AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್​ ಲೋಗೋ ತೋರಿಸಿ ಪೇಚಿಗೆ ಸಿಲುಕಿದ್ದ ‘ಸ್ಕ್ಯಾಮ್​ 1992’ ವೆಬ್​ ಸಿರೀಸ್​ ತಂಡಕ್ಕೆ ಹೈಕೋರ್ಟ್​ನಿಂದ ರಿಲೀಫ್​

ಬ್ಯಾಂಕ್​ ನೀಡಿದ ದೂರನ್ನು ಪ್ರಶ್ನಿಸಿ ‘ಸ್ಕ್ಯಾಮ್​ 1992’ ನಿರ್ಮಾಪಕರು ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯವು ಈ ಕೇಸ್​ನ ತನಿಖೆಗೆ ತಡೆ ನೀಡಿದೆ.

ಬ್ಯಾಂಕ್​ ಲೋಗೋ ತೋರಿಸಿ ಪೇಚಿಗೆ ಸಿಲುಕಿದ್ದ ‘ಸ್ಕ್ಯಾಮ್​ 1992’ ವೆಬ್​ ಸಿರೀಸ್​ ತಂಡಕ್ಕೆ ಹೈಕೋರ್ಟ್​ನಿಂದ ರಿಲೀಫ್​
ಬ್ಯಾಂಕ್​ ಲೋಗೋ ತೋರಿಸಿ ಪೇಚಿಗೆ ಸಿಲುಕಿದ್ದ ‘ಸ್ಕ್ಯಾಮ್​ 1992’ ವೆಬ್​ ಸಿರೀಸ್​ ತಂಡಕ್ಕೆ ಹೈಕೋರ್ಟ್​ನಿಂದ ರಿಲೀಫ್​
TV9 Web
| Edited By: |

Updated on: Aug 23, 2021 | 6:03 PM

Share

ಹರ್ಷದ್​ ಮೆಹ್ತಾ (Harshad Mehta) ನಡೆಸಿದ್ದ ಷೇರು ಮಾರ್ಕೆಟ್​ ಹಗರಣದ ಕುರಿತು ಮೂಡಿಬಂದಿದ್ದ ‘ಸ್ಕ್ಯಾಮ್​ 1992’ (Scam 1992) ವೆಬ್​ ಸಿರೀಸ್​ಗೆ ಜನರು ಫಿದಾ ಆಗಿದ್ದರು. ಕಳೆದ ವರ್ಷ ಅಕ್ಟೋಬರ್​ನಲ್ಲಿ ಈ ವೆಬ್​ ಸಿರೀಸ್​ (Web Series) ಬಿಡುಗಡೆ ಆಗಿತ್ತು. ಸೋನಿ ಲಿವ್​ ಓಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾದ ಈ ವೆಬ್ ಸರಣಿಯಲ್ಲಿ ಒಂದು ಎಡವಟ್ಟು ಆಗಿತ್ತು. ಹಾಗಾಗಿ ನಿರ್ಮಾಪಕರ ವಿರುದ್ಧ ಕರಾಡ್​ ಅರ್ಬನ್​ ಕೋ-ಆಪರೇಟಿವ್​ ಬ್ಯಾಂಕ್​ ದೂರು ದಾಖಲಿಸಿತ್ತು. ಅದಕ್ಕೆ ಸಂಬಂಧಿಸಿದ ತನಿಖೆಗೆ ಬಾಂಬೆ ಹೈಕೋರ್ಟ್​ (Bombay High Court) ತಡೆ ನೀಡಿದೆ.

‘ಸ್ಕ್ಯಾಮ್​ 1992’ ವೆಬ್​ ಸಿರೀಸ್​ನ ಮೂರನೇ ಎಪಿಸೋಡ್​ನಲ್ಲಿ ಒಂದು ಬ್ಯಾಂಕ್​ನ ಲೋಗೋ ತೋರಿಸಲಾಗಿದೆ. ಅದು ಕರಾಡ್​ ಅರ್ಬನ್​ ಕೋ-ಆಪರೇಟಿವ್​ ಬ್ಯಾಂಕ್ ಲೋಗೋ ರೀತಿ ಇದೆ. ಅದರಿಂದ ಈ ಬ್ಯಾಂಕ್​ನ ಪ್ರತಿಷ್ಠೆಗೆ ಧಕ್ಕೆ ಆಗಿದೆ. ಇದು ಬ್ಯಾಂಕ್​ನ ವ್ಯವಹಾರದ ಮೇಲೂ ಪರಿಣಾಮ ಬೀರುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಹಾಗಾಗಿ ಈ ವರ್ಷ ಜುಲೈನಲ್ಲಿ ಪುಣೆಯ ಸಹಕಾರ್​ ನಗರ್ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು.

ಈ ದೂರನ್ನು ಪ್ರಶ್ನಿಸಿ ‘ಸ್ಕ್ಯಾಮ್​ 1992’ ನಿರ್ಮಾಪಕರು ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯವು ಈ ಕೇಸ್​ನ ತನಿಖೆಗೆ ತಡೆ ನೀಡಿದೆ. ಮುಂದಿನ ಮೂರು ವಾರಗಳ ಕಾಲ ಯಾವುದೇ ರೀತಿ ವಿಚಾರಣೆ ನಡೆಸಬಾರದು ಎಂದು ಆದೇಶಿಸಿದೆ. ಆ ಮೂಲಕ ನಿರ್ಮಾಪಕರಿಗೆ ರಿಲೀಫ್​ ಸಿಕ್ಕಂತಾಗಿದೆ.

‘ಸ್ಕ್ಯಾಮ್​ 1992’ ವೆಬ್​ ಸರಣಿ ದೊಡ್ಡ ಮಟ್ಟದಲ್ಲಿ ಹಿಟ್​ ಆಯಿತು. ಹರ್ಷದ್​ ಮೆಹ್ತಾ ಮಾಡಿದ್ದ ಹಗರಣಗಳನ್ನು ಇದರಲ್ಲಿ ಎಳೆಎಳೆಯಾಗಿ ತೆರೆದಿಡಲಾಗಿದೆ. ಈ ವೆಬ್ ​ಸಿರೀಸ್​ಗೆ ಹನ್ಸಲ್​ ಮೆಹ್ತಾ ಮತ್ತು ಜೈ ಮೆಹ್ತಾ ನಿರ್ದೇಶನವಿದೆ. ಹರ್ಷದ್​ ಮೆಹ್ತಾ ಪಾತ್ರದಲ್ಲಿ ಪ್ರತೀಕ್ ಗಾಂಧಿ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು. ಹರ್ಷದ್​ ಮೆಹ್ತಾ ನಡೆಸಿದ ಹಗರಣದ ಕುರಿತು ಬಾಲಿವುಡ್​ನಲ್ಲಿ ‘ಬಿಗ್​ ಬುಲ್​’ ಸಿನಿಮಾ ಮೂಡಿಬಂತು. ಅದರಲ್ಲಿ ಅಭಿಷೇಕ್​ ಬಚ್ಚನ್​ ಮುಖ್ಯಭೂಮಿಕೆ ನಿಭಾಯಿಸಿದರು. ಅದು ಕೂಡ ಓಟಿಟಿ ಮೂಲಕವೇ ಬಿಡುಗಡೆ ಆಯಿತು.

ಇದನ್ನೂ ಓದಿ:

ನೆಟ್​ಫ್ಲಿಕ್ಸ್​ನಲ್ಲಿ ಮಣಿರತ್ನಂ ಧಮಾಕಾ; ‘ನವರಸ’ ವೆಬ್​ ಸಿರೀಸ್​ ಟ್ರೇಲರ್​ನಲ್ಲಿ ಘಟಾನುಘಟಿಗಳ ಸಂಗಮ

ವೆಬ್​ ಸೀರಿಸ್​ ಡೈರೆಕ್ಷನ್​ ಮಾಡೋಕೆ ಬನ್ಸಾಲಿ ಪಡೆಯೋ ಹಣ ಇಷ್ಟೊಂದಾ?; ಸ್ಟಾರ್​ ನಟರ ಸಂಭಾವನೆಯನ್ನೂ ಹಿಂದಿಕ್ಕಿದ ನಿರ್ದೇಶಕ

Follow Us
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್