AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜವಾನ್’ ಸಿನಿಮಾ ಒಪ್ಪಿಕೊಳ್ಳೋಕೆ ಅಸಲಿ ಕಾರಣ ಕೊಟ್ಟ ನಯನತಾರಾ

‘ನಾನು ಜವಾನ್ ರೀತಿಯ ಸಿನಮಾಗಾಗಿ ಹುಡುಕಾಟ ನಡೆಸುತ್ತಿದ್ದೆ. ದೊಡ್ಡ ಪಾತ್ರವರ್ಗ ಇರಬೇಕು, ಜೊತೆಗೆ ಸಿನಿಮಾ ಕೂಡ ದೊಡ್ಡ ಸ್ಕೇಲ್​ನಲ್ಲಿ ಇರಬೇಕು. ನನ್ನ ಪಾತ್ರಕ್ಕೂ ತೂಕ ಇರಬೇಕು ಎಂದು ಅಂದುಕೊಂಡಿದ್ದೆ ಎಂದಿದ್ದಾರೆ ನಯನತಾರಾ. ಅದೇ ರೀತಿಯಲ್ಲಿ ಸಿನಿಮಾ ಇತ್ತು

‘ಜವಾನ್’ ಸಿನಿಮಾ ಒಪ್ಪಿಕೊಳ್ಳೋಕೆ ಅಸಲಿ ಕಾರಣ ಕೊಟ್ಟ ನಯನತಾರಾ
ನಯನತಾರಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 09, 2024 | 12:03 PM

Share

‘ಜವಾನ್’ ಸಿನಿಮಾ (Jawan Movie) ಸೂಪರ್ ಹಿಟ್ ಆಯಿತು. ಸಿನಿಮಾ ರಿಲೀಸ್ ಆಗಿ ವರ್ಷ ಕಳೆಯುತ್ತಾ ಬಂದರೂ ಚಿತ್ರದ ಬಗ್ಗೆ ಇನ್ನೂ ಮಾತು ನಿಂತಿಲ್ಲ. ಈ ಚಿತ್ರದಲ್ಲಿ ನಯನತಾರಾ ಅವರು ನಾಯಕಿ ಆಗಿ ಮಿಂಚಿದ್ದರು. ಕೆಲವರು ಈ ಪಾತ್ರವನ್ನು ಟೀಕೆ ಮಾಡಿದ್ದರು. ಅವರ ಪಾತ್ರಕ್ಕಿಂತ ದೀಪಿಕಾ ಪಡುಕೋಣೆ ಪಾತ್ರವೇ ಹೆಚ್ಚು ಹೈಲೈಟ್ ಆಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ನಯನತಾರಾ ಅವರು ಅಪ್ಸೆಟ್ ಆಗಿದ್ದಾರೆ ಎಂದು ಕೂಡ ವರದಿ ಆಗಿತ್ತು. ಆದರೆ, ಇದೆಲ್ಲ ಸುಳ್ಳು ಅನ್ನೋದು ಸ್ಪಷ್ಟವಾಗಿದೆ. ನಯನತಾರಾ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

‘ಜವಾನ್’ ಸಿನಿಮಾ ವಿಶೇಷವಾಗಿತ್ತು. ಇದಕ್ಕೆ ಕಾರಣ ಆಗಿದ್ದು ಅಟ್ಲಿ ನಿರ್ದೇಶನ. ಶಾರುಖ್ ಖಾನ್ ಅವರು ಹಲವು ಶೇಡ್​ಗಳಲ್ಲಿ ಗಮನ ಸೆಳೆದಿದ್ದರು. ಶಾರುಖ್ ಖಾನ್, ನಯನತಾರಾ ಜೊತೆ ದೀಪಿಕಾ ಪಡುಕೋಣೆ, ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಸುನಿಲ್ ಗ್ರೋವರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದರು. ನಯನತಾರಾ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ಬಗ್ಗೆ ನಯನತಾರಾ ಮಾತನಾಡಿದ್ದಾರೆ.

‘ನಾನು ಜವಾನ್ ರೀತಿಯ ಸಿನಮಾಗಾಗಿ ಹುಡುಕಾಟ ನಡೆಸುತ್ತಿದ್ದೆ. ದೊಡ್ಡ ಪಾತ್ರವರ್ಗ ಇರಬೇಕು, ಜೊತೆಗೆ ಸಿನಿಮಾ ಕೂಡ ದೊಡ್ಡ ಸ್ಕೇಲ್​ನಲ್ಲಿ ಇರಬೇಕು. ನನ್ನ ಪಾತ್ರಕ್ಕೂ ತೂಕ ಇರಬೇಕು ಎಂದು ಅಂದುಕೊಂಡಿದ್ದೆ ಎಂದಿದ್ದಾರೆ ನಯನತಾರಾ. ಅದೇ ರೀತಿಯಲ್ಲಿ ಸಿನಿಮಾ ಇತ್ತು. ಶಾರುಖ್ ಖಾನ್ ಅವರು ‘ಜವಾನ್’ ಮಾಡಲು ಮುಖ್ಯ ಕಾರಣ ಎಂದಿದ್ದಾರೆ ನಯನತಾರಾ. ಶಾರುಖ್ ಜೊತೆ ನಟಿಸಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ. ನಯನತಾರಾಗೂ ಅಂಥದ್ದೊಂದು ಆಸೆ ಇತ್ತು.

‘ಯಾರು ಶಾರುಖ್ ಖಾನ್ ಅವರ ಅಭಿಮಾನಿ ಅಲ್ಲ ಎಂದು ಹೇಳಿ. ಅವರ ಸಿನಿಮಾಗಳನ್ನು ನೋಡಿ ಬೆಳೆದವರು ನಾವು. ಅವರು ಮಹಿಳೆಯರನ್ನು ಸಾಕಷ್ಟು ಗೌರವಿಸುತ್ತಾರೆ. ಜವಾನ್ ಸಿನಿಮಾ ದೊಡ್ಡ ಬದಲಾವಣೆ ತರುತ್ತದೆ ಎಂದು ನನಗೆ ಗೊತ್ತಿತ್ತು. ಇಷ್ಟು ವರ್ಷ ಸಿನಿಮಾಗಳಲ್ಲಿ ಕೆಲಸ ಮಾಡಿದ ನನಗೆ ಯಾವ ಸಿನಿಮಾ ಗೆಲುವು ಕಾಣುತ್ತದೆ, ಯಾವುದು ಕಾಣುವುದಿಲ್ಲ ಅನ್ನೋದು ಗೊತ್ತಾಗುತ್ತದೆ ಎಂದಿದ್ದಾರೆ ಅವರು.

ಇದನ್ನೂ ಓದಿ: ಶಾಕಿಂಗ್ ಆಗಿತ್ತು ಪ್ರಭುದೇವ-ನಯನತಾರಾ ಲವ್ ಅಫೇರ್ ವಿಚಾರ; ಏನಿದು ಪ್ರಕರಣ?

ನಯನತಾರಾ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ಜವಾನ್’ ಸಿನಿಮಾ ಗೆದ್ದ ಬಳಿಕ ಅವರು ಕೇವಲ ದೊಡ್ಡ ಸ್ಟಾರ್ ಸಿನಿಮಾನೇ ಬೇಕು ಎಂದು ಕುಳಿತಿಲ್ಲ. ಸಣ್ಣ ಸಿನಿಮಾ, ಯುವ ನಿರ್ದೇಶಕ ಸಿನಿಮಾಗಳನ್ನೂ ಒಪ್ಪಿ ಬಣ್ಣ ಹಚ್ಚುತ್ತಿದ್ದಾರೆ. ಅವರು ‘ಮಣ್ಣಂಗಟ್ಟಿ: ಸಿನ್ಸ್ 1960’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಡ್ಯೂಡ್ ವಿಕ್ಕಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಿದ್ದಾರ್ಥ್, ತ್ರಿಶಾ, ಆರ್​ ಮಾಧವನ್ ಮೊದಲಾದವರು ನಟಿಸುತ್ತಿದ್ದಾರೆ. ನಿರ್ಮಾಪಕ ಶಶಿಕಾಂತ್ ಅವರ ಮೊದಲ ನಿರ್ದೇಶನದ ಸಿನಿಮಾದಲ್ಲೂ ನಯನತಾರಾ ಅವರು ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರ ಈ ವರ್ಷ ರಿಲೀಸ್ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ