AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭುದೇವ ಮದುವೆ ಆಗಲು ನಯನತಾರಾ ಹೊರಟಾಗ; ಕೋರ್ಟ್ ಮೆಟ್ಟಿಲೇರಿತ್ತು ಪ್ರಕರಣ

ಲತಾ ಅವರನ್ನು ಮದುವೆ ಆದ ಹೊರತಾಗಿಯೂ ನಯನತಾರಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಪ್ರಭುದೇವ, ಈ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಅಷ್ಟಕ್ಕೂ ಪ್ರಭುದೇವ ಜತೆ ನಯನತಾರಾ ಬ್ರೇಕಪ್​ ಮಾಡಿಕೊಂಡಿದ್ದು ಯಾಕೆ? ಇಲ್ಲಿದೆ ವಿವರ.

ಪ್ರಭುದೇವ ಮದುವೆ ಆಗಲು ನಯನತಾರಾ ಹೊರಟಾಗ; ಕೋರ್ಟ್ ಮೆಟ್ಟಿಲೇರಿತ್ತು ಪ್ರಕರಣ
ಪ್ರಭುದೇವ-ನಯನತಾರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 18, 2024 | 8:08 AM

ಜನಪ್ರಿಯ ನಟಿ ನಯನತಾರಾ ಅವರು ನಿರ್ದೇಶಕ ವಿಘ್ನೇಶ್​ ಶಿವನ್ ಅವರನ್ನು ವಿವಾಹ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ಅವಳಿ ಮಕ್ಕಳು ಕೂಡ ಇದ್ದಾರೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೊಂದಿದ್ದಾರೆ ಈ ದಂಪತಿ. ಇವರ ಲವ್ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಪತ್ನಿಯ ಜೊತೆ ಹಾಯಾಗಿ ಸಂಸಾರ ನಡೆಸುತ್ತಿರುವಾಗಲೇ ಲವ್​ ಅಫೇರ್ ಇಟ್ಟುಕೊಂಡ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಅದೇ ರೀತಿ ಮದುವೆ ಆದವರ ಜೊತೆ ಸಂಬಂಧ ಹೊಂದಿದ ನಟಿಯರೂ ಇದ್ದಾರೆ. ಈ ಸಾಲಿನಲ್ಲಿ ಪ್ರಭುದೇವ ಹಾಗೂ ನಯನತಾರಾ ಇದ್ದಾರೆ.

1995ರಲ್ಲಿ ಪ್ರಭುದೇವ ಅವರು ರಾಮಲತಾ ಅವರನ್ನು ಮದುವೆ ಆದರು. ಈ ದಂಪತಿಗೆ ಓರ್ವ ಮಗ ಇದ್ದ. ಅವನಿಗೆ 13 ವರ್ಷ ಆಗಿತ್ತು. ಆಗಲೇ ಅವನು ಕ್ಯಾನ್ಸರ್​ನಿಂದ ನಿಧನ ಹೊಂದಿದ. ಇದು ಪ್ರಭುದೇವ ಅವರಿಗೆ ಭಾವನಾತ್ಮಕವಾಗಿ ಸಾಕಷ್ಟು ಕಾಡಿತ್ತು. ಲತಾ ಅವರನ್ನು ಮದುವೆ ಆದ ಹೊರತಾಗಿಯೂ ನಯನತಾರಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಪ್ರಭುದೇವ, ಈ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಅಷ್ಟಕ್ಕೂ ಪ್ರಭುದೇವ ಜತೆ ನಯನತಾರಾ ಬ್ರೇಕಪ್​ ಮಾಡಿಕೊಂಡಿದ್ದು ಯಾಕೆ? ಇಲ್ಲಿದೆ ವಿವರ.

ಬಹುಭಾಷೆಯಲ್ಲಿ ಪ್ರಭುದೇವ ಅವರು ಫೇಮಸ್​ ಆಗಿದ್ದಾರೆ. ಅದ್ಭುತವಾದ ಡ್ಯಾನ್ಸ್​ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ. ನಟನಾಗಿ, ನಿರ್ದೇಶಕನಾಗಿ, ಕೊರಿಯೋಗ್ರಾಫರ್​ ಆಗಿಯೂ ಅವರು ಬೇಡಿಕೆ ಹೊಂದಿದ್ದಾರೆ. ಅವರು ಇತ್ತೀಚೆಗೆ ‘ಕರಟಕ ಧಮನಕ’ ಸಿನಿಮಾದಲ್ಲಿ ನಟಿಸಿದ್ದರು. ಪ್ರಭುದೇವ ಹಾಗೂ ನಯನತಾರಾ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಡಿದ್ದರು.

2009ರಲ್ಲಿ ನಡೆದ ಘಟನೆ ಇದು. ನಯನತಾರಾ ಮತ್ತು ಪ್ರಭುದೇವ ನಡುವೆ ಏನೋ ನಡೆಯುತ್ತಿದೆ ಎಂಬ ಬಗ್ಗೆ ವರದಿ ಆಗಿತ್ತು. ಆದರೆ ಅನೇಕ ವೈಯಕ್ತಿಕ ಕಾರಣಗಳಿಂದ ತಮ್ಮಿಬ್ಬರ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ಇವರು ಮನಸ್ಸು ಮಾಡಿಲ್ಲ. ಪ್ರಭುದೇವ ಅವರಿಗೆ ಅದಾಗಲೇ ಲತಾ ಜೊತೆ ಮದುವೆ ಆಗಿತ್ತು. ನಯನತಾರಾ ಜೊತೆ ಡೇಟಿಂಗ್ ನಡೆಸುತ್ತಿರುವಾಗ ಪತ್ನಿಗೆ ಇನ್ನೂ ವಿಚ್ಛೇದನ ನೀಡಿಲ್ಲದ ಕಾರಣ ಪ್ರಭುದೇವ ಅವರ ಈ ಪ್ರೇಮ ಪ್ರಸಂಗ ಸಾಕಷ್ಟು ಸುದ್ದಿ ಆಯಿತು.

ಪ್ರಭುದೇವ ಹಾಗೂ ನಯನತಾರಾ ಪ್ರೀತಿ ವಿಚಾರ ಮದುವೆ ಹಂತಕ್ಕೆ ಹೋಗಿತ್ತು. ಆದರೆ, ಇದಕ್ಕೆ ಲತಾ ಅವಕಾಶ ಕೊಡಲೇ ಇಲ್ಲ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ರಾಮಲತಾ ಹಾಗೂ ಪ್ರಭುದೇವ ಮತ್ತೆ ಒಂದಾಗುವಂತೆ ಜಡ್ಜ್​ ಸೂಚಿಸಿದರು. ನಯನತಾರಾ ಅವರಿಂದ ದೂರವೇ ಇರಲು ಪ್ರಭುದೇವ ಅವರಿಗೆ ಸೂಚನೆ ನೀಡಾಯಿತು. ಹೀಗಿರುವಾಗಲೇ ನಯನತಾರಾ ಹಾಗೂ ಪ್ರಭುದೇವ ಮುದುವೆ ಆದರೆ ತಾವು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಲತಾ ಬೆದರಿಕೆ ಹಾಕಿದರು.

ಇದನ್ನೂ ಓದಿ: ನೀಚ ಧನುಶ್​ ನಿಜ ಬಣ್ಣ ಬಯಲು ಮಾಡಿದ ನಯನತಾರಾ

ಪ್ರಭುದೇವ ಅವರಿಂದ ನಯನತಾರಾ ದೂರ ಆದರು. ಇದೇ ವೇಳೆ ಪ್ರಭುದೇವ ಹಾಗೂ ರಾಮಲತಾ ವಿಚ್ಛೇದನ ಪಡೆದರು. ಈ ಘಟನೆಯಿಂದ ನಯನತಾರಾ ಸಾಕಷ್ಟು ತೊಂದರೆ ಅನುಭವಿಸಿದರು. ಸದ್ಯ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:08 am, Mon, 18 November 24

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ