ಗುರುತು ಸಿಗದಂತೆ ಬದಲಾದ ಬಿಗ್​ ಬಾಸ್​ ಮಹಿಳಾ ಸ್ಪರ್ಧಿ; ಈ ಪರಿವರ್ತನೆ ನಂಬಲು ಸಾಧ್ಯವೇ?

ಏಕ್ತಾ ಕಪೂರ್​ ನಿರ್ಮಾಣ ಮಾಡಿರುವ ‘ಕಾರ್ಟೆಲ್’​ ವೆಬ್​ ಸರಣಿಯಲ್ಲಿ ದಿವ್ಯಾ ಅಗರ್​ವಾಲ್​ ನಟಿಸಿದ್ದಾರೆ. ಇತ್ತೀಚೆಗೆ ಅದು ಬಿಡುಗಡೆ ಆಗಿದ್ದು, ಅದರ ಒಂದು ಲುಕ್​ ಅನ್ನು ಅವರು​ ಶೇರ್​ ಮಾಡಿಕೊಂಡಿದ್ದಾರೆ.

ಗುರುತು ಸಿಗದಂತೆ ಬದಲಾದ ಬಿಗ್​ ಬಾಸ್​ ಮಹಿಳಾ ಸ್ಪರ್ಧಿ; ಈ ಪರಿವರ್ತನೆ ನಂಬಲು ಸಾಧ್ಯವೇ?
ಮುದುಕನ ರೀತಿ ಕಾಣಲು ದಿವ್ಯಾ ಅಗರ್​ವಾಲ್​ ಅವರು ಗಂಟೆಗಟ್ಟಲೆ ಮೇಕಪ್ ಮಾಡಿಕೊಳ್ಳಬೇಕಿತ್ತು
Follow us
| Updated By: ಮದನ್​ ಕುಮಾರ್​

Updated on: Oct 01, 2021 | 9:34 AM

ನಟಿ ದಿವ್ಯಾ ಅಗರ್​ವಾಲ್​ ಅವರು ಈ ಬಾರಿಯ ಬಿಗ್​ ಬಾಸ್​ ಓಟಿಟಿ ಶೋನಲ್ಲಿ ವಿನ್ನರ್​ ಪಟ್ಟ ಗಿಟ್ಟಿಸಿಕೊಂಡರು. ಗೆದ್ದ ಬಳಿಕ ಎಲ್ಲೆಲ್ಲೂ ಅವರದ್ದೇ ಸುದ್ದಿ. ಬಿಗ್​ ಬಾಸ್​ ಟ್ರೋಫಿ ಎತ್ತಿ ಹಿಡಿದ ನಂತರ ಅವರಿಗೆ ಸಿಗುತ್ತಿರುವ ಅವಕಾಶಗಳ ಕೂಡ ಹೇರಳವಾಗಿವೆ. ವೆಬ್​ ಸಿರೀಸ್​ ಲೋಕದಲ್ಲಂತೂ ಅವರಿಗೆ ಭಾರಿ ಡಿಮ್ಯಾಂಡ್​ ಇದೆ. ಇಷ್ಟೆಲ್ಲ ಸಮಾಚಾರದ ನಡುವೆ ದಿವ್ಯಾ ಅಗರ್​ವಾಲ್​ ಅಚ್ಚರಿಯ ರೀತಿಯಲ್ಲಿ ಬದಲಾಗಿರುವುದು ವಿಶೇಷ. ಏಕಾಏಕಿ ಅವರು ಮುದುಕನ ಅವತಾರ ತಾಳಿದ್ದಾರೆ. ಅದಕ್ಕೆ ಕಾರಣ ಏನೆಂದು ಅಭಿಮಾನಿಗಳು ತಲೆ ಕೆರೆದುಕೊಳ್ಳುವುದಕ್ಕೂ ಮುನ್ನವೇ ಸ್ವತಃ ದಿವ್ಯಾ ಅಗರ್​ವಾಲ್​ ಎಲ್ಲವನ್ನೂ ವಿವರಿಸಿದ್ದಾರೆ.

ರಿಯಾಲಿಟಿ ಶೋ, ಧಾರಾವಾಹಿ, ವೆಬ್​​ ಸರಣಿ, ಮ್ಯೂಸಿಕ್​ ವಿಡಿಯೋಗಳ ಮೂಲಕ ದಿವ್ಯಾ ಅಗರ್​ವಾಲ್​ ಅವರು ಜನಪ್ರಿಯತೆ ಸಂಪಾದಿಸಿದ್ದಾರೆ. ಏಕ್ತಾ ಕಪೂರ್​ ನಿರ್ಮಾಣ ಮಾಡಿರುವ ‘ಕಾರ್ಟೆಲ್’​ ವೆಬ್​ ಸರಣಿಯಲ್ಲೂ ಅವರು ನಟಿಸಿದ್ದಾರೆ. ಇತ್ತೀಚೆಗೆ ಅದು ಬಿಡುಗಡೆ ಆಗಿದ್ದು, ಅದರ ಒಂದು ಲುಕ್​ ಅನ್ನು ದಿವ್ಯಾ ಅಗರ್​ವಾಲ್​ ಶೇರ್​ ಮಾಡಿಕೊಂಡಿದ್ದಾರೆ. ‘ಆಲ್ಟ್​ ಬಾಲಾಜಿ’ ಓಟಿಟಿ ಮೂಲಕ ಈ ವೆಬ್​​ ಸಿರೀಸ್​ ಬಿಡುಗಡೆ ಆಗಿದೆ.

‘ಕಾರ್ಟೆಲ್​ ಯಶಸ್ವಿ ಆಗಿರುವುಕ್ಕೆ ಇಡೀ ತಂಡಕ್ಕೆ ಅಭಿನಂದನೆಗಳು’ ಎಂದಿರುವ ದಿವ್ಯಾ ಅವರ್​ವಾಲ್​ ಅವರು ತಮಗೆ ಅವಕಾಶ ನೀಡಿದ ಏಕ್ತಾ ಕಪೂರ್​ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಏಕ್ತಾ ಕಪೂರ್​ ಅವರೇ, ನನ್ನ ಮೇಲೆ ನಂಬಿಕೆ ಇಟ್ಟು ಈ ಪಾತ್ರ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ಸಿನಿಮಾ ಬಗ್ಗೆ ನಾನು ಹೊಂದಿರುವ ಆಸಕ್ತಿ ಎಂಥದ್ದು ಎಂಬುದನ್ನು ಈ ಪಾತ್ರ ವಿವರಿಸುತ್ತದೆ. ನನ್ನಲ್ಲಿ ಈ ಗುಣಗಳನ್ನು ಮೊದಲು ಗುರುತಿಸಿದವರೇ ನೀವು’ ಎಂದು ಅವರು ಬರೆದುಕೊಂಡಿದ್ದಾರೆ.

ಮುದುಕನ ರೀತಿ ಕಾಣಲು ದಿವ್ಯಾ ಅವರ್​ವಾಲ್​ ಅವರು ಗಂಟೆಗಟ್ಟಲೆ ಮೇಕಪ್​ ಮಾಡಿಕೊಳ್ಳಬೇಕಿತ್ತು. ಪ್ರಾಸ್ಥೆಟಿಕ್​ ಮೇಕಪ್​ ಮೂಲಕ ಅವರು ಈ ವೇಷ ತಾಳಿದ್ದಾರೆ.

ಬಿಗ್​ ಬಾಸ್​ ಓಟಿಟಿ ಶೋನಲ್ಲಿ ಇದ್ದಾಗ ದಿವ್ಯಾ ಅವರು ತಮ್ಮದೇ ಛಾಪು ಮೂಡಿಸಿದ್ದರು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಗುಣ ಅವರದ್ದು. ಅದೇ ಕಾರಣಕ್ಕಾಗಿ ಅವರು ನಿರೂಪಕ ಕರಣ್​ ಜೋಹರ್​ ಜೊತೆಗೂ ಜಗಳ ಮಾಡಿದ್ದರು. ಅಂತಿಮವಾಗಿ ಅವರೇ ವಿನ್​ ಆಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.

ಇದನ್ನೂ ಓದಿ:

ಬಾಯ್​ಫ್ರೆಂಡ್​ ಜತೆ ಬಿಗ್ ಬಾಸ್​ ಒಟಿಟಿ ವಿನ್ನರ್​ ದಿವ್ಯಾ ಅಗರ್​ವಾಲ್​ ಮೋಜು ಮಸ್ತಿ; ವಿಡಿಯೋ ವೈರಲ್​

ಸೆನ್ಸಾರ್​ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್​ ನೀಡಿದ ಸನ್ನಿ ಲಿಯೋನ್​; ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ