AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಗೆ ಬ್ರೈನ್ ಟ್ಯೂಮರ್​, ತಂದೆಗೆ ಕ್ಯಾನ್ಸರ್​, ಖರ್ಚಿಗಿರಲಿಲ್ಲ ಹಣ; ಇದು ಸೂಪರ್​ಸ್ಟಾರ್​ ಆದ ನಟನ ಹಿಂದಿನ ಕಥೆ

ಪ್ರತೀಕ್​ ಗುಜರಾತಿ​ ಭಾಷೆಯ ನಟ. ದಶಕಗಳ ಹಿಂದೆ ಅವರ ಜೀವನ ಹೀಗೆ ಇರಲಿಲ್ಲ. ಅವರು ತುಂಬಾನೇ ಕಷ್ಟ ಅನುಭವಿಸಿ ಬಂದಿದ್ದರು. ಈ ಬಗ್ಗೆ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.

ಹೆಂಡತಿಗೆ ಬ್ರೈನ್ ಟ್ಯೂಮರ್​, ತಂದೆಗೆ ಕ್ಯಾನ್ಸರ್​, ಖರ್ಚಿಗಿರಲಿಲ್ಲ ಹಣ; ಇದು ಸೂಪರ್​ಸ್ಟಾರ್​ ಆದ ನಟನ ಹಿಂದಿನ ಕಥೆ
ಪ್ರತೀಕ್​ ಗಾಂಧಿ
TV9 Web
| Edited By: |

Updated on: Oct 01, 2021 | 7:18 AM

Share

‘ಸ್ಕ್ಯಾಮ್​ 1992’ ವೆಬ್ ಸೀರಿಸ್​ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಇದರಲ್ಲಿ ನಟ ಪ್ರತೀಕ್​ ಗಾಂಧಿ ಅವರು ಹರ್ಷದ್​ ಮೆಹ್ತಾ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಭಾರತೀಯ ಸ್ಟಾಕ್​ ಮಾರ್ಕೆಟ್​ನಲ್ಲಿ ನಡೆದ ಹಗರಣ​ ಆಧರಿಸಿ ಈ ವೆಬ್​ ಸೀರಿಸ್​ ಸಿದ್ಧಗೊಂಡಿದೆ. ಈ ವೆಬ್​ ಸೀರಿಸ್​ ಹಿಟ್​ ಆದ ನಂತರದಲ್ಲಿ ಪ್ರತೀಕ್ ಗಾಂಧಿಗೆ ಆಫರ್​ಗಳು ಹೆಚ್ಚಿವೆ. ಆದರೆ, ಅವರ ಜೀವನ ಈ ಮೊದಲು ಈ ರೀತಿ ಇರಲಿಲ್ಲ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಪ್ರತೀಕ್​ ಗುಜರಾತಿ​ ಭಾಷೆಯ ನಟ. ದಶಕಗಳ ಹಿಂದೆ ಅವರ ಜೀವನ ಹೀಗೆ ಇರಲಿಲ್ಲ. ಅವರು ತುಂಬಾನೇ ಕಷ್ಟ ಅನುಭವಿಸಿ ಬಂದಿದ್ದರು. ಈ ಬಗ್ಗೆ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಪ್ರತೀಕ್ ಪತ್ನಿಗೆ ಬ್ರೈನ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು. ಅದೇ ಸಮಯದಲ್ಲಿ ಅವರ ತಂದೆಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಈ ಘಟನೆ ಪ್ರತೀಕ್​ ಅವರನ್ನು ಸಂಕಷ್ಟಕ್ಕೆ ನೂಕಿತ್ತು.

‘ತನ್ನ ತಂದೆ ತೀರಿಕೊಂಡ ನಂತರ ತನ್ನ ಬಳಿ ಯಾವುದೇ ಹಣ ಇರಲಿಲ್ಲ. ಅವರು ಮೃತಪಟ್ಟ ನಂತರ ನಾನು ಆ ಮನೆಯಿಂದ ಹೊರಹೋಗಬೇಕಾಯಿತು. ನನಗೆ ಉಳಿದುಕೊಳ್ಳೋಕೂ ಜಾಗ ಇರಲಿಲ್ಲ. ಆದರೆ, ನಾನು ನಂಬಿಕೆ​ ಕಳೆದುಕೊಂಡಿಲ್ಲ’ ಎಂದು ಪ್ರತೀಕ್ ತಮ್ಮ ಕಷ್ಟಗಳನ್ನು ವಿವರಿಸಿದ್ದಾರೆ

ಸ್ಕ್ಯಾಮ್​ 1992 ವೆಬ್​ ಸೀರಿಸ್​ ತೆರೆಕಂಡ ನಂತರ ಪ್ರತೀಕ್​ಗೆ​ ಬೇಡಿಕೆ ಹೆಚ್ಚಿದೆ. ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ವೈಎಸ್​ ರಾಜಶೇಖರ್​ ರೆಡ್ಡಿ ಜೀವನ ಆಧರಿಸಿ ಮಾಹಿ ವಿ. ರಾಘವ ಅವರು ಬಯೋಪಿಕ್​ ಸಿದ್ಧಪಡಿಸಿದ್ದರು. ‘ಯಾತ್ರಾ’ ಹೆಸರಿನಲ್ಲಿ ತೆರೆಗೆ ಬಂದ ಈ ಸಿನಿಮಾ ಯಶಸ್ಸು ಗಳಿಸಿತ್ತು. ಈಗ ಅವರು ರಾಜಶೇಖರ್​ ರೆಡ್ಡಿ ಮಗ, ಆಂಧ್ರದ ಮುಖ್ಯಮಂತ್ರಿ ವೈ.ಎಸ್.​ ಜಗನ್​ ಅವರ ಜೀವನ ಆಧರಿಸಿ ಸಿನಿಮಾ ಮಾಡೋಕೆ ನಿರ್ಧರಿಸಿದ್ದಾರೆ. ಜಗನ್​ ಪಾತ್ರಕ್ಕೆ ಯಾರು ಸೂಕ್ತ ಎನ್ನುವ ಹುಡುಕಾಟದಲ್ಲಿದ್ದಾಗ ಮಾಹಿ ಅವರಿಗೆ ಸಿಕ್ಕಿದ್ದು ಪ್ರತೀಕ್​ ಗಾಂಧಿ.

‘ನಿರ್ದೇಶಕರು ಪ್ರತೀಕ್​ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಬಯೋಪಿಕ್​ ನೆರೇಷನ್​ ಪ್ರತೀಕ್​ಗೆ ಇಷ್ಟವಾಗಿದೆ. ಅವರು ಜಗನ್​ ಪಾತ್ರ ಮಾಡೋಕೆ ಒಪ್ಪಿಗೆ ನೀಡಿದ್ದಾರೆ. ಪ್ಯಾನ್​ ಇಂಡಿಯಾ ಸಿನಿಮಾ ಆಗಿರುವುದರಿಂದ ಬಾಲಿವುಡ್​ ನಟನ ಆಯ್ಕೆ ನಡೆದಿದೆ’ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಅಧಿಕೃತ ಅಪ್​ಡೇಟ್​ ಕೇಳಿಬರಬೇಕಿದೆ.

ಇದನ್ನೂ ಓದಿ:

ತೆರೆಯ ಮೇಲೆ ಬರಲಿದೆ ಅಬ್ದುಲ್ ಕರೀಂ ತೆಲಗಿ ಹಗರಣ; ಸ್ಕ್ಯಾಮ್ 1992 ನಿರ್ದೇಶಕರಿಂದಲೇ ಸ್ಕ್ಯಾಮ್ 2003

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ