ಹೆಣ್ಮಕ್ಳ ಬಗ್ಗೆ ಬೇಕಾಬಿಟ್ಟಿ ಮಾತನಾಡಬೇಡಿ, ನಿಮ್ಮ ಚಪ್ಪಲ್ಲಿಯಲ್ಲಿ ನೀವೇ ಹೊಡ್ಕೋಳಿ; ಚಕ್ರವರ್ತಿ ವಿರುದ್ಧ ತಿರುಗಿಬಿದ್ದ ನಿಧಿ

|

Updated on: Apr 22, 2021 | 10:36 PM

Chakravarthy Chandrachud: ಟಾಸ್ಕ್​​ನಲ್ಲಿ ರಾಜೀವ್​ ಪಾಲ್ಗೊಂಡ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಅಸಮಧಾನ ಹೊರ ಹಾಕಿದರು.

ಹೆಣ್ಮಕ್ಳ ಬಗ್ಗೆ ಬೇಕಾಬಿಟ್ಟಿ ಮಾತನಾಡಬೇಡಿ, ನಿಮ್ಮ ಚಪ್ಪಲ್ಲಿಯಲ್ಲಿ ನೀವೇ ಹೊಡ್ಕೋಳಿ; ಚಕ್ರವರ್ತಿ ವಿರುದ್ಧ ತಿರುಗಿಬಿದ್ದ ನಿಧಿ
ನಿಧಿ ಸುಬ್ಬಯ್ಯ
Follow us on

ಮನೆಯಲ್ಲಿ ಸ್ಪರ್ಧಿಗಳು ಬಳಕೆ ಮಾಡುವ ವಸ್ತುಗಳ ಮೌಲ್ಯವನ್ನು ತಿಳಿಸುವ ಉದ್ದೇಶದಿಂದ ಎಲ್ಲಾ ಸೌಲಭ್ಯಗಳನ್ನು ಬಿಗ್​ ಬಾಸ್​ ಹಿಂದಕ್ಕೆ ಪಡೆದಿದೆ. ಇದರಿಂದ ಮನೆಯ ಸದಸ್ಯರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಶುಭಾ ಪೂಂಜಾ ಸೇರಿದಂತೆ ಅನೇಕರು ಬಿಗ್​ ಬಾಸ್​ಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದರ ಜತೆಗೆ ಅವರಿಗೆ ಮನೆಯಲ್ಲಿರುವ ವಸ್ತುಗಳ ಮೌಲ್ಯ ನಿಧಾನವಾಗಿ ತಿಳಿಯುತ್ತಿದೆ. ಈ ಮಧ್ಯೆ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಜಗಳವೇ ನಡೆದುಹೋಗಿದೆ.

ಬಿಗ್​ ಬಾಸ್​ ಮನೆಯಲ್ಲಿ ನೀಡುವ ಟಾಸ್ಕ್​ ಗೆಲ್ಲಬೇಕು ಎನ್ನುವ ಕಾರಣಕ್ಕೆ ದೈಹಿಕವಾಗಿ ಬಲಾಢ್ಯರಾದ ಮಂಜು ಪಾವಗಡ, ರಾಜೀವ್​ ಹಾಗೂ ಅರವಿಂದ್​ ಟಾಸ್ಕ್​ನಲ್ಲಿ ಪಾಲ್ಗೊಂಡಿದ್ದಾರೆ. ಐದು ಟಾಸ್ಕ್​ಗಳ ಪೈಕಿ ಮೂರು ಟಾಸ್ಕ್​ನಲ್ಲಿ ಇವರೇ ಆಟವಾಡಿದ್ದಾರೆ. ಇದನ್ನು ಬಿಗ್​ ಬಾಸ್​ ಗಮನಿಸಿದ್ದಾರೆ. ಅಲ್ಲದೆ, ಈ ಮೂವರಿಗೆ ಮಾತ್ರ ಗ್ಯಾಸ್​ ಸೌಲಭ್ಯ ಸಿಗುತ್ತಿದೆ. ಈ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ಆಗುತ್ತಿದೆ.

ಟಾಸ್ಕ್​​ನಲ್ಲಿ ರಾಜೀವ್​ ಪಾಲ್ಗೊಂಡ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಅಸಮಧಾನ ಹೊರ ಹಾಕಿದರು. ಈ ಬಗ್ಗೆ ಮಾತನಾಡಿದ ಚಕ್ರವರ್ತಿ, ಬೆಳಗ್ಗೆ ನಾನು ಟಾಸ್ಕ್​ನಲ್ಲಿ ಪಾಲ್ಗೊಳ್ಳುತ್ತೇನೆ ಎಂದೆ. ಆಗ ನಿಧಿ ನಾನು ಬೇಡ ರಾಜೀವ್​ ಪಾಲ್ಗೊಳ್ಳಲಿ ಎಂದರು. ಈ ವಿಚಾರಕ್ಕೆ ನನಗೆ ಬೇಸರ ಆಯ್ತು ಎಂದರು. ಆಗ ನಿಧಿ ಸಿಟ್ಟಾದರು.

ನಾನು ಹಾಗೆ ಹೇಳಲೇ ಇಲ್ಲ. ಹೆಣ್ಮಕ್ಳ ಬಗ್ಗೆ ಬೇಕಾಬಿಟ್ಟಿ ಮಾತಾಡಬೇಡಿ ಎಂದು ಸಿಟ್ಟಾದರು. ಈ ವಿಚಾರಕ್ಕೆ ಸಂಬಂಧಿಸಿ ಪ್ರಶಾಂತ್​ ಕೂಡ ಸಿಟ್ಟಾದರು. ನಾನು ಹೇಳಿದ್ದು ಸುಳ್ಳು ಎನ್ನುವುದಾದರೆ ನನ್ನ ಚಪ್ಪಲ್ಲಿ ಕೊಡ್ತೇನೆ. ಹೊಡೆದುಬಿಡಿ ಎಂದರು. ನೀವು ಹೇಳಿದ್ದು ಸಂಪೂರ್ಣ ಸುಳ್ಳು. ನಿಮ್ಮ ಚಪ್ಪಲ್ಲಿಯಲ್ಲಿ ನೀವೇ ಹೊಡೆದುಕೊಳ್ಳಿ ಎಂದು ನಿಧಿ ಸಿಟ್ಟಾದರು. ಈ ವಿಚಾರದ ಬಗ್ಗೆ ಮನೆಯಲ್ಲಿ ದೊಡ್ಡ ಜಗಳವೇ ನಡೆದುಹೋಗಿದೆ.

ಇದನ್ನೂ ಓದಿ: Kichcha Sudeep Salary: ಬಿಗ್​ ಬಾಸ್​ ಸೀಸನ್​ 8ಗೆ ಕಿಚ್ಚ ಸುದೀಪ್​ ಪಡೆದ ಸಂಭಾವನೆ ಎಷ್ಟು?

ಮಂಜು-ಅರವಿಂದ್​ ಸ್ಟ್ರಾಂಗ್​​ ಎಂದು ಒಪ್ಪಿಕೊಂಡ ಬಿಗ್​ಬಾಸ್​ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ