗೆ ಫಸ್ಟ್​ ಹಾಫ್​ನಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ. ಅದರಿಂದ ಚಿತ್ರಕ್ಕೆ ಬೇರೊಂದು ಮೆರುಗು ಸಿಕ್ಕಿದೆ.
  5. ಕಥೆಯ ಮುಖ್ಯ ವಿಲನ್​ ಪಾತ್ರ ಮಧ್ಯಂತರದ ವೇಳೆಗೆ ಕಾಣಿಸಿಕೊಳ್ಳುತ್ತದೆ. ಇಂಟರ್​ವಲ್​ ಬಳಿಕ ಆ ಪಾತ್ರದ ಅಬ್ಬರನ್ನು ಪ್ರೇಕ್ಷಕರು ನಿರೀಕ್ಷಿಸಬಹುದು.
  6. ಶಿವರಾಜ್​ ಕೆ.ಆರ್​. ಪೇಟೆ ಮತ್ತು ಚಿಕ್ಕಣ್ಣ ಅವರ ಕಾಮಿಡಿಗೆ ಮೊದಲಾರ್ಧದಲ್ಲಿ ಅವಕಾಶ ಸಿಕ್ಕಿದೆ. ಈ ದೃಶ್ಯಗಳು ಪ್ರೇಕ್ಷಕರನ್ನು ನಗಿಸುತ್ತವೆ.
  7. ಜಗಪತಿ ಬಾಬು ಅವರು ಎಲ್ಲ ಸಿನಿಮಾದಲ್ಲಿ ವಿಲನ್​ ಆಗಿ ಕಾಣಿಸಿಕೊಳ್ಳುತ್ತಾರೆ. ‘ಮದಗಜ’ ಚಿತ್ರದಲ್ಲಿ ಅವರು ವಿಲನ್​ ಆಗಿದ್ದರೂ ಕೂಡ ಅವರ ಪಾತ್ರಕ್ಕೆ ಡಿಫರೆಂಟ್​ ಶೇಡ್​ ಇದೆ.
  8. ಹೀರೋ ಇಂಟ್ರಡಕ್ಷನ್​ ಸಾಂಗ್​ ಮತ್ತು ತಾಯಿ ಸಂಟೆಮೆಂಟ್​ ಗೀತೆಗಳು ಮೊದಲಾರ್ಧದಲ್ಲಿ ನೋಡಲು ಸಿಗುತ್ತವೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಕೆಲಸ ಎಂದಿನಂತೆ ಹೈಲೈಟ್​ ಆಗಿದೆ.

ಇದನ್ನೂ ಓದಿ: ವೇದಿಕೆಯಲ್ಲಿ ಅನುಶ್ರೀಗೆ ಶ್ರೀಮುರಳಿ ಪ್ರೀತಿಯ ಅಪ್ಪುಗೆ; ‘ಮದಗಜ’ ಹೀರೋ ಹೇಳಿದ್ದೇನು?

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ