Prashanth Sambargi: ನಿಮಗೂ ಅಕ್ಕ ಇದಾರೆ ಅಲ್ವಾ?; ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಸಂಬರಗಿಗೆ ವೀಕ್ಷಕರಿಂದ ಕ್ಲಾಸ್

Bigg Boss Kannada: ಅರವಿಂದ್ ಜತೆ ಜಗಳವಾದಾಗ ಪ್ರಶಾಂತ್​ ಸಿಟ್ಟಾಗಿದ್ದರು. ದಿವ್ಯಾ ಉರುಡುಗ ನಿನ್ನ ಗರ್ಲ್​​ಫ್ರೆಂಡ್​ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ನಂತರ ದಿವ್ಯಾ ಸುರೇಶ್​ ಅವರನ್ನು ಮಂಜು ಡವ್​ ಎಂದಿದ್ದರು.

Prashanth Sambargi: ನಿಮಗೂ ಅಕ್ಕ ಇದಾರೆ ಅಲ್ವಾ?; ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಸಂಬರಗಿಗೆ ವೀಕ್ಷಕರಿಂದ ಕ್ಲಾಸ್
ಪ್ರಶಾಂತ್ ಸಂಬರಗಿ
Follow us
| Updated By: Digi Tech Desk

Updated on:Apr 26, 2021 | 9:21 AM

ಬಿಗ್​ ಬಾಸ್​ ಮನೆಯಲ್ಲಿರುವ ಪ್ರಶಾಂತ್​ ಸಂಬರಗಿ ಯಾರದ್ದೇ ಜತೆ ಜಗಳವಾಗಲಿ, ಈ ಮಧ್ಯೆ ಹೆಣ್ಣುಮಕ್ಕಳ ಹೆಸರು ತರುತ್ತಾರೆ. ಅವರನ್ನು ಕೀಳಾಗಿ ಕಾಣುತ್ತಾರೆ ಎನ್ನುವ ಆರೋಪ ಇದೆ. ಈ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಪದೇಪದೇ ಸಾಬೀತಾಗುತ್ತಲೇ ಇದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ವೀಕೆಂಡ್​ನಲ್ಲಿ ವೀಕ್ಷಕರಿಂದ​ ದೂರವಾಣಿ ಕರೆ ಬಂದಿದೆ. ಈ ಸಂದರ್ಭದಲ್ಲಿ ಪ್ರಶಾಂತ್​ ಅವರಿಗೆ ಕ್ಲಾಸ್​ ತೆಗೆದುಕೊಳ್ಳಲಾಗಿದೆ.

ಅರವಿಂದ್ ಜತೆ ಜಗಳವಾದಾಗ ಪ್ರಶಾಂತ್​ ಸಿಟ್ಟಾಗಿದ್ದರು. ದಿವ್ಯಾ ಉರುಡುಗ ನಿನ್ನ ಗರ್ಲ್​​ಫ್ರೆಂಡ್​ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ನಂತರ ದಿವ್ಯಾ ಸುರೇಶ್​ ಅವರನ್ನು ಮಂಜು ಡವ್​ ಎಂದಿದ್ದರು. ಇತ್ತೀಚೆಗೆ ನಿಧಿ ಸುಬ್ಬಯ್ಯ ಅವರ ವಿರುದ್ಧ ತುಂಬಾನೇ ಖಾಸಗಿಯಾಗಿ ಮಾತನಾಡಿದ್ದರು. ಈ ವಿಚಾರವನ್ನು ವೀಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಬಿಗ್​ ಬಾಸ್​ ಮನೆಗೆ ವೀಕ್ಷಕರೊಬ್ಬರಿಂದ ಕರೆ ಬಂದಿತ್ತು. ಈ ವೇಳೆ ನೇರವಾಗಿ ಪ್ರಶ್ನೆಯನ್ನು ಪ್ರಶಾಂತ್​ಗೆ ಕೇಳಿದರು. ಮೊಟ್ಟೆ ತಿಂದಿದ್ದು ದೊಡ್ಡ ವಿಚಾರ ಆಯ್ತು. ಮೊಟ್ಟೆ ತಿಂದಿದ್ದು ತಪ್ಪಲ್ಲ. ಆದರೆ, ಪರ್ಸನಲ್​ ಆಗಿ ಮಾಡಿದ್ದು ಎಷ್ಟು ಸರಿ? ನೀವು ಮನೆಯಲ್ಲಿ ಹುಡ್ಗೀರನ್ನೇ ಟಾರ್ಗೆಟ್​ ಮಾಡ್ತೀರಾ ಎಂದರು. ಆಗ ಪ್ರಶಾಂತ್​ ಸಂಬರಗಿ ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳೋಕೆ ಹೋದರು. ನಾನು ಆ ರೀತಿ ಮಾಡೇ ಇಲ್ಲ ಎಂದು ಹೇಳಲು ಮುಂದಾದರು.

ಆಗ ಮಾತನಾಡಿದ ಕಾಲರ್, ನಿಮಗೂ ಅಕ್ಕ ಇದಾರೆ. ಅವರ ವಿರುದ್ಧವೂ ಯಾರಾದರೂ ಹೀಗೆ ಮಾತಾಡಿದ್ರೆ ಸುಮ್ಮನಿರುತ್ತೀರಾ ಎಂದು ಕೇಳಿದರು. ಈ ಪ್ರಶ್ನೆಯನ್ನು ಪ್ರಶಾಂರ್​ ನಿರೀಕ್ಷಿಸಿರಲಿಲ್ಲ. ಹೀಗಾಗಿ, ಕೊಂಚ ಗಲಿಬಿಲಿ ಆದರು.

ನಾನು ಸ್ತ್ರೀ ವಿರೋಧಿ ಅಲ್ಲ. ತಪ್ಪು ಕಂಡಾಗ ಹೇಳುತ್ತಿದ್ದೀನಿ ಅಷ್ಟೇ ಎಂದು ಪ್ರಶಾಂತ್​ ಸಮಜಾಯಿಶಿ ಕೊಟ್ಟರು. ನೀವು ಮಾತಿನಲ್ಲಿ ಹೇಳುತ್ತಿದ್ದೀರಿ ಅಷ್ಟೆ. ಆದರೆ, ಅದು ಆ್ಯಕ್ಷನ್​​ನಲ್ಲಿ ಕಾಣಿಸುತ್ತಿಲ್ಲ ಎಂದು ಕಾಲರ್​ ಹೇಳಿದಾಗ ಪ್ರಶಾಂತ್​ ಮಾತನಾಡಲು ತಡವರಿಸಿದರು.

ಈ ವಿಚಾರದಲ್ಲಿ ಪ್ರಶಾಂತ್​ ಸಂಬರಗಿ ಸ್ವಲ್ಪ ತಲೆಕೆಡಿಸಿಕೊಂಡಂತೆ ಕಂಡಿದೆ.  ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್​ ಜತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಉತ್ತರಿಸಿದ ಅವರು, ಗುರು ನಿನಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನು ಮಾಡು. ಕಾಲರ್​ ಹೇಳಿದ್ದು ನಿನಗೆ ಸರಿ ಅನಿಸಿದರೆ ಬದಲಾಗು ಎಂದರು.

ಇದನ್ನೂ ಓದಿ: ಮಂಜು, ರಾಜೀವ್​ಗೆ ಏಕಾಂಗಿಯಾಗಿ ಪಾಠ ಕಲಿಸಿ ಸೇಡು ತೀರಿಸಿಕೊಂಡ ಪ್ರಶಾಂತ್​; ಇದಕ್ಕೆ ಉರಿದುಕೊಂಡವರೆಷ್ಟೋ!

ಶುಭಾ ಪೂಂಜಾ ಮೇಲೆ ಕಣ್ಣಿಟ್ಟ ಪ್ರಶಾಂತ್​ ಸಂಬರಗಿ; ವೀಕೆಂಡ್​ನಲ್ಲಿ ಕಾದಿದೆ ಟ್ವಿಸ್ಟ್​

Published On - 8:46 am, Mon, 26 April 21

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ