AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರುತೆರೆ ನಟನ ಅನೈತಿಕ ಸಂಬಂಧ ಬಯಲು ಮಾಡಿದ ಹೆಂಡತಿ; ಸುದ್ದಿಗೋಷ್ಠಿಯಲ್ಲೇ ಛೀಮಾರಿ

ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಿಶಾ, ಈ ರೀತಿ ವಿಚಾರಕ್ಕೆ ಮಾಧ್ಯಮದವರನ್ನು ಎದುರುಗೊಳ್ಳುತ್ತಿರುವುದಕ್ಕೆ ಮುಜುಗರವಾಗುತ್ತಿದೆ ಎಂದಿದ್ದಾರೆ.

ಕಿರುತೆರೆ ನಟನ ಅನೈತಿಕ ಸಂಬಂಧ ಬಯಲು ಮಾಡಿದ ಹೆಂಡತಿ; ಸುದ್ದಿಗೋಷ್ಠಿಯಲ್ಲೇ ಛೀಮಾರಿ
ಕಿರುತೆರೆ ನಟನ ಅನೈತಿಕ ಸಂಬಂಧ ಬಯಲು ಮಾಡಿದ ಹೆಂಡತಿ; ಸುದ್ದಿಗೋಷ್ಠಿಯಲ್ಲೇ ಛೀಮಾರಿ
Follow us
ರಾಜೇಶ್ ದುಗ್ಗುಮನೆ
| Updated By: Skanda

Updated on: Jun 02, 2021 | 8:14 AM

ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ನಟ ಕರಣ್​ ಮೆಹ್ರಾ ಕೌಟುಂಬಿಕ ಜಗಳ ಪೊಲೀಸ್​ ಠಾಣೆ ಮಟ್ಟಿಲೇರಿದೆ. ಪತ್ನಿ ನಿಶಾ ರಾವಲ್​ ನೀಡಿದ ದೂರಿನ ಆಧಾರದ ಮೇಲೆ ಕರಣ್​ ಅವರನ್ನು ಬಂಧಿಸಲಾಗಿತ್ತು. ಜಾಮೀನು ಪಡೆದು ಹೊರ ಬಂದಿದ್ದ ಕರಣ್​ ತನ್ನ ವಿರುದ್ಧ ಹೆಂಡತಿ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನುವ ಆರೋಪ ಮಾಡಿದ್ದರು. ಇದರಲ್ಲಿ ತಪ್ಪು ಯಾರದ್ದು ಎನ್ನುವ ಚರ್ಚೆ ನಡೆಯುತ್ತಿರುವಾಗಲೇ ಪತಿ ಬಗ್ಗೆ ನಿಶಾ ಗಂಭೀರ ಆರೋಪ ಮಾಡಿದ್ದು, ಗಂಡನ ಅನೈತಿಕ ಸಂಬಂಧ ಬಿಚ್ಚಿಟ್ಟಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಿಶಾ, ‘ಈ ರೀತಿಯ ವಿಚಾರಕ್ಕೆ ಮಾಧ್ಯಮದವರನ್ನು ಎದುರುಗೊಳ್ಳುತ್ತಿರುವುದಕ್ಕೆ ಮುಜುಗರವಾಗುತ್ತಿದೆ. ನಾವಿಬ್ಬರೂ 5 ವರ್ಷ ಪ್ರೀತಿಸುತ್ತಿದ್ದೆವು. ಈಗ ಮದುವೆ ಆಗಿ 9 ವರ್ಷ ಆಗಿದೆ. ಈ ಸಮಯದಲ್ಲಿ ಸಾಕಷ್ಟು ವಿಚಾರಗಳು ನಡೆದಿವೆ. ಒಂದು ತಿಂಗಳ ಹಿಂದೆ ಕರಣ್​ ಚಂಡೀಗಢದಲ್ಲಿದ್ದರು. ಕರಣ್​ ಅನೈತಿಕ ಸಂಬಂಧ ಇಟ್ಟುಕೊಂಡ ವಿಚಾರ ಆಗ ಬಯಲಾಗಿತ್ತು. ನಮ್ಮ ವಿಚ್ಛೇದನದ ಬಗ್ಗೆ ಮಾತುಕತೆ ಆರಂಭವಾಗಿದ್ದು ಆಗಲೇ. ಸಂಬಂಧ ಹೊಂದಿರುವ ಬಗ್ಗೆ ಆತನೂ ಒಪ್ಪಿಕೊಂಡಿದ್ದಾನೆ’ ಎಂದು ಮಾಧ್ಯಮಕ್ಕೆ ನಿಶಾ ಹೇಳಿದ್ದಾರೆ.

‘ಆ ಮಹಿಳೆ ದೆಹಲಿಯವಳು. ಇಬ್ಬರ ನಡುವೆ ಪ್ರೀತಿ ಹುಟ್ಟಿದೆಯಂತೆ. ಇಬ್ಬರೂ ದೈಹಿಕವಾಗಿಯೂ ಸಂಬಂಧ ಇಟ್ಟುಕೊಂಡಿದ್ದಾರೆ. ಕರಣ್​ ಶೂಟಿಂಗ್​ಗಾಗಿ ಚಂಡೀಗಢಕ್ಕೆ ತೆರಳಿದಾಗೆಲ್ಲ ಆಕೆ ಅಲ್ಲಿಗೆ ಬರುತ್ತಾಳೆ. ಹೀಗೆ ಇಬ್ಬರ ಸಂಬಂಧ ಆರಂಭವಾಗಿದೆ’ ಎಂದು ನಿಶಾ ನೇರವಾಗಿಯೇ ಹೇಳಿದ್ದಾರೆ.

‘ಕರಣ್​ ಮತ್ತೊಂದು ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಗೊತ್ತಾದಾಗ ನಾನು ಸಿಟ್ಟಾಗಿಲ್ಲ. ಕೂಲ್​ ಆಗಿಯೇ ಆತನ ಬಳಿ ಪ್ರಶ್ನೆ ಮಾಡಿದೆ. ಆಗ ನಿಜವಾದ ವಿಚಾರವನ್ನು ಆತ ಹೇಳಿದ. ಆತ ಕ್ಷಮೆ ಕೇಳಿ ಮೊದಲಿನಂತಾದರೆ ನಾನು ಕ್ಷಮಿಸಲು ಸಿದ್ಧಳಿದ್ದೆ. ಆದರೆ, ಆತ ಬದಲಾಗಲಿಲ್ಲ. ಆ್ಯಟಿಟ್ಯೂಡ್​ ತೋರಿಸಿದ. ನನ್ನದೇನು ತಪ್ಪು ಎಂಬಂತೆ ಮಾತನಾಡಿದ. 14 ವರ್ಷಗಳಲ್ಲಿ ಕರಣ್​ ಈ ರೀತಿ ನಡೆದುಕೊಂಡಿದ್ದು ಇದೇ ಮೊದಲೇನಲ್ಲ ಎಂದಿದ್ದಾರೆ’ ಅವರು.

‘ಕರಣ್​ ನನಗೆ ಸದಾ ಹೊಡೆಯುತ್ತಾನೆ. ನಾನು ಇಷ್ಟು ವರ್ಷ ಎಲ್ಲವನ್ನೂ ತಡೆದುಕೊಂಡಿದ್ದೆ. ಅದು ಕರಣ್​ ಮೇಲಿನ ಪ್ರೀತಿಗಾಗಿ. ಆದರೆ, ಈಗ ಏನೂ ಉಳಿದಿಲ್ಲ ಎಂದು ನಿಶಾ ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: Karan Mehra Arrested: ಪತ್ನಿಗೆ ಥಳಿಸಿದ ಖ್ಯಾತ ಕಿರುತೆರೆ ನಟ ಕರಣ್​ ಮೆಹ್ರಾ; ಪೊಲೀಸ್​ ಠಾಣೆ ಮೆಟ್ಟಿಲೇರಿ ಹೇಳಿದ ಕಥೆಯೇ ಬೇರೆ

ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ