AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್’ನಲ್ಲಿ ನಡೆಯಿತು ಮೂರು ಪ್ರಮುಖ ಘಟನೆ; ಅರ್ಜುನ್,ರಾಕೇಶ್​ಗೆ ಪ್ರಮೋಷನ್​, ಅಕ್ಷತಾಗೆ ಜೈಲು

‘ಬಿಗ್ ಬಾಸ್​’ ಮನೆಗೆ ಸೇರಿದ ನಂತರದಲ್ಲಿ ಯಾರು ಹೇಗೆ ಪರ್ಫಾರ್ಮೆನ್ಸ್ ನೀಡುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಕೊಂಚ ಡಲ್ ಆದರೂ ಜನರಿಂದ ವೋಟ್ ಬೀಳುವುದಿಲ್ಲ. ಈ ಬಾರಿ ಅಕ್ಷತಾ ಅವರು ಎಲ್ಲರ ಜತೆ ಬೆರೆತಿಲ್ಲ. ಹೀಗಾಗಿ, ಮನೆಯವರಿಂದ ಅವರಿಗೆ ಬೆಂಬಲ ಸಿಕ್ಕಿಲ್ಲ.

‘ಬಿಗ್ ಬಾಸ್’ನಲ್ಲಿ ನಡೆಯಿತು ಮೂರು ಪ್ರಮುಖ ಘಟನೆ; ಅರ್ಜುನ್,ರಾಕೇಶ್​ಗೆ ಪ್ರಮೋಷನ್​, ಅಕ್ಷತಾಗೆ ಜೈಲು
ಅರ್ಜುನ್-ರಾಕೇಶ್​-ಅಕ್ಷತಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 11, 2022 | 4:18 PM

Share

‘ಬಿಗ್ ಬಾಸ್​ ಒಟಿಟಿ’ಯಲ್ಲಿ (Bigg Boss OTT) ಮೊದಲ ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಎಲ್ಲಾ ಸ್ಪರ್ಧಿಗಳು ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ವಾರಾಂತ್ಯಕ್ಕೆ ಎಲಿಮಿನೇಷನ್ ನಡೆಯಲಿದ್ದು, ಮನೆಯಿಂದ ಒಬ್ಬರು ಹೊರ ಹೋಗುವುದು ಖಚಿತ. ಹಲವರ ತಲೆಯಮೇಲೆ ಎಲಿಮಿನೇಷನ್​​ ತೂಗುಗತ್ತಿ ಇದೆ. ಈ ಮಧ್ಯೆ ಬಿಗ್​ ಬಾಸ್​ನಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ನಡೆದಿವೆ. ಅರ್ಜುನ್​ ರಮೇಶ್, ರಾಕೇಶ್ ಅಡಿಗ ಅವರಿಗೆ ಪ್ರಮೋಷನ್ ಸಿಕ್ಕರೆ ಅಕ್ಷತಾಗೆ ಡಿಮೋಷನ್​ ಸಿಕ್ಕಿದೆ. ಇದರಿಂದ ಅಕ್ಷತಾ ಜೈಲು ಸೇರಿದ್ದಾರೆ. ವೀಕ್ಷಕರು ವೋಟಿಗ್ ಮಾಡೋಕೆ ಈ ಬೆಳವಣಿಗೆ ತುಂಬಾನೇ ಮುಖ್ಯವಾಗಲಿದೆ.

‘ಬಿಗ್ ಬಾಸ್​’ ಮನೆಗೆ ಸೇರಿದ ನಂತರದಲ್ಲಿ ಯಾರು ಹೇಗೆ ಪರ್ಫಾರ್ಮೆನ್ಸ್ ನೀಡುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಕೊಂಚ ಡಲ್ ಆದರೂ ಜನರಿಂದ ವೋಟ್ ಬೀಳುವುದಿಲ್ಲ. ಈ ಬಾರಿ ಅಕ್ಷತಾ ಅವರು ಎಲ್ಲರ ಜತೆ ಬೆರೆತಿಲ್ಲ. ಹೀಗಾಗಿ, ಮನೆಯವರಿಂದ ಅವರಿಗೆ ಬೆಂಬಲ ಸಿಕ್ಕಿಲ್ಲ.

ಇದನ್ನೂ ಓದಿ
Image
Bigg Boss OTT Kannada: ನಂಗೆ ಮೂಡ್ ಆಫ್ ಆಗಲ್ಲ: ಯಾವಾಗ್ಲೂ ಮೂಡ್​ನಲ್ಲಿರುತ್ತೇನೆ ಎಂದ ಸೋನು ಗೌಡ
Image
‘ಅಟ್ಲೀಸ್ಟ್​​ ಇಷ್ಟ ಅಂತಾದ್ರೂ ಹೇಳು’; ಸ್ಫೂರ್ತಿಗೆ ನೇರವಾಗಿ ಹೇಳಿದ ರಾಕೇಶ್
Image
‘ನಾನು ತಳ್ಳಿದ್ರೆ 25 ಅಡಿ ದೂರ ಹೋಗಿ ಬೀಳ್ತೀಯಾ’; ಆವಾಜ್ ಹಾಕಲು ಬಂದ ಉದಯ್​ಗೆ ಗುರೂಜಿ ಎಚ್ಚರಿಕೆ
Image
Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಫೋನ್​ ನಂಬರ್​ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್​ ಬೆಡಗಿ

ಕ್ಯಾಪ್ಟನ್ ಆದ ಅರ್ಜುನ್

ಮೊದಲ ವಾರದಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಇತ್ತು. ಅರ್ಜುನ್ ರಮೇಶ್, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೇರಿ ಹಾಗೂ ನಂದು ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿದ್ದರು. ಅತಿ ಹೆಚ್ಚು ಅಂಕ ಪಡೆದು ಅರ್ಜುನ್ ಅವರು ಕ್ಯಾಪ್ಟನ್ ಆದರು. ಈ ಮೂಲಕ ‘ಬಿಗ್​ ಬಾಸ್ ಒಟಿಟಿ’ಯ ಮೊದಲ ಸೀಸನ್​ನ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಅರ್ಜುನ್ ಭಾಜನರಾದರು. ಅವರಿಗೆ ನಿದ್ರಿಸೋಕೆ ಈಗ ಕ್ಯಾಪ್ಟನ್ ರೂಂ ಸಿಕ್ಕಿದೆ.

ರಾಕೇಶ್ ಅತ್ಯುತ್ತಮ​

ವೀಕೆಂಡ್​ಗೂ ಮುನ್ನ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದವರು ಯಾರು ಎಂಬುದನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಆಯ್ಕೆಯಲ್ಲಿ ರಾಕೇಶ್​ಗೆ ಅತಿ ಹೆಚ್ಚು ವೋಟ್​ ಸಿಕ್ಕಿದೆ. ರಾಕೇಶ್ ಅವರು ಎಲ್ಲರ ಜತೆಗೂ ಬೆರೆತಿದ್ದಾರೆ. ತೊಂದರೆ ಆದಾಗ ಮಧ್ಯಸ್ಥಿಕೆ ವಹಿಸಿದ್ದಾರೆ. ತಂಡವನ್ನು ಅದ್ಭುತವಾಗಿ ಮನ್ನಡೆಸಿದ್ದಾರೆ. ಈ ಕಾರಣದಿಂದ ಅವರು ‘ಅತ್ಯುತ್ತಮ’ ಎಂಬ ಪಟ್ಟ ಗಳಿಸಿಕೊಂಡಿದ್ದಾರೆ.

ಅಕ್ಷತಾ ಕಳಪೆ

ಅತ್ಯುತ್ತಮದ ಜತೆಗೆ ಕಳಪೆ ಪಟ್ಟವನ್ನೂ ಬಿಗ್ ಬಾಸ್ ಮನೆಯಲ್ಲಿ ನೀಡಲಾಗುತ್ತದೆ. ಅಕ್ಷತಾ ಅವರಿಗೆ ‘ಕಳಪೆ’ ಪಟ್ಟ ನೀಡಲಾಯಿತು. ಈ ಕಾರಣಕ್ಕೆ ಅವರು ಜೈಲು ಸೇರಿದ್ದಾರೆ. ಒಂದು ದಿನ ಅವರು ಜೈಲಲ್ಲೇ ಕಳೆಯಬೇಕಾಗುತ್ತದೆ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ