AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗವನ್ನು ಹೇಗೆ ನಿಯಂತ್ರಿಸುತ್ತಿವೆ ಒಟಿಟಿಗಳು, ಹಿರಿಯ ನಿರ್ಮಾಪಕ ವಿಶ್ಲೇಷಣೆ

Allu Arvind: ಕೋವಿಡ್ ಬಳಕೆ ಹೆಚ್ಚು ಪ್ರಚಲಿತಕ್ಕೆ ಬಂದ ಒಟಿಟಿಗಳು ಈಗ ಚಿತ್ರೋದ್ಯಮದ ಭಾಗವೇ ಆಗಿಬಿಟ್ಟಿವೆ. ಒಟಿಟಿಗಳಿಗಾಗಿ ಸಿನಿಮಾ ಮಾಡುವ, ಒಟಿಟಿಗಳನ್ನು ಗಮನದಲ್ಲಿಟ್ಟುಕೊಂಡು ಸಿನಿಮಾಗಳನ್ನು ಮಾಡಲಾಗುತ್ತಿದೆ. ಆದರೆ ಈ ಒಟಿಟಿಗಳು ಚಿತ್ರರಂಗಕ್ಕೆ ಹೇಗೆ ಪರೋಕ್ಷ ಪೆಟ್ಟು ನೀಡುತ್ತಿವೆ ಎಂದು ಹಿರಿಯ ಮತ್ತು ಯಶಸ್ವಿ ನಿರ್ಮಾಪಕ ಅಲ್ಲು ಅರವಿಂದ್ ಮಾತನಾಡಿದ್ದಾರೆ.

ಚಿತ್ರರಂಗವನ್ನು ಹೇಗೆ ನಿಯಂತ್ರಿಸುತ್ತಿವೆ ಒಟಿಟಿಗಳು, ಹಿರಿಯ ನಿರ್ಮಾಪಕ ವಿಶ್ಲೇಷಣೆ
Allu Arvind
ಮಂಜುನಾಥ ಸಿ.
|

Updated on: Feb 14, 2025 | 4:28 PM

Share

ಕೋವಿಡ್ ಬಳಿಕ ಒಟಿಟಿ ಭೂಮ್ ಸಂಭವಿಸಿದೆ. ಕೋವಿಡ್ ಬಳಿಕ ಒಟಿಟಿ ಮಾರುಕಟ್ಟೆ ನೂರಾರು ಪಟ್ಟು ಹೆಚ್ಚಾಗಿದೆ. ಯಾವ ಮಟ್ಟಿಗೆಂದರೆ ಸ್ಟಾರ್ ನಟ, ನಟಿಯರು ಸಹ ಒಟಿಟಿಗಾಗಿ ಪ್ರತ್ಯೇಕವಾಗಿ ಸಿನಿಮಾ ಮಾಡುತ್ತಿದ್ದಾರೆ. ಒಟಿಟಿ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾದ ಕತೆಗಳನ್ನು ಹೆಣೆಯಲಾಗುತ್ತಿದೆ. ಸಿನಿಮಾ ಮಂದಿಗೆ ಒಟಿಟಿ ಹೊಸ ಮಾರುಕಟ್ಟೆ ಅವಕಾಶವಾಗಿದೆ. ಸ್ಯಾಟಲೈಟ್ ರೈಟ್ಸ್, ಆಡಿಯೋ ರೈಟ್ಸ್​ ಅನ್ನು ಮಾತ್ರವೇ ನಂಬಿಕೊಂಡಿದ್ದ ನಿರ್ಮಾಪಕರಿಗೆ ಒಟಿಟಿ ರೈಟ್ಸ್ ಅಥವಾ ಡಿಜಿಟಲ್ ರೈಟ್ಸ್ ಭರವಸೆ ನೀಡಿದೆ. ಆದರೆ ಒಟಿಟಿಗಳು ಬೆಳೆದಷ್ಟೂ, ಚಿತ್ರರಂಗಕ್ಕೆ ಅಪಾಯಕಾರಿ ಎಂದು ಹಿರಿಯ ಮತ್ತು ಯಶಸ್ವಿ ನಿರ್ಮಾಪಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ದೇಶದ ಯಶಸ್ವಿ ನಿರ್ಮಾಪಕರಲ್ಲಿ ಒಬ್ಬರು. ಕಳೆದ ಕೆಲ ವರ್ಷಗಳಿಂದ ಅಂತೂ ಅಲ್ಲು ಅರವಿಂದ್ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ‘ತಂಡೇಲ್’ ಸಿನಿಮಾದ ಮೇಲೆ ಅಲ್ಲು ಅರವಿಂದ್ ಬಂಡವಾಳ ತೊಡಗಿಸಿದ್ದರು. ಆ ಸಿನಿಮಾ ಸಹ ಬ್ಲಾಕ್ ಬಸ್ಟರ್ ಆಗಿದೆ. ಇತ್ತೀಚೆಗಿನ ಕಾರ್ಯಕ್ರಮದಲ್ಲಿ ಒಟಿಟಿಗಳ ಬಗ್ಗೆ ಮಾತನಾಡಿರುವ ಅಲ್ಲು ಅರವಿಂದ್, ಒಟಿಟಿಗಳು ಹೇಗೆ ಚಿತ್ರರಂಗವನ್ನು ಕಂಟ್ರೋಲ್ ಮಾಡುತ್ತಿವೆ ಎಂದು ವಿವರಿಸಿದ್ದಾರೆ.

ಕೆಲ ನಿರ್ಮಾಪಕರು ಇತ್ತೀಚೆಗೆ ಒಟಿಟಿಗಳನ್ನು ನಂಬಿಕೊಂಡು ಸಿನಿಮಾಗಳ ಮೇಲೆ ಬಂಡವಾಳ ಹೂಡುತ್ತಿದ್ದಾರೆ. ಇದು ಬಹಳ ಅಪಾಯಕಾರಿ. ಸಿನಿಮಾ ಸ್ವಲ್ಪ ಚೆನ್ನಾಗಿ ಓಡಿದರೆ ಸಾಕು ಒಟಿಟಿಗಳು ಖರೀದಿ ಮಾಡುತ್ತವೆ ಎಂಬ ಭ್ರಮೆಯಲ್ಲಿದ್ದಾರೆ. ಸಿನಿಮಾ ಓಡಿದರೆ ಒಟಿಟಿಗಳು ಖರೀದಿ ಮಾಡುತ್ತವೆ ಸರಿ ಒಂದೊಮ್ಮೆ ಸಿನಿಮಾಗಳು ಓಡದೇ ಇದ್ದರೆ ಏನು ಮಾಡುವುದು? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಏಕಕಾಲಕ್ಕೆ ಟಿವಿ, ಒಟಿಟಿಗೆ ಮ್ಯಾಕ್ಸ್ ಸಿನಿಮಾ ಎಂಟ್ರಿ; ದಿನಾಂಕ, ಸಮಯದ ಮಾಹಿತಿ ಇಲ್ಲಿದೆ..

ಒಟಿಟಿಗಳು ಕ್ಯಾಲೆಂಡರ್ ಇಯರ್ ತಯಾರಿ ಮಾಡಿಕೊಂಡಿವೆ. ಇಂಥಹಾ ತಿಂಗಳು ಇಂಥಹಾ ಸಿನಿಮಾಗಳನ್ನು ಬಿಡುಗಡೆ ಮಾಡಬೇಕು ಎಂದು ಪಟ್ಟಿ ತಯಾರು ಮಾಡಿಕೊಂಡಿದ್ದು, ಅದರ ಪ್ರಕಾರವೇ ಒಟಿಟಿಗಳು ಸಿನಿಮಾಗಳನ್ನು ಖರೀದಿ ಮಾಡುತ್ತಿವೆ. ಸಿನಿಮಾಕ್ಕೆ ಟಾಕ್ ಚೆನ್ನಾಗಿದ್ದು, ಚಿತ್ರಮಂದಿರದಲ್ಲಿ ಚೆನ್ನಾಗಿ ಪ್ರದರ್ಶನ ಆಗುತ್ತಿದೆಯೆಂದರೆ ಆ ಟ್ರೆಂಡ್ ಅನ್ನು ಎನ್​ಕ್ಯಾಶ್ ಮಾಡಿಕೊಳ್ಳಲು ಒಟಿಟಿಗಳು ಮೇಲೆ ಬಿದ್ದು ಖರೀದಿ ಮಾಡುತ್ತವೆ. ಆದೇ ಸಿನಿಮಾ ತುಸು ಹಿನ್ನಡೆ ಕಂಡರೆ, ಸ್ಟಾರ್​ಗಳ ಸಿನಿಮಾಗಳಾದರೂ ಸಹ ಮೂಸಿ ನೋಡುವುದಿಲ್ಲ’ ಎಂದಿದ್ದಾರೆ ಅವರು.

ಕೋವಿಡ್ ಸಮಯದಲ್ಲಿ ಒಟಿಟಿಗಳು ಸಿನಿಮಾ ಖರೀದಿ ಬಗ್ಗೆ ಧಾರಾಳವಾಗಿದ್ದವು. ಅದಾದ ಬಳಿಕ ಈಗ ಲೆಕ್ಕಾಚಾರ ಹಾಕಿ, ಚಿತ್ರಮಂದಿರದಲ್ಲಿ ಹಿಟ್ ಆದ ಸಿನಿಮಾಗಳನ್ನು ಮಾತ್ರವೇ ಖರೀದಿ ಮಾಡುತ್ತಿವೆ. ಸಿನಿಮಾ ಚೆನ್ನಾಗಿದ್ದು, ಯಾವುದೋ ಕಾರಣಕ್ಕೆ ಚಿತ್ರಮಂದಿರದಲ್ಲಿ ಓಡಲಿಲ್ಲವೆಂದರೂ ಸಹ ಸಿನಿಮಾಗಳನ್ನು ಖರೀದಿ ಮಾಡುತ್ತಿಲ್ಲ. ಕನ್ನಡ ಸಿನಿಮಾಗಳ ಬಗ್ಗೆ ಅಂತೂ ಒಟಿಟಿಗಳು ದೊಡ್ಡ ತಾತ್ಸಾರ ಭಾವವನ್ನು ಹೊಂದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ