AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೇಜಾನ್ ಪ್ರೈಮ್​ನಲ್ಲಿ ಪ್ರಸಾರ ಆರಂಭಿಸಿದ ‘ಮಿರ್ಜಾಪುರ್ 3’; ಹೇಗಿದೆ ಹೊಸ ಸೀಸನ್?

ಕಳೆದ ಸೀರಿಸ್​ನ ಡೈಲಾಗ್​ಗಳು ಗಮನ ಸೆಳೆದಿದ್ದವು. ಕಳೆದ ಸೀಸನ್​ಗಳಲ್ಲಿ ಮೀಮ್​ಗಳನ್ನು ಮಾಡಲು ಸಾಕಷ್ಟು ದೃಶ್ಯಗಳು ಇದ್ದವು. . ಆದರೆ, ಈ ಬಾರಿ ಅದಕ್ಕೆಲ್ಲ ಹೆಚ್ಚು ಅವಕಾಶವಿಲ್ಲ ಎಂಬುದು ವೀಕ್ಷಕರ ಅಭಿಪ್ರಾಯ. ಇನ್ನು ನಿರೀಕ್ಷೆ ಹೆಚ್ಚಿದ್ದರೆ ನಿರಾಸೆ ಆಗೋದ ಖಂಡಿತ ಎನ್ನುತ್ತಾರೆ ಪ್ರೇಕ್ಷಕರು.

ಅಮೇಜಾನ್ ಪ್ರೈಮ್​ನಲ್ಲಿ ಪ್ರಸಾರ ಆರಂಭಿಸಿದ ‘ಮಿರ್ಜಾಪುರ್ 3’; ಹೇಗಿದೆ ಹೊಸ ಸೀಸನ್?
ಮಿರ್ಜಾಪುರ್
ರಾಜೇಶ್ ದುಗ್ಗುಮನೆ
|

Updated on: Jul 05, 2024 | 7:05 AM

Share

‘ಮಿರ್ಜಾಪುರ್’  ಯಶಸ್ವಿಯಾಗಿ ಎರಡು ಸೀಸನ್​ಗಳನ್ನು ಪೂರೈಸಿದೆ. ಇಂದಿನಿಂದ (ಜುಲೈ 12) ‘ಮಿರ್ಜಾಪುರ್ 3’ ಪ್ರಸಾರ ಆರಂಭಿಸಿದೆ. ಅಮೇಜಾನ್ ಪ್ರೈಮ್ ವಿಡಿಯೋ ಒಟಿಟಿ ಮೂಲಕ ಮೂರನೇ ಸೀಸನ್ ಪ್ರಸಾರ ಕಾಣುತ್ತಿದೆ. ಈ ಮೊದಲಿನ ಎರಡು ಸೀಸನ್​ಗಳು ಇದೇ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಕಳೆದ ಸೀಸನ್​ಗಳಿಗೆ ಹೋಲಿಕೆ ಮಾಡಿದರೆ ‘ಮಿರ್ಜಾಪುರ್ 3’ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದಕ್ಕೆ ಹಲವು ಕಾರಣಗಳನ್ನು ಪ್ರೇಕ್ಷಕರು ನೀಡಿದ್ದಾರೆ.

ಅಕ್ಟೋಬರ್ 2020ರಂದು ‘ಮಿರ್ಜಾಪುರ್ 2’ ರಿಲೀಸ್ ಆಯಿತು. ಈಗ ನಾಲ್ಕು ವರ್ಷಗಳ ಬಳಿಕ ಇದಕ್ಕೆ ಹೊಸ ಸೀಸನ್ ಬಂದಿದೆ. ಕಳೆದ ಸೀಸನ್​ನಂತೆ ಈ ಸೀಸನ್​ನಲ್ಲೂ ಭರ್ಜರಿಯಾಗಿ ಹಿಂಸೆ ಇದೆ. ಗನ್​ಗಳು ಇಲ್ಲಿಯೂ ಸದ್ದು ಮಾಡುತ್ತವೆ. ಆದರೆ, ಕಳೆದ ಸೀಸನ್​ಗಳಲ್ಲಿ ಇದ್ದಂತೆ ಈ ಸೀಸನ್​ಲ್ಲಿ ಕಿಡಿ ಇಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಸೀಸನ್​ಗಳಲ್ಲಿ ಮೀಮ್​ಗಳನ್ನು ಮಾಡಲು ಸಾಕಷ್ಟು ದೃಶ್ಯಗಳು ಇದ್ದವು. ಸೀರಿಸ್​ನ ಡೈಲಾಗ್​ಗಳು ಗಮನ ಸೆಳೆದಿದ್ದವು. ಆದರೆ, ಈ ಬಾರಿ ಅದಕ್ಕೆಲ್ಲ ಹೆಚ್ಚು ಅವಕಾಶವಿಲ್ಲ ಎಂಬುದು ವೀಕ್ಷಕರ ಅಭಿಪ್ರಾಯ. ಇನ್ನು ನಿರೀಕ್ಷೆ ಹೆಚ್ಚಿದ್ದರೆ ನಿರಾಸೆ ಆಗೋದ ಖಂಡಿತ ಎನ್ನುತ್ತಾರೆ ಪ್ರೇಕ್ಷಕರು.

ಇದನ್ನೂ ಓದಿ: ‘ಮಿರ್ಜಾಪುರ್’, ‘ಸೇಕ್ರೆಡ್ ಗೇಮ್ಸ್’ ಅಲ್ಲ, 500 ಕೋಟಿ ಬಜೆಟ್​ನಲ್ಲಿ ಸಿದ್ಧವಾಗಿದೆ ಭಾರತದ ಈ ಸೀರಿಸ್

ಮುನ್ನ ಭಯ್ಯ ಎರಡನೇ ಸೀಸನ್​ನ ಕೊನೆಯಲ್ಲಿ ನಿಧನ ಹೊಂದುತ್ತಾನೆ. ಹೀಗಾಗಿ ಆತನ ಅನುಪಸ್ಥಿತಿ ಬಹುವಾಗಿ ಕಾಡುತ್ತದೆ. ಕಾಲೀನ್ ಭಯ್ಯ ಕೂಡ ಹೆಚ್ಚು ಹೊತ್ತು ತೆರೆಮೇಲೆ ಬರುವುದಿಲ್ಲ. ಹೀಗಾಗಿ, ಕಳೆದ ಸೀಸನ್​ಗಳಿಗಿಂತ ಈ ಸೀಸನ್ ಡಲ್ ಎನಿಸುತ್ತದೆ. ಮೊದಲ ಮೂರು ಎಪಿಸೋಡ್​ಗಳು ನಿಧಾನವಾಗಿ ಸಾಗುತ್ತವೆ. ಆ ಬಳಿಕ ಸ್ವಲ್ಪ ವೇಗ ಪಡೆದುಕೊಳ್ಳುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ
ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ