AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ನನ್ನ ಜಗತ್ತನ್ನು ಬೆಳಗಿದಿರಿ’; ಮಹೇಶ್​ ಬಾಬು ಬರ್ತ್​​ಡೇಗೆ ನಮ್ರತಾ ಭಾವನಾತ್ಮಕ ವಿಶ್

ಮಹೇಶ್​ ಬಾಬು ವೃತ್ತಿಜೀವನಕ್ಕೆ ನಮ್ರತಾ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ಪತಿಗೆ ಭವನಾತ್ಮಕ ಪತ್ರ ಬರೆದಿದ್ದು, ‘ನೀವು ನನ್ನ ಜಗತ್ತನ್ನು ಬೆಳಗಿದಿರಿ’ ಎಂದಿದ್ದಾರೆ.

‘ನೀವು ನನ್ನ ಜಗತ್ತನ್ನು ಬೆಳಗಿದಿರಿ’; ಮಹೇಶ್​ ಬಾಬು ಬರ್ತ್​​ಡೇಗೆ ನಮ್ರತಾ ಭಾವನಾತ್ಮಕ ವಿಶ್
ನಮ್ರತಾ-ಮಹೇಶ್
TV9 Web
| Edited By: |

Updated on:Aug 09, 2022 | 6:04 PM

Share

ಮಹೇಶ್ ಬಾಬು (Mahesh Babu) ಅವರು ಇಂದು (ಆಗಸ್ಟ್ 9) 47ನೇ ವರ್ಷದ ಬರ್ತ್​​ಡೇ ಆಚರಿಸಿಕೊಂಡಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಹುಟ್ಟುಹಬ್ಬದ ಶುಭಾಶಯ ಬರುತ್ತಿದೆ. ಮಹೇಶ್ ಬಾಬು ಅವರು ಈ ವಯಸ್ಸಿನಲ್ಲೂ ಯಂಗ್​ ಆ್ಯಂಡ್ ಎನರ್ಜಿಟಿಕ್ ಆಗಿದ್ದಾರೆ. ವರ್ಷ ಕಳೆದಂತೆ ಅವರು ಇನ್ನೂ ಯಂಗ್ ಆಗುತ್ತಿದ್ದಾರೆ. ಮಹೇಶ್ ಬಾಬು ಸ್ಟಾರ್ ಹೀರೋ ಆದರೂ ಅವರಿಗೆ ಕುಟುಂಬವೇ ಜಗತ್ತು. ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಬರ್ತ್​ಡೇ ಅಂಗವಾಗಿ ಅವರ ಪತ್ನಿ ನಮ್ರತಾ ಅವರು ಭಾವನಾತ್ಮಕ ಪತ್ರ ಹಂಚಿಕೊಂಡಿದ್ದಾರೆ.

ನಮ್ರತಾ ಹಾಗೂ ಮಹೇಶ್ ಬಾಬು ಅವರದ್ದು ಪ್ರೇಮ ವಿವಾಹ. ಮಹೇಶ್ ಬಾಬು ಅವರಿಗೆ ನಮ್ರತಾ ಬಗ್ಗೆ ಸಾಕಷ್ಟು ಪ್ರೀತಿ ಇದೆ. ಮಹೇಶ್​ ಬಾಬು ಕೂಡ ನಮ್ರತಾ ಹಾಗೂ ಕುಟುಂಬ ಮೇಲೆ ಅಪಾರ ಪ್ರೀತಿ ತೋರುತ್ತಾರೆ. ಮಹೇಶ್​ ಬಾಬು ವೃತ್ತಿಜೀವನಕ್ಕೆ ನಮ್ರತಾ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ಪತಿಗೆ ಭವನಾತ್ಮಕ ಪತ್ರ ಬರೆದಿದ್ದು, ‘ನೀವು ನನ್ನ ಜಗತ್ತನ್ನು ಬೆಳಗಿದಿರಿ’ ಎಂದಿದ್ದಾರೆ.

‘ನೀವು ನನ್ನ ಜಗತ್ತನ್ನು ಬೆಳಗಿದಿರಿ. ಹ್ಯಾಪಿ ಬರ್ತ್​ಡೇ ಎಂಬಿ (ಮಹೇಶ್ ಬಾಬು). ಒಟ್ಟಾಗಿ ಕಳೆಯಲು ಇನ್ನಷ್ಟು ವರ್ಷಗಳು ಇವೆ. ಲವ್​ ಯೂ. ಈಗಲೂ, ಎಂದೆಂದಿಗೂ’ ಎಂದು ನಮ್ರತಾ ಬರೆದುಕೊಂಡಿದ್ದಾರೆ. ಅವರ ಪೋಸ್ಟ್​ಗೆ ನಾನಾ ಸೆಲೆಬ್ರಿಟಿಗಳು ಕಮೆಂಟ್ ಮಾಡಿ, ಮಹೇಶ್ ಬಾಬುಗೆ ಬರ್ತ್​​ಡೇ ವಿಶ್ ತಿಳಿಸಿದ್ದಾರೆ.

ಇದನ್ನೂ ಓದಿ
Image
ಸ್ವಿಜರ್​ಲ್ಯಾಂಡ್​ನಲ್ಲಿ ಕುಟುಂಬದ ಜತೆ ಸಮಯ ಕಳೆದ ಸಿತಾರಾ, ನಮ್ರತಾ; ಮಹೇಶ್ ಬಾಬು ಎಲ್ಲಿ ಎಂದ ಫ್ಯಾನ್ಸ್
Image
‘ಸಮಂತಾ ಆಂಟಿ ನನ್ನ ಬೆಸ್ಟ್​ ಫ್ರೆಂಡ್​’ ಎಂದ ಮಹೇಶ್​ ಬಾಬು ಪುತ್ರಿ ಸಿತಾರಾ; ವಿಡಿಯೋ ವೈರಲ್​
Image
ಹಿಂದಿ ಚಿತ್ರರಂಗದ ಎಂಟ್ರಿ ಬಗ್ಗೆ ಮಹೇಶ್​ ಬಾಬುಗೆ ಪದೇಪದೇ ಪ್ರಶ್ನೆ; ಅವರು ಕೊಟ್ಟ ಖಡಕ್ ಉತ್ತರ ಹೇಗಿತ್ತು ನೋಡಿ
Image
‘ಹೆಚ್ಚೆಚ್ಚು ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ’; ಮಗಳು ಸಿತಾರಾ ಬಗ್ಗೆ ಮಹೇಶ್​ ಬಾಬು ವಿಶೇಷ ಮಾತು

ಮಹೇಶ್ ಬಾಬು ಹಾಗೂ ನಮ್ರತಾ 2005, ಫೆಬ್ರವರಿ 10ರಂದು ಮದುವೆ ಆದರು. ಮದುವೆ ಬಳಿಕ ನಮ್ರತಾ ನಟನೆಯಿಂದ ಅಂತರ ಕಾಯ್ದುಕೊಂಡರು. ಈ ದಂಪತಿಗೆ ಸಿತಾರಾ ಹಾಗೂ ಗೌತಮ್ ಹೆಸರಿನ ಮಕ್ಕಳು ಇದ್ದಾರೆ.

ಇದನ್ನೂ ಓದಿ: ಅಪ್ಪನಿಗಾಗಿ ಪಾಪರಾಜಿ ಕೆಲಸ ಮಾಡಿದ ಮಹೇಶ್ ಬಾಬು ಮಗ ಗೌತಮ್

ಮಹೇಶ್ ಬಾಬು ಅವರು ಕುಟುಂಬದ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರು ಈ ವೇಳೆ ಹಾಜರಿ ಹಾಕಿದ್ದರು.  ಮಹೇಶ್ ಬಾಬು ತಮ್ಮ 28ನೇ ಚಿತ್ರಕ್ಕಾಗಿ ರೆಡಿ ಆಗಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕ ಅವರು ರಾಜಮೌಳಿ ಜತೆ ಕೈ ಜೋಡಿಸಲಿದ್ದಾರೆ.

Published On - 5:50 pm, Tue, 9 August 22

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ