AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು, ರಾಜೀವ್​ಗೆ ಏಕಾಂಗಿಯಾಗಿ ಪಾಠ ಕಲಿಸಿ ಸೇಡು ತೀರಿಸಿಕೊಂಡ ಪ್ರಶಾಂತ್​; ಇದಕ್ಕೆ ಉರಿದುಕೊಂಡವರೆಷ್ಟೋ!

ಗೋಲ್ಡನ್​ ಪಾಸ್​ ಪಡೆಯುವಾಗಲೂ ಅಷ್ಟೆ, ರಾಜೀವ್​ ಹಾಗೂ ಶುಭಾ ಒಪ್ಪಂದ ಮಾಡಿಕೊಂಡಿದ್ದರು. ಇದರಿಂದ ರಾಜೀವ್​ ಗೆದ್ದರು ಎನ್ನಲಾಗುತ್ತಿದೆ. ಇದನ್ನು ಪ್ರಶಾಂತ್​ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.

ಮಂಜು, ರಾಜೀವ್​ಗೆ ಏಕಾಂಗಿಯಾಗಿ ಪಾಠ ಕಲಿಸಿ ಸೇಡು ತೀರಿಸಿಕೊಂಡ ಪ್ರಶಾಂತ್​;  ಇದಕ್ಕೆ ಉರಿದುಕೊಂಡವರೆಷ್ಟೋ!
ಪ್ರಶಾಂತ್​-ಚಕ್ರವರ್ತಿ
ರಾಜೇಶ್ ದುಗ್ಗುಮನೆ
| Edited By: |

Updated on: Apr 25, 2021 | 7:18 AM

Share

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಸ್ಟ್ರಾಂಗ್​ ಸ್ಪರ್ಧಿ ಎನ್ನುವುದು ಬಹುತೇಕರಿಗೆ ಅರ್ಥವಾಗಿದೆ. ಪ್ರಶಾಂತ್​ ಸೇಡನ್ನು ಯಾವತ್ತೂ ಮರೆಯುವುದಿಲ್ಲ ಎಂಬುದು ಕೂಡ ಶನಿವಾರದ (ಎಪ್ರಿಲ್​ 24) ಎಪಿಸೋಡ್​ನಲ್ಲಿ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸ್ಪಷ್ಟವಾಗಿದೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಪ್ರಶಾಂತ್​ ಕೂಡ ಇದ್ದರು. ಆದಾಗ್ಯೂ ಅವರು ರಘು ಗೌಡ ಅವರನ್ನು ಗೆಲ್ಲಿಸುವ ಮೂಲಕ ಮಂಜು ಪಾವಗಡ ಹಾಗೂ ರಾಜೀವ್​ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

ಹಾಸ್ಟೆಲ್​ ಟಾಸ್ಕ್​ನಲ್ಲಿ ದಿವ್ಯಾ ಗೆಲ್ಲೋಕೆ ಮಂಜು ಸಹಾಯ ಮಾಡಿದ್ದರು. ಈ ವಿಚಾರ ಬಯಲಾದ ನಂತರ ಮನೆಯವರಿಗೆ ಶಾಕ್​ ಆಗಿತ್ತು. ಇನ್ನು ಗೋಲ್ಡನ್​ ಪಾಸ್​ ಪಡೆಯುವಾಗಲೂ ಅಷ್ಟೆ, ರಾಜೀವ್​ ಹಾಗೂ ಶುಭಾ ಒಪ್ಪಂದ ಮಾಡಿಕೊಂಡಿದ್ದರು. ಇದರಿಂದ ರಾಜೀವ್​ ಗೆದ್ದರು ಎನ್ನಲಾಗುತ್ತಿದೆ. ಇದನ್ನು ಪ್ರಶಾಂತ್​ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.

ಎಂಟನೇ ವಾರ ಕ್ಯಾಪ್ಟನ್ಸಿ ಟಾಸ್ಕ್​ ನಡೆದಿದೆ. ಗಾರ್ಡನ್​ ಏರಿಯಾದಲ್ಲಿ ಹೂವಿನ ಮಳೆ ಆಗುತ್ತದೆ. ಸ್ಪರ್ಧಿಗಳು ಹೂವನ್ನು ಸಂಗ್ರಹಿಸಬೇಕು, ಹೆಚ್ಚು ಹೂವಿದ್ದವರು ಕ್ಯಾಪ್ಟನ್​ ಆಗುತ್ತಾರೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿದ್ದ ಮಂಜು, ರಾಜೀವ್​, ರಘು ಗೌಡ ಹಾಗೂ ಪ್ರಶಾಂತ್​ ಹೂವನ್ನು ಸಂಗ್ರಹಿಸೋಕೆ ಮುಂದಾದರು. ನಂತರ ಇದಕ್ಕೆ ಮನೆಯವರ ಸಹಾಯ ಕೂಡ ಪಡೆಯಬಹುದು ಎನ್ನುವ ಆದೇಶ ಬಂತು. ಆಗ ಅರವಿಂದ್​, ವೈಷ್ಣವಿ ಮೊದಲಾದವರು ರಘುಗೆ ಸಹಾಯ ಮಾಡಿದರು. ಕೊನೆಯಲ್ಲಿ ಅಚ್ಚರಿ ಎಂಬಂತೆ ಪ್ರಶಾಂತ್​ ತಾವು ಸಂಗ್ರಹಿಸಿದ್ದ ಹೂವನ್ನು ರಘು ಗೌಡಗೆ ನೀಡಿದರು. ಈ ಮೂಲಕ ರಘು ಕ್ಯಾಪ್ಟನ್​ ಆಗೋಕೆ ಸಹಾಯ ಮಾಡಿದರು.

ನಂತರ ಮಾತನಾಡಿದ ಪ್ರಶಾಂತ್​, ಗುಂಪು ಗಾರಿಕೆ ಮಾಡಿಕೊಂಡು ಆಡುವ ಮಂಜು ಹಾಗೂ ರಾಜೀವ್​ಗೆ ಒಂದು ಪಾಠ ಕಲಿಸಬೇಕಿತ್ತು. ಆ ಪಾಠವನ್ನು ನಾನು ಕಲಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು​. ಈ ವಿಚಾರದಲ್ಲಿ ರಾಜೀವ್​ ತುಂಬಾನೇ ಉರಿದುಕೊಂಡರು. ಪ್ರಶಾಂತ್​ ಮಾಡಿದ್ದು ಸರಿಯಲ್ಲ ಎನ್ನುವ ಮಾತನ್ನು ಕೂಡ ಹೇಳಿದರು.

ಇದನ್ನೂ ಓದಿ: ನಿನ್ನ ಚರಿತ್ರೆ, ಸಂಸ್ಕೃತಿ ಬಗ್ಗೆ ಗೊತ್ತಿದೆ, ಈಗ ಹೇಳಲಾ?; ಪ್ರಶಾಂತ್​ ಮಾತಿಗೆ ಅತ್ತ ನಿಧಿ ಸುಬ್ಬಯ್ಯ

ಮಾಡಿದ ತಪ್ಪಿಗೆ ಪ್ರಾಯಶ್ಚಿತ?; ತಾಯಾಣೆ ಬಡ ಮಕ್ಕಳಿಗೆ 10 ಸಾವಿರ ಮೊಟ್ಟೆ ದಾನ ಮಾಡ್ತೀನಿ ಎಂದ ಪ್ರಶಾಂತ್​ ಸಂಬರಗಿ

Follow Us
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!