AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jyothika: 50ನೇ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿ ಜ್ಯೋತಿಕಾ; ಅಚ್ಚರಿಯ ಗಿಫ್ಟ್ ನೀಡಿದ ಆಮೆಜಾನ್ ಪ್ರೈಮ್

Udanpirappe: ಕಾಲಿವುಡ್​ನ ಖ್ಯಾತ ನಟಿ ಜ್ಯೋತಿಕಾ ತಮ್ಮ 50ನೇ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಈ ವೇಳೆ ಆಮೆಜಾನ್ ಪ್ರೈಮ್ ವಿಡಿಯೋ ಅವರಿಗೆ ವಿಶೇಷ ರೀತಿಯಲ್ಲಿ ಶುಭಕೋರಿದೆ.

Jyothika: 50ನೇ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿ ಜ್ಯೋತಿಕಾ; ಅಚ್ಚರಿಯ ಗಿಫ್ಟ್ ನೀಡಿದ ಆಮೆಜಾನ್ ಪ್ರೈಮ್
ಮರಳು ಶಿಲ್ಪ (ಎಡ), ಉಡನ್​ಪಿರಪ್ಪೆ ಚಿತ್ರದಲ್ಲಿ ಜ್ಯೋತಿಕಾ (ಬಲ)
TV9 Web
| Edited By: |

Updated on: Oct 14, 2021 | 4:07 PM

Share

ನಟಿಯರ ವೃತ್ತಿ ಬದುಕಿನಲ್ಲಿ 50ನೇ ಚಿತ್ರದ ಸಾಧನೆ ಬಹಳ ಅಪೂರ್ವವಾದದ್ದು. ಕಾಲಿವುಡ್​ನ ಖ್ಯಾತ ನಟಿ ಜ್ಯೋತಿಕಾ ಸದ್ಯ ಇದೇ ಹಾದಿಯಲ್ಲಿದ್ದಾರೆ. ಅವರ ಅಭಿನಯದ 50ನೇ ಚಿತ್ರ ‘ಉಡನ್​ಪಿರಪ್ಪೆ’ ಇಂದು ಬಿಡುಗಡೆಯಾಗಿದೆ. ವಿಶೇಷವೆಂದರೆ ಜ್ಯೋತಿಕಾರ ಈ ಹಿಂದಿನ ಚಿತ್ರದಂತೆ ಇದೂ ಕೂಡ ನೇರವಾಗಿ ಆಮೆಜಾನ್ ಪ್ರೈಮ್​ ಮೂಲಕ ನೇರವಾಗಿ ಒಟಿಟಿ ಬಿಡುಗಡೆ ಕಂಡಿದೆ. ಈ ವಿಶೇಷ ಸಂದರ್ಭದಲ್ಲಿ ಆಮೆಜಾನ್ ಪ್ರೈಮ್ ವಿಡಿಯೋ ಜ್ಯೋತಿಕಾ ಅವರಿಗೆ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡಿದೆ. ಏನದು? ಇಲ್ಲಿದೆ ಮಾಹಿತಿ.

ಚೆನ್ನೈನ ಮರೀನಾ ಬೀಚ್​ನಲ್ಲಿಮರಳು ಶಿಲ್ಪದ ಮುಖಾಂತರ ಜ್ಯೋತಿಕಾರ 50ನೇ ಚಿತ್ರಕ್ಕೆ ಆಮೆಜಾನ್ ಪ್ರೈಮ್ ಶುಭಾಶಯ ಕೋರಿದೆ. ಸಾಮಾನ್ಯವಾಗಿ ಆನ್​ಲೈನ್ ವೇದಿಕೆಗಳು ಡಿಜಿಟಲ್ ವೇದಿಕೆಗಳಲ್ಲಿ ಪೋಸ್ಟರ್​, ಟೀಸರ್​ ಮೊದಲಾದವುಗಳ ಮೂಲಕ ಶುಭಕೋರುವುದು ವಾಡಿಕೆ. ಆದರೆ ಆಮೆಜಾನ್ ಪ್ರೈಮ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಖ್ಯಾತ ಕಲಾವಿದೆಗೆ ಗೌರವ ಸಲ್ಲಿಸಿದೆ. ಇದು ಜ್ಯೋತಿಕಾರಿಗೆ ಬಹಳ ಇಷ್ಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಧನ್ಯವಾದ ಸಮರ್ಪಿಸಿದ್ದಾರೆ.

ಖ್ಯಾತ ಮರೀನಾ ಬೀಚ್​ನಲ್ಲಿ ನಿತ್ಯವೂ ಸಾವಿರಾರು ಮಂದಿ ಓಡಾಡುತ್ತಾರೆ. ಅಲ್ಲಿ ಜ್ಯೋತಿಕಾರಿಗೆ ವಿಶೇಷ ಕಲಾ ಪ್ರದರ್ಶನದ ಮುಖಾಂತರ ಪ್ರೈಮ್ ಶುಭಕೋರಿದ್ದು, ಜ್ಯೋತಿಕಾರಿಗೆ ಬಹಳ ಸಂತಸ ಉಂಟುಮಾಡಿದೆ. ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನಿಮ್ಮ ಪ್ರೀತಿ ಹಾಗೂ ಗೌರವಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಜ್ಯೋತಿಕಾ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ:

View this post on Instagram

A post shared by Jyotika (@jyotika)

ಈ ಮರಳು ಶಿಲ್ಪ ಸದ್ಯ ಮರೀನಾ ಬೀಚ್​ನ ಆಕರ್ಷಣೆಯಾಗಿದ್ದು, ಇದನ್ನು ನೋಡಲು ಜನರು ಆಗಮಿಸುತ್ತಿದ್ದಾರೆ. ಈ ಶಿಲ್ಪವು ಅಕ್ಟೋಬರ್ 17ರವರೆಗೆ ನೋಡುಗರಿಗೆ ಲಭ್ಯವಿರಲಿದೆ. ‘ಉದನ್​ಪಿರಪ್ಪೆ’ ಚಿತ್ರವನ್ನು ಇರಾ ಸರವಣನ್ ನಿರ್ದೇಶಿಸಿದ್ದು, ಜ್ಯೋತಿಕಾ, ಶಶಿಕುಮಾರ್, ಸೂರಿ ಮೊದಲಾದ ತಾರೆಯರು ನಟಿಸಿದ್ದಾರೆ. ಈ ಚಿತ್ರವು ತೆಲುಗಿಗೂ ಡಬ್ ಆಗಿದ್ದು, ‘ರಕ್ತ ಸಂಬಂಧಮ್’ ಎಂಬ ಹೆಸರಿನಲ್ಲಿ ವೀಕ್ಷಕರಿಗೆ ಲಭ್ಯವಿದೆ.

ಇದನ್ನೂ ಓದಿ:

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್​ ವಿಡಿಯೋ ಸಂದೇಶ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?