AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oscars 2021: ಆಸ್ಕರ್​ 2021ರ ಸಮಾರಂಭಕ್ಕೆ ಮಾಸ್ಕ್​ ಧರಿಸಿ ಬಂದ್ರೆ ಇಲ್ಲ ಎಂಟ್ರಿ

ಈ ಬಾರಿ ಯಾವ ಚಿತ್ರಗಳು ಆಸ್ಕರ್ ಬಾಚಿಕೊಳ್ಳಲಿದೆ ಎನ್ನುವ ಕುತೂಹಲ ಇದೆ. ವಿಶೇಷ ಎಂದರೆ ನೆಟ್​ಫ್ಲಿಕ್ಸ್​ನ 36 ಸಿನಿಮಾಗಳು ಆಸ್ಕರ್​ ಸ್ಪರ್ಧೆಯಲ್ಲಿ ಸ್ಥಾನ ಪಡೆದುಕೊಂಡಿವೆ.

Oscars 2021: ಆಸ್ಕರ್​ 2021ರ ಸಮಾರಂಭಕ್ಕೆ ಮಾಸ್ಕ್​ ಧರಿಸಿ ಬಂದ್ರೆ ಇಲ್ಲ ಎಂಟ್ರಿ
ಆಸ್ಕರ್​ 2021
ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:Apr 25, 2021 | 8:56 PM

Share

ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಮುಂಚೂಣಿಯಲ್ಲಿರುವ ಆಸ್ಕರ್​​ 2021 ಪ್ರಶಸ್ತಿ ಸಮಾರಂಭ ಸೋಮವಾರ (ಏಪ್ರಿಲ್​ 26) ನಡೆಯಲಿದೆ. ಲಾಸ್​ ಏಂಜಲೀಸ್​ನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಕೊರೊನಾ ವೈರಸ್​ ಅಮೆರಿಕದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗಿದ್ದರೂ, ಕಾರ್ಯಕ್ರಮಕ್ಕೆ ತೆರಳುವವರು ಮಾಸ್ಕ್​ ಧರಿಸುವಂತಿಲ್ಲ. ಕಮರ್ಷಿಯಲ್​ ಆ್ಯಡ್​ ಬ್ರೇಕ್​ನಲ್ಲಿ ಮಾತ್ರ ಮಾಸ್ಕ್​ ಧರಿಸಬಹುದಾಗಿದೆ.

ಈ ಬಾರಿ ಯಾವ ಚಿತ್ರಗಳು ಆಸ್ಕರ್ ಬಾಚಿಕೊಳ್ಳಲಿದೆ ಎನ್ನುವ ಕುತೂಹಲ ಇದೆ. ವಿಶೇಷ ಎಂದರೆ ನೆಟ್​ಫ್ಲಿಕ್ಸ್​ನ 36 ಸಿನಿಮಾಗಳು ಆಸ್ಕರ್​ ಸ್ಪರ್ಧೆಯಲ್ಲಿ ಸ್ಥಾನ ಪಡೆದುಕೊಂಡಿವೆ. ಮಾಂಕ್​ ಹೆಸರಿನ ಸಿನಿಮಾ 10 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ.

ಭಾರತೀಯ ಕಾಲಮಾನ ಮುಂಜಾನೆ 5:30ರಿಂದ 8:30ರ ವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಆಸ್ಕರ್​ ಕಾರ್ಯಕ್ರಮವನ್ನು ಆಸ್ಕರ್​​​ನ​ ಅಧಿಕೃತ ಯೂಟ್ಯೂಬ್​ ಚಾನೆಲ್​ನಲ್ಲಿ ವೀಕ್ಷಿಸಬಹುದು. ಸ್ಟಾರ್​ ವರ್ಲ್ಡ್​​ ಹಾಗೂ ಸ್ಟಾರ್​ ಮೂವಿಸ್​ನಲ್ಲಿ ರಾತ್ರಿ 8:30ಕ್ಕೆ ಕಾರ್ಯಕ್ರಮ ರಿ ಟೆಲಿಕಾಸ್ಟ್​ ಆಗಲಿದೆ. 93ನೇ ಪ್ರಶಸ್ತಿ ಸಮಾರಂಭವನ್ನು ರಿಜ್​ ಅಹ್ಮದ್, ವೈಲಾ ಡೇವಿಸ್​, ಬ್ರಾಡ್​ ಪಿಟ್​ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ನಡೆಸಿಕೊಡುತ್ತಿದ್ದಾರೆ.

ಮಾಸ್ಕ್​ ಏಕೆ ಧರಿಸುವಂತಿಲ್ಲ?

ಅಮೆರಿಕದಲ್ಲಿ ಕೊರೊನಾ ವೈರಸ್​ ಮಿತಿ ಮೀರಿ ಹರಡುತ್ತಿದೆ. ಕೊರೊನಾ ಹೆಚ್ಚಿರುವ ರಾಷ್ಟ್ರಗಳು ಮಾಸ್ಕ್​ ಧರಿಸುವುದನ್ನು ಕಡ್ಡಾಯ ಮಾಡಿವೆ. ಆದರೆ, ಈ ಕಾರ್ಯಕ್ರಮಕ್ಕೆ ಎಂಟ್ರಿ ತೆಗೆದುಕೊಳ್ಳುವವರು ಮಾಸ್ಕ್​ ಧರಿಸುವಂತಿಲ್ಲ. ಕ್ಯಾಮೆರಾ ಎದುರಿರುವಾಗ ಮಾಸ್ಕ್​ ಧರಿಸಿ ಕೂತಿರುವುದು ಅಷ್ಟು ಸುಂದರವಾಗಿ ಕಾಣುವುದಿಲ್ಲ ಎಂಬುದು ಆಯೋಜಕರ ನಂಬಿಕೆ. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ, ನಾಮಿನಿಗಳು, ಶೋ ನಡೆಸಿಕೊಡುವವರು ಹಾಗೂ ನಿಯಮಿತಿ ಗೆಸ್ಟ್​​ಗಳಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುತ್ತಿದೆ. ಇವರು ಕೊರೊನಾ ಪರೀಕ್ಷೆ ಒಳಪಟ್ಟಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: Darshan: ದರ್ಶನ್​ಗೆ ಆಸ್ಕರ್​ ಕೊಡಿ; ವೇದಿಕೆಯ ಮೇಲೆ ಬೇಡಿಕೆ ಇಟ್ಟ ರವಿಶಂಕರ್​!

Published On - 8:48 pm, Sun, 25 April 21

ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು