AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಪ್ರಾರಂಭ ಕಪಿಲ್ ಶೋ, ಜೂ ಎನ್​ಟಿಆರ್ ಸೇರಿ ಹಲವು ಅತಿಥಿಗಳು, ಇಲ್ಲಿದೆ ಪಟ್ಟಿ

‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಎರಡನೇ ಸೀಸನ್ ಪ್ರಾರಂಭ ಆಗಲಿದೆ. ಇದೇ ತಿಂಗಳಿನಲ್ಲಿ ಶೋನ ಎರಡನೇ ಸೀಸನ್ ಪ್ರಾರಂಭವಾಗಲಿದ್ದು, ಜೂ ಎನ್​ಟಿಆರ್ ಸೇರಿ ಹಲವು ಅತಿಥಿಗಳು ಭಾಗವಹಿಸಲಿದ್ದಾರೆ. ಇಲ್ಲಿದೆ ನೋಡಿ ಅತಿಥಿಗಳ ಪಟ್ಟಿ.

ಮತ್ತೆ ಪ್ರಾರಂಭ ಕಪಿಲ್ ಶೋ, ಜೂ ಎನ್​ಟಿಆರ್ ಸೇರಿ ಹಲವು ಅತಿಥಿಗಳು, ಇಲ್ಲಿದೆ ಪಟ್ಟಿ
ಮಂಜುನಾಥ ಸಿ.
|

Updated on: Sep 14, 2024 | 7:37 PM

Share

ಕಪಿಲ್ ಶರ್ಮಾ ಶೋ, ಕಳೆದ ಒಂದು ದಶಕದಿಂದಲೂ ಟಿವಿ ಜಗತ್ತಿನಲ್ಲಿ ಟಾಪ್ ಕಾಮಿಡಿ ಶೋ ಎನಿಸಿಕೊಂಡಿದೆ. ಇತರೆ ಡ್ರಾಮಾ ಧಾರಾವಾಹಿಗಳನ್ನೂ ಮೀರಿ ಟಿಆರ್​ಪಿ ಗಳಿಸಿದ ಸಮಯವೂ ಇದೆ. ದಶಕಗಳ ಕಾಲ ಟಿವಿಯಲ್ಲಿ ರಾರಾಜಿಸಿದ ಕಪಿಲ್ ಶರ್ಮಾ ಶೋ ಇದೀಗ ಒಟಿಟಿಗೆ ಬಂದಿದೆ. ಕೆಲ ತಿಂಗಳ ಹಿಂದೆ ನೆಟ್​ಫ್ಲಿಕ್ಸ್​ನಲ್ಲಿ ‘ದಿ ಗ್ರೇಟ್ ಇಂಡಿಯಲ್ ಕಪಿಲ್ ಶೋ’ದ ಮೊದಲ ಸೀಸನ್ ಪ್ರಸಾರವಾಗಿತ್ತು. ಕಪಿಲ್​ ಜೊತೆ ಕಿತ್ತಾಡಿಕೊಂಡು ದೂರಾಗಿದ್ದವರು ಸಹ ಈ ಸೀಸನ್​ಗಾಗಿ ಒಂದಾಗಿ ಅದ್ಭುತವಾಗಿ ಶೋ ನಡೆಸಿಕೊಟ್ಟರು. ಇದೀಗ ಎರಡನೇ ಶೋ ಬರುತ್ತಿದ್ದು, ಎರಡನೇ ಶೋನ ಪ್ರೋಮೊ ಬಿಡುಗಡೆ ಆಗಿದೆ. ಈ ಬಾರಿ ದೊಡ್ಡ ಸ್ಟಾರ್ ನಟ-ನಟಿಯರು ಅತಿಥಿಗಳಾಗಿ ಬರುತ್ತಿದ್ದಾರೆ.

ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿರುವ ‘ದಿ ಗ್ರೇಟ್ ಇಂಡಿಯಲ್ ಕಪಿಲ್ ಶೋ’ ಎರಡನೇ ಸೀಸನ್​ನ ಅತಿಥಿಗಳ ಪಟ್ಟಿಯಲ್ಲಿ ಈ ಬಾರಿ ಜೂ ಎನ್​ಟಿಆರ್ ಇರುವುದು ವಿಶೇಷ. ತಮ್ಮ ನಟನೆಯ ‘ದೇವರ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಜೂ ಎನ್​ಟಿಆರ್, ಕಪಿಲ್ ಶರ್ಮಾ ಶೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ಅಂದಹಾಗೆ ಶೋನ ಮೊದಲ ಅತಿಥಿಯೇ ಜೂ ಎನ್​ಟಿಆರ್ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಜೂ ಎನ್​ಟಿಆರ್ ಜೊತೆಗೆ ‘ದೇವರ’ ಸಿನಿಮಾದ ನಾಯಕಿ ಜಾನ್ಹವಿ ಸಹ ಬಂದಿದ್ದಾರೆ. ಸೈಫ್ ಅಲಿ ಖಾನ್ ಸಹ ಅತಿಥಿಯಾಗಿ ಬಂದಿದ್ದು, ಸಖತ್ ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ:ಮುನಿಸು ಮರೆತು ಚಿಕ್ಕಪ್ಪನ ಮಗನಿಗೆ ಶುಭ ಹಾರೈಸಿದ ಜೂ ಎನ್​ಟಿಆರ್

ಜೂ ಎನ್​ಟಿಆರ್ ಮಾತ್ರವೇ ಅಲ್ಲದೆ, ನಟಿ ಆಲಿಯಾ ಭಟ್ ಸಹ ಶೋಗೆ ಅತಿಥಿಯಾಗಿ ಆಗಮಿಸಿದ್ದು, ಶೋನಲ್ಲಿ ‘ಗಲ್ಲಿಬಾಯ್​’ನ ಡೈಲಾಗ್​ಗಳನ್ನು ಹೇಳಿದ್ದಾರೆ ಮಾತ್ರವೇ ಅಲ್ಲದೆ ಸಖತ್ ಎಂಜಾಯ್ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಸಹ ಶೋಗೆ ಅತಿಥಿಯಾಗಿ ಬಂದಿದ್ದಾರೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಇನ್ನಿತರೆ ಕೆಲವು ಆಟಗಾರರು ಶೋಗೆ ಆಗಮಿಸಿ ಮಸ್ತ್ ಮಜಾ ಮಾಡಿದ್ದಾರೆ.

‘ದಿ ಗ್ರೇಟ್ ಇಂಡಿಯಲ್ ಕಪಿಲ್ ಶೋ’ನ ಪ್ರೋಮೋ ಇದೀಗ ಬಿಡುಗಡೆ ಆಗಿದೆ. ಪ್ರೋಮೋನಲ್ಲಿ ಜೂ ಎನ್​ಟಿಆರ್, ಸೈಫ್, ಜಾನ್ಹವಿ, ಆಲಿಯಾ, ರೋಹಿತ್ ಶರ್ಮಾ, ಕರಣ್ ಜೋಹರ್, ಸೂರ್ಯ ಕುಮಾರ್ ಯಾದವ್ ಇನ್ನೂ ಹಲವಾರು ಮಂದಿ ಪ್ರೋಮೋನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 21ರಿಂದ ‘ದಿ ಗ್ರೇಟ್ ಇಂಡಿಯಲ್ ಕಪಿಲ್ ಶೋ’ನ ಎರಡನೇ ಸೀಸನ್ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಎಸಿಎಫ್​​ ಮನೆಯಲ್ಲಿ ಖಜಾನೆ ಕಂಡು ಲೋಕಾಯಕ್ತ ಅಧಿಕಾರಿಗಳೇ ಶಾಕ್​​
ಎಸಿಎಫ್​​ ಮನೆಯಲ್ಲಿ ಖಜಾನೆ ಕಂಡು ಲೋಕಾಯಕ್ತ ಅಧಿಕಾರಿಗಳೇ ಶಾಕ್​​
ಮೈಸೂರು ಪಬ್​​ ದುರಂತ ಕೇಸ್​​ಗೆ ಟ್ವಿಸ್ಟ್​​: ಕೇಳಿಬಂತು ಸ್ಫೋಟಕ ಆರೋಪ
ಮೈಸೂರು ಪಬ್​​ ದುರಂತ ಕೇಸ್​​ಗೆ ಟ್ವಿಸ್ಟ್​​: ಕೇಳಿಬಂತು ಸ್ಫೋಟಕ ಆರೋಪ
ಮೇಲ್ಛಾವಣಿ ಕುಸಿತದಿಂದ ಜೀವ ಭಯದಲ್ಲೇ ಸರ್ಕಾರಿ ಶಾಲೆಗೆ ಬರುತ್ತಿರುವ ಮಕ್ಕಳು
ಮೇಲ್ಛಾವಣಿ ಕುಸಿತದಿಂದ ಜೀವ ಭಯದಲ್ಲೇ ಸರ್ಕಾರಿ ಶಾಲೆಗೆ ಬರುತ್ತಿರುವ ಮಕ್ಕಳು
ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ
ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ
ಈ ರಾಶಿಯವರಿಗಿಂದು ಹಣದ ವಿಷಯದಲ್ಲಿ ಆತುರದ ನಿರ್ಧಾರ ಬೇಡ
ಈ ರಾಶಿಯವರಿಗಿಂದು ಹಣದ ವಿಷಯದಲ್ಲಿ ಆತುರದ ನಿರ್ಧಾರ ಬೇಡ
ಗರುಡ ಪುರಾಣದ ಪ್ರಕಾರ ಊಟ ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು? ಫಲಗಳೇನು?
ಗರುಡ ಪುರಾಣದ ಪ್ರಕಾರ ಊಟ ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು? ಫಲಗಳೇನು?
2028ರ ಎಲೆಕ್ಷನ್ ಗೆಲ್ಲಲು ಜೋಶಿಗೆ ಸಾರಥ್ಯ?ಇದಕ್ಕೆ ಅವರು ಹೇಳಿದ್ದೇನು?
2028ರ ಎಲೆಕ್ಷನ್ ಗೆಲ್ಲಲು ಜೋಶಿಗೆ ಸಾರಥ್ಯ?ಇದಕ್ಕೆ ಅವರು ಹೇಳಿದ್ದೇನು?
ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪ್ರಲ್ಹಾದ್ ಜೋಶಿ ಮಾಹಿತಿ
ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪ್ರಲ್ಹಾದ್ ಜೋಶಿ ಮಾಹಿತಿ
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​:FSL ವರದಿಯನ್ನೇ ತಿರುಚಿದ ಗ್ಯಾಂಗ್!
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​:FSL ವರದಿಯನ್ನೇ ತಿರುಚಿದ ಗ್ಯಾಂಗ್!