Jyothika: 50ನೇ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿ ಜ್ಯೋತಿಕಾ; ಅಚ್ಚರಿಯ ಗಿಫ್ಟ್ ನೀಡಿದ ಆಮೆಜಾನ್ ಪ್ರೈಮ್

Udanpirappe: ಕಾಲಿವುಡ್​ನ ಖ್ಯಾತ ನಟಿ ಜ್ಯೋತಿಕಾ ತಮ್ಮ 50ನೇ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಈ ವೇಳೆ ಆಮೆಜಾನ್ ಪ್ರೈಮ್ ವಿಡಿಯೋ ಅವರಿಗೆ ವಿಶೇಷ ರೀತಿಯಲ್ಲಿ ಶುಭಕೋರಿದೆ.

Jyothika: 50ನೇ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿ ಜ್ಯೋತಿಕಾ; ಅಚ್ಚರಿಯ ಗಿಫ್ಟ್ ನೀಡಿದ ಆಮೆಜಾನ್ ಪ್ರೈಮ್
ಮರಳು ಶಿಲ್ಪ (ಎಡ), ಉಡನ್​ಪಿರಪ್ಪೆ ಚಿತ್ರದಲ್ಲಿ ಜ್ಯೋತಿಕಾ (ಬಲ)
Follow us
| Updated By: shivaprasad.hs

Updated on: Oct 14, 2021 | 4:07 PM

ನಟಿಯರ ವೃತ್ತಿ ಬದುಕಿನಲ್ಲಿ 50ನೇ ಚಿತ್ರದ ಸಾಧನೆ ಬಹಳ ಅಪೂರ್ವವಾದದ್ದು. ಕಾಲಿವುಡ್​ನ ಖ್ಯಾತ ನಟಿ ಜ್ಯೋತಿಕಾ ಸದ್ಯ ಇದೇ ಹಾದಿಯಲ್ಲಿದ್ದಾರೆ. ಅವರ ಅಭಿನಯದ 50ನೇ ಚಿತ್ರ ‘ಉಡನ್​ಪಿರಪ್ಪೆ’ ಇಂದು ಬಿಡುಗಡೆಯಾಗಿದೆ. ವಿಶೇಷವೆಂದರೆ ಜ್ಯೋತಿಕಾರ ಈ ಹಿಂದಿನ ಚಿತ್ರದಂತೆ ಇದೂ ಕೂಡ ನೇರವಾಗಿ ಆಮೆಜಾನ್ ಪ್ರೈಮ್​ ಮೂಲಕ ನೇರವಾಗಿ ಒಟಿಟಿ ಬಿಡುಗಡೆ ಕಂಡಿದೆ. ಈ ವಿಶೇಷ ಸಂದರ್ಭದಲ್ಲಿ ಆಮೆಜಾನ್ ಪ್ರೈಮ್ ವಿಡಿಯೋ ಜ್ಯೋತಿಕಾ ಅವರಿಗೆ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡಿದೆ. ಏನದು? ಇಲ್ಲಿದೆ ಮಾಹಿತಿ.

ಚೆನ್ನೈನ ಮರೀನಾ ಬೀಚ್​ನಲ್ಲಿಮರಳು ಶಿಲ್ಪದ ಮುಖಾಂತರ ಜ್ಯೋತಿಕಾರ 50ನೇ ಚಿತ್ರಕ್ಕೆ ಆಮೆಜಾನ್ ಪ್ರೈಮ್ ಶುಭಾಶಯ ಕೋರಿದೆ. ಸಾಮಾನ್ಯವಾಗಿ ಆನ್​ಲೈನ್ ವೇದಿಕೆಗಳು ಡಿಜಿಟಲ್ ವೇದಿಕೆಗಳಲ್ಲಿ ಪೋಸ್ಟರ್​, ಟೀಸರ್​ ಮೊದಲಾದವುಗಳ ಮೂಲಕ ಶುಭಕೋರುವುದು ವಾಡಿಕೆ. ಆದರೆ ಆಮೆಜಾನ್ ಪ್ರೈಮ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಖ್ಯಾತ ಕಲಾವಿದೆಗೆ ಗೌರವ ಸಲ್ಲಿಸಿದೆ. ಇದು ಜ್ಯೋತಿಕಾರಿಗೆ ಬಹಳ ಇಷ್ಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಧನ್ಯವಾದ ಸಮರ್ಪಿಸಿದ್ದಾರೆ.

ಖ್ಯಾತ ಮರೀನಾ ಬೀಚ್​ನಲ್ಲಿ ನಿತ್ಯವೂ ಸಾವಿರಾರು ಮಂದಿ ಓಡಾಡುತ್ತಾರೆ. ಅಲ್ಲಿ ಜ್ಯೋತಿಕಾರಿಗೆ ವಿಶೇಷ ಕಲಾ ಪ್ರದರ್ಶನದ ಮುಖಾಂತರ ಪ್ರೈಮ್ ಶುಭಕೋರಿದ್ದು, ಜ್ಯೋತಿಕಾರಿಗೆ ಬಹಳ ಸಂತಸ ಉಂಟುಮಾಡಿದೆ. ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನಿಮ್ಮ ಪ್ರೀತಿ ಹಾಗೂ ಗೌರವಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಜ್ಯೋತಿಕಾ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ:

View this post on Instagram

A post shared by Jyotika (@jyotika)

ಈ ಮರಳು ಶಿಲ್ಪ ಸದ್ಯ ಮರೀನಾ ಬೀಚ್​ನ ಆಕರ್ಷಣೆಯಾಗಿದ್ದು, ಇದನ್ನು ನೋಡಲು ಜನರು ಆಗಮಿಸುತ್ತಿದ್ದಾರೆ. ಈ ಶಿಲ್ಪವು ಅಕ್ಟೋಬರ್ 17ರವರೆಗೆ ನೋಡುಗರಿಗೆ ಲಭ್ಯವಿರಲಿದೆ. ‘ಉದನ್​ಪಿರಪ್ಪೆ’ ಚಿತ್ರವನ್ನು ಇರಾ ಸರವಣನ್ ನಿರ್ದೇಶಿಸಿದ್ದು, ಜ್ಯೋತಿಕಾ, ಶಶಿಕುಮಾರ್, ಸೂರಿ ಮೊದಲಾದ ತಾರೆಯರು ನಟಿಸಿದ್ದಾರೆ. ಈ ಚಿತ್ರವು ತೆಲುಗಿಗೂ ಡಬ್ ಆಗಿದ್ದು, ‘ರಕ್ತ ಸಂಬಂಧಮ್’ ಎಂಬ ಹೆಸರಿನಲ್ಲಿ ವೀಕ್ಷಕರಿಗೆ ಲಭ್ಯವಿದೆ.

ಇದನ್ನೂ ಓದಿ:

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್​ ವಿಡಿಯೋ ಸಂದೇಶ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್