Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಸೋಲುತ್ತದೆ ಎಂಬುದು ಗೊತ್ತಿದ್ದೂ ನಟಿಸಿದ್ದ ಬಾಲಕೃಷ್ಣ; ಚಿತ್ರ ದುರಂತವಾಯ್ತು

Nandamuri Balakrishna: ನಂದಮೂರಿ ಬಾಲಕೃಷ್ಣ ಟಾಲಿವುಡ್​ನ ಸ್ಟಾರ್ ನಟ. ವಯಸ್ಸು 60 ದಾಟಿದ್ದರೂ ಈಗಲೂ ಸಹ ಹವಾ ಕಡಿಮೆ ಆಗಿಲ್ಲ. ಬಾಲಕೃಷ್ಣ ಇತ್ತೀಚೆಗೆ ನಟಿಸಿದ ಎಲ್ಲ ಸಿನಿಮಾಗಳೂ ಸೂಪರ್ ಹಿಟ್. ಬಾಲಕೃಷ್ಣ ವೃತ್ತಿ ಜೀವನದಲ್ಲಿ ಫ್ಲಾಪ್​ಗಳ ಸಂಖ್ಯೆ ಬಹಳ ಕಡಿಮೆ. ಆದರೆ ಒಮ್ಮೆ, ಸಿನಿಮಾ ಫ್ಲಾಪ್ ಆಗುತ್ತದೆ ಎಂದು ಗೊತ್ತಿದ್ದರೂ ವಿಧಿ ಇಲ್ಲದೇ ನಟಿಸಬೇಕಾಗಿತ್ತಂತೆ ಆ ಬಗ್ಗೆ ಬಾಲಯ್ಯ ಮಾತನಾಡಿದ್ದಾರೆ.

ಸಿನಿಮಾ ಸೋಲುತ್ತದೆ ಎಂಬುದು ಗೊತ್ತಿದ್ದೂ ನಟಿಸಿದ್ದ ಬಾಲಕೃಷ್ಣ; ಚಿತ್ರ ದುರಂತವಾಯ್ತು
Nandamuri Balayya
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Mar 22, 2025 | 10:01 PM

ನಂದಮೂರಿ ಬಾಲಕೃಷ್ಣ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಈ ನಾಯಕನ ಸಿನಿಮಾಗಳು ಬಂದರೆ ಚಿತ್ರಮಂದಿರಗಳಲ್ಲಿನ ಸದ್ದು ಬೇರೆಯೇ ಆಗಿರುತ್ತದೆ. ಬಾಲಯ್ಯ ತಮ್ಮ ವೃತ್ತಿಜೀವನದುದ್ದಕ್ಕೂ ಅನೇಕ ಚಿತ್ರಗಳಲ್ಲಿ ಮತ್ತು ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಅದಕ್ಕಾಗಿಯೇ ಆಗಿನವರು ಮಾತ್ರವಲ್ಲ, ಇಂದಿನವರು ಕೂಡ ಬಾಲಯ್ಯ ಅವರನ್ನು ತುಂಬಾ ಪ್ರೀತಿಸುತ್ತಾರೆ. ಅವರು ಮಾಡಿದ ಒಂದು ಸಿನಿಮಾ ದುರಂತೆ ಕಂಡಿತ್ತು. ಸೋಲುತ್ತದೆ ಎಂದು ತಿಳಿದಿದ್ದರೂ ಕೂಡ ಬಾಲಯ್ಯ ಈ ಚಿತ್ರವನ್ನು ಮಾಡಿದ್ದರು.

ಬಾಲಕೃಷ್ಣ ಚಿತ್ರಗಳು ರಿಲೀಸ್ ಆಗಿ ಯುಶಸ್ಸು ಕಾಣುತ್ತಿವೆ. ಸಂಕ್ರಾಂತಿಗೆ ರಿಲೀಸ್ ಆದ ‘ಡಾಕು ಮಹಾರಾಜ್’ ಸೂಪರ್ ಹಿಟ್ ಆಯಿತು. ಈ ಸಿನಿಮಾದಲ್ಲಿ ಡಾಕು ಮಹಾರಾಜ್ ಪಾತ್ರ ಮಾಡಿ, ನೀರು ಇಲ್ಲದ ಹಳ್ಳಿ ಪರವಾಗಿ ಹೋರಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡರು.

ಸಂದರ್ಭದಲ್ಲಿ, ಬಾಲಯ್ಯ ಅವರಿಗೆ ಸಂಬಂಧಿಸಿದ ಒಂದು ಕುತೂಹಲಕಾರಿ ಸುದ್ದಿ ವೈರಲ್ ಆಗುತ್ತಿದೆ. ಹಾಗಾದರೆ ಅದು ಏನು? ಅವರು ಕಥೆ ಇಷ್ಟವಾದರೆ ಮಾತ್ರ ಸಿನಿಮಾ ಮಾಡುತ್ತಾರೆ. ಆದರೆ ಬಾಲಯ್ಯ ಅವರು ಸಿನಿಮಾ ಒಂದರ ಕಥೆ ಕೇಳಿದ್ದರು. ಅದು ಇಷ್ಟವಾಗಿಲ್ಲ. ಚಿತ್ರವು ದುರಂತವಾಗುತ್ತದೆ ಎಂದು ತಿಳಿದಿದ್ದರೂ ಸಹ, ಅವರು ಆ ಚಿತ್ರವನ್ನು ನಿರ್ಮಿಸಿ ಅನಿರೀಕ್ಷಿತ ಅನಾಹುತವನ್ನು ತಮ್ಮ ಖಾತೆಗೆ ತೆಗೆದುಕೊಂಡರು. ಹಾಗಾದರೆ ಅದು ಯಾವ ಸಿನಿಮಾ?

ಇದನ್ನೂ ಓದಿ:ಸಚಿವರೊಬ್ಬರು ಹನಿಟ್ರ್ಯಾಪ್ ಅಗಿರುವ ವಿಚಾರ ಗೊತ್ತಿಲ್ಲ, ಮಾಹಿತಿಯಿಲ್ಲದೆ ತೇಜೋವಧೆ ಮಾಡೋದು ಸರಿಯಲ್ಲ: ಬಾಲಕೃಷ್ಣ

‘ತಿರುಗಬದ್ದು ತೆಲುಗು ಬಿಡ್ಡ’ ಚಿತ್ರವನ್ನು ನಿರ್ದೇಶಕ ಕೋದಂಡರಾಮಿ ರೆಡ್ಡಿ ನಿರ್ದೇಶಿಸಿದ್ದರು. ಈ ಚಿತ್ರದ ಕಥೆ ಬಾಲಯ್ಯ ಅವರಿಗೆ ಇಷ್ಟ ಆಗಲೇ ಇಲ್ಲ. ಚಿತ್ರವೂ ದುರಂತವಾಗುತ್ತದೆ ಎಂದು ಭಾವಿಸಿ, ಚಿತ್ರವನ್ನು ಕೈಬಿಡಲು ನಿರ್ಧರಿಸಿದರು. ಆದರೆ ಹಿರಿಯ ನಟ ಎನ್‌ಟಿಆರ್ ಈ ಚಿತ್ರವನ್ನು ಮಾಡಲೇಬೇಕು ಎಂದು ಒತ್ತಾಯಿಸಿದ್ದರಿಂದ, ಅವರು ಚಿತ್ರದಲ್ಲಿ ನಟಿಸಲು ನಿರ್ಧರಿಸಿದರು. ಈ ಚಿತ್ರವನ್ನು ಅವರ ಸಹೋದರ ನಂದಮೂರಿ ಹರಿಕೃಷ್ಣ ಅವರೇ ನಿರ್ಮಾಣ ಮಾಡಿದರು. ಬಾಲಕೃಷ್ಣ ಈ ಚಿತ್ರದಲ್ಲಿ ನಟಿಸಲು ಇಷ್ಟವಿಲ್ಲದಿದ್ದರೂ ನಟಿಸಿದರು ಮತ್ತು ಅವರ ವೃತ್ತಿಜೀವನದ ಅತಿದೊಡ್ಡ ದುರಂತವನ್ನು ಅನುಭವಿಸಿದರು. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ