AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್’ನಲ್ಲಿ ನಡೆಯಿತು ಮೂರು ಪ್ರಮುಖ ಘಟನೆ; ಅರ್ಜುನ್,ರಾಕೇಶ್​ಗೆ ಪ್ರಮೋಷನ್​, ಅಕ್ಷತಾಗೆ ಜೈಲು

‘ಬಿಗ್ ಬಾಸ್​’ ಮನೆಗೆ ಸೇರಿದ ನಂತರದಲ್ಲಿ ಯಾರು ಹೇಗೆ ಪರ್ಫಾರ್ಮೆನ್ಸ್ ನೀಡುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಕೊಂಚ ಡಲ್ ಆದರೂ ಜನರಿಂದ ವೋಟ್ ಬೀಳುವುದಿಲ್ಲ. ಈ ಬಾರಿ ಅಕ್ಷತಾ ಅವರು ಎಲ್ಲರ ಜತೆ ಬೆರೆತಿಲ್ಲ. ಹೀಗಾಗಿ, ಮನೆಯವರಿಂದ ಅವರಿಗೆ ಬೆಂಬಲ ಸಿಕ್ಕಿಲ್ಲ.

‘ಬಿಗ್ ಬಾಸ್’ನಲ್ಲಿ ನಡೆಯಿತು ಮೂರು ಪ್ರಮುಖ ಘಟನೆ; ಅರ್ಜುನ್,ರಾಕೇಶ್​ಗೆ ಪ್ರಮೋಷನ್​, ಅಕ್ಷತಾಗೆ ಜೈಲು
ಅರ್ಜುನ್-ರಾಕೇಶ್​-ಅಕ್ಷತಾ
TV9 Web
| Edited By: |

Updated on: Aug 11, 2022 | 4:18 PM

Share

‘ಬಿಗ್ ಬಾಸ್​ ಒಟಿಟಿ’ಯಲ್ಲಿ (Bigg Boss OTT) ಮೊದಲ ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಎಲ್ಲಾ ಸ್ಪರ್ಧಿಗಳು ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ವಾರಾಂತ್ಯಕ್ಕೆ ಎಲಿಮಿನೇಷನ್ ನಡೆಯಲಿದ್ದು, ಮನೆಯಿಂದ ಒಬ್ಬರು ಹೊರ ಹೋಗುವುದು ಖಚಿತ. ಹಲವರ ತಲೆಯಮೇಲೆ ಎಲಿಮಿನೇಷನ್​​ ತೂಗುಗತ್ತಿ ಇದೆ. ಈ ಮಧ್ಯೆ ಬಿಗ್​ ಬಾಸ್​ನಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ನಡೆದಿವೆ. ಅರ್ಜುನ್​ ರಮೇಶ್, ರಾಕೇಶ್ ಅಡಿಗ ಅವರಿಗೆ ಪ್ರಮೋಷನ್ ಸಿಕ್ಕರೆ ಅಕ್ಷತಾಗೆ ಡಿಮೋಷನ್​ ಸಿಕ್ಕಿದೆ. ಇದರಿಂದ ಅಕ್ಷತಾ ಜೈಲು ಸೇರಿದ್ದಾರೆ. ವೀಕ್ಷಕರು ವೋಟಿಗ್ ಮಾಡೋಕೆ ಈ ಬೆಳವಣಿಗೆ ತುಂಬಾನೇ ಮುಖ್ಯವಾಗಲಿದೆ.

‘ಬಿಗ್ ಬಾಸ್​’ ಮನೆಗೆ ಸೇರಿದ ನಂತರದಲ್ಲಿ ಯಾರು ಹೇಗೆ ಪರ್ಫಾರ್ಮೆನ್ಸ್ ನೀಡುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಕೊಂಚ ಡಲ್ ಆದರೂ ಜನರಿಂದ ವೋಟ್ ಬೀಳುವುದಿಲ್ಲ. ಈ ಬಾರಿ ಅಕ್ಷತಾ ಅವರು ಎಲ್ಲರ ಜತೆ ಬೆರೆತಿಲ್ಲ. ಹೀಗಾಗಿ, ಮನೆಯವರಿಂದ ಅವರಿಗೆ ಬೆಂಬಲ ಸಿಕ್ಕಿಲ್ಲ.

ಇದನ್ನೂ ಓದಿ
Image
Bigg Boss OTT Kannada: ನಂಗೆ ಮೂಡ್ ಆಫ್ ಆಗಲ್ಲ: ಯಾವಾಗ್ಲೂ ಮೂಡ್​ನಲ್ಲಿರುತ್ತೇನೆ ಎಂದ ಸೋನು ಗೌಡ
Image
‘ಅಟ್ಲೀಸ್ಟ್​​ ಇಷ್ಟ ಅಂತಾದ್ರೂ ಹೇಳು’; ಸ್ಫೂರ್ತಿಗೆ ನೇರವಾಗಿ ಹೇಳಿದ ರಾಕೇಶ್
Image
‘ನಾನು ತಳ್ಳಿದ್ರೆ 25 ಅಡಿ ದೂರ ಹೋಗಿ ಬೀಳ್ತೀಯಾ’; ಆವಾಜ್ ಹಾಕಲು ಬಂದ ಉದಯ್​ಗೆ ಗುರೂಜಿ ಎಚ್ಚರಿಕೆ
Image
Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಫೋನ್​ ನಂಬರ್​ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್​ ಬೆಡಗಿ

ಕ್ಯಾಪ್ಟನ್ ಆದ ಅರ್ಜುನ್

ಮೊದಲ ವಾರದಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಇತ್ತು. ಅರ್ಜುನ್ ರಮೇಶ್, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೇರಿ ಹಾಗೂ ನಂದು ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿದ್ದರು. ಅತಿ ಹೆಚ್ಚು ಅಂಕ ಪಡೆದು ಅರ್ಜುನ್ ಅವರು ಕ್ಯಾಪ್ಟನ್ ಆದರು. ಈ ಮೂಲಕ ‘ಬಿಗ್​ ಬಾಸ್ ಒಟಿಟಿ’ಯ ಮೊದಲ ಸೀಸನ್​ನ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಅರ್ಜುನ್ ಭಾಜನರಾದರು. ಅವರಿಗೆ ನಿದ್ರಿಸೋಕೆ ಈಗ ಕ್ಯಾಪ್ಟನ್ ರೂಂ ಸಿಕ್ಕಿದೆ.

ರಾಕೇಶ್ ಅತ್ಯುತ್ತಮ​

ವೀಕೆಂಡ್​ಗೂ ಮುನ್ನ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದವರು ಯಾರು ಎಂಬುದನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಆಯ್ಕೆಯಲ್ಲಿ ರಾಕೇಶ್​ಗೆ ಅತಿ ಹೆಚ್ಚು ವೋಟ್​ ಸಿಕ್ಕಿದೆ. ರಾಕೇಶ್ ಅವರು ಎಲ್ಲರ ಜತೆಗೂ ಬೆರೆತಿದ್ದಾರೆ. ತೊಂದರೆ ಆದಾಗ ಮಧ್ಯಸ್ಥಿಕೆ ವಹಿಸಿದ್ದಾರೆ. ತಂಡವನ್ನು ಅದ್ಭುತವಾಗಿ ಮನ್ನಡೆಸಿದ್ದಾರೆ. ಈ ಕಾರಣದಿಂದ ಅವರು ‘ಅತ್ಯುತ್ತಮ’ ಎಂಬ ಪಟ್ಟ ಗಳಿಸಿಕೊಂಡಿದ್ದಾರೆ.

ಅಕ್ಷತಾ ಕಳಪೆ

ಅತ್ಯುತ್ತಮದ ಜತೆಗೆ ಕಳಪೆ ಪಟ್ಟವನ್ನೂ ಬಿಗ್ ಬಾಸ್ ಮನೆಯಲ್ಲಿ ನೀಡಲಾಗುತ್ತದೆ. ಅಕ್ಷತಾ ಅವರಿಗೆ ‘ಕಳಪೆ’ ಪಟ್ಟ ನೀಡಲಾಯಿತು. ಈ ಕಾರಣಕ್ಕೆ ಅವರು ಜೈಲು ಸೇರಿದ್ದಾರೆ. ಒಂದು ದಿನ ಅವರು ಜೈಲಲ್ಲೇ ಕಳೆಯಬೇಕಾಗುತ್ತದೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್