AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prashanth Sambargi: ನಿಮಗೂ ಅಕ್ಕ ಇದಾರೆ ಅಲ್ವಾ?; ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಸಂಬರಗಿಗೆ ವೀಕ್ಷಕರಿಂದ ಕ್ಲಾಸ್

Bigg Boss Kannada: ಅರವಿಂದ್ ಜತೆ ಜಗಳವಾದಾಗ ಪ್ರಶಾಂತ್​ ಸಿಟ್ಟಾಗಿದ್ದರು. ದಿವ್ಯಾ ಉರುಡುಗ ನಿನ್ನ ಗರ್ಲ್​​ಫ್ರೆಂಡ್​ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ನಂತರ ದಿವ್ಯಾ ಸುರೇಶ್​ ಅವರನ್ನು ಮಂಜು ಡವ್​ ಎಂದಿದ್ದರು.

Prashanth Sambargi: ನಿಮಗೂ ಅಕ್ಕ ಇದಾರೆ ಅಲ್ವಾ?; ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಸಂಬರಗಿಗೆ ವೀಕ್ಷಕರಿಂದ ಕ್ಲಾಸ್
ಪ್ರಶಾಂತ್ ಸಂಬರಗಿ
ರಾಜೇಶ್ ದುಗ್ಗುಮನೆ
| Edited By: |

Updated on:Apr 26, 2021 | 9:21 AM

Share

ಬಿಗ್​ ಬಾಸ್​ ಮನೆಯಲ್ಲಿರುವ ಪ್ರಶಾಂತ್​ ಸಂಬರಗಿ ಯಾರದ್ದೇ ಜತೆ ಜಗಳವಾಗಲಿ, ಈ ಮಧ್ಯೆ ಹೆಣ್ಣುಮಕ್ಕಳ ಹೆಸರು ತರುತ್ತಾರೆ. ಅವರನ್ನು ಕೀಳಾಗಿ ಕಾಣುತ್ತಾರೆ ಎನ್ನುವ ಆರೋಪ ಇದೆ. ಈ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಪದೇಪದೇ ಸಾಬೀತಾಗುತ್ತಲೇ ಇದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ವೀಕೆಂಡ್​ನಲ್ಲಿ ವೀಕ್ಷಕರಿಂದ​ ದೂರವಾಣಿ ಕರೆ ಬಂದಿದೆ. ಈ ಸಂದರ್ಭದಲ್ಲಿ ಪ್ರಶಾಂತ್​ ಅವರಿಗೆ ಕ್ಲಾಸ್​ ತೆಗೆದುಕೊಳ್ಳಲಾಗಿದೆ.

ಅರವಿಂದ್ ಜತೆ ಜಗಳವಾದಾಗ ಪ್ರಶಾಂತ್​ ಸಿಟ್ಟಾಗಿದ್ದರು. ದಿವ್ಯಾ ಉರುಡುಗ ನಿನ್ನ ಗರ್ಲ್​​ಫ್ರೆಂಡ್​ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ನಂತರ ದಿವ್ಯಾ ಸುರೇಶ್​ ಅವರನ್ನು ಮಂಜು ಡವ್​ ಎಂದಿದ್ದರು. ಇತ್ತೀಚೆಗೆ ನಿಧಿ ಸುಬ್ಬಯ್ಯ ಅವರ ವಿರುದ್ಧ ತುಂಬಾನೇ ಖಾಸಗಿಯಾಗಿ ಮಾತನಾಡಿದ್ದರು. ಈ ವಿಚಾರವನ್ನು ವೀಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಬಿಗ್​ ಬಾಸ್​ ಮನೆಗೆ ವೀಕ್ಷಕರೊಬ್ಬರಿಂದ ಕರೆ ಬಂದಿತ್ತು. ಈ ವೇಳೆ ನೇರವಾಗಿ ಪ್ರಶ್ನೆಯನ್ನು ಪ್ರಶಾಂತ್​ಗೆ ಕೇಳಿದರು. ಮೊಟ್ಟೆ ತಿಂದಿದ್ದು ದೊಡ್ಡ ವಿಚಾರ ಆಯ್ತು. ಮೊಟ್ಟೆ ತಿಂದಿದ್ದು ತಪ್ಪಲ್ಲ. ಆದರೆ, ಪರ್ಸನಲ್​ ಆಗಿ ಮಾಡಿದ್ದು ಎಷ್ಟು ಸರಿ? ನೀವು ಮನೆಯಲ್ಲಿ ಹುಡ್ಗೀರನ್ನೇ ಟಾರ್ಗೆಟ್​ ಮಾಡ್ತೀರಾ ಎಂದರು. ಆಗ ಪ್ರಶಾಂತ್​ ಸಂಬರಗಿ ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳೋಕೆ ಹೋದರು. ನಾನು ಆ ರೀತಿ ಮಾಡೇ ಇಲ್ಲ ಎಂದು ಹೇಳಲು ಮುಂದಾದರು.

ಆಗ ಮಾತನಾಡಿದ ಕಾಲರ್, ನಿಮಗೂ ಅಕ್ಕ ಇದಾರೆ. ಅವರ ವಿರುದ್ಧವೂ ಯಾರಾದರೂ ಹೀಗೆ ಮಾತಾಡಿದ್ರೆ ಸುಮ್ಮನಿರುತ್ತೀರಾ ಎಂದು ಕೇಳಿದರು. ಈ ಪ್ರಶ್ನೆಯನ್ನು ಪ್ರಶಾಂರ್​ ನಿರೀಕ್ಷಿಸಿರಲಿಲ್ಲ. ಹೀಗಾಗಿ, ಕೊಂಚ ಗಲಿಬಿಲಿ ಆದರು.

ನಾನು ಸ್ತ್ರೀ ವಿರೋಧಿ ಅಲ್ಲ. ತಪ್ಪು ಕಂಡಾಗ ಹೇಳುತ್ತಿದ್ದೀನಿ ಅಷ್ಟೇ ಎಂದು ಪ್ರಶಾಂತ್​ ಸಮಜಾಯಿಶಿ ಕೊಟ್ಟರು. ನೀವು ಮಾತಿನಲ್ಲಿ ಹೇಳುತ್ತಿದ್ದೀರಿ ಅಷ್ಟೆ. ಆದರೆ, ಅದು ಆ್ಯಕ್ಷನ್​​ನಲ್ಲಿ ಕಾಣಿಸುತ್ತಿಲ್ಲ ಎಂದು ಕಾಲರ್​ ಹೇಳಿದಾಗ ಪ್ರಶಾಂತ್​ ಮಾತನಾಡಲು ತಡವರಿಸಿದರು.

ಈ ವಿಚಾರದಲ್ಲಿ ಪ್ರಶಾಂತ್​ ಸಂಬರಗಿ ಸ್ವಲ್ಪ ತಲೆಕೆಡಿಸಿಕೊಂಡಂತೆ ಕಂಡಿದೆ.  ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್​ ಜತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಉತ್ತರಿಸಿದ ಅವರು, ಗುರು ನಿನಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನು ಮಾಡು. ಕಾಲರ್​ ಹೇಳಿದ್ದು ನಿನಗೆ ಸರಿ ಅನಿಸಿದರೆ ಬದಲಾಗು ಎಂದರು.

ಇದನ್ನೂ ಓದಿ: ಮಂಜು, ರಾಜೀವ್​ಗೆ ಏಕಾಂಗಿಯಾಗಿ ಪಾಠ ಕಲಿಸಿ ಸೇಡು ತೀರಿಸಿಕೊಂಡ ಪ್ರಶಾಂತ್​; ಇದಕ್ಕೆ ಉರಿದುಕೊಂಡವರೆಷ್ಟೋ!

ಶುಭಾ ಪೂಂಜಾ ಮೇಲೆ ಕಣ್ಣಿಟ್ಟ ಪ್ರಶಾಂತ್​ ಸಂಬರಗಿ; ವೀಕೆಂಡ್​ನಲ್ಲಿ ಕಾದಿದೆ ಟ್ವಿಸ್ಟ್​

Published On - 8:46 am, Mon, 26 April 21

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ