AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರುತೆರೆ ನಟನ ಅನೈತಿಕ ಸಂಬಂಧ ಬಯಲು ಮಾಡಿದ ಹೆಂಡತಿ; ಸುದ್ದಿಗೋಷ್ಠಿಯಲ್ಲೇ ಛೀಮಾರಿ

ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಿಶಾ, ಈ ರೀತಿ ವಿಚಾರಕ್ಕೆ ಮಾಧ್ಯಮದವರನ್ನು ಎದುರುಗೊಳ್ಳುತ್ತಿರುವುದಕ್ಕೆ ಮುಜುಗರವಾಗುತ್ತಿದೆ ಎಂದಿದ್ದಾರೆ.

ಕಿರುತೆರೆ ನಟನ ಅನೈತಿಕ ಸಂಬಂಧ ಬಯಲು ಮಾಡಿದ ಹೆಂಡತಿ; ಸುದ್ದಿಗೋಷ್ಠಿಯಲ್ಲೇ ಛೀಮಾರಿ
ಕಿರುತೆರೆ ನಟನ ಅನೈತಿಕ ಸಂಬಂಧ ಬಯಲು ಮಾಡಿದ ಹೆಂಡತಿ; ಸುದ್ದಿಗೋಷ್ಠಿಯಲ್ಲೇ ಛೀಮಾರಿ
ರಾಜೇಶ್ ದುಗ್ಗುಮನೆ
| Edited By: |

Updated on: Jun 02, 2021 | 8:14 AM

Share

ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ನಟ ಕರಣ್​ ಮೆಹ್ರಾ ಕೌಟುಂಬಿಕ ಜಗಳ ಪೊಲೀಸ್​ ಠಾಣೆ ಮಟ್ಟಿಲೇರಿದೆ. ಪತ್ನಿ ನಿಶಾ ರಾವಲ್​ ನೀಡಿದ ದೂರಿನ ಆಧಾರದ ಮೇಲೆ ಕರಣ್​ ಅವರನ್ನು ಬಂಧಿಸಲಾಗಿತ್ತು. ಜಾಮೀನು ಪಡೆದು ಹೊರ ಬಂದಿದ್ದ ಕರಣ್​ ತನ್ನ ವಿರುದ್ಧ ಹೆಂಡತಿ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನುವ ಆರೋಪ ಮಾಡಿದ್ದರು. ಇದರಲ್ಲಿ ತಪ್ಪು ಯಾರದ್ದು ಎನ್ನುವ ಚರ್ಚೆ ನಡೆಯುತ್ತಿರುವಾಗಲೇ ಪತಿ ಬಗ್ಗೆ ನಿಶಾ ಗಂಭೀರ ಆರೋಪ ಮಾಡಿದ್ದು, ಗಂಡನ ಅನೈತಿಕ ಸಂಬಂಧ ಬಿಚ್ಚಿಟ್ಟಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಿಶಾ, ‘ಈ ರೀತಿಯ ವಿಚಾರಕ್ಕೆ ಮಾಧ್ಯಮದವರನ್ನು ಎದುರುಗೊಳ್ಳುತ್ತಿರುವುದಕ್ಕೆ ಮುಜುಗರವಾಗುತ್ತಿದೆ. ನಾವಿಬ್ಬರೂ 5 ವರ್ಷ ಪ್ರೀತಿಸುತ್ತಿದ್ದೆವು. ಈಗ ಮದುವೆ ಆಗಿ 9 ವರ್ಷ ಆಗಿದೆ. ಈ ಸಮಯದಲ್ಲಿ ಸಾಕಷ್ಟು ವಿಚಾರಗಳು ನಡೆದಿವೆ. ಒಂದು ತಿಂಗಳ ಹಿಂದೆ ಕರಣ್​ ಚಂಡೀಗಢದಲ್ಲಿದ್ದರು. ಕರಣ್​ ಅನೈತಿಕ ಸಂಬಂಧ ಇಟ್ಟುಕೊಂಡ ವಿಚಾರ ಆಗ ಬಯಲಾಗಿತ್ತು. ನಮ್ಮ ವಿಚ್ಛೇದನದ ಬಗ್ಗೆ ಮಾತುಕತೆ ಆರಂಭವಾಗಿದ್ದು ಆಗಲೇ. ಸಂಬಂಧ ಹೊಂದಿರುವ ಬಗ್ಗೆ ಆತನೂ ಒಪ್ಪಿಕೊಂಡಿದ್ದಾನೆ’ ಎಂದು ಮಾಧ್ಯಮಕ್ಕೆ ನಿಶಾ ಹೇಳಿದ್ದಾರೆ.

‘ಆ ಮಹಿಳೆ ದೆಹಲಿಯವಳು. ಇಬ್ಬರ ನಡುವೆ ಪ್ರೀತಿ ಹುಟ್ಟಿದೆಯಂತೆ. ಇಬ್ಬರೂ ದೈಹಿಕವಾಗಿಯೂ ಸಂಬಂಧ ಇಟ್ಟುಕೊಂಡಿದ್ದಾರೆ. ಕರಣ್​ ಶೂಟಿಂಗ್​ಗಾಗಿ ಚಂಡೀಗಢಕ್ಕೆ ತೆರಳಿದಾಗೆಲ್ಲ ಆಕೆ ಅಲ್ಲಿಗೆ ಬರುತ್ತಾಳೆ. ಹೀಗೆ ಇಬ್ಬರ ಸಂಬಂಧ ಆರಂಭವಾಗಿದೆ’ ಎಂದು ನಿಶಾ ನೇರವಾಗಿಯೇ ಹೇಳಿದ್ದಾರೆ.

‘ಕರಣ್​ ಮತ್ತೊಂದು ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಗೊತ್ತಾದಾಗ ನಾನು ಸಿಟ್ಟಾಗಿಲ್ಲ. ಕೂಲ್​ ಆಗಿಯೇ ಆತನ ಬಳಿ ಪ್ರಶ್ನೆ ಮಾಡಿದೆ. ಆಗ ನಿಜವಾದ ವಿಚಾರವನ್ನು ಆತ ಹೇಳಿದ. ಆತ ಕ್ಷಮೆ ಕೇಳಿ ಮೊದಲಿನಂತಾದರೆ ನಾನು ಕ್ಷಮಿಸಲು ಸಿದ್ಧಳಿದ್ದೆ. ಆದರೆ, ಆತ ಬದಲಾಗಲಿಲ್ಲ. ಆ್ಯಟಿಟ್ಯೂಡ್​ ತೋರಿಸಿದ. ನನ್ನದೇನು ತಪ್ಪು ಎಂಬಂತೆ ಮಾತನಾಡಿದ. 14 ವರ್ಷಗಳಲ್ಲಿ ಕರಣ್​ ಈ ರೀತಿ ನಡೆದುಕೊಂಡಿದ್ದು ಇದೇ ಮೊದಲೇನಲ್ಲ ಎಂದಿದ್ದಾರೆ’ ಅವರು.

‘ಕರಣ್​ ನನಗೆ ಸದಾ ಹೊಡೆಯುತ್ತಾನೆ. ನಾನು ಇಷ್ಟು ವರ್ಷ ಎಲ್ಲವನ್ನೂ ತಡೆದುಕೊಂಡಿದ್ದೆ. ಅದು ಕರಣ್​ ಮೇಲಿನ ಪ್ರೀತಿಗಾಗಿ. ಆದರೆ, ಈಗ ಏನೂ ಉಳಿದಿಲ್ಲ ಎಂದು ನಿಶಾ ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: Karan Mehra Arrested: ಪತ್ನಿಗೆ ಥಳಿಸಿದ ಖ್ಯಾತ ಕಿರುತೆರೆ ನಟ ಕರಣ್​ ಮೆಹ್ರಾ; ಪೊಲೀಸ್​ ಠಾಣೆ ಮೆಟ್ಟಿಲೇರಿ ಹೇಳಿದ ಕಥೆಯೇ ಬೇರೆ

Follow Us
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ