AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯ್​ಫ್ರೆಂಡ್​ ಜತೆ ಬಿಗ್ ಬಾಸ್​ ಒಟಿಟಿ ವಿನ್ನರ್​ ದಿವ್ಯಾ ಅಗರ್​ವಾಲ್​ ಮೋಜು ಮಸ್ತಿ; ವಿಡಿಯೋ ವೈರಲ್​

ದಿವ್ಯಾ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕೋರಿಯೋಗ್ರಾಫರ್​ ಹಾಗೂ ನಟಿ ಆಗಬೇಕು ಎಂದು ಕನಸು ಕಂಡವರು. ‘ರಾಗಿಣಿ ಎಂಎಂಎಸ್​: ರಿಟರ್ನ್​​ 2’ನಲ್ಲಿ ಅವರು ಕಾಣಿಸಿಕೊಂಡಿದ್ದರು.

ಬಾಯ್​ಫ್ರೆಂಡ್​ ಜತೆ ಬಿಗ್ ಬಾಸ್​ ಒಟಿಟಿ ವಿನ್ನರ್​ ದಿವ್ಯಾ ಅಗರ್​ವಾಲ್​ ಮೋಜು ಮಸ್ತಿ; ವಿಡಿಯೋ ವೈರಲ್​
ಬಾಯ್​ಫ್ರೆಂಡ್​ ಜತೆ ಬಿಗ್ ಬಾಸ್​ ಒಟಿಟಿ ವಿನ್ನರ್​ ದಿವ್ಯಾ ಅಗರ್​ವಾಲ್​ ಮೋಜು ಮಸ್ತಿ; ವಿಡಿಯೋ ವೈರಲ್​
TV9 Web
| Edited By: |

Updated on: Sep 19, 2021 | 3:58 PM

Share

‘ಬಿಗ್​ ಬಾಸ್​ ಒಟಿಟಿ’ ವಿನ್ನರ್​ ಆಗಿ ದಿವ್ಯಾ ಅಗರ್​ವಾಲ್​ ಹೊರಹೊಮ್ಮಿದ್ದಾರೆ. ಭಾನುವಾರ (ಸೆಪ್ಟೆಂಬರ್​ 18) ನಡೆದ ಫಿನಾಲೆ ಎಪಿಸೋಡ್​ನಲ್ಲಿ ದಿವ್ಯಾ ಹೆಸರನ್ನು ವಿನ್ನರ್​ ಎಂದು ನಿರೂಪಕ ಕರಣ್​ ಜೋಹರ್​ ಘೋಷಣೆ ಮಾಡುತ್ತಿದ್ದಂತೆ ಅವರು ಕುಣಿದು ಕುಪ್ಪಳಿಸಿದ್ದಾರೆ. ಆಕರ್ಷಕ ಟ್ರೋಫಿ ಹಾಗೂ 25 ಲಕ್ಷ ರೂಪಾಯಿ ಚೆಕ್​ನೊಂದಿಗೆ ದಿವ್ಯಾ ಮನೆಗೆ ಬಂದಿದ್ದಾರೆ. ಮನೆಗೆ ಬಂದ ಬೆನ್ನಲ್ಲೇ ಬಾಯ್​ಫ್ರೆಂಡ್​ ವರುಣ್​ ಸೂದ್​ ಜತೆ ಈ ಖುಷಿಯನ್ನು ದಿವ್ಯಾ ಸೆಲೆಬ್ರೇಟ್​ ಮಾಡಿದ್ದಾರೆ.  

ದಿವ್ಯಾ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕೋರಿಯೋಗ್ರಾಫರ್​ ಹಾಗೂ ನಟಿ ಆಗಬೇಕು ಎಂದು ಕನಸು ಕಂಡವರು. ‘ರಾಗಿಣಿ ಎಂಎಂಎಸ್​: ರಿಟರ್ನ್​​ 2’ನಲ್ಲಿ ಅವರು ಕಾಣಿಸಿಕೊಂಡಿದ್ದರು. ‘ಏಸ್​ ಆಫ್​ ಸ್ಪೇಸ್​ 1’ ವಿನ್ನರ್​ ಆದರೆ, ‘ಎಂಟಿವಿ ಸ್ಪಿಟ್ಸ್​ವಿಲ್ಲಾ 10’ನ ರನ್ನರ್​ ಅಪ್​ ಆಗಿದ್ದಾರೆ ದಿವ್ಯಾ. ಈಗ ಬಿಗ್​ ಬಾಸ್​ ಒಟಿಟಿ ವಿನ್ನರ್​ ಪಟ್ಟ ಕೂಡ ಸಿಕ್ಕಿದೆ. ಅವರ ಗೆಲುವಿನಿಂದ ವರುಣ್​ ಸೂದ್​ ಸಾಕಷ್ಟು ಖುಷಿಪಟ್ಟಿದ್ದಾರೆ.

ವರುಣ್​ ಜತೆ ದಿವ್ಯಾ ಅವರುಈ ಖುಷಿಯನ್ನು ಸೆಲೆಬ್ರೇಟ್​ ಮಾಡಿದ್ದಾರೆ. ಕೇಕ್​ ಕತ್ತರಿಸಿ ಅವರು ಈ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್​ ಬಾಸ್ ನಿರೂಪಣೆಯನ್ನು ಸಲ್ಮಾನ್​ ಖಾನ್​ ಮಾಡಿದ್ದರು. ಆದರೆ, ‘ಬಿಗ್​ ಬಾಸ್​ ಒಟಿಟಿ’ಯನ್ನು ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್​ ಜೋಹರ್​ ನಡೆಸಿಕೊಟ್ಟಿದ್ದಾರೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ದಿವ್ಯಾ ಅಗರ್ವಾಲ್, ನಿಶಾಂತ್ ಭಟ್ ಹಾಗೂ ಪ್ರತೀಕ್ ಸೆಹಜ್ಪಾಲ್ ಫಿನಾಲೆಯಲ್ಲಿ ಇದ್ದರು. ಅಂತಿಮವಾಗಿ ದಿವ್ಯಾ ಗೆದ್ದಿದ್ದಾರೆ. ಶಮಿತಾ ಮತ್ತು ದಿವ್ಯಾ ನಡುವೆ ಸಾಕಷ್ಟು ಬಾರಿ ಜಗಳ ಆಗಿತ್ತು. ಇದರಿಂದಲೂ ಅವರು ಹೈಲೈಟ್​ ಆಗಿದ್ದರು. ಶೀಘ್ರವೇ ‘ಬಿಗ್​ ಬಾಸ್​ ಸೀಸನ್ 15’ ಆರಂಭಗೊಳ್ಳಲಿದೆ.

ಇದನ್ನೂ ಓದಿ: ಬಿಗ್​ಬಾಸ್​ ಒಟಿಟಿ ನಿರೂಪಕ ಕರಣ್ ಜೋಹರ್ ವಿರುದ್ಧ ಜೋರಾಯ್ತು ಅಸಮಾಧಾನ; ಕಾರಣವೇನು?

ದಿವ್ಯಾ ಅಗರ್​ವಾಲ್​ಗೆ ಒಲಿದ ಬಿಗ್​ ಬಾಸ್​ ಒಟಿಟಿ; ಶಮಿತಾ ಶೆಟ್ಟಿಗೆ ನಿರಾಸೆ, ಇವರಿಗೆ ಸಿಗ್ತಿರೋ ಹಣ ಎಷ್ಟು?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್