AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಶೋಗೆ ಹೊಸ ನಿರೂಪಕನಾಗಿ ಬಂದ ನಟ ಸಿಂಬು; ಇನ್ಮುಂದೆ ಇವರೇ ಮುಂದುವರಿಯುತ್ತಾರಾ?

ಕಮಲ್​ ಹಾಸನ್​ ಸ್ಥಾನಕ್ಕೆ ಖ್ಯಾತ ನಟ ಸಿಂಬು ಆಗಮನ ಆಗಿದೆ. ಈ ವಿಚಾರವನ್ನು ಬಿಗ್​ ಬಾಸ್​ ಶೋ ಆಯೋಜಕರು ಅಧಿಕೃತವಾಗಿ ಘೋಷಿಸಿದ್ದಾರೆ.

ಬಿಗ್​ ಬಾಸ್​ ಶೋಗೆ ಹೊಸ ನಿರೂಪಕನಾಗಿ ಬಂದ ನಟ ಸಿಂಬು; ಇನ್ಮುಂದೆ ಇವರೇ ಮುಂದುವರಿಯುತ್ತಾರಾ?
ನಟ ಸಿಂಬು
TV9 Web
| Edited By: |

Updated on: Feb 25, 2022 | 3:14 PM

Share

​ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ನಿರೂಪಕರು ಯಾರು ಎಂಬುದು ತುಂಬ ಮುಖ್ಯವಾಗುತ್ತದೆ. ಕನ್ನಡದಲ್ಲಿ ಹಲವು ವರ್ಷಗಳಿಂದ ಸುದೀಪ್​ ಅವರು ಬಿಗ್​ ಬಾಸ್ (Bigg Boss)​ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಹಿಂದಿಯಲ್ಲಿ ಸಲ್ಮಾನ್​ ಖಾನ್​ ಅವರು ಕೂಡ ನಿರೂಪಕನಾಗಿ ಜನರಿಗೆ ಇಷ್ಟ ಆಗಿದ್ದಾರೆ. ಆದರೆ ಇನ್ನಿತರ ಭಾಷೆಗಳಲ್ಲಿ ಆಗಾಗ ನಿರೂಪಕರು ಬದಲಾಗುತ್ತಾ ಇರುತ್ತಾರೆ. ಪ್ರತಿ ಸೀಸನ್​ ಆರಂಭ ಆದಾಗಲೂ ಈ ಬಾರಿ ನಿರೂಪಣೆ ಮಾಡುವುದು ಯಾರು ಎಂಬ ಪ್ರಶ್ನೆ ಪರಭಾಷೆಯಲ್ಲಿ ಎದುರಾಗುತ್ತದೆ. ತಮಿಳು ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಕಳೆದ ಬಾರಿ ಕಮಲ್​ ಹಾಸನ್​ (Kamal Haasan) ನಿರೂಪಣೆ ಮಾಡಿದ್ದರು. ಇತ್ತೀಚೆಗೆ ಆರಂಭ ಆದ ಇದರ ಒಟಿಟಿ ವರ್ಷನ್​ಗೂ ಅವರೇ ನಿರೂಪಕ ಆಗಿದ್ದರು. ಆದರೆ ಕೆಲವು ಕಾರಣಗಳನ್ನು ನೀಡಿ ಅವರು ಈಗ ನಿರೂಪಕನ ಸ್ಥಾನದಿಂದ ಹಿಂದೆ ಸರಿದಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹಾಗಂತ ಶೋ ನಿಲ್ಲಲು ಸಾಧ್ಯವಿಲ್ಲ. ಕಮಲ್​ ಹಾಸನ್​ ಸ್ಥಾನಕ್ಕೆ ಖ್ಯಾತ ನಟ ಸಿಂಬು (Simbu) ಆಗಮನ ಆಗಿದೆ. ಈ ವಿಚಾರವನ್ನು ಶೋ ಆಯೋಜಕರು ಅಧಿಕೃತವಾಗಿ ಘೋಷಿಸಿದ್ದಾರೆ.

ನಟ ಸಿಂಬು ಅವರಿಗೆ ತಮಿಳುನಾಡಿನಲ್ಲಿ ಸಖತ್​ ಜನಪ್ರಿಯತೆ ಇದೆ. ನಟನಾಗಿ, ನಿರ್ದೇಶಕನಾಗಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಳೆದ ವರ್ಷ ತೆರೆಕಂಡ ಅವರ ‘ಮಾನಾಡು’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಆ ಯಶಸ್ಸಿನ ಬೆನ್ನಲ್ಲೇ ಅವರು ‘ತಮಿಳು ಬಿಗ್​ ಬಾಸ್​ ಅಲ್ಟಿಮೇಟ್​’ ಶೋ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅದರ ಪ್ರೋಮೋ ಈಗ ವೈರಲ್​ ಆಗಿದೆ. ಸದ್ಯ ಬಿಗ್​ ಬಾಸ್​ನ ಒಟಿಟಿ ವರ್ಷನ್​ಗೆ ಮಾತ್ರ ಸಿಂಬು ನಿರೂಪಣೆ ಮಾಡುತ್ತಾರೆ. ಮುಂಬರುವ 6ನೇ ಸೀಸನ್​ಗೆ ಎಂದಿನಂತೆ ಕಮಲ್​ ಹಾಸನ್​ ನಿರೂಪಕರಾಗಿ ಇರುತ್ತಾರೆ ಎನ್ನಲಾಗಿದೆ.

ಕಮಲ್​ ಹಾಸನ್​ ಬಿಗ್​ ಬಾಸ್​ ತೊರೆದಿದ್ದು ಯಾಕೆ?

ಕಮಲ್​ ಹಾಸನ್​ ಅವರು ಅತ್ಯಂತ ಬ್ಯುಸಿ ನಟ. ನಟನೆ, ನಿರ್ದೇಶನ, ನಿರ್ಮಾಣ, ರಾಜಕೀಯ.. ಹೀಗೆ ಹತ್ತು ಹಲವು ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಅದರ ಜೊತೆಗೆ ‘ಬಿಗ್​ ಬಾಸ್​ ತಮಿಳು ಅಲ್ಟಿಮೇಟ್​’ ಕಾರ್ಯಕ್ರಮದ ನಿರೂಪಣೆ ಕೂಡ ಮಾಡುತ್ತಿದ್ದರು. ಆದರೆ ಈಗ ಅವರು ಈ ಶೋ ನಿರೂಪಣೆಯಿಂದ ಹೊರಬರುವುದಕ್ಕೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.

‘ನನ್ನ ನಟನೆಯ ‘ವಿಕ್ರಮ್​’ ಸಿನಿಮಾ ಮತ್ತು ಬಿಗ್​ ಬಾಸ್​ ಕಾರ್ಯಕ್ರಮದ ಶೂಟಿಂಗ್​ ನಡುವೆ ಕ್ಲ್ಯಾಶ್​ ಆಗಬಾರದು ಎಂದು ಎರಡೂ ತಂಡಗಳು ಕಷ್ಟಪಟ್ಟು ಈ ದಿನದವರೆಗೂ ಪ್ಲ್ಯಾನ್​ ಮಾಡುತ್ತಿದ್ದವು. ಆದರೆ ಎರಡೂ ಪ್ರಾಜೆಕ್ಟ್​ಗಳನ್ನು ಏಕಕಾಲಕ್ಕೆ ಮಾಡಲು ನನಗೆ ಪ್ರಾಯೋಗಿಕವಾಗಿ ಸಾಧ್ಯವಾಗುತ್ತಿಲ್ಲ. ಲಾಕ್​ಡೌನ್​ ಮತ್ತು ಕೊರೊನಾ ನಿರ್ಬಂಧದ ಕಾರಣದಿಂದ ‘ವಿಕ್ರಮ್​’ ಸಿನಿಮಾದ ಕೆಲಸಗಳು ಮುಂದೂಡಲ್ಪಟ್ಟವು. ಅದರ ಪರಿಣಾಮವಾಗಿ ಬಿಗ್​ ಬಾಸ್​ ಅಲ್ಟಿಮೇಟ್​ ಶೋಗೆ ನೀಡಿದ್ದ ಡೇಟ್ಸ್​ ಜೊತೆ ಈಗ ಕ್ಲ್ಯಾಶ್​ ಆಗಿದೆ. ನಾನು ಬಿಗ್​ ಬಾಸ್​ ಕಾರ್ಯಕ್ರಮದ ಒಟಿಟಿ ಅವತರಣಿಕೆಯನ್ನು ಲಾಂಚ್​ ಮಾಡಿದ್ದಕ್ಕೆ ಹೆಮ್ಮೆ ಇದೆ. ಈ ಶೋ ಜೊತೆ ನಾನು ಬೆರೆತುಹೋಗಿದ್ದೇನೆ. ‘ವಿಕ್ರಮ್​’ ಸಿನಿಮಾದಲ್ಲಿ ನನ್ನ ಸಲುವಾಗಿ ದೊಡ್ಡ ದೊಡ್ಡ ಸ್ಟಾರ್​ ನಟರು ಮತ್ತು ತಂತ್ರಜ್ಞರು ಕಾಯುವಂತೆ ಮಾಡುವುದು ನ್ಯಾಯಸಮ್ಮತ ಅಲ್ಲ’ ಎಂದು ಕಮಲ್​ ಹಾಸನ್​ ತಿಳಿಸಿದ್ದಾರೆ.

ಇದನ್ನೂ ಓದಿ:

ಶಿವಣ್ಣ ಮಾಡಿದ್ದ ಪಾತ್ರದಲ್ಲಿ ಸಿಂಬು; ಹೇಗಿದೆ ನೋಡಿ ‘ಮಫ್ತಿ’ ಸಿನಿಮಾದ ತಮಿಳು ರಿಮೇಕ್​ ಟೀಸರ್​

‘ಮಾನಾಡು’ ನಟ ಸಿಂಬುಗೆ ಗೌರವ ಡಾಕ್ಟರೇಟ್​; ಚಿತ್ರರಂಗದಲ್ಲಿ ಈ ಕಲಾವಿದನ ಸಾಧನೆ ಏನು?

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!