AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲೀಲಾ-ನಿತಿನ್-ಡೇವಿಡ್ ವಾರ್ನರ್ ನಟನೆಯ ‘ರಾಬಿನ್​ಹುಡ್’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

Robinhood: ನಿತಿನ್, ಶ್ರೀಲೀಲಾ ಮತ್ತು ಡೇವಿಡ್ ವಾರ್ನರ್ ನಟಿಸಿರುವ ‘ರಾಬಿನ್​ಹುಡ್’ ಸಿನಿಮಾ ನೋಡಿದ ಮಂದಿ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಡೇವಿಡ್ ವಾರ್ನರ್ ಸಹ ನಟಿಸಿರುವ ಕಾರಣ ಸಿನಿಮಾದ ಬಗ್ಗೆ ನಿರೀಕ್ಷೆ ತುಸು ಹೆಚ್ಚಾಗಿಯೇ ಇತ್ತು. ಸಿನಿಮಾ ನೋಡಿದವರಿಗೆ ಏನನ್ನಿಸಿತು? ಇಲ್ಲಿದೆ ಮಾಹಿತಿ...

ಶ್ರೀಲೀಲಾ-ನಿತಿನ್-ಡೇವಿಡ್ ವಾರ್ನರ್ ನಟನೆಯ ‘ರಾಬಿನ್​ಹುಡ್’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
Robinhood Movie
ಮಂಜುನಾಥ ಸಿ.
|

Updated on: Mar 28, 2025 | 11:30 AM

Share

ಶ್ರೀಲೀಲಾ, ‘ಜಯಂ’ ಖ್ಯಾತಿಯ ನಟ ನಿತಿನ್ ಮತ್ತು ಕ್ರಿಕೆಟಿಗ ಡೇವಿಡ್ ವಾರ್ನರ್ ಒಟ್ಟಿಗೆ ನಟಿಸಿರುವ ‘ರಾಬಿನ್​ಹುಡ್’ ಸಿನಿಮಾ ಇಂದು (ಮಾರ್ಚ್ 28) ಬಿಡುಗಡೆ ಆಗಿದೆ. ಆಂಧ್ರ, ತೆಲಂಗಾಣಗಳಲ್ಲಿ ಅರ್ಲಿ ಮಾರ್ನಿಂಗ್ ಶೋಗಳು ಸಹ ಪ್ರದರ್ಶನಗೊಂಡಿದ್ದು, ಸಿನಿಮಾ ನೋಡಿದ ಮಂದಿ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಡೇವಿಡ್ ವಾರ್ನರ್ ಸಹ ನಟಿಸಿರುವ ಕಾರಣ ಸಿನಿಮಾದ ಬಗ್ಗೆ ನಿರೀಕ್ಷೆ ತುಸು ಹೆಚ್ಚಾಗಿಯೇ ಇತ್ತು. ಸಿನಿಮಾ ನೋಡಿದವರಿಗೆ ಏನನ್ನಿಸಿತು? ಇಲ್ಲಿದೆ ಮಾಹಿತಿ…

ತೆಲುಗು ಕಲ್ಟ್ ಎಂಬ ಟ್ವಿಟ್ಟರ್ ಖಾತೆಯಿಂದ ಮಾಡಲಾದ ಟ್ವೀಟ್​ನಲ್ಲಿ, ‘ಈ ಬೇಸಗೆ ಸೀಸನ್​ನ ಬೆಸ್ಟ್ ಎಂಟರ್ಟೈನರ್ ಸಿನಿಮಾ ‘ರಾಬಿನ್​ಹುಡ್’. ನಟ ನಿತಿನ್ ಮತ್ತು ರಾಜೇಂದ್ರ ಪ್ರಸಾದ್ ಅವರುಗಳು ಈ ಸಿನಿಮಾದ ಜೀವಾಳ. ನಿರ್ದೇಶಕ ವೆಂಕಿ ಕುಡುಮಲ ಅವರು ಸರಳವಾದ ಕತೆ ಇಟ್ಟುಕೊಂಡು ಅದಕ್ಕೆ ಹದವಾದ ಹಾಸ್ಯ ಬೆರೆಸಿ ಅದ್ಭುತವಾಗಿ ಪ್ರೆಸೆಂಟ್ ಮಾಡಿದ್ದಾರೆ. ಡೇವಿಡ್ ವಾರ್ನರ್ ಅತಿಥಿ ಪಾತ್ರದ ಎಂಟ್ರಿ ಸಖತ್ ಆಗಿದೆ. ಶ್ರೀಲೀಲಾ ನಟನೆಯೂ ಅದ್ಭುತವಾಗಿದೆ. ಮೈತ್ರಿ ಮೂವಿ ಮೇಕರ್ಸ್​ಗೆ ಮತ್ತೊಂದು ಜಯ ತಂದುಕೊಡಲಿದೆ ಈ ಸಿನಿಮಾ’ ಎಂದಿದ್ದಾರೆ.

ವೆಂಕಟೇಶ್ ಕಿಲಾರು ಎಂಬುವರು ಟ್ವೀಟ್ ಮಾಡಿ, ‘ರಾಬಿನ್​ಹುಡ್’ ಒಳ್ಳೆಯ ಎಂಟರ್ಟೈನ್​ಮೆಂಟ್ ಇರುವ ಸಿನಿಮಾ ಇದು. ಮೊದಲಾರ್ಧ ಚೆನ್ನಾಗಿದೆ. ದ್ವಿತೀಯಾರ್ಧ ಸಾಧಾರಣವಾಗಿದೆ. ಕತೆ ಪ್ರಧಾನವಾಗಿರುವ ಸಿನಿಮಾ ಇದಲ್ಲ, ಆದರೆ ಎಂಜಾಯ್ ಮಾಡಲು ಕುಟುಂಬದೊಂದಿಗೆ ಹೋಗಬಹುದಾದ ಸಿನಿಮಾ. ‘ರಾಬಿನ್​ಹುಡ್’ ಸರಣಿ ಮುಂದುವರೆಯಲಿದೆ. ಎರಡನೇ ಭಾಗಕ್ಕೆ ಡೇವಿಡ್ ವಾರ್ನರ್ ವಿಲನ್’ ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ನಿತಿನ್ ಪಾಲಿಗೆ ಇದೊಂದು ಡಿಲೆಂಟ್ ಕಮ್​ಬ್ಯಾಕ್ ಸಿನಿಮಾ ಆಗಿದೆ. ನಿತಿನ್ ಎನರ್ಜಿ, ಶ್ರೀಲೀಲಾ ಗ್ಲಾಮರ್, ಹಿನ್ನೆಲೆ ಸಂಗೀತ, ಪ್ರೊಡಕ್ಷನ್ ಎಲ್ಲವೂ ಚೆನ್ನಾಗಿದೆ. ಡೇವಿಡ್ ವಾರ್ನರ್ ಅತಿಥಿ ಪಾತ್ರ ಸಿನಿಮಾದ ಪ್ರಮುಖ ಹೈಲೈಟ್​ಗಳಲ್ಲಿ ಒಂದು. ಇಂಟರ್ವೆಲ್, ಕ್ಲೈಮ್ಯಾಕ್ಸ್ ಎರಡೂ ಸಹ ಅದ್ಭುತವಾಗಿದೆ. ಒಳ್ಳೆಯ ಮಾಸ್ ಎಂಟರ್ಟೈನ್​ಮೆಂಟ್ ಸಿನಿಮಾ ಇದಾಗಿದೆ ಎಂದಿದೆ ಟಾಲಿವುಡ್ ಬಾಕ್ಸ್ ಆಫೀಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​