Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ನಿರ್ದೇಶಕರು ನನ್ನ ಮುಟ್ಟಿನ ದಿನದ ಬಗ್ಗೆ ಕೇಳಿದರು’; ಸೆಕ್ಸ್ ದೃಶ್ಯದ ಶೂಟ್ ಬಗ್ಗೆ ನಟಿ ಅಮೃತಾ ಮಾತು

ಇಂಟಿಮೇಟ್ ದೃಶ್ಯಗಳನ್ನು ಶೂಟ್ ಮಾಡುವಾಗ ನಿರ್ದೇಶಕರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಆ ಸಂದರ್ಭವನ್ನು ಅನುರಾಗ್ ಕಶ್ಯಪ್ ಉತ್ತಮವಾಗಿ ನಿರ್ವಹಿಸುತ್ತಾರೆ ಎಂಬುದು ಅಮೃತಾ ಸುಭಾಶ್ ಅವರ ಮಾತು.

‘ಆ ನಿರ್ದೇಶಕರು ನನ್ನ ಮುಟ್ಟಿನ ದಿನದ ಬಗ್ಗೆ ಕೇಳಿದರು’; ಸೆಕ್ಸ್ ದೃಶ್ಯದ ಶೂಟ್ ಬಗ್ಗೆ ನಟಿ ಅಮೃತಾ ಮಾತು
ಅಮೃತಾ ಸುಭಾಷ್
Follow us
ರಾಜೇಶ್ ದುಗ್ಗುಮನೆ
|

Updated on: Jul 06, 2023 | 12:02 PM

ನಟಿ ಅಮೃತಾ ಸುಭಾಶ್ (Amruta Subhash) ಅವರು ಕಿರುತೆರೆ, ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ‘ಲಸ್ಟ್ ಸ್ಟೋರಿಸ್ 2’  (Lust Stories 2) ಚಿತ್ರದಲ್ಲಿ ಬರುವ ‘ದಿ ಮಿರರ್’ ಎಪಿಸೋಡ್​ನಲ್ಲಿ ಅವರು ಕಾಣಿಸಿಕೊಂಡಿದ್ದರು. ಮಾಲೀಕನ ಮನೆಯಲ್ಲೇ ಪತಿ ಜೊತೆ ಸೆಕ್ಸ್ ಮಾಡುವ ಕೆಲಸದಾಕೆಯ ಪಾತ್ರದಲ್ಲಿ ಅಮೃತಾ ಕಾಣಿಸಿಕೊಂಡಿದ್ದರು. ಅವರ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಈ ಸಿನಿಮಾದಿಂದ ಅವರ ಜನಪ್ರಿಯತೆ ಹೆಚ್ಚಿದೆ. ‘ಸೇಕ್ರೆಡ್ ಗೇಮ್ಸ್​ 2’ ವೆಬ್ ಸೀರಿಸ್​ನಲ್ಲಿ ಅವರು ನಟಿಸಿದ್ದರು. ಇದರಲ್ಲಿ ಸೆಕ್ಸ್ ದೃಶ್ಯ ಬರುತ್ತದೆ. ಅದನ್ನು ಶೂಟ್ ಮಾಡುವ ದಿನ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ಇಂಟಿಮೇಟ್ ದೃಶ್ಯಗಳನ್ನು ಶೂಟ್ ಮಾಡುವಾಗ ನಿರ್ದೇಶಕರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಆ ಸಂದರ್ಭವನ್ನು ಅನುರಾಗ್ ಕಶ್ಯಪ್ ಉತ್ತಮವಾಗಿ ನಿರ್ವಹಿಸುತ್ತಾರೆ ಎಂಬುದು ಅಮೃತಾ ಸುಭಾಶ್ ಅವರ ಮಾತು. ‘ಸೇಕ್ರೇಡ್ ಗೇಮ್ಸ್ 2’ ಸರಣಿಯನ್ನು ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿದ್ದರು. ಆ ವೆಬ್ ಸೀರಿಸ್​ನಲ್ಲಿ ಬರುವ ಇಂಟಿಮೇಟ್ ದೃಶ್ಯದ ಶೂಟ್ ಬಗ್ಗೆ ಅವರು ಮಾತನಾಡಿದ್ದಾರೆ.

‘ನಾನು ಮೊದಲ ಬಾರಿಗೆ ಇಂಟಿಮೇಟ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಅನುರಾಗ್ ಕಶ್ಯಪ್ ಅವರ ‘ಸೇಕ್ರೆಡ್ ಗೇಮ್ಸ್ 2’ ಸರಣಿಯಲ್ಲಿ. ನಿರ್ದೇಶನ ಮಾಡುತ್ತಿರುವುದು ಪುರುಷನೋ ಮಹಿಳೆಯೋ ಎಂಬ ಪ್ರಶ್ನೆಯೇ ಬರಲಿಲ್ಲ. ಅವರು ತುಂಬಾನೇ ಸೆನ್ಸಿಟಿವ್ ಆಗಿದ್ದರು. ಅವರು ನನ್ನ ಮುಟ್ಟಿನ ದಿನದ ಬಗ್ಗೆ ಕೇಳಿದರು. ಆ ಸಂದರ್ಭದಲ್ಲಿ ಇಂಟಿಮೇಟ್​ ದೃಶ್ಯಗಳ ಶೂಟ್ ಮಾಡುವುದಿಲ್ಲ ಎಂದರು’ ಎಂಬುದಾಗಿ ಅನುರಾಗ್ ಬಗ್ಗೆ ಅಮೃತಾ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Mrunal Thakur: ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಮಿಂಚಿದ ಮೃಣಾಲ್ ಠಾಕೂರ್

‘ಸೇಕ್ರೆಡ್ ಗೇಮ್ಸ್ 2’ ಸರಣಿಯಲ್ಲಿ ರಾ ಏಜೆಂಟ್ ಆಗಿ ಅಮೃತಾ ನಟಿಸಿದ್ದಾರೆ. ನವಾಜುದ್ದೀನ್ ಸಿದ್ಧಿಕಿ ಗಣೇಶ್ ಗಾಯ್ತೊಂಡೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗಣೇಶ್ ಗಾಯ್ತೊಂಡೆ ವಿರುದ್ಧ ಸ್ಪೈ ನಡೆಸಲು ಆತನ ಜೊತೆಯೇ ಈ ರಾ ಏಜೆಂಟ್ ಸೇರಿಕೊಳ್ಳುತ್ತಾಳೆ. ಈ ರೀತಿಯಲ್ಲಿ ಪಾತ್ರ ಅಮೃತಾ ಮೂಡಿ ಬಂದಿತ್ತು. ಸಖತ್ ಇಂಟಿಮೇಟ್ ಆಗಿ ಅವರು ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್