AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶ್ವರ್ಯಾ ರೈ-ಅಭಿಷೇಕ್​ ಪ್ರೀತಿಗೆ ಸೇತುವೆ ಆಗಿದ್ದು ಬಾಬಿ ಡಿಯೋಲ್; ಎರಡು ದಶಕಗಳ ನಂತರ ಹೊರ ಬಿತ್ತು ಸತ್ಯ

 ಅಭಿಷೇಕ್​ ಹಾಗೂ ಬಾಬಿ ಬಾಲ್ಯದ ಗೆಳೆಯರು. ಹೀಗಾಗಿ, ಬಾಬಿ ನೋಡೋಕೆ ಅಭಿಷೇಕ್​ ಸೆಟ್​ಗೆ ತೆರಳಿದ್ದರು. ಆಗ, ಅಭಿಷೇಕ್​ ಅವರನ್ನು ಐಶ್ವರ್ಯಾಗೆ ಬಾಬಿ ಪರಿಚಯಿಸಿಕೊಟ್ಟಿದ್ದರು.

ಐಶ್ವರ್ಯಾ ರೈ-ಅಭಿಷೇಕ್​ ಪ್ರೀತಿಗೆ ಸೇತುವೆ ಆಗಿದ್ದು ಬಾಬಿ ಡಿಯೋಲ್; ಎರಡು ದಶಕಗಳ ನಂತರ ಹೊರ ಬಿತ್ತು ಸತ್ಯ
ಬಾಬಿ ಹಾಗೂ ಐಶ್ವರ್ಯಾ-ಅಭಿಷೇಕ್​
ರಾಜೇಶ್ ದುಗ್ಗುಮನೆ
|

Updated on:Jul 02, 2021 | 8:20 PM

Share

ಐಶ್ವರ್ಯಾ ರೈ ಹಾಗೂ ಅಭಿಷೆಕ್​ ಬಚ್ಚನ್​ ಬಾಲಿವುಡ್​ನ ಕ್ಯೂಟ್​ ಕಪಲ್​. ಇತ್ತೀಚೆಗಷ್ಟೇ ಈ ಜೋಡಿ 14ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು. ವಿಶೇಷ ಎಂದರೆ, ಇವರ ಪ್ರೀತಿಗೆ ಸೇತುವೆ ಆಗಿದ್ದು ನಟ ಬಾಬಿ ಡಿಯೋಲ್. ಸಾಕಷ್ಟು ವರ್ಷಗಳ ನಂತರದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಐಶ್ವರ್ಯಾ ಹಾಗೂ ಅಭಿಷೇಕ್​ ಮೊಟ್ಟ ಮೊದಲ ಬಾರಿಗೆ ಭೇಟಿ ಆಗಿದ್ದು ಸ್ವಿಜರ್ಲೆಂಡ್​ನಲ್ಲಿ. 1996 ಸಮಯದಲ್ಲಿ ಐಶ್ವರ್ಯಾ ರೈ ಔರ್​ ಪ್ಯಾರ್​ ಹೋಗಯಾ ಚಿತ್ರದ ಶೂಟಿಂಗ್​ನಲ್ಲಿ ತೊಡಗಿದ್ದರು. ಈ ಸಿನಿಮಾಗೆ ಬಾಬಿ ಡಿಯೋಲ್​ ಹೀರೋ. ಇದು ಅವರ ಮೊದಲ ಚಿತ್ರ. ಇದೇ ವೇಳೆ ಅಮಿತಾಭ್​ ಬಚ್ಚನ್​ ಮೃತ್ಯುದಾತ ಚಿತ್ರಕ್ಕಾಗಿ ಲೊಕೇಷನ್ ಹುಡುಕಲು ಸ್ವಿಜರ್ಲೆಂಡ್​ಗೆ ತೆರಳಿದ್ದರು. ತಂದೆಯ ಜತೆ ಅಭಿಷೇಕ್​ ಕೂಡ ಹೋಗಿದ್ದರು.

ಅಭಿಷೇಕ್​ ಹಾಗೂ ಬಾಬಿ ಬಾಲ್ಯದ ಗೆಳೆಯರು. ಹೀಗಾಗಿ, ಬಾಬಿ ನೋಡೋಕೆ ಅಭಿಷೇಕ್​ ಸೆಟ್​ಗೆ ತೆರಳಿದ್ದರು. ಆಗ, ಅಭಿಷೇಕ್​ ಅವರನ್ನು ಐಶ್ವರ್ಯಾಗೆ ಬಾಬಿ ಪರಿಚಯಿಸಿಕೊಟ್ಟಿದ್ದರು. ನಂತರ ಮೂವರು ಒಟ್ಟಾಗಿ ಊಟ ಕೂಡ ಮಾಡಿದ್ದರು.

ಐಶ್ವರ್ಯಾ ಅವರನ್ನು ಮೊಟ್ಟ ಮೊದಲ ಬಾರಿಗೆ ಭೇಟಿ ಮಾಡಿದಾಗ ನಾನು ಪ್ರೊಡಕ್ಷನ್​ ಬಾಯ್​ ಆಗಿದ್ದೆ. ನಾನು ಸ್ವಿಜರ್ಲೆಂಡ್​ನಲ್ಲಿ ಓದಿದ್ದೆ. ಹೀಗಾಗಿ ಮೃತ್ಯುದಾತ ಚಿತ್ರತಂಡದವರು ಲೊಕೇಷನ್​ ಆಯ್ಕೆ ಮಾಡಲು ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು. ಆಗ ನಾನು ಬಾಬಿ ಸಹಾಯದಿಂದ ಐಶ್ವರ್ಯಾ ಅವರನ್ನು ಭೇಟಿ ಆದೆ ಎಂದು ಅಭಿಷೇಕ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

2007ರ ಎಪ್ರಿಲ್​ 20ರಂದು ಐಶ್ವರ್ಯಾ ಹಾಗೂ ಅಭಿಷೇಕ್​ ಮದುವೆ ಆದರು. ಕುಚ್​ ನ ಕಹೋ, ಗುರು, ರಾವಣ್​ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದಾರೆ. ಇಬ್ಬರೂ ಅನುರಾಗ್​ ಕಶ್ಯಪ್​ ನಿರ್ಮಾಣದ ಗುಲಾಬ್​ ಜಾಮೂನ್​ ಸಿನಿಮಾದಲ್ಲಿ ಒಟ್ಟಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪಾಕಿಸ್ತಾನದ ಈ ಟಿಕ್​ಟಾಕ್​ ಸ್ಟಾರ್​ ಐಶ್ವರ್ಯಾ ರೈ ಪಡಿಯಚ್ಚು!

ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಐಶ್ವರ್ಯಾ ರೈ ಕುಟುಂಬ; ಭರ್ಜರಿ ಡಾನ್ಸ್​ ವಿಡಿಯೋ ವೈರಲ್ 

Published On - 7:42 pm, Sat, 24 April 21

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ