AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ರಾತ್ರಿಯಲ್ಲಿ ಮಾಡಿದ ಕೆಲಸದ ಬಗ್ಗೆ ಆಲಿಯಾ ಎದುರು ಓಪನ್​ ಆಗಿ ಮಾತನಾಡಿದ ರಣವೀರ್ ಸಿಂಗ್

‘ಕಾಫಿ ವಿತ್ ಕರಣ್​ 7’ನಲ್ಲಿ ಬಿಂಗೋ ಗೇಮ್​ ಆಡಿಸಲಾಯಿತು. ಈ ವೇಳೆ ಲೈಂಗಿಕ ಜೀವನದ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಯಿತು. ರಣವೀರ್ ಸಿಂಗ್ ಅವರು ಮುಚ್ಚುಮರೆ ಇಲ್ಲದೆ ಆಲಿಯಾ ಎದುರೇ ಉತ್ತರ ನೀಡಿದ್ದಾರೆ.

ಮೊದಲ ರಾತ್ರಿಯಲ್ಲಿ ಮಾಡಿದ ಕೆಲಸದ ಬಗ್ಗೆ ಆಲಿಯಾ ಎದುರು ಓಪನ್​ ಆಗಿ ಮಾತನಾಡಿದ ರಣವೀರ್ ಸಿಂಗ್
ರಣವೀರ್​-ದೀಪಿಕಾ-ಆಲಿಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 08, 2022 | 3:37 PM

ರಣವೀರ್ ಸಿಂಗ್ (Rabnveer Singh) ಅವರ ವ್ಯಕ್ತಿತ್ವವೇ ಭಿನ್ನ. ಅವರು ಹಲವು ವಿಚಾರಗಳನ್ನು ಓಪನ್ ಆಗಿ ಮಾತನಾಡುತ್ತಾರೆ. ಸದಾ ಜಾಲಿ ಮೂಡ್​ನಲ್ಲಿರುತ್ತಾರೆ. ಅವರು ಕರಣ್ ಜೋಹರ್ (Karan Johar) ನಡೆಸಿಕೊಡುವ ‘ಕಾಫಿ ವಿತ್ ಕರಣ್  ಸೀಸನ್ 7’ ಶೋನಲ್ಲಿ ಮೊದಲ ಅತಿಥಿಯಾಗಿ ಆಗಮಿಸಿದ್ದರು. ಜುಲೈ 7ರಂದು ಮೊದಲ ಎಪಿಸೋಡ್ ಪ್ರಸಾರವಾಯಿತು. ನೇರವಾಗಿ ಒಟಿಟಿಯಲ್ಲಿ ಪ್ರಸಾರ ಕಂಡ ಈ ಶೋನಲ್ಲಿ ರಣವೀರ್ ಸಿಂಗ್​ಗೆ ಆಲಿಯಾ ಭಟ್ ಸಾತ್​ ನೀಡಿದರು. ಈ ಶೋನಲ್ಲಿ ಫಿಲ್ಟರ್​ಗಳೇ ಇರುವುದಿಲ್ಲ. ರಣವೀರ್ ಸಿಂಗ್ ಕೂಡ ಯಾವುದೇ ಮುಚ್ಚುಮರೆ ಇಲ್ಲದೆ ಮಾತನಾಡಿದ್ದಾರೆ.

ಕರಣ್ ಜೋಹರ್ ಅವರು ಮೊದಲ ರಾತ್ರಿ ಬಗ್ಗೆ ಪ್ರಶ್ನೆ ಕೇಳಿದರು. ಈ ವೇಳೆ ಆಲಿಯಾ ಅವರು ‘ಮೊದಲ ರಾತ್ರಿ ಎಂಬುದೆಲ್ಲ ಇರುವುದಿಲ್ಲ. ಅಂದು ನೀವು ಸುಸ್ತಾಗಿರುತ್ತೀರಿ’ ಎಂದರು. ಇದಕ್ಕೆ ರಣವೀರ್ ಕಡೆಯಿಂದ ಅಚ್ಚರಿಯ ಉತ್ತರ ಬಂತು. ಮೊದಲ ರಾತ್ರಿಯಲ್ಲಿ ತಾವು ಸಖತ್ ಆ್ಯಕ್ಟೀವ್ ಆಗಿದ್ದ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

‘ಕಾಫಿ ವಿತ್ ಕರಣ್​ 7’ನಲ್ಲಿ ಬಿಂಗೋ ಗೇಮ್​ ಆಡಿಸಲಾಯಿತು. ಈ ವೇಳೆ ಲೈಂಗಿಕ ಜೀವನದ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಯಿತು. ರಣವೀರ್ ಸಿಂಗ್ ಅವರು ಮುಚ್ಚುಮರೆ ಇಲ್ಲದೆ ಆಲಿಯಾ ಎದುರೇ ಉತ್ತರ ನೀಡಿದ್ದಾರೆ. ‘ನಾನು ಮೊದಲ ರಾತ್ರಿಯಲ್ಲಿ ಲೈಂಗಿಕ ಸಂಪರ್ಕ ನಡೆಸಿದ್ದೇನೆ’ ಎಂದು ರಣವೀರ್ ಸಿಂಗ್ ಹೇಳಿಕೊಂಡಿದ್ದಾರೆ. ‘ಮದುವೆ ಕಾರ್ಯಗಳನ್ನು ಮಾಡಿ ಸುಸ್ತು ಆಗಿರಲಿಲ್ಲವೇ’ ಎಂದು ಕರಣ್ ಪ್ರಶ್ನೆ ಮಾಡಿದರು. ಇದಕ್ಕೆ ರಣವೀರ್ ಸಿಂಗ್ ಉತ್ತರಿಸಿ, ‘ನಾನು ರಾತ್ರಿ ಸಖತ್ ಆ್ಯಕ್ಟೀವ್ ಆಗಿದ್ದೆ’ ಎಂದಿದ್ದಾರೆ.

ಇದನ್ನೂ ಓದಿ:  ಮೊದಲ ರಾತ್ರಿ ಎಂಬುದೆಲ್ಲ ಇರುವುದಿಲ್ಲ, ಏಕೆಂದರೆ ನೀವು ಸುಸ್ತಾಗಿರುತ್ತೀರಿ ಎಂದ ಆಲಿಯಾ ಭಟ್

ಈ ಶೋನಲ್ಲಿ ರಣವೀರ್ ಸಿಂಗ್ ಮಿಮಿಕ್ರಿ ಮಾಡಿದರು. ಹೃತಿಕ್ ರೋಷನ್, ಧರ್ಮೇಂದ್ರ, ಕಾರ್ತಿಕ್​ ಆರ್ಯನ್, ವರುಣ್ ಧವನ್ ಹಾಗೂ ಆಮಿರ್ ಖಾನ್ ಅವರು ಮಾತನಾಡುವುದನ್ನು ಅನುಕರಿಸಿ ತೋರಿಸಿದರು. ರ್ಯಾಪಿಡ್ ಫೈರ್​ನಲ್ಲಿ ಅವರು ಹ್ಯಾಂಪರ್ ಕೂಡ ಗೆದ್ದರು.

2018ರಲ್ಲಿ ರಣವೀರ್ ಹಾಗೂ ದೀಪಿಕಾ ಇಟಲಿಯಲ್ಲಿ ಮದುವೆ ಆದರು. ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇತ್ತೀಚೆಗೆ ರಣವೀರ್ ಸಿಂಗ್ ಬರ್ತ್​ಡೇ ಆಚರಿಸಿಕೊಂಡರು. ದೀಪಿಕಾ ಜತೆ ಅವರು ಹುಟ್ಟುಹಬ್ಬವನ್ನು ಅಮೆರಿಕದಲ್ಲಿ ಆಚರಿಸಿದ್ದಾರೆ.

ಅಂಥ ಟ್ರಿಕ್ಸ್ ನನ್ನ ಹತ್ರ ಬೇಡ: ಮಾಧ್ಯಮಗಳ ಎದುರು ಶಿವರಾಜ್​ಕುಮಾರ್ ಗರಂ
ಅಂಥ ಟ್ರಿಕ್ಸ್ ನನ್ನ ಹತ್ರ ಬೇಡ: ಮಾಧ್ಯಮಗಳ ಎದುರು ಶಿವರಾಜ್​ಕುಮಾರ್ ಗರಂ
Weekly Horoscope: ಜೂನ್​ 2 ರಿಂದ 8 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 2 ರಿಂದ 8 ರವರೆಗಿನ ವಾರ ಭವಿಷ್ಯ
Daily Devotional: ಮನೆಗೆ ಬರುವ ಅತಿಥಿಗಳ ಉಪಚಾರ ಹೇಗಿರಬೇಕು?
Daily Devotional: ಮನೆಗೆ ಬರುವ ಅತಿಥಿಗಳ ಉಪಚಾರ ಹೇಗಿರಬೇಕು?
Daily Horoscope: ಈ ರಾಶಿಯವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದು ಬೇಡ
Daily Horoscope: ಈ ರಾಶಿಯವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದು ಬೇಡ
ಶಿವರಾಜ್​ ಕುಮಾರ್​ ಬಗ್ಗೆ ಹಗುರ ಮಾತುಗಳ ಸಹಿಸಲ್ಲ: ಬೇಳೂರು ಗೋಪಾಲಕೃಷ್ಣ
ಶಿವರಾಜ್​ ಕುಮಾರ್​ ಬಗ್ಗೆ ಹಗುರ ಮಾತುಗಳ ಸಹಿಸಲ್ಲ: ಬೇಳೂರು ಗೋಪಾಲಕೃಷ್ಣ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ