AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1500 ರೂಪಾಯಿ ಪಾವತಿಸಿದರೂ ಸಾಲು ಸಾಲು ಜಾಹೀರಾತು; ಸುಸ್ತಾದ ಪ್ರೈಮ್​ ಚಂದಾದಾರರು

Amazon Prime Video: ಸಾಮಾನ್ಯವಾಗಿ ಮೆಂಬರ್​ಶಿಪ್ ಪಡೆದ ನಂತರ ಅಲ್ಲಿ ಯಾವುದೇ ಜಾಹೀರಾತು ಹಾಕುವುದಿಲ್ಲ. ಅಮೇಜಾನ್ ಪ್ರೈಮ್ ವಿಡಿಯೋದವರು ಮೊದಲು ಇದೇ ರೀತಿಯಲ್ಲಿ ಇದ್ದರು. ಆದರೆ, ಈಗ ಅವರು ಬದಲಾಗಿದ್ದಾರೆ. 1499 ರೂಪಾಯಿ ಕೊಟ್ಟು ವರ್ಷದ ಚಂದಾದಾರರಾದವರು ಜಾಹೀರಾತು ನೋಡಬೇಕಾದ ಅನಿವಾರ್ಯತೆ ಎದುರಾಗಿದೆ.

1500 ರೂಪಾಯಿ ಪಾವತಿಸಿದರೂ ಸಾಲು ಸಾಲು ಜಾಹೀರಾತು; ಸುಸ್ತಾದ ಪ್ರೈಮ್​ ಚಂದಾದಾರರು
ಪ್ರೈಮ್ ವಿಡಿಯೋ
ರಾಜೇಶ್ ದುಗ್ಗುಮನೆ
|

Updated on: Nov 25, 2025 | 10:53 AM

Share

ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಇತ್ತೀಚೆಗೆ ‘ದಿ ಫ್ಯಾಮಿಲಿ ಮ್ಯಾನ್’ (Family Man 3) ಸರಣಿಯ ಮೂರನೇ ಸೀಸನ್ ಪ್ರಸಾರ ಆರಂಭಿಸಿದೆ. ಈ ಸರಣಿ ನೋಡುವ ಪ್ರೇಕ್ಷಕ ಸುಸ್ತಾಗಿ ಹೋಗಿದ್ದಾನೆ. ಜಾಹೀರಾತೊಳಗೆ ವೆಬ್ ಸೀರಿಸ್ ಅಥವಾ ವೆಬ್ ಸೀರಿಸ್ ಒಳಗೆ ಜಾಹೀರಾತೋ ಎಂಬಂತಾಗಿದೆ. ಒಂದು ಗಂಟೆಯ ಎಪಿಸೋಡ್​ಗೆ ಬರೋಬ್ಬರಿ ನಾಲ್ಕರಿಂದ ಐದು ಜಾಹೀರಾತು ನೋಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆ ಅಮೇಜಾನ್ ಪ್ರೈಮ್ ಚಂದಾದಾರರು ಆಕ್ರೋಶ ಹೊರಹಾಕಿದ್ದಾರೆ.

ಸಾಮಾನ್ಯವಾಗಿ ಮೆಂಬರ್​ಶಿಪ್ ಪಡೆದ ನಂತರ ಅಲ್ಲಿ ಯಾವುದೇ ಜಾಹೀರಾತು ಹಾಕುವುದಿಲ್ಲ. ಅಮೇಜಾನ್ ಪ್ರೈಮ್ ವಿಡಿಯೋದವರು ಮೊದಲು ಇದೇ ರೀತಿಯಲ್ಲಿ ಇದ್ದರು. ಆದರೆ, ಈಗ ಅವರು ಬದಲಾಗಿದ್ದಾರೆ. 1499 ರೂಪಾಯಿ ಕೊಟ್ಟು ವರ್ಷದ ಚಂದಾದಾರರಾದವರು ಜಾಹೀರಾತು ನೋಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನು, ಮೆಂಬರ್​ಶಿಪ್ ಹೊಂದಿದ್ದರೂ ಕೆಲವು ಸಿನಿಮಾಗಳನ್ನು ರೆಂಟ್​ಗೆ ನೋಡಬೇಕಾದ ಪರಿಸ್ಥಿತಿ ಇದೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ‘ಅಮೇಜಾನ್ ಪ್ರೈಮ್ ವಿಡಿಯೋದವರು ಭಾರತದಲ್ಲಿ ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘1500 ರೂಪಾಯಿ ಕೊಟ್ಟ ಮೇಲೂ ಜಾಹೀರಾತು ನೋಡಬೇಕು ಎಂದರೆ ಅರ್ಥವೇನು? ಇದರ ಬದಲು ಪೈರಸಿ ಕಾಪಿ ನೋಡಿದರೆ ಉತ್ತಮ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಹೇಗಿದೆ ಫ್ಯಾಮಿಲಿ ಮ್ಯಾನ್ 3’; ಮನೋಜ್ ನಟನೆಯ ಸೀರಿಸ್ ನೋಡಿದವರು ಹೇಳಿದ್ದಿಷ್ಟು

ಅಮೇಜಾನ್ ಪ್ರೈಮ್ ವಿಡಿಯೋ ಪ್ರೈಮ್ ಮೆಂಬರ್​ಶಿಪ್ ಪಡೆಯಲು ಈಗ ನೀವು 1499 ರೂಪಾಯಿ ಮಾತ್ರ ಪಾವತಿಸಿದರೆ ಸಾಲುವುದಿಲ್ಲ. ಹೆಚ್ಚುವರಿಯಾಗಿ 699 ರೂಪಾಯಿ ಪಾವತಿಸಬೇಕು. ಅಂದರೆ ಮಾತ್ರ ಜಾಹೀರಾತು ರಹಿತವಾಗಿ ಸಿನಿಮಾ/ಸರಣಿ ಪ್ರಸಾರ ಕಾಣಿಸುತ್ತದೆ. ಇದು ಸಿನಿಮಾ ನೋಡುವ ಅನುಭವ ಕೊಲ್ಲುತ್ತಿದೆ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ