AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶ್ವರ್ಯಾ ರೈ-ಅಭಿಷೇಕ್​ ಪ್ರೀತಿಗೆ ಸೇತುವೆ ಆಗಿದ್ದು ಬಾಬಿ ಡಿಯೋಲ್; ಎರಡು ದಶಕಗಳ ನಂತರ ಹೊರ ಬಿತ್ತು ಸತ್ಯ

 ಅಭಿಷೇಕ್​ ಹಾಗೂ ಬಾಬಿ ಬಾಲ್ಯದ ಗೆಳೆಯರು. ಹೀಗಾಗಿ, ಬಾಬಿ ನೋಡೋಕೆ ಅಭಿಷೇಕ್​ ಸೆಟ್​ಗೆ ತೆರಳಿದ್ದರು. ಆಗ, ಅಭಿಷೇಕ್​ ಅವರನ್ನು ಐಶ್ವರ್ಯಾಗೆ ಬಾಬಿ ಪರಿಚಯಿಸಿಕೊಟ್ಟಿದ್ದರು.

ಐಶ್ವರ್ಯಾ ರೈ-ಅಭಿಷೇಕ್​ ಪ್ರೀತಿಗೆ ಸೇತುವೆ ಆಗಿದ್ದು ಬಾಬಿ ಡಿಯೋಲ್; ಎರಡು ದಶಕಗಳ ನಂತರ ಹೊರ ಬಿತ್ತು ಸತ್ಯ
ಬಾಬಿ ಹಾಗೂ ಐಶ್ವರ್ಯಾ-ಅಭಿಷೇಕ್​
ರಾಜೇಶ್ ದುಗ್ಗುಮನೆ
|

Updated on:Jul 02, 2021 | 8:20 PM

Share

ಐಶ್ವರ್ಯಾ ರೈ ಹಾಗೂ ಅಭಿಷೆಕ್​ ಬಚ್ಚನ್​ ಬಾಲಿವುಡ್​ನ ಕ್ಯೂಟ್​ ಕಪಲ್​. ಇತ್ತೀಚೆಗಷ್ಟೇ ಈ ಜೋಡಿ 14ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು. ವಿಶೇಷ ಎಂದರೆ, ಇವರ ಪ್ರೀತಿಗೆ ಸೇತುವೆ ಆಗಿದ್ದು ನಟ ಬಾಬಿ ಡಿಯೋಲ್. ಸಾಕಷ್ಟು ವರ್ಷಗಳ ನಂತರದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಐಶ್ವರ್ಯಾ ಹಾಗೂ ಅಭಿಷೇಕ್​ ಮೊಟ್ಟ ಮೊದಲ ಬಾರಿಗೆ ಭೇಟಿ ಆಗಿದ್ದು ಸ್ವಿಜರ್ಲೆಂಡ್​ನಲ್ಲಿ. 1996 ಸಮಯದಲ್ಲಿ ಐಶ್ವರ್ಯಾ ರೈ ಔರ್​ ಪ್ಯಾರ್​ ಹೋಗಯಾ ಚಿತ್ರದ ಶೂಟಿಂಗ್​ನಲ್ಲಿ ತೊಡಗಿದ್ದರು. ಈ ಸಿನಿಮಾಗೆ ಬಾಬಿ ಡಿಯೋಲ್​ ಹೀರೋ. ಇದು ಅವರ ಮೊದಲ ಚಿತ್ರ. ಇದೇ ವೇಳೆ ಅಮಿತಾಭ್​ ಬಚ್ಚನ್​ ಮೃತ್ಯುದಾತ ಚಿತ್ರಕ್ಕಾಗಿ ಲೊಕೇಷನ್ ಹುಡುಕಲು ಸ್ವಿಜರ್ಲೆಂಡ್​ಗೆ ತೆರಳಿದ್ದರು. ತಂದೆಯ ಜತೆ ಅಭಿಷೇಕ್​ ಕೂಡ ಹೋಗಿದ್ದರು.

ಅಭಿಷೇಕ್​ ಹಾಗೂ ಬಾಬಿ ಬಾಲ್ಯದ ಗೆಳೆಯರು. ಹೀಗಾಗಿ, ಬಾಬಿ ನೋಡೋಕೆ ಅಭಿಷೇಕ್​ ಸೆಟ್​ಗೆ ತೆರಳಿದ್ದರು. ಆಗ, ಅಭಿಷೇಕ್​ ಅವರನ್ನು ಐಶ್ವರ್ಯಾಗೆ ಬಾಬಿ ಪರಿಚಯಿಸಿಕೊಟ್ಟಿದ್ದರು. ನಂತರ ಮೂವರು ಒಟ್ಟಾಗಿ ಊಟ ಕೂಡ ಮಾಡಿದ್ದರು.

ಐಶ್ವರ್ಯಾ ಅವರನ್ನು ಮೊಟ್ಟ ಮೊದಲ ಬಾರಿಗೆ ಭೇಟಿ ಮಾಡಿದಾಗ ನಾನು ಪ್ರೊಡಕ್ಷನ್​ ಬಾಯ್​ ಆಗಿದ್ದೆ. ನಾನು ಸ್ವಿಜರ್ಲೆಂಡ್​ನಲ್ಲಿ ಓದಿದ್ದೆ. ಹೀಗಾಗಿ ಮೃತ್ಯುದಾತ ಚಿತ್ರತಂಡದವರು ಲೊಕೇಷನ್​ ಆಯ್ಕೆ ಮಾಡಲು ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು. ಆಗ ನಾನು ಬಾಬಿ ಸಹಾಯದಿಂದ ಐಶ್ವರ್ಯಾ ಅವರನ್ನು ಭೇಟಿ ಆದೆ ಎಂದು ಅಭಿಷೇಕ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

2007ರ ಎಪ್ರಿಲ್​ 20ರಂದು ಐಶ್ವರ್ಯಾ ಹಾಗೂ ಅಭಿಷೇಕ್​ ಮದುವೆ ಆದರು. ಕುಚ್​ ನ ಕಹೋ, ಗುರು, ರಾವಣ್​ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದಾರೆ. ಇಬ್ಬರೂ ಅನುರಾಗ್​ ಕಶ್ಯಪ್​ ನಿರ್ಮಾಣದ ಗುಲಾಬ್​ ಜಾಮೂನ್​ ಸಿನಿಮಾದಲ್ಲಿ ಒಟ್ಟಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪಾಕಿಸ್ತಾನದ ಈ ಟಿಕ್​ಟಾಕ್​ ಸ್ಟಾರ್​ ಐಶ್ವರ್ಯಾ ರೈ ಪಡಿಯಚ್ಚು!

ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಐಶ್ವರ್ಯಾ ರೈ ಕುಟುಂಬ; ಭರ್ಜರಿ ಡಾನ್ಸ್​ ವಿಡಿಯೋ ವೈರಲ್ 

Published On - 7:42 pm, Sat, 24 April 21

ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ