AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣ್​ಬೀರ್ ಕಪೂರ್-ಅಲ್ಲು ಅರ್ಜುನ್​ಗೆ ಆರು ತಿಂಗಳ ಗಡುವು ನೀಡಿದ ಬಾಲಕೃಷ್ಣ

Nandamuri Balakrishna: ತೆಲುಗು ಚಿತ್ರರಂಗದ ಸ್ಟಾರ್ ನಟ, ನಂದಮೂರಿ ಬಾಲಕೃಷ್ಣ, ಬಾಲಿವುಡ್ ಸ್ಟಾರ್ ನಟ ರಣ್​ಬೀರ್ ಕಪೂರ್ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ನಟ ಅಲ್ಲು ಅರ್ಜುನ್ ಅವರುಗಳಿಗೆ ಬರೋಬ್ಬರಿ ಆರು ತಿಂಗಳ ಕಾಲಾವಕಾಶ ನೀಡಿದ್ದಾರೆ.

ರಣ್​ಬೀರ್ ಕಪೂರ್-ಅಲ್ಲು ಅರ್ಜುನ್​ಗೆ ಆರು ತಿಂಗಳ ಗಡುವು ನೀಡಿದ ಬಾಲಕೃಷ್ಣ
ಮಂಜುನಾಥ ಸಿ.
|

Updated on: Nov 16, 2024 | 5:23 PM

Share

ಬಾಲಿವುಡ್​ ಸ್ಟಾರ್ ನಟ ರಣ್​ಬೀರ್ ಕಪೂರ್, ಪ್ಯಾನ್ ಇಂಡಿಯಾ ಸ್ಟಾರ್ ನಟ ಅಲ್ಲು ಅರ್ಜುನ್ ಇಬ್ಬರಿಗೂ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಆರು ತಿಂಗಳ ಗಡುವು ನೀಡಿದ್ದಾರೆ. ಇತ್ತೀಚೆಗಷ್ಟೆ ಆಹಾ ಒಟಿಟಿಯ ‘ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ’ ಟಾಕ್ ಶೋಗೆ ಅತಿಥಿಯಾಗಿ ಆಗಮಿಸಿದ್ದ ಅಲ್ಲು ಅರ್ಜುನ್​ ಜೊತೆ ಮಾತನಾಡುತ್ತಾ ನಂದಮೂರಿ ಬಾಲಕೃಷ್ಣ ಈ ಗಡುವು ನೀಡಿದ್ದು, ಅಲ್ಲು ಅರ್ಜುನ್ ನಗುತ್ತಲೇ ಸ್ವೀಕಾರ ಮಾಡಿದ್ದಾರೆ.

ಆಗಿದ್ದಿಷ್ಟು, ಟಾಕ್ ಶೋಗೆ ಬಂದಿದ್ದ ಅಲ್ಲು ಅರ್ಜುನ್​ಗೆ ವಿವಿಧ ನಟರ ಫೋಟೊ ತೋರಿಸುತ್ತಾ ಅವರ ಬಗ್ಗೆ ಅಭಿಪ್ರಾಯಗಳನ್ನು ಹೇಳುವಂತೆ ಕೇಳಿದರು. ರಣ್​ಬೀರ್ ಕಪೂರ್ ಫೋಟೊ ತೋರಿಸಿದಾಗ ಮಾತನಾಡಿದ ಅಲ್ಲು ಅರ್ಜುನ್, ‘ರಣ್​ಬೀರ್ ಕಪೂರ್ ಭಾರತದ ಅತ್ಯುತ್ತಮ ನಟ. ಅವರಂಥಹಾ ನಟರು ಬಹಳ ಕಡಿಮೆ, ನಾನು ಅವರ ಅಭಿಮಾನಿ’ ಎಂದರು. ಅದಕ್ಕೆ ಹೌದೆಂದು ಬಾಲಕೃಷ್ಣ ಇಬ್ಬರಿಗೂ ಒಂದು ಟಾಸ್ಕ್​ ಕೊಟ್ಟರು, ಅದಕ್ಕೆ ಆರು ತಿಂಗಳ ಗಡುವು ನೀಡಿದರು.

‘ರಣ್​ಬೀರ್ ಕಪೂರ್ ಹಾಗೂ ಅಲ್ಲು ಅರ್ಜುನ್ ಅಂಥಹಾ ಇಬ್ಬರು ಸ್ಟಾರ್ ನಟರು ಒಟ್ಟಿಗೆ ನಟಿಸಿದರೆ ಹೇಗಿರುತ್ತದೆ? ಪ್ರೇಕ್ಷಕರಿಗೆ ಹಬ್ಬವೇ ಸರಿ, ಇನ್ನು ಆರು ತಿಂಗಳ ಒಳಗೆ ನೀವಿಬ್ಬರೂ ಒಟ್ಟಿಗೆ ಒಂದು ಸಿನಿಮಾದಲ್ಲಿ ನಟಿಸಬೇಕು, ನಿಮಗೆ ಆರು ತಿಂಗಳು ಮಾತ್ರವೇ ಕಾಲಾವಕಾಶ ಇದೆ. ಯಾರಾದರೂ ಕತೆ ಬರೆಯುವ ಹಾಗಿದ್ದರೆ ಬರೆಯಿರಿ. ಇಲ್ಲವಾದರೆ ನಾನೇ ಕತೆ ಬರೆಯುತ್ತೀನಿ, ನಾನೇ ನಿರ್ದೇಶನವನ್ನೂ ಮಾಡುತ್ತೇನೆ’ ಎಂದರು.

ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ

ಅದಕ್ಕೆ ಅಲ್ಲು ಅರ್ಜುನ್ ‘ನೀವೇ ನಿರ್ಮಾಣವನ್ನು ಮಾಡಿಬಿಡಿ’ ಎಂದರು. ಜಾಣತನದಿಂದ ಉತ್ತರ ನೀಡಿದ ಬಾಲಕೃಷ್ಣ, ‘ನಿಮ್ಮ ತಂದೆಯೇ ಇದ್ದಾರಲ್ಲ, ಜಿಪುಣ, ಅವರನ್ನೇ ನಿರ್ಮಾಪಕರನ್ನಾಗಿ ಮಾಡಿಬಿಡೋಣ’ ಎಂದರು. ಅದಕ್ಕೆ ಅಲ್ಲು ಅರ್ಜುನ್ ಎಸ್ ಎಂದರು. ಆದರೆ ರಣ್​ಬೀರ್ ಕಪೂರ್ ಇದಕ್ಕೆ ಒಪ್ಪುತ್ತಾರಾ? ಬಾಲಕೃಷ್ಣ ಆಸೆ ಈಡೇರುವುದು ತುಸು ಅನುಮಾನವೇ ಏಕೆಂದರೆ ಇಬ್ಬರೂ ನಟರು, ಬೇರೆ ಬೇರೆ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

ಅಲ್ಲು ಅರ್ಜುನ್ ಇತ್ತೀಚೆಗಷ್ಟೆ ‘ಪುಷ್ಪ 2’ ಸಿನಿಮಾ ಮುಗಿಸಿದ್ದಾರೆ. ಅದಾದ ಬಳಿಕ ತ್ರಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನು ರಣ್​ಬೀರ್ ಕಪೂರ್ ಪ್ರಸ್ತುತ ರಾಮಾಯಣ ಕತೆ ಆಧರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ 2026 ಕ್ಕೆ ಬಿಡುಗಡೆ ಆಗಲಿದೆ. ಅದರ ಜೊತೆಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಲಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ ‘ಬ್ರಹ್ಮಾಸ್ತ್ರ 2’ ಸಿನಿಮಾನಲ್ಲಿ ರಣ್​ಬೀರ್ ಕಪೂರ್ ನಟನೆ ಮಾಡಲಿದ್ದಾರೆ. ಹಾಗಾಗಿ ಇಬ್ಬರೂ ನಟರು ಕನಿಷ್ಟ ಎರಡು ವರ್ಷ ಬ್ಯುಸಿಯಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್