Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಆರ್​​ಆರ್ ಸಿನಿಮಾಕ್ಕೆ ಗೌರವ ನೀಡಿದ ಆಸ್ಕರ್, ರಾಜಮೌಳಿಗೆ ಖುಷಿ

RRR Movie: ರಾಜಮೌಳಿ ನಿರ್ದೇಶಿಸಿ, ಜೂ ಎನ್​ಟಿಆರ್-ರಾಮ್ ಚರಣ್ ನಟನೆಯ ‘ಆರ್​​ಆರ್​​ಆರ್’ ಸಿನಿಮಾ ಈಗಾಗಲೇ ಆಸ್ಕರ್ ಪ್ರಶಸ್ತಿಯೊಂದನ್ನು ಗೆದ್ದಿದೆ. ಇದೀಗ ಮತ್ತೊಮ್ಮೆ ಆಸ್ಕರ್ಸ್ ‘ಆರ್​ಆರ್​​ಆರ್’ ಸಿನಿಮಾಕ್ಕೆ ಗೌರವ ನೀಡಿದೆ. ಆಸ್ಕರ್​ ನೀಡಿರುವ ಗೌರವದಿಂದ ನಿರ್ದೇಶಕ ಎಸ್​ಎಸ್ ರಾಜಮೌಳಿ ಸಖತ್ ಥ್ರಿಲ್ ಆಗಿದ್ದಾರೆ. ಏನಿದು ವಿಷಯ? ಇಲ್ಲಿದೆ ಮಾಹಿತಿ...

ಆರ್​ಆರ್​​ಆರ್ ಸಿನಿಮಾಕ್ಕೆ ಗೌರವ ನೀಡಿದ ಆಸ್ಕರ್, ರಾಜಮೌಳಿಗೆ ಖುಷಿ
Ram Charan Rrr
Follow us
ಮಂಜುನಾಥ ಸಿ.
|

Updated on:Apr 11, 2025 | 12:44 PM

ರಾಜಮೌಳಿ (SS Rajamouli) ನಿರ್ದೇಶಿಸಿ ಜೂ ಎನ್​ಟಿಆರ್-ರಾಮ್ ಚರಣ್ (Jr NTR-Ram Charan) ನಟಿಸಿದ್ದ ‘ಆರ್​ಆರ್​ಆರ್’ (RRR) ಸಿನಿಮಾ ಹಲವು ದಾಖಲೆಗಳನ್ನು ಮಾಡಿದೆ. ಮುಖ್ಯವಾಗಿ ಭಾರತಕ್ಕೆ ಆಸ್ಕರ್ ತಂದುಕೊಟ್ಟಿದೆ. ವಿದೇಶಿ ಸಿನಿಮಾ ಪ್ರಮುಖರು, ನಿರ್ಮಾಣ ಸಂಸ್ಥೆಗಳು ಭಾರತ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ. ಈಗಾಗಲೇ ‘ಆರ್​ಆರ್​ಆರ್’ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ ಧಕ್ಕಿದೆ. ಆದರೆ ಇದೀಗ ಮತ್ತೊಮ್ಮೆ ಆಸ್ಕರ್, ‘ಆರ್​ಆರ್​ಆರ್’ ಸಿನಿಮಾ ಅನ್ನು ನೆನಪು ಮಾಡಿಕೊಂಡಿದೆ. ಹೊಸ ಪ್ರಶಸ್ತಿ ಘೋಷಣೆಗೆ ‘ಆರ್​ಆರ್​ಆರ್’ ಸಿನಿಮಾದ ಐಕಾನಿಕ್ ಚಿತ್ರವೊಂದನ್ನು ಬಳಸಿಕೊಂಡಿದೆ.

ಆಸ್ಕರ್​ ಶುರುವಾದಾಗಿನಿಂದಲೂ ಆಕ್ಷನ್ ಡಿಸೈನ್ ವಿಭಾಗಕ್ಕೆ ಯಾವುದೇ ಪ್ರಶಸ್ತಿ ಇರಲಿಲ್ಲ. ಸಿನಿಮಾಗಳ ಕತೆ ಹೇಳುವಲ್ಲಿ ಆಕ್ಷನ್ ಡಿಸೈನ್ ಬಹಳ ಪ್ರಮುಖವಾದ ಪಾತ್ರ ನಿರ್ವಹಿಸುತ್ತದೆ, ಸಿನಿಮಾಗಳಿಗೆ ಆಕ್ಷನ್ ಬಹಳ ಮುಖ್ಯ ಆದರೆ ಆಸ್ಕರ್​ನಲ್ಲಿ ಈ ವರೆಗೆ ಆಕ್ಷನ್​ಗೆ ಪ್ರಶಸ್ತಿ ಇರಲಿಲ್ಲ. ಆದರೆ ಈಗ ಆಸ್ಕರ್ ಈ ಪ್ರಶಸ್ತಿಯನ್ನು ತನ್ನ ಪಟ್ಟಿಗೆ ಸೇರಿಸಲು ಮುಂದಾಗಿದೆ. ಇದರ ಘೋಷಣೆಗೆ ‘ಆರ್​​ಆರ್​ಆರ್’ ಸಿನಿಮಾದ ಆಕ್ಷನ್ ದೃಶ್ಯವೊಂದರ ಚಿತ್ರವನ್ನು ಬಳಸಿಕೊಂಡಿದೆ.

‘ಆರ್​ಆರ್​ಆರ್’ ಸಿನಿಮಾದ ಇಂಟರ್ವೆಲ್ ಫೈಟ್ ನ ಒಂದು ಅದ್ಭುತ ದೃಶ್ಯವನ್ನು ಆಸ್ಕರ್ ತನ್ನ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದೆ. ರಾಮ್ ಚರಣ್ ಹಾರಿ ಹುಲಿಗೆ ಹೊಡೆಯುವ ದೃಶ್ಯದ ಚಿತ್ರ ಇದಾಗಿದೆ. ಆ ಮೂಲಕ ‘ಆರ್​ಆರ್​ಆರ್’ ಸಿನಿಮಾದ ಫೈಟ್ ಡಿಸೈನ್​ಗೆ ಗೌರವ ನೀಡಿದೆ ಆಸ್ಕರ್. ಮತ್ತೊಂದು ವಿಶೇಷವೆಂದರೆ ‘ಆರ್​ಆರ್​ಆರ್​’ ಸಿನಿಮಾದ ಚಿತ್ರವನ್ನು ವಿಶ್ವದ ಅತ್ಯುತ್ತಮ ಆಕ್ಷನ್ ಸಿನಿಮಾಗಳಲ್ಲಿ ಮುಖ್ಯವಾದ ‘ಮಿಷನ್ ಇಂಪಾಸಿಬಲ್’ನ ಜೊತೆಗೆ ಹಂಚಿಕೊಳ್ಳಲಾಗಿದೆ. ಇದು ಸಾಮಾನ್ಯ ಗೌರವವೇನಲ್ಲ. ‘ಆರ್​ಆರ್​ಆರ್’, ‘ಮಿಷನ್ ಇಂಪಾಸಿಬಲ್’ ಜೊತೆಗೆ ಆಸ್ಕರ್ ವಿಜೇತ ‘ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್’ ಸಿನಿಮಾದ ಒಂದು ಚಿತ್ರವನ್ನು ಸಹ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ
Image
ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ, ಬೆಲೆ ಎಷ್ಟು ಕೋಟಿ?
Image
‘ಕಣ್ಣಪ್ಪ’ ಸಿನಿಮಾ ಬಿಡುಗಡೆ ಮುಂದೂಡಿದ ಮಂಚು ಮನೋಜ್, ಯಾವುದರ ಭಯ?
Image
ರಶ್ಮಿಕಾಗೆ ಹಿಂದಿ ಕಲಿಯಲು ಆಗಲ್ಲ, ಕಾರಣ ಹೇಳಿದ ಸಲ್ಮಾನ್ ಖಾನ್
Image
ಎಲ್ 2:ಎಂಪುರಾನ್ ಕಲೆಕ್ಷನ್, ಮೂರೇ ದಿನಕ್ಕೆ ಹಳೆ ದಾಖಲೆಗಳು ಉಡೀಸ್

ಇದನ್ನೂ ಓದಿ:97ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ: ವಿನ್ನರ್ ಸಂಪೂರ್ಣ ಲಿಸ್ಟ್ ಇಲ್ಲಿದೆ

ಆಸ್ಕರ್ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ರಾಜಮೌಳಿ, ‘100 ವರ್ಷಗಳ ಕಾಯುವಿಕೆ ಬಳಿಕ ಕೊನೆಗೂ ಆಸ್ಕರ್​ನಲ್ಲಿ ಆಕ್ಷನ್ ಡಿಸೈನ್ ವಿಭಾಗಕ್ಕೆ ಪ್ರಶಸ್ತಿಯನ್ನು ಸೇರಿಸುವುದು ಬಹಳ ಖುಷಿಯ ವಿಷಯ’ ಎಂದಿರುವ ರಾಜಮೌಳಿ ಇದಕ್ಕೆ ಕಾರಣರಾದ ಕೆಲವರಿಗೆ ಧನ್ಯವಾದ ಹೇಳಿದ್ದಾರೆ. ನೆಟ್​ಫ್ಲಿಕ್ಸ್​ ಸಿಇಓಗೂ ಧನ್ಯವಾದ ಹೇಳಿದ್ದಾರೆ. ತಮ್ಮ ‘ಆರ್​ಆರ್​ಆರ್’ ಸಿನಿಮಾದ ಚಿತ್ರ ಹಂಚಿಕೊಂಡಿದ್ದು ಖುಷಿ ತಂದಿದೆ ಎಂದು ಸಹ ಅವರು ಹೇಳಿದ್ದಾರೆ. ಅಂದಹಾಗೆ ಹಾಲಿವುಡ್​ನ ನಿಕ್ ಪೋವೆಲ್ ಮತ್ತು ದಕ್ಷಿಣದ ಸ್ಟಾರ್ ಆಕ್ಷನ್ ಕೊರಿಯೋಗ್ರಫರ್ ಆಗಿರುವ ಕಿಂಗ್ ಸೋಲೊಮನ್ ಅವರುಗಳು ‘ಆರ್​ಆರ್​ಆರ್’ ಸಿನಿಮಾದ ಆಕ್ಷನ್ ಕೊರಿಯೋಗ್ರಫಿ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Fri, 11 April 25

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು