AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗವನ್ನು ಹೇಗೆ ನಿಯಂತ್ರಿಸುತ್ತಿವೆ ಒಟಿಟಿಗಳು, ಹಿರಿಯ ನಿರ್ಮಾಪಕ ವಿಶ್ಲೇಷಣೆ

Allu Arvind: ಕೋವಿಡ್ ಬಳಕೆ ಹೆಚ್ಚು ಪ್ರಚಲಿತಕ್ಕೆ ಬಂದ ಒಟಿಟಿಗಳು ಈಗ ಚಿತ್ರೋದ್ಯಮದ ಭಾಗವೇ ಆಗಿಬಿಟ್ಟಿವೆ. ಒಟಿಟಿಗಳಿಗಾಗಿ ಸಿನಿಮಾ ಮಾಡುವ, ಒಟಿಟಿಗಳನ್ನು ಗಮನದಲ್ಲಿಟ್ಟುಕೊಂಡು ಸಿನಿಮಾಗಳನ್ನು ಮಾಡಲಾಗುತ್ತಿದೆ. ಆದರೆ ಈ ಒಟಿಟಿಗಳು ಚಿತ್ರರಂಗಕ್ಕೆ ಹೇಗೆ ಪರೋಕ್ಷ ಪೆಟ್ಟು ನೀಡುತ್ತಿವೆ ಎಂದು ಹಿರಿಯ ಮತ್ತು ಯಶಸ್ವಿ ನಿರ್ಮಾಪಕ ಅಲ್ಲು ಅರವಿಂದ್ ಮಾತನಾಡಿದ್ದಾರೆ.

ಚಿತ್ರರಂಗವನ್ನು ಹೇಗೆ ನಿಯಂತ್ರಿಸುತ್ತಿವೆ ಒಟಿಟಿಗಳು, ಹಿರಿಯ ನಿರ್ಮಾಪಕ ವಿಶ್ಲೇಷಣೆ
Allu Arvind
ಮಂಜುನಾಥ ಸಿ.
|

Updated on: Feb 14, 2025 | 4:28 PM

Share

ಕೋವಿಡ್ ಬಳಿಕ ಒಟಿಟಿ ಭೂಮ್ ಸಂಭವಿಸಿದೆ. ಕೋವಿಡ್ ಬಳಿಕ ಒಟಿಟಿ ಮಾರುಕಟ್ಟೆ ನೂರಾರು ಪಟ್ಟು ಹೆಚ್ಚಾಗಿದೆ. ಯಾವ ಮಟ್ಟಿಗೆಂದರೆ ಸ್ಟಾರ್ ನಟ, ನಟಿಯರು ಸಹ ಒಟಿಟಿಗಾಗಿ ಪ್ರತ್ಯೇಕವಾಗಿ ಸಿನಿಮಾ ಮಾಡುತ್ತಿದ್ದಾರೆ. ಒಟಿಟಿ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾದ ಕತೆಗಳನ್ನು ಹೆಣೆಯಲಾಗುತ್ತಿದೆ. ಸಿನಿಮಾ ಮಂದಿಗೆ ಒಟಿಟಿ ಹೊಸ ಮಾರುಕಟ್ಟೆ ಅವಕಾಶವಾಗಿದೆ. ಸ್ಯಾಟಲೈಟ್ ರೈಟ್ಸ್, ಆಡಿಯೋ ರೈಟ್ಸ್​ ಅನ್ನು ಮಾತ್ರವೇ ನಂಬಿಕೊಂಡಿದ್ದ ನಿರ್ಮಾಪಕರಿಗೆ ಒಟಿಟಿ ರೈಟ್ಸ್ ಅಥವಾ ಡಿಜಿಟಲ್ ರೈಟ್ಸ್ ಭರವಸೆ ನೀಡಿದೆ. ಆದರೆ ಒಟಿಟಿಗಳು ಬೆಳೆದಷ್ಟೂ, ಚಿತ್ರರಂಗಕ್ಕೆ ಅಪಾಯಕಾರಿ ಎಂದು ಹಿರಿಯ ಮತ್ತು ಯಶಸ್ವಿ ನಿರ್ಮಾಪಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ದೇಶದ ಯಶಸ್ವಿ ನಿರ್ಮಾಪಕರಲ್ಲಿ ಒಬ್ಬರು. ಕಳೆದ ಕೆಲ ವರ್ಷಗಳಿಂದ ಅಂತೂ ಅಲ್ಲು ಅರವಿಂದ್ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ‘ತಂಡೇಲ್’ ಸಿನಿಮಾದ ಮೇಲೆ ಅಲ್ಲು ಅರವಿಂದ್ ಬಂಡವಾಳ ತೊಡಗಿಸಿದ್ದರು. ಆ ಸಿನಿಮಾ ಸಹ ಬ್ಲಾಕ್ ಬಸ್ಟರ್ ಆಗಿದೆ. ಇತ್ತೀಚೆಗಿನ ಕಾರ್ಯಕ್ರಮದಲ್ಲಿ ಒಟಿಟಿಗಳ ಬಗ್ಗೆ ಮಾತನಾಡಿರುವ ಅಲ್ಲು ಅರವಿಂದ್, ಒಟಿಟಿಗಳು ಹೇಗೆ ಚಿತ್ರರಂಗವನ್ನು ಕಂಟ್ರೋಲ್ ಮಾಡುತ್ತಿವೆ ಎಂದು ವಿವರಿಸಿದ್ದಾರೆ.

ಕೆಲ ನಿರ್ಮಾಪಕರು ಇತ್ತೀಚೆಗೆ ಒಟಿಟಿಗಳನ್ನು ನಂಬಿಕೊಂಡು ಸಿನಿಮಾಗಳ ಮೇಲೆ ಬಂಡವಾಳ ಹೂಡುತ್ತಿದ್ದಾರೆ. ಇದು ಬಹಳ ಅಪಾಯಕಾರಿ. ಸಿನಿಮಾ ಸ್ವಲ್ಪ ಚೆನ್ನಾಗಿ ಓಡಿದರೆ ಸಾಕು ಒಟಿಟಿಗಳು ಖರೀದಿ ಮಾಡುತ್ತವೆ ಎಂಬ ಭ್ರಮೆಯಲ್ಲಿದ್ದಾರೆ. ಸಿನಿಮಾ ಓಡಿದರೆ ಒಟಿಟಿಗಳು ಖರೀದಿ ಮಾಡುತ್ತವೆ ಸರಿ ಒಂದೊಮ್ಮೆ ಸಿನಿಮಾಗಳು ಓಡದೇ ಇದ್ದರೆ ಏನು ಮಾಡುವುದು? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಏಕಕಾಲಕ್ಕೆ ಟಿವಿ, ಒಟಿಟಿಗೆ ಮ್ಯಾಕ್ಸ್ ಸಿನಿಮಾ ಎಂಟ್ರಿ; ದಿನಾಂಕ, ಸಮಯದ ಮಾಹಿತಿ ಇಲ್ಲಿದೆ..

ಒಟಿಟಿಗಳು ಕ್ಯಾಲೆಂಡರ್ ಇಯರ್ ತಯಾರಿ ಮಾಡಿಕೊಂಡಿವೆ. ಇಂಥಹಾ ತಿಂಗಳು ಇಂಥಹಾ ಸಿನಿಮಾಗಳನ್ನು ಬಿಡುಗಡೆ ಮಾಡಬೇಕು ಎಂದು ಪಟ್ಟಿ ತಯಾರು ಮಾಡಿಕೊಂಡಿದ್ದು, ಅದರ ಪ್ರಕಾರವೇ ಒಟಿಟಿಗಳು ಸಿನಿಮಾಗಳನ್ನು ಖರೀದಿ ಮಾಡುತ್ತಿವೆ. ಸಿನಿಮಾಕ್ಕೆ ಟಾಕ್ ಚೆನ್ನಾಗಿದ್ದು, ಚಿತ್ರಮಂದಿರದಲ್ಲಿ ಚೆನ್ನಾಗಿ ಪ್ರದರ್ಶನ ಆಗುತ್ತಿದೆಯೆಂದರೆ ಆ ಟ್ರೆಂಡ್ ಅನ್ನು ಎನ್​ಕ್ಯಾಶ್ ಮಾಡಿಕೊಳ್ಳಲು ಒಟಿಟಿಗಳು ಮೇಲೆ ಬಿದ್ದು ಖರೀದಿ ಮಾಡುತ್ತವೆ. ಆದೇ ಸಿನಿಮಾ ತುಸು ಹಿನ್ನಡೆ ಕಂಡರೆ, ಸ್ಟಾರ್​ಗಳ ಸಿನಿಮಾಗಳಾದರೂ ಸಹ ಮೂಸಿ ನೋಡುವುದಿಲ್ಲ’ ಎಂದಿದ್ದಾರೆ ಅವರು.

ಕೋವಿಡ್ ಸಮಯದಲ್ಲಿ ಒಟಿಟಿಗಳು ಸಿನಿಮಾ ಖರೀದಿ ಬಗ್ಗೆ ಧಾರಾಳವಾಗಿದ್ದವು. ಅದಾದ ಬಳಿಕ ಈಗ ಲೆಕ್ಕಾಚಾರ ಹಾಕಿ, ಚಿತ್ರಮಂದಿರದಲ್ಲಿ ಹಿಟ್ ಆದ ಸಿನಿಮಾಗಳನ್ನು ಮಾತ್ರವೇ ಖರೀದಿ ಮಾಡುತ್ತಿವೆ. ಸಿನಿಮಾ ಚೆನ್ನಾಗಿದ್ದು, ಯಾವುದೋ ಕಾರಣಕ್ಕೆ ಚಿತ್ರಮಂದಿರದಲ್ಲಿ ಓಡಲಿಲ್ಲವೆಂದರೂ ಸಹ ಸಿನಿಮಾಗಳನ್ನು ಖರೀದಿ ಮಾಡುತ್ತಿಲ್ಲ. ಕನ್ನಡ ಸಿನಿಮಾಗಳ ಬಗ್ಗೆ ಅಂತೂ ಒಟಿಟಿಗಳು ದೊಡ್ಡ ತಾತ್ಸಾರ ಭಾವವನ್ನು ಹೊಂದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ