ಅಮೇಜಾನ್ ಪ್ರೈಮ್​ನಲ್ಲಿ ಪ್ರಸಾರ ಆರಂಭಿಸಿದ ‘ಮಿರ್ಜಾಪುರ್ 3’; ಹೇಗಿದೆ ಹೊಸ ಸೀಸನ್?

ಕಳೆದ ಸೀರಿಸ್​ನ ಡೈಲಾಗ್​ಗಳು ಗಮನ ಸೆಳೆದಿದ್ದವು. ಕಳೆದ ಸೀಸನ್​ಗಳಲ್ಲಿ ಮೀಮ್​ಗಳನ್ನು ಮಾಡಲು ಸಾಕಷ್ಟು ದೃಶ್ಯಗಳು ಇದ್ದವು. . ಆದರೆ, ಈ ಬಾರಿ ಅದಕ್ಕೆಲ್ಲ ಹೆಚ್ಚು ಅವಕಾಶವಿಲ್ಲ ಎಂಬುದು ವೀಕ್ಷಕರ ಅಭಿಪ್ರಾಯ. ಇನ್ನು ನಿರೀಕ್ಷೆ ಹೆಚ್ಚಿದ್ದರೆ ನಿರಾಸೆ ಆಗೋದ ಖಂಡಿತ ಎನ್ನುತ್ತಾರೆ ಪ್ರೇಕ್ಷಕರು.

ಅಮೇಜಾನ್ ಪ್ರೈಮ್​ನಲ್ಲಿ ಪ್ರಸಾರ ಆರಂಭಿಸಿದ ‘ಮಿರ್ಜಾಪುರ್ 3’; ಹೇಗಿದೆ ಹೊಸ ಸೀಸನ್?
ಮಿರ್ಜಾಪುರ್
Follow us
|

Updated on: Jul 05, 2024 | 7:05 AM

‘ಮಿರ್ಜಾಪುರ್’  ಯಶಸ್ವಿಯಾಗಿ ಎರಡು ಸೀಸನ್​ಗಳನ್ನು ಪೂರೈಸಿದೆ. ಇಂದಿನಿಂದ (ಜುಲೈ 12) ‘ಮಿರ್ಜಾಪುರ್ 3’ ಪ್ರಸಾರ ಆರಂಭಿಸಿದೆ. ಅಮೇಜಾನ್ ಪ್ರೈಮ್ ವಿಡಿಯೋ ಒಟಿಟಿ ಮೂಲಕ ಮೂರನೇ ಸೀಸನ್ ಪ್ರಸಾರ ಕಾಣುತ್ತಿದೆ. ಈ ಮೊದಲಿನ ಎರಡು ಸೀಸನ್​ಗಳು ಇದೇ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಕಳೆದ ಸೀಸನ್​ಗಳಿಗೆ ಹೋಲಿಕೆ ಮಾಡಿದರೆ ‘ಮಿರ್ಜಾಪುರ್ 3’ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದಕ್ಕೆ ಹಲವು ಕಾರಣಗಳನ್ನು ಪ್ರೇಕ್ಷಕರು ನೀಡಿದ್ದಾರೆ.

ಅಕ್ಟೋಬರ್ 2020ರಂದು ‘ಮಿರ್ಜಾಪುರ್ 2’ ರಿಲೀಸ್ ಆಯಿತು. ಈಗ ನಾಲ್ಕು ವರ್ಷಗಳ ಬಳಿಕ ಇದಕ್ಕೆ ಹೊಸ ಸೀಸನ್ ಬಂದಿದೆ. ಕಳೆದ ಸೀಸನ್​ನಂತೆ ಈ ಸೀಸನ್​ನಲ್ಲೂ ಭರ್ಜರಿಯಾಗಿ ಹಿಂಸೆ ಇದೆ. ಗನ್​ಗಳು ಇಲ್ಲಿಯೂ ಸದ್ದು ಮಾಡುತ್ತವೆ. ಆದರೆ, ಕಳೆದ ಸೀಸನ್​ಗಳಲ್ಲಿ ಇದ್ದಂತೆ ಈ ಸೀಸನ್​ಲ್ಲಿ ಕಿಡಿ ಇಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಸೀಸನ್​ಗಳಲ್ಲಿ ಮೀಮ್​ಗಳನ್ನು ಮಾಡಲು ಸಾಕಷ್ಟು ದೃಶ್ಯಗಳು ಇದ್ದವು. ಸೀರಿಸ್​ನ ಡೈಲಾಗ್​ಗಳು ಗಮನ ಸೆಳೆದಿದ್ದವು. ಆದರೆ, ಈ ಬಾರಿ ಅದಕ್ಕೆಲ್ಲ ಹೆಚ್ಚು ಅವಕಾಶವಿಲ್ಲ ಎಂಬುದು ವೀಕ್ಷಕರ ಅಭಿಪ್ರಾಯ. ಇನ್ನು ನಿರೀಕ್ಷೆ ಹೆಚ್ಚಿದ್ದರೆ ನಿರಾಸೆ ಆಗೋದ ಖಂಡಿತ ಎನ್ನುತ್ತಾರೆ ಪ್ರೇಕ್ಷಕರು.

ಇದನ್ನೂ ಓದಿ: ‘ಮಿರ್ಜಾಪುರ್’, ‘ಸೇಕ್ರೆಡ್ ಗೇಮ್ಸ್’ ಅಲ್ಲ, 500 ಕೋಟಿ ಬಜೆಟ್​ನಲ್ಲಿ ಸಿದ್ಧವಾಗಿದೆ ಭಾರತದ ಈ ಸೀರಿಸ್

ಮುನ್ನ ಭಯ್ಯ ಎರಡನೇ ಸೀಸನ್​ನ ಕೊನೆಯಲ್ಲಿ ನಿಧನ ಹೊಂದುತ್ತಾನೆ. ಹೀಗಾಗಿ ಆತನ ಅನುಪಸ್ಥಿತಿ ಬಹುವಾಗಿ ಕಾಡುತ್ತದೆ. ಕಾಲೀನ್ ಭಯ್ಯ ಕೂಡ ಹೆಚ್ಚು ಹೊತ್ತು ತೆರೆಮೇಲೆ ಬರುವುದಿಲ್ಲ. ಹೀಗಾಗಿ, ಕಳೆದ ಸೀಸನ್​ಗಳಿಗಿಂತ ಈ ಸೀಸನ್ ಡಲ್ ಎನಿಸುತ್ತದೆ. ಮೊದಲ ಮೂರು ಎಪಿಸೋಡ್​ಗಳು ನಿಧಾನವಾಗಿ ಸಾಗುತ್ತವೆ. ಆ ಬಳಿಕ ಸ್ವಲ್ಪ ವೇಗ ಪಡೆದುಕೊಳ್ಳುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್