AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್​ ಲೋಗೋ ತೋರಿಸಿ ಪೇಚಿಗೆ ಸಿಲುಕಿದ್ದ ‘ಸ್ಕ್ಯಾಮ್​ 1992’ ವೆಬ್​ ಸಿರೀಸ್​ ತಂಡಕ್ಕೆ ಹೈಕೋರ್ಟ್​ನಿಂದ ರಿಲೀಫ್​

ಬ್ಯಾಂಕ್​ ನೀಡಿದ ದೂರನ್ನು ಪ್ರಶ್ನಿಸಿ ‘ಸ್ಕ್ಯಾಮ್​ 1992’ ನಿರ್ಮಾಪಕರು ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯವು ಈ ಕೇಸ್​ನ ತನಿಖೆಗೆ ತಡೆ ನೀಡಿದೆ.

ಬ್ಯಾಂಕ್​ ಲೋಗೋ ತೋರಿಸಿ ಪೇಚಿಗೆ ಸಿಲುಕಿದ್ದ ‘ಸ್ಕ್ಯಾಮ್​ 1992’ ವೆಬ್​ ಸಿರೀಸ್​ ತಂಡಕ್ಕೆ ಹೈಕೋರ್ಟ್​ನಿಂದ ರಿಲೀಫ್​
ಬ್ಯಾಂಕ್​ ಲೋಗೋ ತೋರಿಸಿ ಪೇಚಿಗೆ ಸಿಲುಕಿದ್ದ ‘ಸ್ಕ್ಯಾಮ್​ 1992’ ವೆಬ್​ ಸಿರೀಸ್​ ತಂಡಕ್ಕೆ ಹೈಕೋರ್ಟ್​ನಿಂದ ರಿಲೀಫ್​
TV9 Web
| Edited By: |

Updated on: Aug 23, 2021 | 6:03 PM

Share

ಹರ್ಷದ್​ ಮೆಹ್ತಾ (Harshad Mehta) ನಡೆಸಿದ್ದ ಷೇರು ಮಾರ್ಕೆಟ್​ ಹಗರಣದ ಕುರಿತು ಮೂಡಿಬಂದಿದ್ದ ‘ಸ್ಕ್ಯಾಮ್​ 1992’ (Scam 1992) ವೆಬ್​ ಸಿರೀಸ್​ಗೆ ಜನರು ಫಿದಾ ಆಗಿದ್ದರು. ಕಳೆದ ವರ್ಷ ಅಕ್ಟೋಬರ್​ನಲ್ಲಿ ಈ ವೆಬ್​ ಸಿರೀಸ್​ (Web Series) ಬಿಡುಗಡೆ ಆಗಿತ್ತು. ಸೋನಿ ಲಿವ್​ ಓಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾದ ಈ ವೆಬ್ ಸರಣಿಯಲ್ಲಿ ಒಂದು ಎಡವಟ್ಟು ಆಗಿತ್ತು. ಹಾಗಾಗಿ ನಿರ್ಮಾಪಕರ ವಿರುದ್ಧ ಕರಾಡ್​ ಅರ್ಬನ್​ ಕೋ-ಆಪರೇಟಿವ್​ ಬ್ಯಾಂಕ್​ ದೂರು ದಾಖಲಿಸಿತ್ತು. ಅದಕ್ಕೆ ಸಂಬಂಧಿಸಿದ ತನಿಖೆಗೆ ಬಾಂಬೆ ಹೈಕೋರ್ಟ್​ (Bombay High Court) ತಡೆ ನೀಡಿದೆ.

‘ಸ್ಕ್ಯಾಮ್​ 1992’ ವೆಬ್​ ಸಿರೀಸ್​ನ ಮೂರನೇ ಎಪಿಸೋಡ್​ನಲ್ಲಿ ಒಂದು ಬ್ಯಾಂಕ್​ನ ಲೋಗೋ ತೋರಿಸಲಾಗಿದೆ. ಅದು ಕರಾಡ್​ ಅರ್ಬನ್​ ಕೋ-ಆಪರೇಟಿವ್​ ಬ್ಯಾಂಕ್ ಲೋಗೋ ರೀತಿ ಇದೆ. ಅದರಿಂದ ಈ ಬ್ಯಾಂಕ್​ನ ಪ್ರತಿಷ್ಠೆಗೆ ಧಕ್ಕೆ ಆಗಿದೆ. ಇದು ಬ್ಯಾಂಕ್​ನ ವ್ಯವಹಾರದ ಮೇಲೂ ಪರಿಣಾಮ ಬೀರುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಹಾಗಾಗಿ ಈ ವರ್ಷ ಜುಲೈನಲ್ಲಿ ಪುಣೆಯ ಸಹಕಾರ್​ ನಗರ್ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು.

ಈ ದೂರನ್ನು ಪ್ರಶ್ನಿಸಿ ‘ಸ್ಕ್ಯಾಮ್​ 1992’ ನಿರ್ಮಾಪಕರು ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯವು ಈ ಕೇಸ್​ನ ತನಿಖೆಗೆ ತಡೆ ನೀಡಿದೆ. ಮುಂದಿನ ಮೂರು ವಾರಗಳ ಕಾಲ ಯಾವುದೇ ರೀತಿ ವಿಚಾರಣೆ ನಡೆಸಬಾರದು ಎಂದು ಆದೇಶಿಸಿದೆ. ಆ ಮೂಲಕ ನಿರ್ಮಾಪಕರಿಗೆ ರಿಲೀಫ್​ ಸಿಕ್ಕಂತಾಗಿದೆ.

‘ಸ್ಕ್ಯಾಮ್​ 1992’ ವೆಬ್​ ಸರಣಿ ದೊಡ್ಡ ಮಟ್ಟದಲ್ಲಿ ಹಿಟ್​ ಆಯಿತು. ಹರ್ಷದ್​ ಮೆಹ್ತಾ ಮಾಡಿದ್ದ ಹಗರಣಗಳನ್ನು ಇದರಲ್ಲಿ ಎಳೆಎಳೆಯಾಗಿ ತೆರೆದಿಡಲಾಗಿದೆ. ಈ ವೆಬ್ ​ಸಿರೀಸ್​ಗೆ ಹನ್ಸಲ್​ ಮೆಹ್ತಾ ಮತ್ತು ಜೈ ಮೆಹ್ತಾ ನಿರ್ದೇಶನವಿದೆ. ಹರ್ಷದ್​ ಮೆಹ್ತಾ ಪಾತ್ರದಲ್ಲಿ ಪ್ರತೀಕ್ ಗಾಂಧಿ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು. ಹರ್ಷದ್​ ಮೆಹ್ತಾ ನಡೆಸಿದ ಹಗರಣದ ಕುರಿತು ಬಾಲಿವುಡ್​ನಲ್ಲಿ ‘ಬಿಗ್​ ಬುಲ್​’ ಸಿನಿಮಾ ಮೂಡಿಬಂತು. ಅದರಲ್ಲಿ ಅಭಿಷೇಕ್​ ಬಚ್ಚನ್​ ಮುಖ್ಯಭೂಮಿಕೆ ನಿಭಾಯಿಸಿದರು. ಅದು ಕೂಡ ಓಟಿಟಿ ಮೂಲಕವೇ ಬಿಡುಗಡೆ ಆಯಿತು.

ಇದನ್ನೂ ಓದಿ:

ನೆಟ್​ಫ್ಲಿಕ್ಸ್​ನಲ್ಲಿ ಮಣಿರತ್ನಂ ಧಮಾಕಾ; ‘ನವರಸ’ ವೆಬ್​ ಸಿರೀಸ್​ ಟ್ರೇಲರ್​ನಲ್ಲಿ ಘಟಾನುಘಟಿಗಳ ಸಂಗಮ

ವೆಬ್​ ಸೀರಿಸ್​ ಡೈರೆಕ್ಷನ್​ ಮಾಡೋಕೆ ಬನ್ಸಾಲಿ ಪಡೆಯೋ ಹಣ ಇಷ್ಟೊಂದಾ?; ಸ್ಟಾರ್​ ನಟರ ಸಂಭಾವನೆಯನ್ನೂ ಹಿಂದಿಕ್ಕಿದ ನಿರ್ದೇಶಕ

Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ